Mangalore Suhas Shetty Murder, Instagram, Police: ಕೊಲೆ ಕೇಸು ನೆಪದಲ್ಲಿ ಕೋಮು ಪ್ರಚೋದಕ ಸಂದೇಶ ; ಇನ್ಸ್ ಟಾ ಗ್ರಾಮ್ ಪೇಜ್, ವಾಟ್ಸಪ್ ಮೆಸೇಜ್ ಹಾಕಿದವರ ವಿರುದ್ಧ 12ಕ್ಕೂ ಹೆಚ್ಚು ಪ್ರಕರಣ, ಜಾಲತಾಣ ದುರ್ಬಳಕೆ ವಿರುದ್ಧ ದಂಡ ಬೀಸಿದ ಪೊಲೀಸರು  

02-05-25 10:47 pm       Mangalore Correspondent   ಕರಾವಳಿ

ಹಿಂದು ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಘಟನೆ ಹಿನ್ನೆಲೆಯಲ್ಲಿ ಹಿಂದು ಮತ್ತು ಮುಸ್ಲಿಮರು ಜಾಲತಾಣದಲ್ಲಿ ಪರಸ್ಪರ ದ್ವೇಷ ಹಬ್ಬಿಸುವ ಮತ್ತು ಪ್ರಚೋದನಕಾರಿ ಬರಹಗಳನ್ನು ಪೋಸ್ಟ್ ಮಾಡಿದ್ದು, ಈ ಬಗ್ಗೆ ಮಂಗಳೂರು ಪೊಲೀಸರು 12ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದ್ದಾರೆ. ಶಾಂತಿ, ಸೌಹಾರ್ದಕ್ಕೆ ಧಕ್ಕೆ ಬರುವ ರೀತಿ ಒಂದು ಸಮುದಾಯವನ್ನು ಇನ್ನೊಂದು ಸಮುದಾಯದ ಎದುರು ಎತ್ತಿ ಕಟ್ಟುವ ರೀತಿ ಪೋಸ್ಟ್ ಹಾಕಿದ್ದಾರೆ.

ಮಂಗಳೂರು, ಮೇ 2 : ಹಿಂದು ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಘಟನೆ ಹಿನ್ನೆಲೆಯಲ್ಲಿ ಹಿಂದು ಮತ್ತು ಮುಸ್ಲಿಮರು ಜಾಲತಾಣದಲ್ಲಿ ಪರಸ್ಪರ ದ್ವೇಷ ಹಬ್ಬಿಸುವ ಮತ್ತು ಪ್ರಚೋದನಕಾರಿ ಬರಹಗಳನ್ನು ಪೋಸ್ಟ್ ಮಾಡಿದ್ದು, ಈ ಬಗ್ಗೆ ಮಂಗಳೂರು ಪೊಲೀಸರು 12ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದ್ದಾರೆ. ಶಾಂತಿ, ಸೌಹಾರ್ದಕ್ಕೆ ಧಕ್ಕೆ ಬರುವ ರೀತಿ ಒಂದು ಸಮುದಾಯವನ್ನು ಇನ್ನೊಂದು ಸಮುದಾಯದ ಎದುರು ಎತ್ತಿ ಕಟ್ಟುವ ರೀತಿ ಪೋಸ್ಟ್ ಹಾಕಿದ್ದಾರೆ.

tv9 ಕನ್ನಡ ನ್ಯೂಸ್‌ ಚಾನಲಿನ ಯೂಟ್ಯೂಬ್ ಲೈವ್ ನಲ್ಲಿ ಸುಹಾಸ್‌ ಶೆಟ್ಟಿ ಹತ್ಯೆ ಸಂಬಂಧಿಸಿ ನೇರಪ್ರಸಾರ ಆಗುತ್ತಿದ್ದ ಸಮಯದಲ್ಲಿ kudla friends ಹೆಸರಿನ youtube user "ವಿಕೆಟ್ ಹೋಗುತ್ತೆ" ಎಂಬುದಾಗಿ ಪೋಸ್ಟ್ ಮಾಡಿದ್ದವರ ವಿರುದ್ಧ ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದಲ್ಲದೆ, ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್‌ನಲ್ಲಿ beary_royal_nawab ಎಂಬ ಖಾತೆಯಲ್ಲಿ "ಶತ್ರು ಸಂಹಾರ ಶುರುವಾಗಿದೆ. ಪ್ರತಿರೋಧ ಅಪರಾಧವಲ್ಲ" ಎಂಬುದಾಗಿ ಪೋಸ್ಟ್ ಮಾಡಿರುವವರ ವಿರುದ್ಧ ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದೆಡೆ ವಾಟ್ಸಪಿನಲ್ಲಿ “ಸುಹಾಸ ಬಜ್ಪೆ ಹತ್ಯೆಯನ್ನು ಖಂಡಿಸಿ ದ.ಕ ಜಿಲ್ಲೆ ಸಂರ್ಪೂರ್ಣ ಬಂದ್. ಸುಹಾಸ್ರವರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ. ನಮ್ಮ ಬಲವನ್ನು ಈಗ ತೋರಿಸದೇ ಇದ್ದಲ್ಲಿ ಮುಂದೊಂದು ದಿನ ನಾವೇ ಇರುವುದಿಲ್ಲ. ಹಿಂದೂ ಸಾಗರದ ಬಿಂದು ಬಿಂದುಗಳೇ ಒಟ್ಟಾಗೋಣ. ಬಲಿದಾನ ವ್ಯರ್ಥವಾಗದಿರಲಿ” ಎಂಬುದಾಗಿ ಪೋಸ್ಟ್ ಮಾಡಿರುವವರ ವಿರುದ್ಧ ಮಂಗಳೂರು ಉತ್ತರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಲವಾರು ದಾಳಿಯಿಂದ ಮೃತಪಟ್ಟ ಸುಹಾಸ ಶೆಟ್ಟಿ ಫೋಟೊ ಹಾಕಿ ಬಜರಂಗದಳದ ಅಶೋಕನಗರ ಮತ್ತು ಶಂಖನಾದ ಎಂಬ ಎರಡು ಇನ್ಸ್ಟಾಗ್ರಾಂ ಪ್ರೊಫೈಲ್ ಗಳಲ್ಲಿ ಉದ್ರೇಕಕಾರಿ ಮತ್ತು ಪ್ರಚೋದನಕಾರಿಯಾಗಿ ಸಮಾಜದ ವಿವಿಧ ಧರ್ಮ ಹಾಗೂ ವರ್ಗಗಳ ಜನರಲ್ಲಿ ದ್ವೇಷದ ಭಾವನೆ ಹುಟ್ಟುಹಾಕಿ ಅಪರಾಧ ಕೃತ್ಯ ಎಸಗುವಂತೆ ಒಂದು ಸಮುದಾಯವನ್ನು ಮತ್ತೊಂದು ಸಮುದಾಯದ ವಿರುದ್ಧ ದ್ವೇಷ ಭಾವನೆ ಹುಟ್ಟುವಂತೆ ಪೋಸ್ಟ್ ಮಾಡಿರುತ್ತಾರೆ. ಈ ಪೋಸ್ಟ್ ಮಾಡಿರುವವರ ವಿರುದ್ಧ ಉರ್ವಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರ್ಕೆ ಠಾಣೆಯಲ್ಲಿ ನ್ಯೂಸ್ 18 ಲೈವ್ ಚಾನಲ್ನಲ್ಲಿ Mr silent Lvr ಎಂಬ ಹೆಸರಿನ ವ್ಯಕ್ತಿಯು "2 ದಿನ ಆದ ಮೇಲೆ ಮಂಗಳೂರಲ್ಲಿ ಹೆಣ ಬೀಳುವುದು ಸತ್ಯ ಅದರಲ್ಲಿ, ಸುರತ್ಕಲ್ಕೋಡಿ ಕೆರೆ ಜನ ಬೀಡೋ ಮಾತೆ ಇಲ್ಲ.." ಎಂದು ಕಾಮೆಂಟ್ ಹಾಕಿದ್ದ ಬಗ್ಗೆ ಪ್ರಕರಣ ದಾಖಲಾಗಿದೆ. ಮತ್ತೊಂದು ಪ್ರಕರಣದಲ್ಲಿ beary_muslim_samrajya_3.0 ಎಂಬ ಇನ್ಸ್ಟಾಗ್ರಾಮ್‌ನಲ್ಲಿ "ಪ್ರತಿರೋಧ ಅಪರಾಧವಲ್ಲ. ನಾವು ನಪುಂಸಕರು ಅಲ್ಲ. ನೆನಪಿರಲಿ ತಾನು ಯಾವ ಕಾರಣಕ್ಕೆ ಕೊಲೆಯಾದ ಅನ್ನೊ ಅರಿವಿಲ್ಲದೆ ಖಬುರ್ಸ್ತಾನಲ್ಲಿ ಮಲಗಿರೋ ಅಮಾಯಕ ಪಾಝಿಲ್ನ ಕೊಲೆಮಾಡಿದ ಇವನ ಸಾವವನ್ನು ದುಃಖಪಡುವಷ್ಟು ಮೂರ್ಖ ನಾನಲ್ಲ ಎಂದು ಪೋಸ್ಟ್ ಹಾಕಿದ್ದ ಬಗ್ಗೆಯೂ ಪ್ರಕರಣ ದಾಖಲಾಗಿದೆ. ಮತ್ತೊಂದು ಕೇಸಿನಲ್ಲಿ hindu_mantra_ ಎಂಬ ಇನ್ಸ್ಟಾಗ್ರಾಮ್‌ನಲ್ಲಿ "ನಮಗೆ ಯಾವುದೇ ಉತ್ತರಗಳು ಬೇಡ ರಕ್ತಕ್ಕೆ ರಕ್ತವೇ ಉತ್ತರವಾಗಬೇಕು ಜೀವಕೆ, ಜೀವನೇ ಬೇಕು" ಎಂಬುದಾಗಿ ಪೋಸ್ ಹಾಕಿದ ಬಗ್ಗೆಯೂ ಕೇಸು ದಾಖಲಾಗಿದೆ.

