ಬ್ರೇಕಿಂಗ್ ನ್ಯೂಸ್
04-06-25 10:43 pm Mangalore Correspondent ಕರಾವಳಿ
ಉಳ್ಳಾಲ, ಜೂ.4 : ಮೊನ್ನೆಯಷ್ಟೇ ಉಳ್ಳಾಲ ತಾಲೂಕಿನಾದ್ಯಂತ ಗರಿಷ್ಠ ಪ್ರಮಾಣದಲ್ಲಿ ಸುರಿದಿದ್ದ ಮಳೆಯಿಂದಾಗಿ ಸೋಮೇಶ್ವರ ಪುರಸಭೆ ವ್ಯಾಪ್ತಿಯ ಅಂಬಿಕಾ ರೋಡ್ ಮೂರನೇ ಅಡ್ಡ ರಸ್ತೆಯ ರಾಜಕಾಲುವೆ ಉಕ್ಕಿ ಹರಿದ ಪರಿಣಾಮ ಸ್ಥಳೀಯ ಮನೆಗಳು ಪ್ರವಾಹದಿಂದ ಮುಳುಗಡೆಯಾಗಿದ್ದವು. ಬುಧವಾರ ಸಂಜೆ ರಾಜಕಾಲುವೆಯ ಕಿರು ಸೇತುವೆಯ ಅಡಿಭಾಗ ಕುಸಿದಿದ್ದು ಸೇತುವೆ ಕುಸಿದು ಬೀಳಲು ಕ್ಷಣಗಣನೆ ಆರಂಭವಾಗಿದೆ. ಸುರಕ್ಷತೆ ದೃಷ್ಟಿಯಿಂದ ಸೇತುವೆ ಸಂಚಾರವನ್ನ ಸೋಮೇಶ್ವರ ಪುರಸಭಾ ಅಧಿಕಾರಿಗಳು ನಿಷೇಧಗೊಳಿಸಿದ್ದು ಸ್ಥಳೀಯ ಅಂಬಿಕಾರೋಡ್ ಲೇ ಔಟ್ ನ ಸುಮಾರು ಎಪ್ಪತ್ತು ಮನೆಗಳ ಸಂಪರ್ಕ ಕಡಿತವಾಗಿ ನಿವಾಸಿಗಳು ಮನೆ ತಲುಪಲು ಬವಣೆ ಪಡುವಂತಾಗಿದೆ.
ಅಂಬಿಕಾರೋಡ್ ಮೂರನೇ ಅಡ್ಡ ರಸ್ತೆಯ ರಾಜ ಕಾಲುವೆಯ ಕಿರು ಸೇತುವೆ ಹಳೆಯದಾಗಿದ್ದು ಕಳೆದ ನಾಲ್ಕು ವರ್ಷದ ಹಿಂದಷ್ಟೆ ಸೋಮೇಶ್ವರ ಪುರಸಭೆ ಆಡಳಿತವು ಸೇತುವೆಯ ದುರಸ್ತಿ ಕಾರ್ಯ ನಡೆಸಿತ್ತು. ಸೇತುವೆಯ ಕಳಪೆ ದುರಸ್ತಿಯಿಂದಾಗಿ ಕಳೆದ ಗುರುವಾರ ಸುರಿದ ಭಾರೀ ಮಳೆಗೆ ಕಾಲುವೆಯಲ್ಲಿ ನೀರು ಉಕ್ಕಿ ಹರಿದ ಪರಿಣಾಮ ಅಡಿಭಾಗವು ಕುಸಿತಗೊಂಡಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇನ್ನು ಕೆಲವರು ಸ್ಥಳೀಯ ಅಂಬಿಕಾರೋಡ್ ಲೇ ಔಟ್ ನಲ್ಲಿ ಮನೆ ನಿರ್ಮಾಣ ಕಾಮಗಾರಿಗೆ ರಾಜಕಾಲುವೆಯ ಕಿರು ಸೇತುವೆಯ ಮೇಲೆ ದಿನ ನಿತ್ಯಲೂ ಕಲ್ಲು , ಮರಳು ಇತರ ಕಟ್ಟಡ ನಿರ್ಮಾಣ ಸಾಮಾಗ್ರಿಗಳ ಘನ ವಾಹನಗಳು ಚಲಿಸುತ್ತಿದ್ದ ಪರಿಣಾಮ ಹಳೆ ಸೇತುವೆ ಶಿಥಿಲಗೊಂಡು ಕುಸಿದಿರೋದಾಗಿ ಆರೋಪಿಸಿದ್ದಾರೆ.
