Sharan Pumpwell, Mangalore, threat: ಶರಣ್ ಪಂಪ್ವೆಲ್ ಮುಂದಿನ ಟಾರ್ಗೆಟ್ ; ಜಾಲತಾಣದಲ್ಲಿ ಪೋಸ್ಟ್, ಜೀವ ಬೆದರಿಕೆ ಹಾಕಿದ ಬಗ್ಗೆ ಎಫ್ಐಆರ್ ದಾಖಲು

04-05-25 11:26 pm       Mangalore Correspondent   ಕರಾವಳಿ

ಹಿಂದು ಸಂಘಟನೆ ಮುಖಂಡ ಶರಣ್ ಪಂಪ್ವೆಲ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಮುಂದಿನ ಟಾರ್ಗೆಟ್ ಶರಣ್ ಪಂಪ್ವೆಲ್, ಸಾಯುವುದಕ್ಕೆ ರೆಡಿಯಾಗಿರು ಎಂಬುದಾಗಿ ಬೆದರಿಕೆ ಹಾಕಿರುವ ಬಗ್ಗೆ ಕದ್ರಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಂಗಳೂರು, ಮೇ 4 : ಹಿಂದು ಸಂಘಟನೆ ಮುಖಂಡ ಶರಣ್ ಪಂಪ್ವೆಲ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಮುಂದಿನ ಟಾರ್ಗೆಟ್ ಶರಣ್ ಪಂಪ್ವೆಲ್, ಸಾಯುವುದಕ್ಕೆ ರೆಡಿಯಾಗಿರು ಎಂಬುದಾಗಿ ಬೆದರಿಕೆ ಹಾಕಿರುವ ಬಗ್ಗೆ ಕದ್ರಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಜ್ಪೆಯಲ್ಲಿ ಸುಹಾಸ್ ಶೆಟ್ಟಿ ಕೊಲೆ ನಡೆದ ಬಳಿಕ ಜಾಲತಾಣದಲ್ಲಿ ಹಲವು ರೀತಿಯ ಕೋಮು ಪ್ರಚೋದಕ ಸಂದೇಶಗಳು ಹಿಂದು- ಮುಸ್ಲಿಮರನ್ನು ಎತ್ತಿ ಕಟ್ಟುವ ರೀತಿ ರವಾನೆಯಾಗಿವೆ. ಈ ಬಗ್ಗೆ 15ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದ್ದು, ಇದರ ಬೆನ್ನಲ್ಲೇ ಹಿಂದು ಸಂಘಟನೆ ಮುಖಂಡರಾದ ಶರಣ್ ಪಂಪ್ವೆಲ್, ಭರತ್ ಕುಮ್ಡೇಲು ವಿರುದ್ಧ ಜೀವ ಬೆದರಿಕೆ ಹಾಕಲಾಗಿದೆ. ಅಲ್ಲದೆ, ಮುಂದಿನ ಟಾರ್ಗೆಟ್ ನೀವೇ, ಸಾಯುವುದಕ್ಕೆ ರೆಡಿಯಾಗಿ ಎಂದೂ ಬೆದರಿಕೆ ಹಾಕಲಾಗಿದೆ. ಶರಣ್ ಪಂಪ್ವೆಲ್ ವಿರುದ್ಧ ಟಿವಿ ಚಾನೆಲ್ ಒಂದರ ಯೂಟ್ಯೂಬ್ ಲೈವ್ ನಲ್ಲಿ ಬೆದರಿಕೆ ಹಾಕುವ ರೀತಿ ಕಮೆಂಟ್ ಹಾಕಲಾಗಿದೆ.

ಈ ರೀತಿಯ ಬರಹಗಳಿದ್ದ ಪೋಸ್ಟ್ ಗಳು ಜಾಲತಾಣದಲ್ಲಿ ವೈರಲ್ ಆಗಿದ್ದು, ಹಿಂದು ಸಂಘಟನೆ ಕಾರ್ಯಕರ್ತರಿಂದ ಭಾರೀ ಆಕ್ರೋಶವೂ ಕೇಳಿಬಂದಿದೆ. ಬೇರೆ ಕೋಮು ಪ್ರಚೋದಕ ಬರಹಗಳ ಬಗ್ಗೆ ಪೊಲೀಸರು ಸುಮೋಟೊ ಕೇಸು ದಾಖಲಿಸಿದ್ದರು. ಶರಣ್ ಮತ್ತು ಭರತ್ ವಿರುದ್ಧ ಜೀವ ಬೆದರಿಕೆ ಹಾಕಿ ಮುಹೂರ್ತ ಫಿಕ್ಸ್ ಮಾಡಿದ್ದೇವೆ ಎನ್ನುವ ವಿಚಾರದ ಬಗ್ಗೆ ಸ್ವತಃ ಕೇಸು ದಾಖಲಿಸಿರಲಿಲ್ಲ. ಪೊಲೀಸರು ದೂರು ಕೊಡಲು ತಿಳಿಸಿದ್ದರಿಂದ ದೂರು ಕೊಟ್ಟಿದ್ದೇನೆ. ಆದರೆ ಮುಸ್ಲಿಮರಿಗಾದರೆ ಇವರೇ ಸುಮೊಟೋ ಕೇಸು ದಾಖಲು ಮಾಡುತ್ತಾರೆ. ನಮ್ಮ ಬಗ್ಗೆ ಯಾಕೆ ತಾರತಮ್ಯ ಮಾಡುತ್ತಾರೆ ಎಂದು ಶರಣ್ ಪಂಪ್ವೆಲ್ ಪ್ರತಿಕ್ರಿಯಿಸಿದ್ದಾರೆ.

FIR Filed in Mangalore Over Death Threats to Sharan Pumpwell on Social Media after the murder of Suhas Shetty in bajpe.