ಬ್ರೇಕಿಂಗ್ ನ್ಯೂಸ್
10-08-25 04:32 pm Udupi Correspondent ಕರಾವಳಿ
ಉಡುಪಿ, ಆ.10 : ಸಾವಿರಾರು ಕೋಟಿಯ ಕಂಪನಿ ಕಟ್ಟಲು ಕಾರಣವಾಗಿದ್ದ ಇನ್ಫೋಸಿಸ್ ಸುಧಾಮೂರ್ತಿ ಯಾವುದೇ ಹಮ್ಮು ಬಿಮ್ಮಿಲ್ಲದೆ ಶ್ರೀಕೃಷ್ಣ ಮಠದಲ್ಲಿ ನೆಲದಲ್ಲಿ ಕುಳಿತು ಹೊಸ್ತಿಲು ಬರೆದಿದ್ದಲ್ಲದೆ, ದೇವರ ಪಾತ್ರೆ ತೊಳೆದು ದೇವರ ನಾಮ ಹಾಡುತ್ತಾ ಹೂಗಳನ್ನು ಕಟ್ಟಿ ಕಾಲ ಕರೆದಿದ್ದಾರೆ. ಈ ವೇಳೆ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜೊತೆಯಾದರು.
ಮಠದ ಗೋ ಶಾಲೆಯಲ್ಲಿ ಗೋಪೂಜೆ ನೆರವೇರಿಸಿ, ಗೋವುಗಳಿಗೆ ಗೋಗ್ರಾಸ ನೀಡಿದರು. ಭೋಜನ ಶಾಲೆಯಲ್ಲಿ ದೇವರ ಪಾತ್ರೆಗಳನ್ನು ತೊಳೆವಾಗ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರೂ ಜೊತೆಗಿದ್ದು ಉಡುಪಿ ಮಣಿಪಾಲದ ತನ್ನ ನೆನಪಿನ ನಂಟನ್ನು ಹೇಳಿಕೊಂಡರು. ಆಟಿ ಹುಣ್ಣಿಮೆ ಅಂಗವಾಗಿ ಶ್ರೀಕೃಷ್ಣ ಮಠದ ಹೊಸ್ತಿಲು ಬರೆದ ಸುಧಾಮೂರ್ತಿ ಚಂದ್ರಶಾಲೆಯಲ್ಲಿ ಕುಳಿತು ದಾರವನ್ನು ಸುತ್ತುತ್ತ ಕನಕಾಂಬರ ಹೂವುಗಳನ್ನು ಪೋಣಿಸಿ ದ್ವಾದಶ ಸ್ತೋತ್ರ ಹಾಡಿದರು.






ಕೃಷ್ಣ ಮಠದ ಹೊಸ್ತಿಲು ಬರೆಯಲು ಇವರಿಬ್ಬರೂ ದಿಲ್ಲಿಯಿಂದ ಬಂದಿದ್ದರು. ಕೃಷ್ಣನ ಮಹಾದ್ವಾರ, ಸಿಂಹಾಸನ ಬಾಗಿಲಲ್ಲಿ ಹೊಸ್ತಿಲು ಬರೆದು ಲಕ್ಷ್ಮೀ ಪೂಜೆಯನ್ನೂ ನೆರವೇರಿಸಿದರು. ಇಬ್ಬರೂ ಜಗದ ಪರಿವೆ ಇಲ್ಲದೆ ಕೃಷ್ಣನ ಸ್ತೋತ್ರಗಳನ್ನು ಹಾಡುತ್ತ ಕಾಲ ಕಳೆದರು.
