ಬ್ರೇಕಿಂಗ್ ನ್ಯೂಸ್
10-08-25 04:32 pm Udupi Correspondent ಕರಾವಳಿ
ಉಡುಪಿ, ಆ.10 : ಸಾವಿರಾರು ಕೋಟಿಯ ಕಂಪನಿ ಕಟ್ಟಲು ಕಾರಣವಾಗಿದ್ದ ಇನ್ಫೋಸಿಸ್ ಸುಧಾಮೂರ್ತಿ ಯಾವುದೇ ಹಮ್ಮು ಬಿಮ್ಮಿಲ್ಲದೆ ಶ್ರೀಕೃಷ್ಣ ಮಠದಲ್ಲಿ ನೆಲದಲ್ಲಿ ಕುಳಿತು ಹೊಸ್ತಿಲು ಬರೆದಿದ್ದಲ್ಲದೆ, ದೇವರ ಪಾತ್ರೆ ತೊಳೆದು ದೇವರ ನಾಮ ಹಾಡುತ್ತಾ ಹೂಗಳನ್ನು ಕಟ್ಟಿ ಕಾಲ ಕರೆದಿದ್ದಾರೆ. ಈ ವೇಳೆ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜೊತೆಯಾದರು.
ಮಠದ ಗೋ ಶಾಲೆಯಲ್ಲಿ ಗೋಪೂಜೆ ನೆರವೇರಿಸಿ, ಗೋವುಗಳಿಗೆ ಗೋಗ್ರಾಸ ನೀಡಿದರು. ಭೋಜನ ಶಾಲೆಯಲ್ಲಿ ದೇವರ ಪಾತ್ರೆಗಳನ್ನು ತೊಳೆವಾಗ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರೂ ಜೊತೆಗಿದ್ದು ಉಡುಪಿ ಮಣಿಪಾಲದ ತನ್ನ ನೆನಪಿನ ನಂಟನ್ನು ಹೇಳಿಕೊಂಡರು. ಆಟಿ ಹುಣ್ಣಿಮೆ ಅಂಗವಾಗಿ ಶ್ರೀಕೃಷ್ಣ ಮಠದ ಹೊಸ್ತಿಲು ಬರೆದ ಸುಧಾಮೂರ್ತಿ ಚಂದ್ರಶಾಲೆಯಲ್ಲಿ ಕುಳಿತು ದಾರವನ್ನು ಸುತ್ತುತ್ತ ಕನಕಾಂಬರ ಹೂವುಗಳನ್ನು ಪೋಣಿಸಿ ದ್ವಾದಶ ಸ್ತೋತ್ರ ಹಾಡಿದರು.
ಕೃಷ್ಣ ಮಠದ ಹೊಸ್ತಿಲು ಬರೆಯಲು ಇವರಿಬ್ಬರೂ ದಿಲ್ಲಿಯಿಂದ ಬಂದಿದ್ದರು. ಕೃಷ್ಣನ ಮಹಾದ್ವಾರ, ಸಿಂಹಾಸನ ಬಾಗಿಲಲ್ಲಿ ಹೊಸ್ತಿಲು ಬರೆದು ಲಕ್ಷ್ಮೀ ಪೂಜೆಯನ್ನೂ ನೆರವೇರಿಸಿದರು. ಇಬ್ಬರೂ ಜಗದ ಪರಿವೆ ಇಲ್ಲದೆ ಕೃಷ್ಣನ ಸ್ತೋತ್ರಗಳನ್ನು ಹಾಡುತ್ತ ಕಾಲ ಕಳೆದರು.
ಶ್ರೀಮಠದ ವತಿಯಿಂದ ಇಬ್ಬರಿಗೂ ಮುತ್ತೈದೆಯರ ಮೂಲಕ ಬಾಗಿನ ನೀಡಲಾಯಿತು. ಸರ್ವಜ್ಞ ಪೀಠದಲ್ಲಿ ಕುಳಿತಿದ್ದ ಶ್ರೀಗಳು ಇಬ್ಬರಿಗೂ ವಿಶೇಷ ಪ್ರಸಾದ ನೀಡಿದರು. ಸಚಿವೆ ನಿರ್ಮಲಾ ಅವರು ತನ್ನ ಮನೆಯಿಂದ ತಂದಿದ್ದ ನಾಲ್ಕು ಮುಷ್ಟಿ ಅವಲಕ್ಕಿಯನ್ನು ಶ್ರೀಗಳಿಗೆ ಅರ್ಪಿಸಿದರು. ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮುತ್ತಿನ ಸರಗಳ ವಿಶೇಷ ಅಲಂಕಾರದಲ್ಲಿದ್ದ ಶ್ರೀಕೃಷ್ಣನನ್ನು ಕಣ್ತುಂಬಿಕೊಂಡರು. ತಲೆಗೆ ಮಲ್ಲಿಗೆ ಮುಡಿದಿದ್ದ ಸುಧಾಮೂರ್ತಿ ಶ್ರೀಕೃಷ್ಣನನ್ನು ನವಗ್ರಹ ಕಿಂಡಿಯಲ್ಲಿ ಕಂಡರು.