ಮತ್ತೆ ಧಾರಾಕಾರವಾಗಿ ಮಳೆ ಸುರಿದರೆ ಸೇತುವೆ ಸಂಪೂರ್ಣ ಕುಸಿದು ಬಿದ್ದು ರಾಜ ಕಾಲುವೆಯಲ್ಲಿ ಹರಿಯುವ ಭಾರೀ ಪ್ರಮಾಣದ ನೀರು ಸ್ಥಳೀಯ ಅನೇಕ ಮನೆಗಳಿಗೆ ನುಗ್ಗಿ ಮತ್ತೆ ಅವಾಂತರ ಸೃಷ್ಟಿಸುವ ಭೀತಿ ಎದುರಾಗಿದೆ. ಸ್ಥಳಕ್ಕೆ ಸೋಮೇಶ್ವರ ಪುರಸಭೆಯ ಮುಖ್ಯಾಧಿಕಾರಿ ಮತ್ತಡಿ ಮತ್ತು ಪ್ರಬಂಧಕರಾದ ಕೃಷ್ಣ, ಸ್ಥಳೀಯ ಪುರಸಭೆ ಸದಸ್ಯರಾದ ಪರ್ವೀನ್ ಅವರು ಭೇಟಿ ನೀಡಿದ್ದು ಪರಿಸ್ಥಿತಿ ಅವಲೋಕಿಸಿದ್ದಾರೆ. ಸದ್ಯಕ್ಕೆ ಕುಸಿದಿರುವ ಸೇತುವೆ ಬೀಳದಂತೆ ತಡೆಯುವುದೇ ಅಧಿಕಾರಿಗಳಿಗೆ ಸವಾಲಾಗಿದೆ.
ಅತ್ತ ಕುಂಪಲ ಮುಖ್ಯ ರಸ್ತೆಯಲ್ಲಿ ಪೈಪ್ ಲೈನ್ ಕಾಮಗಾರಿಯಿಂದ ಕೆಟ್ಟು ಹೋಗಿದ್ದು, ದುರಸ್ತಿ ಕಾಮಗಾರಿಗೆಂದು ಅಲ್ಲಿನ ರಸ್ತೆ ಸಂಚಾರ ನಿರ್ಬಂಧಿಸಲಾಗಿದೆ. ಕುಂಪಲ ಪ್ರದೇಶಕ್ಕೆ ತೆರಳುವವರೂ ಕೂಡ ಅಂಬಿಕಾ ರೋಡಿನ ಮೂರನೇ ಅಡ್ಡ ರಸ್ತೆಯನ್ನೇ ಪರ್ಯಾಯವಾಗಿ ನೆಚ್ಚಿಕೊಂಡಿದ್ದರು.
Mangalore Cracks in Someshwara Ambika Road Culvert Raise Flood Fears; Bridge Closed, 70 Homes Cut Off.
10-08-25 09:12 pm
HK News Desk
ಗುಜರಾತ್, ಮಹಾರಾಷ್ಟ್ರದಂತೆ ನಮಗೂ ಆದ್ಯತೆ ಕೊಡಿ, ಮೆಟ...
10-08-25 06:27 pm
PM Modi, Operation Sindhoor: ಆಪರೇಶನ್ ಸಿಂಧೂರಕ್...
10-08-25 06:06 pm
ಚಾಲಕ ರಹಿತ ಮೆಟ್ರೋ ಹಳದಿ ಮಾರ್ಗಕ್ಕೆ ಪ್ರಧಾನಿ ಮೋದಿ...
10-08-25 01:57 pm
ಗಿಟಾರಿಗೆ ಹೊದಿಕೆ ಹೊದಿಸಿ ಏಳನೇ ಕ್ಲಾಸ್ ಹುಡುಗನ ಸಾವ...
09-08-25 10:12 pm
09-08-25 11:09 pm
HK News Desk
ಯಾರ ಮುಂದೆಯೂ ಭಾರತ ತಲೆ ಬಾಗದು ; ಸಾವಿರ ಬಾರಿ ಯತ್ನಿ...
09-08-25 07:38 pm
ಭದ್ರತಾ ಸಲಹೆಗಾರ ಅಜಿತ್ ದೋವಲ್ - ರಷ್ಯಾ ಉಪ ಪ್ರಧಾನಿ...
09-08-25 02:49 pm
ಮಧ್ಯಪ್ರದೇಶದ ಈ ಜಾಗದಲ್ಲಿದ್ಯಂತೆ ಅಪಾರ ಪ್ರಮಾಣದ ಚಿನ...
07-08-25 10:02 pm
ಸಂಘರ್ಷ ನಿರತ ಜಗತ್ತಿಗೆ ಹಿಂದು ಧರ್ಮದಲ್ಲಿ ಮದ್ದು ಇದ...
07-08-25 09:42 pm
10-08-25 04:32 pm
Udupi Correspondent
Six Arrested, Dharmasthala Incident, Kudla Ra...
10-08-25 02:26 pm
Dharmasthala, Janardhan Poojary, SIT Probe: ದ...
10-08-25 01:01 pm
Mangalore Dharmasthala Case: ಧರ್ಮಸ್ಥಳ ಕೇಸ್ ;...
10-08-25 12:37 pm
No Evidence, Bahubali Hill in Dharmasthala: ಬ...
09-08-25 10:53 pm
08-08-25 10:07 pm
Bangalore Correspondent
ಮಸಾಜ್ ಹೆಸರಲ್ಲಿ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ,...
08-08-25 09:44 pm
ಹೆಚ್ಚು ಲೈಕ್ಸ್, ಫಾಲೋವರ್ಸ್ ಸಿಗ್ತಾರೆ ಅಂತ ಕುಖ್ಯಾತ...
08-08-25 12:30 pm
ಕುಖ್ಯಾತ ಕಳ್ಳನಿಗೆ ತನ್ನ ಮನೆಯಲ್ಲೇ ಆಶ್ರಯ ಕೊಟ್ಟಿದ್...
08-08-25 12:27 pm
2014 Kulai Sumathi Prabhu Murder Case: 2014 ರ...
08-08-25 12:21 pm