ullaltho_makka ಎಂಬ ಇನ್ಸ್ಟಾಗ್ರಾಮ್ ಖಾತೆ ಯಲ್ಲಿ ಫಾಝಿಲ್ ಕೊಲೆ ಪ್ರಕರಣದ ಆರೋಪಿಗಳ ಭಾವಚಿತ್ರದ ಕೆಳಗಡೆ ಪ್ರತಿರೋಧ ಅಪರಾಧವಲ್ಲ.." ಎಂಬ ತಲೆಬರಹದಡಿಯಲ್ಲಿ ಪ್ರಚೋದನಕಾರಿ ಬರಹ ಪೋಸ್ಟ್ ಮಾಡಿರುತ್ತಾರೆ. ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಕೇಸು ದಾಖಲಾಗಿದೆ. hindu_dharma_006 ಎಂಬ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಪೋಸ್ಟ್ ಮಾಡಿರುವವರ ವಿರುದ್ಧ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. karavali_official ಎಂಬ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಪೋಸ್ಟ್ ಮಾಡಿರುವವರ ವಿರುದ್ಧವೂ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

_dj_bharath_2008 ಎಂಬ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ “ಸುಹಾಸ್ ಅಣ್ಣನ ಕೊಂದವರು ಹಾಗೂ ಕೊಂದವರಿಗೆ ಸಹಾಯ ಮಾಡಿದವರೆಲ್ಲರ ರಕ್ತ ಹರಿಯಬೇಕು ಆಗ ಮಾತ್ರ ಸುಹಾಸ್ ಅಣ್ಣನ ಆತ್ಮಕ್ಕೆ ಶಾಂತಿ ಸಿಗುತ್ತೆ ನೆನಪಿಟ್ಟುಕೊಳ್ಳಿ” ಎಂದು ಪೋಸ್ಟ್ ಹಾಕಿದವರ ವಿರುದ್ಧ ಕಾವೂರು ಠಾಣೆಯಲ್ಲಿ ಕೇಸು ದಾಖಲಾಗಿದೆ.  “maikala_trolls_05” ಎಂಬ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಪ್ರತಿರೋಧ ಅಪರಾಧವಲ್ಲ, ನಾವು ನಪುಂಸಕರು ಅಲ್ಲ ನೆನಪಿರಲಿ ಕೊಲೆಯನ್ನು ಸಮರ್ಥಿಸುವಷ್ಟು ನೀಚ ನಾನಲ್ಲ ಮುಂತಾಗಿ ಬರೆದು ಪೋಸ್ಟ್ ಮಾಡಿರುವವರ ವಿರುದ್ಧ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಸುದ್ದಿ ಪುತ್ತೂರು ಎಂಬ ನ್ಯೂಸ್‌ ಚಾನಲ್‌ ನಲ್ಲಿ ಸುಹಾಸ್‌ ಶೆಟ್ಟಿ ಅಂತಿಮ ಕ್ರಿಯೆಯ ನೇರಪ್ರಸಾರದ live chat ನಲ್ಲಿ abdulmuneer ಎಂಬ youtube ಬಳಕೆದಾರನಿಂದ “Nest booking saran pampeel” “Nest booking kalladka but” “Nest booking mutalik” ಎಂಬುದಾಗಿ ಪೋಸ್ಟ್ ಮಾಡಿರುವ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. “troll_mayadiaka” ಎಂಬ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಸುಹಾಸ್‌ ಶೆಟ್ಟಿ ಭಾವಚಿತ್ರದ ಮೇಲೆ “sulemage finish” “waiting next wikate” ಮತ್ತು ಸುಹಾಸ್‌ ಶೆಟ್ಟಿ ಕೊಲೆಮಾಡುವ ವಿಡಿಯೋಹಾಕಿ “Alhamdulillah” ಎಂಬ ಬರೆದು ಪೋಸ್ಟ್ ಮಾಡಿರುವವರ ವಿರುದ್ಧ ಕಾವೂರಿನಲ್ಲಿ ಪ್ರಕರಣ ದಾಖಲಾಗಿದೆ.

ಇದಲ್ಲದೆ, ದಕ್ಷಿಣ ಕನ್ನಡ ಜಿಲ್ಲಾ ಬಂದ್‌ಗೆ ಕರೆ ಕೊಟ್ಟ ಸಂದರ್ಭದಲ್ಲಿ ಮಂಗಳೂರು ನಗರದಲ್ಲಿ ಮೂರು ಸ್ಥಳಗಳಲ್ಲಿ ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು ಈ ಬಗ್ಗೆ ಕದ್ರಿ, ಬರ್ಕೆ, ಉತ್ತರ ಠಾಣೆಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಕಂಕನಾಡಿಯಲ್ಲಿ 5 ಕೆಎಸ್‌ಆರ್‌ಟಿಸಿ ಬಸ್ಸುಗಳಿಗೆ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿ ಬಸ್ಸಿಗೆ ಹಾನಿ ಉಂಟು ಮಾಡಿದ್ದು ಕದ್ರಿಯಲ್ಲಿ ಪ್ರಕರಣ ದಾಖಲಾಗಿದೆ. ಕರಾವಳಿ ಮೈದಾನದ ಎದುರು ಕೆಎಸ್‌ಆರ್‌ಟಿಸಿ ಬಸ್ಸಿಗೆ ಕೀಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದು ಬರ್ಕೆಯಲ್ಲಿ ಪ್ರಕರಣ ದಾಖಲಾಗಿದೆ. ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯ ಕೆಬಿ ಕಟ್ಟೆ ಬಳಿ ಖಾಸಗಿ ಬಸ್ಸಿಗೆ ಕಲ್ಲು ತೂರಾಟ ಮಾಡಿದ್ದು ಪ್ರಕರಣ ದಾಖಲಾಗಿದೆ. ಇದೇ ವೇಳೆ, ಸುಹಾಸ್ ಶೆಟ್ಟಿ ಕೊಲೆ ಘಟನೆಗೆ ಪ್ರತೀಕಾರ ಎನ್ನುವಂತೆ ಮಂಗಳೂರು ನಗರದ ಮೂರು ಕಡೆ ಹಲ್ಲೆ ಕೃತ್ಯ ಆಗಿದ್ದು ಕಂಕನಾಡಿ, ಉಳ್ಳಾಲ, ಕಾವೂರು ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

Mangalore Communal Provocation in the Name of Suhas Shetty Murder Case, Over 12 FIRs Filed Against Misuse of Instagram and WhatsApp.