ಹಣ, ಚಿನ್ನ ಬದುಕಿಗೆ ಸಾಧನವೇ ಹೊರತು ಜೀವನವಲ್ಲ. ಹಣ, ಚಿನ್ನದ ಅಕ್ಕಿ ಇದೆಯೆಂದು ಅದನ್ನು ತಿನ್ನಲಾಗದು. ಹಣಕ್ಕಿಂತ ಬದುಕಿಗೆ ಅಧ್ಯಾತ್ಮದ ಅಗತ್ಯ ಬಹಳಷ್ಟಿದೆ. ಎಷ್ಟು ಹಣ ಕೊಟ್ಟರೂ ಖರೀದಿಸಲಾಗದ ಸಂಪತ್ತು ಆಧ್ಯಾತ್ಮ ಮಾತ್ರ ಎಂದು ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಹೇಳಿದರು.
ಪರ್ಯಾಯ ಪುತ್ತಿಗೆ ಮಠ, ಶ್ರೀಕೃಷ್ಣ ಮಠದ ವತಿಯಿಂದ ಶ್ರೀಕೃಷ್ಣ ಮಠದ ಯಾಳಿ (ಸುತ್ತು ಪೌಳಿ) ಹಾಗೂ ಗೀತಾಮಂದಿರದಲ್ಲಿ ಶ್ರೀಪುತ್ತಿಗೆ ವಿಶ್ವ ವಿದ್ಯಾಪೀಠದ ಉದ್ಘಾಟನೆ ಬಳಿಕ ಸುಧಾಮೂರ್ತಿ ರಾಜಾಂಗಣದಲ್ಲಿ ಶ್ರೀಕೃಷ್ಣ ಗೀತಾನುಗ್ರಹ ಪ್ರಶಸ್ತಿ ಸ್ವೀಕರಿಸಿ ಶನಿವಾರ ಮಾತನಾಡಿದರು.
Infosys Foundation Chairperson and Rajya Sabha member Sudha Murty, known for her simplicity despite her role in building a billion-dollar company, spent her day at Udupi Sri Krishna Matha engaging in humble service. She was seen sitting on the floor writing hostilu (ritual door decorations), washing temple utensils, singing devotional hymns, and stringing flowers. Joining her in this act of devotion was Union Finance Minister Nirmala Sitharaman.
11-08-25 11:18 am
Bangalore Correspondent
ಮುಸ್ಲಿಂ ಯುವತಿಯರನ್ನ ಮದುವೆಯಾದ್ರೆ 5 ಲಕ್ಷ ರೂ. ಕೊಡ...
10-08-25 09:12 pm
ಗುಜರಾತ್, ಮಹಾರಾಷ್ಟ್ರದಂತೆ ನಮಗೂ ಆದ್ಯತೆ ಕೊಡಿ, ಮೆಟ...
10-08-25 06:27 pm
PM Modi, Operation Sindhoor: ಆಪರೇಶನ್ ಸಿಂಧೂರಕ್...
10-08-25 06:06 pm
ಚಾಲಕ ರಹಿತ ಮೆಟ್ರೋ ಹಳದಿ ಮಾರ್ಗಕ್ಕೆ ಪ್ರಧಾನಿ ಮೋದಿ...
10-08-25 01:57 pm
09-08-25 11:09 pm
HK News Desk
ಯಾರ ಮುಂದೆಯೂ ಭಾರತ ತಲೆ ಬಾಗದು ; ಸಾವಿರ ಬಾರಿ ಯತ್ನಿ...
09-08-25 07:38 pm
ಭದ್ರತಾ ಸಲಹೆಗಾರ ಅಜಿತ್ ದೋವಲ್ - ರಷ್ಯಾ ಉಪ ಪ್ರಧಾನಿ...
09-08-25 02:49 pm
ಮಧ್ಯಪ್ರದೇಶದ ಈ ಜಾಗದಲ್ಲಿದ್ಯಂತೆ ಅಪಾರ ಪ್ರಮಾಣದ ಚಿನ...
07-08-25 10:02 pm
ಸಂಘರ್ಷ ನಿರತ ಜಗತ್ತಿಗೆ ಹಿಂದು ಧರ್ಮದಲ್ಲಿ ಮದ್ದು ಇದ...
07-08-25 09:42 pm
11-08-25 11:49 am
Mangalore Correspondent
Kudla Rampage YouTuber, Ajay Anchan Case: ಬೈಕ...
11-08-25 11:38 am
ಹೊಸ್ತಿಲು ಬರೆದು, ಪಾತ್ರೆ ತೊಳೆದು, ದೇವರ ಸ್ತೋತ್ರ ಹ...
10-08-25 04:32 pm
Six Arrested, Dharmasthala Incident, Kudla Ra...
10-08-25 02:26 pm
Dharmasthala, Janardhan Poojary, SIT Probe: ದ...
10-08-25 01:01 pm
08-08-25 10:07 pm
Bangalore Correspondent
ಮಸಾಜ್ ಹೆಸರಲ್ಲಿ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ,...
08-08-25 09:44 pm
ಹೆಚ್ಚು ಲೈಕ್ಸ್, ಫಾಲೋವರ್ಸ್ ಸಿಗ್ತಾರೆ ಅಂತ ಕುಖ್ಯಾತ...
08-08-25 12:30 pm
ಕುಖ್ಯಾತ ಕಳ್ಳನಿಗೆ ತನ್ನ ಮನೆಯಲ್ಲೇ ಆಶ್ರಯ ಕೊಟ್ಟಿದ್...
08-08-25 12:27 pm
2014 Kulai Sumathi Prabhu Murder Case: 2014 ರ...
08-08-25 12:21 pm