ಶ್ರೀಮಠದ ವತಿಯಿಂದ ಇಬ್ಬರಿಗೂ ಮುತ್ತೈದೆಯರ ಮೂಲಕ ಬಾಗಿನ ನೀಡಲಾಯಿತು. ಸರ್ವಜ್ಞ ಪೀಠದಲ್ಲಿ ಕುಳಿತಿದ್ದ ಶ್ರೀಗಳು ಇಬ್ಬರಿಗೂ ವಿಶೇಷ ಪ್ರಸಾದ ನೀಡಿದರು. ಸಚಿವೆ ನಿರ್ಮಲಾ ಅವರು ತನ್ನ ಮನೆಯಿಂದ ತಂದಿದ್ದ ನಾಲ್ಕು ಮುಷ್ಟಿ ಅವಲಕ್ಕಿಯನ್ನು ಶ್ರೀಗಳಿಗೆ ಅರ್ಪಿಸಿದರು. ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮುತ್ತಿನ ಸರಗಳ ವಿಶೇಷ ಅಲಂಕಾರದಲ್ಲಿದ್ದ ಶ್ರೀಕೃಷ್ಣನನ್ನು ಕಣ್ತುಂಬಿಕೊಂಡರು. ತಲೆಗೆ ಮಲ್ಲಿಗೆ ಮುಡಿದಿದ್ದ ಸುಧಾಮೂರ್ತಿ ಶ್ರೀಕೃಷ್ಣನನ್ನು ನವಗ್ರಹ ಕಿಂಡಿಯಲ್ಲಿ ಕಂಡರು.
ಹಣ, ಚಿನ್ನ ಬದುಕಿಗೆ ಸಾಧನವೇ ಹೊರತು ಜೀವನವಲ್ಲ. ಹಣ, ಚಿನ್ನದ ಅಕ್ಕಿ ಇದೆಯೆಂದು ಅದನ್ನು ತಿನ್ನಲಾಗದು. ಹಣಕ್ಕಿಂತ ಬದುಕಿಗೆ ಅಧ್ಯಾತ್ಮದ ಅಗತ್ಯ ಬಹಳಷ್ಟಿದೆ. ಎಷ್ಟು ಹಣ ಕೊಟ್ಟರೂ ಖರೀದಿಸಲಾಗದ ಸಂಪತ್ತು ಆಧ್ಯಾತ್ಮ ಮಾತ್ರ ಎಂದು ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಹೇಳಿದರು.
ಪರ್ಯಾಯ ಪುತ್ತಿಗೆ ಮಠ, ಶ್ರೀಕೃಷ್ಣ ಮಠದ ವತಿಯಿಂದ ಶ್ರೀಕೃಷ್ಣ ಮಠದ ಯಾಳಿ (ಸುತ್ತು ಪೌಳಿ) ಹಾಗೂ ಗೀತಾಮಂದಿರದಲ್ಲಿ ಶ್ರೀಪುತ್ತಿಗೆ ವಿಶ್ವ ವಿದ್ಯಾಪೀಠದ ಉದ್ಘಾಟನೆ ಬಳಿಕ ಸುಧಾಮೂರ್ತಿ ರಾಜಾಂಗಣದಲ್ಲಿ ಶ್ರೀಕೃಷ್ಣ ಗೀತಾನುಗ್ರಹ ಪ್ರಶಸ್ತಿ ಸ್ವೀಕರಿಸಿ ಶನಿವಾರ ಮಾತನಾಡಿದರು.
Infosys Foundation Chairperson and Rajya Sabha member Sudha Murty, known for her simplicity despite her role in building a billion-dollar company, spent her day at Udupi Sri Krishna Matha engaging in humble service. She was seen sitting on the floor writing hostilu (ritual door decorations), washing temple utensils, singing devotional hymns, and stringing flowers. Joining her in this act of devotion was Union Finance Minister Nirmala Sitharaman.
04-11-25 04:38 pm
Bangalore Correspondent
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
04-11-25 10:51 pm
Mangalore Correspondent
Mangalore Police, Panambur Beach: ಗಂಡ - ಹೆಂಡತ...
04-11-25 08:37 pm
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ...
04-11-25 06:15 pm
ವ್ಯಾಟಿಕನ್ ಸಿಟಿಯ ಭಾರತದ ರಾಯಭಾರಿ ಆ್ಯಂಡ್ರಿಯಾ ಫಾನ್...
04-11-25 05:06 pm
ಧರ್ಮಸ್ಥಳ ಪ್ರಕರಣ ; ಎಸ್ಐಟಿ ತನಿಖಾ ಪ್ರಕ್ರಿಯೆಗೆ ಮಹ...
04-11-25 05:03 pm
04-11-25 02:11 pm
Mangalore Correspondent
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm