Mangalore Rain, Fishermen Drowning, Flood: ಗಾಳಿ ಮಳೆ ಮಧ್ಯೆ ಮೀನುಗಾರಿಕೆ ದುಸ್ಸಾಹಸ ; ತೋಟ ಬೆಂಗ್ರೆಯಲ್ಲಿ ದೋಣಿ ಮಗುಚಿ ಬಿದ್ದು ಇಬ್ಬರು ಮೀನುಗಾರರು ನೀರುಪಾಲು 

30-05-25 01:15 pm       Mangalore Correspondent   ಕರಾವಳಿ

ಜೋರಾದ ಗಾಳಿ ಮಳೆಗೆ ಮೀನುಗಾರಿಕೆ ತೆರಳಿದ್ದ ನಾಡದೋಣಿ ಮಗುಚಿ ಬಿದ್ದು ಇಬ್ಬರು ಮೀನುಗಾರರು ನಾಪತ್ತೆಯಾದ ಘಟನೆ ಮಂಗಳೂರಿನ ತೋಟ ಬೆಂಗ್ರೆ ಅಳಿವೆಬಾಗಿಲಿನಲ್ಲಿ ನಡೆದಿದೆ. 

ಮಂಗಳೂರು, ಮೇ 30 : ಜೋರಾದ ಗಾಳಿ ಮಳೆಗೆ ಮೀನುಗಾರಿಕೆ ತೆರಳಿದ್ದ ನಾಡದೋಣಿ ಮಗುಚಿ ಬಿದ್ದು ಇಬ್ಬರು ಮೀನುಗಾರರು ನಾಪತ್ತೆಯಾದ ಘಟನೆ ಮಂಗಳೂರಿನ ತೋಟ ಬೆಂಗ್ರೆ ಅಳಿವೆಬಾಗಿಲಿನಲ್ಲಿ ನಡೆದಿದೆ. 

ತೋಟಬೆಂಗ್ರೆ ಅಳಿವೆ ಬಾಗಿಲು ಸಮೀಪ ಇಂದು ಬೆಳಗ್ಗೆ ಮೀನು ಹಿಡಿಯುತ್ತಿದ್ದಾಗ ಜೋರಾದ ಮಳೆ ಗಾಳಿಯಿಂದಾಗಿ ದೋಣಿ ಮಗುಚಿದ್ದು, ದೋಣಿಯಲ್ಲಿದ್ದ ಇಬ್ಬರು ಸಮುದ್ರ ಪಾಲಾಗಿ ನಾಪತ್ತೆಯಾಗಿದ್ದಾರೆ. ತೋಟ ಬೆಂಗ್ರೆ ನಿವಾಸಿಗಳಾದ ಯಶವಂತ(52), ಕಮಲಾಕ್ಷ(47) ಎಂಬವರು ನೀರುಪಾಲಾದವರು.

ಮೀನುಗಾರಿಕೆಗೆ ಬಳಸಿದ್ದ ನಾಡದೋಣಿಯ ಪೆಟ್ರೋಲ್ ಟ್ಯಾಂಕ್ ತೋಟ ಬೆಂಗ್ರೆ ಸಮೀಪ ದಡಕ್ಕೆ ಬಂದು ಬಿದ್ದಿದೆ. ದೋಣಿ ಇನ್ನೂ ಪ್ತಯಾಗಿಲ್ಲ. ಸ್ಥಳೀಯ ಗ್ರಾಮಸ್ಥರು ನಾಪತ್ತೆಯಾದವರ ಬಗ್ಗೆ ಹುಡುಕಾಟ ಆರಂಭಿಸಿದ್ದಾರೆ. ಮಳೆಯಿಂದಾಗಿ ಮೀನುಗಾರಿಗೆ ನಡೆಸಬಾರದು, ನದಿ ತೀರಕ್ಕೆ ಜನರು ತೆರಳಬಾರದು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದ್ದರೂ, ಮೀನುಗಾರರು ದುಸ್ಸಾಹಸಕ್ಕಿಳಿದಿದ್ದರು.

Two fishermen have gone missing after a traditional fishing boat capsized due to strong winds and heavy rain near the Alive Bagilu area in Thota Bengre this morning. The victims, identified as Yashavanth (52) and Kamalaksha (47), both residents of Thota Bengre, were fishing when the storm overturned their boat. Search and rescue operations are currently underway.