ಬ್ರೇಕಿಂಗ್ ನ್ಯೂಸ್
31-05-25 10:57 pm Mangalore Correspondent ಕರಾವಳಿ
ಮಂಗಳೂರು, ಮೇ 31 : ಮಂಗಳೂರು ಪೊಲೀಸ್ ಕಮಿಷನರ್ ಆಗಿ ಬಂದಿರುವ ಐಪಿಎಸ್ ಅಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಮೊದಲ ದಿನವೇ ಅಪರಾಧಿಗಳ ಚಳಿ ಬಿಡಿಸುವ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಯಾವುದೇ ಅಪರಾಧ ಪ್ರಕರಣದಲ್ಲಿ ಆರೋಪಿಗಳಿಗೆ ಸಹಾಯ ಮಾಡೋರು ಚೆನ್ನಾಗಿ ನೆನಪಿಟ್ಟುಕೊಳ್ಳಿ. ಸಮಾಜದಲ್ಲಿ ಚೆನ್ನಾಗಿದ್ದು ಆರೋಪಿಗಳಿಗೆ ಸಹಾಯ ಮಾಡುವ ದೊಡ್ಡವರು ಅನಿಸಿಕೊಂಡವರೆಲ್ಲ ಕೇಳಿಸಿಕೊಳ್ಳಿ. ತಮ್ಮ ಪರವಾಗಿ ಕೆಲಸ ಮಾಡಿದ್ದಾನೆ ಅಂತ ಅವರಿಗೆ ಸಹಾಯ ಮಾಡೋದು, ಹಣದ ಸಹಾಯ ನೀಡುವುದು, ಕಾರು ಕೊಡುವುದು, ಮೊಬೈಲ್ ಕೊಡುವುದು ಇತ್ಯಾದಿ ಏನೇ ಸಹಾಯ ಮಾಡಿದರೂ ನಮಗೆ ತಿಳಿಯುತ್ತದೆ.
ಕೊಲೆ ಅಥವಾ ಯಾವುದೇ ಕೃತ್ಯ ಮಾಡಿಸಿದ ಮೇಲೆ ಮನೆಯಲ್ಲಿ ಇಟ್ಟುಕೊಳ್ಳುವುದು, ಕಾರು, ಬೈಕ್ ಕೊಡಿಸುವುದು ಇತ್ಯಾದಿ ಎಲ್ಲವೂ ಅಪರಾಧವೇ. ಯಾವುದೇ ಅಪರಾಧದಲ್ಲಿ ಸಹಾಯ ಮಾಡಿದರೂ ಅದೂ ಅಪರಾಧವೇ. ಬಿಎನ್ಎಸ್ ಕಾಯ್ದೆ ಅದನ್ನು ಸ್ಪಷ್ಟವಾಗಿ ಹೇಳುತ್ತದೆ. ಹಾಗಾಗಿ, ಅಂಥವರನ್ನೆಲ್ಲ ಕಾನೂನು ಮುಂದೆ ತರಲೇಬೇಕಾಗುತ್ತದೆ. ಯಾರು ಇದರ ಬಗ್ಗೆ ಏನು ಮಾತಾಡಿಕೊಳ್ತಾರೋ ಗೊತ್ತಿಲ್ಲ. ನಾವಂತೂ ಅವರನ್ನು ಆರೋಪಿಗಳು ಅಂತಲೇ ಹೇಳುತ್ತೇವೆ. ಸುತ್ತಮುತ್ತ ಅಂಥವರಿದ್ದರೆ ಹೇಳಿ, ಅವರನ್ನು ಹಿಡಿದಿಲ್ಲ ಅಂದ್ರೆ ನಾವು ಹಿಡಿಯುತ್ತೇವೆ ಎಂದು ಹೇಳಿದರು.
ಕೊಲೆ ಪ್ರಕರಣದಲ್ಲಿ ಸುಖಾಸುಮ್ಮನೆ ಬಂಧನ ಮಾಡಲಾಗುತ್ತಿದೆ ಎಂದು ಆರೋಪ ಮಾಡುತ್ತಿರುವುದರಿಂದ ಈ ಹೇಳಿಕೆಯನ್ನು ನೀಡುತ್ತಿದ್ದೇನೆ. ಆರೋಪಿಗಳ ಗೆಳೆಯರು ಇರಬಹುದು, ಇನ್ಯಾರೋ ಇರಬಹುದು ಅಂಥವರನ್ನು ಜೊತೆಗೆ ಇಟ್ಟುಕೊಂಡರೂ ಅವರೆಲ್ಲ ಆರೋಪಿಗಳೇ. ಯಾಕಂದ್ರೆ, ಬಿಎನ್ಎಸ್ ಕಾಯ್ದೆಯದಲ್ಲಿ ಅದಕ್ಕಂತಲೇ ಪ್ರತ್ಯೇಕ ವ್ಯಾಖ್ಯಾನ ಇದೆ ಎಂದು ಸುಧೀರ್ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.
#Mangalore Police Commissioner Sudheer Kumar Reddy issues strong warning to criminals and those aiding them with shelter, phones, vehicles, or food. Cites BNS law—says no one will be spared. #Mangalore #Police #sudheerkumarreddy #BreakingNews @compolmlr pic.twitter.com/ubss5Bo5tP
— Headline Karnataka (@hknewsonline) May 31, 2025
Mangalore Police Commissioner Sudheer Kumar Reddy has issued a strong warning to criminals and those assisting them. In a video message, he cautioned individuals providing shelter, mobile phones, vehicles, or food to accused persons, stating that strict action will be taken under the new Bharatiya Nyaya Sanhita (BNS) law. He emphasized that no one aiding criminal activities will be spared and urged the public to cooperate with law enforcement in maintaining peace and order in the region.
13-08-25 07:03 pm
Bangalore Correspondent
ವಜಾ ಹಿಂದೆ ದೊಡ್ಡ ಷಡ್ಯಂತ್ರ ಆಗಿದೆ, ರಾಹುಲ್ ಗಾಂಧಿ...
12-08-25 10:39 pm
Rajendra Swamiji of Kodimath, Dharmasthala: ಧ...
12-08-25 07:43 pm
ಕೆಎನ್ ರಾಜಣ್ಣ ರಾಜಿನಾಮೆ ಅಲ್ಲ, ಸಚಿವ ಸ್ಥಾನದಿಂದ ಕಿ...
11-08-25 11:01 pm
ರಾಜ್ಯಪಾಲರ ವಿರುದ್ಧ ಅವಹೇಳನ ಹೇಳಿಕೆ ; ಐವಾನ್ ಡಿಸೋಜ...
11-08-25 10:26 pm
13-08-25 11:56 am
HK News Desk
ಪುಣ್ಯಕ್ಷೇತ್ರ ಯಾತ್ರೆ ಹೊರಟವರ ಮೇಲೆರಗಿದ ಜವರಾಯ ; ರ...
13-08-25 10:41 am
'ದೇಶ ಸುರಕ್ಷಿತ ಕೈಯಲ್ಲಿದೆ' ; ನರೇಂದ್ರ ಮೋದಿ ಸರ್ಕ...
12-08-25 02:49 pm
ಕಾಶ್ಮೀರಿ ಪಂಡಿತರ ಗುರಿಯಾಗಿಸಿ ಮಾರಣಹೋಮ ; 35 ವರ್ಷಗ...
12-08-25 11:42 am
ಕರ್ನಾಟಕ ಸರ್ಕಾರದಿಂದ ಹಿರಿಯ ನಾಗರಿಕರಿಗೆ ಸಾರ್ವತ್ರಿ...
12-08-25 11:35 am
13-08-25 10:22 pm
Mangalore Correspondent
Dharmasthala News Today, Point No 13: ಕಡೆಗೂ ಪ...
13-08-25 10:01 pm
The Ocean Pearl Brings “Flavors of India” to...
13-08-25 08:23 pm
ಹಠಾತ್ ಕುಸಿದು ಬಿದ್ದು ಕಾಲೇಜು ಬಸ್ ನಿರ್ವಾಹಕ ಸಾವು...
13-08-25 01:49 pm
ಶವ ಹೂತ ಪ್ರಕರಣ ; ಕೊನೆಗೂ ಎಂಟ್ರಿಯಾದ ರಾಷ್ಟ್ರೀಯ ಮಾ...
13-08-25 10:37 am
13-08-25 05:40 pm
Udupi Correspondent
Fraud, Laxmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ...
13-08-25 04:14 pm
ಅನೈತಿಕ ಸಂಬಂಧ ಶಂಕೆ ; ಅತ್ತೆ ಮೇಲಿನ ದ್ವೇಷದಿಂದ ಕೊಲ...
12-08-25 12:36 pm
Mangalore Digital Arrest, Fraud: ಚೀನಾಕ್ಕೆ ಡ್ರ...
11-08-25 12:37 pm
ಸ್ನೇಹಿತನಿಗೆ ಬೆತ್ತಲೆ ವೀಡಿಯೋ ಶೇರ್ ಮಾಡಿದ್ಲು ಯುವತ...
08-08-25 10:07 pm