ಬ್ರೇಕಿಂಗ್ ನ್ಯೂಸ್
23-04-25 09:45 pm Mangalore Correspondent ಕರಾವಳಿ
ಮಂಗಳೂರು, ಎ.23 : ಬಾಂಗ್ಲಾದೇಶದಲ್ಲಿ ಹಿಂದುಗಳನ್ನು ಓಡಿಸಿದ್ರು, ಮೊನ್ನೆ ಪಶ್ಚಿಮ ಬಂಗಾಳದಲ್ಲಿ ಓಡಿಸಿದ್ದು ನೋಡಿದ್ದೇವೆ. ದೇಶದ ಎಲ್ಲ ಕಡೆಯೂ ಮುಸ್ಲಿಂ ಬಾಹುಳ್ಯ ಇರುವಲ್ಲಿ ಇಂಥಹ ಸ್ಥಿತಿಗಳನ್ನು ನೋಡುತ್ತಿದ್ದೇವೆ. ಇವತ್ತು ಕಾಶ್ಮೀರದಲ್ಲಿ ಉಗ್ರರು ನೀನು ಹಿಂದೂನಾ ಎಂದು ಕೇಳಿ ಗುಂಡಿಕ್ಕಿದ್ದಾರೆ. ನಾಳೆ ನಮ್ಮ ನಡುವೆಯೂ ಇದೇ ಸ್ಥಿತಿ ಬರಬಹುದು. ಇದನ್ನು ನೋಡಿಯೂ ಹಿಂದುವಿನ ರಕ್ತ ಕುದಿಯದೇ ಇದ್ದರೆ ಅದು ರಕ್ತವೇ ಅಲ್ಲ. ಕಾಶ್ಮೀರದ ಘಟನೆ ನಂತರ ನಮ್ಮ ಪಾಲೇನು ಎಂಬುದು ನಮ್ಮನ್ನು ಕಾಡಬೇಕು ಎಂದು ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಹೇಳಿದ್ದಾರೆ.
ಮಂಗಳೂರಿನ ಕ್ಲಾಕ್ ಟವರ್ ವೃತ್ತದ ಮುಂಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ಜಮ್ಮು ಕಾಶ್ಮೀರದ ಭಯೋತ್ಪಾದಕ ದಾಳಿ ಘಟನೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಭರತ್ ಶೆಟ್ಟಿ ಮಾತನಾಡಿದರು. ಜಾತ್ಯತೀತರು ಭಯೋತ್ಪಾದಕರಿಗೆ ಧರ್ಮ ಇಲ್ಲ ಎನ್ನುತ್ತಿದ್ದರು. ಈಗ, ಉಗ್ರರೇ ಹಿಂದುಗಳನ್ನು ಗುರಿಯಾಗಿಸಿ ತಮ್ಮ ಧರ್ಮವನ್ನು ಹೇಳಿಕೊಂಡಿದ್ದಾರೆ. ಕಾಶ್ಮೀರದ ಘಟನೆ ಕೇವಲ ಪ್ರವಾಸಿಗರ ಮೇಲಾದ ಕೃತ್ಯವಲ್ಲ. ಇಡೀ ದೇಶದ ಹಿಂದು ಸಮಾಜಕ್ಕಾದ ದಾಳಿಯಾಗಿದೆ. ಹಿಂದುಗಳು ತಮ್ಮ ಅಸ್ತಿತ್ವಕ್ಕಾಗಿ ರಸ್ತೆಗಿಳಿಯಬೇಕಾದ ದಿನ ದೂರವಿಲ್ಲ. ಆದರೆ ಹಿಂದುಗಳ ಒಗ್ಗಟ್ಟಿನ ಎದುರು ಮಾತ್ರ ಜಿಹಾದಿಗಳು ಶಕ್ತಿ ಕಳಕೊಳ್ಳುತ್ತಾರೆ ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಸಂಸದ ಕ್ಯಾ.ಬ್ರಿಜೇಶ್ ಚೌಟ, ಕಾಶ್ಮೀರದಲ್ಲಿ ನಡೆದ ದಾಳಿ ನಾಳೆ ಮಂಗಳೂರಿನ ಡೊಂಗರಕೇರಿಯಲ್ಲಿ ನಡೆಯಲಿಕ್ಕೆ ಹೆಚ್ಚು ದಿನ ಬೇಡ. ಇದೊಂದು ಮಾನಸಿಕತೆಯಾಗಿದ್ದು, ಜಿಹಾದಿ ಮನಸ್ಥಿತಿಗಳು ಪೋಷಿಸುತ್ತಿವೆ. ಸಿಎಎ ಕಾಯ್ದೆ ಬಂದಾಗ ಮಂಗಳೂರಿನಲ್ಲಿ ಜಿಲ್ಲಾಧಿಕಾರಿಯಾಗಿದ್ದ ವ್ಯಕ್ತಿ ಕೇಂದ್ರ ಸರಕಾರದ ವಿರುದ್ಧ ಹೇಳಿಕೆ ನೀಡಿ ಸರಕಾರಿ ವ್ಯವಸ್ಥೆಯಿಂದ ಹೊರಬಂದಿದ್ದರು. ಇಂತಹ ಮಾನಸಿಕತೆಯೇ ದೇಶ ವಿರೋಧಿ ಶಕ್ತಿಗಳಿಗೆ ಪೋಷಣೆ ನೀಡುತ್ತಿವೆ. ಇಂತಹ ಸ್ಥಿತಿಯಲ್ಲಿ ಪ್ರತಿ ವ್ಯಕ್ತಿಯೂ ಸೈನಿಕನ ಭಾವನೆ, ಮಾನಸಿಕತೆ ಬೆಳೆಸಿಕೊಳ್ಳಬೇಕು. ಜಿಹಾದಿ ಮಾನಸಿಕತೆಗೆ ತಕ್ಕ ಶಾಸ್ತಿ ಮಾಡಬೇಕು. ಕಾಶ್ಮೀರದ ದಾಳಿಗೆ ಪ್ರತಿಯಾಗಿ ಮೋದಿ ಸರಕಾರ ತಕ್ಕ ಪ್ರತ್ಯುತ್ತರ ನೀಡುತ್ತದೆ ಎಂದು ಹೇಳಿದರು.
ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ರಾಹುಲ್ ಗಾಂಥಿಯ ಭಾವ ರಾಬರ್ಟ್ ವಾದ್ರಾ ಕಾಶ್ಮೀರದಲ್ಲಿ ಹಿಂದು- ಮುಸ್ಲಿಂ ಮಾಡಿದ್ದರಿಂದ ಭಯೋತ್ಪಾದಕ ಕೃತ್ಯ ಆಗಿದೆ, ಹಿಂದುಗಳನ್ನು ಟಾರ್ಗೆಟ್ ಮಾಡಿದ್ದಾರೆ, ಇದಕ್ಕೆ ಮೋದಿ ಸರಕಾರ ಕಾರಣ ಎಂದಿದ್ದಾನೆ. ಒಬ್ಬ ಸಂಸದೆಯ ಪತಿಯಾಗಿರುವ ವಾದ್ರಾ ಹೀಗನ್ನಬೇಕಿದ್ದರೆ ಕಾಂಗ್ರೆಸಿಗರ ಮಾನಸಿಕತೆ ಏನು. ಈ ದೇಶದಲ್ಲಿ ಕಾಂಗ್ರೆಸ್ ಸರ್ವನಾಶ ಆದರೆ ಮಾತ್ರ ಜಿಹಾದಿ ಮಾನಸಿಕತೆ ಸಾಯಬಹುದು ಎಂದು ಹೇಳಿದರು. ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮಾಜಿ ಎಂಎಲ್ಸಿ ಗಣೇಶ್ ಕಾರ್ಣಿಕ್, ಮಾಜಿ ಸಚಿವ ನಾಗರಾಜ ಶೆಟ್ಟಿ, ಪ್ರೇಮಾನಂದ ಶೆಟ್ಟಿ ಮತ್ತಿತರರಿದ್ದರು.
In a powerful address during the recent BJP protests in Mangalore, MLA Bharat Shetty commented on the implications of the recent Kashmir incident, asserting that it represents a direct attack on Hindu society. He emphasized the need for society to recognize the religious motivations claimed by terrorists, which he believes challenges long-held secular perspectives.
23-04-25 10:49 pm
Bangalore Correspondent
Cm Siddaramaiah, Pahalgam Attack: ಉಗ್ರರ ದಾಳಿಯ...
23-04-25 08:04 pm
Karnataka, D K Shivakumar, Pahalgam: ಕಾಶ್ಮೀರ...
23-04-25 06:54 pm
Pahalgam Terror Attack, Bharath Bhushan: ಪಹಲ್...
23-04-25 02:51 pm
Harish Poonja, Speaker U T Khader: ಸ್ಪೀಕರ್ ಧರ...
23-04-25 01:06 pm
23-04-25 09:25 pm
HK News Desk
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಲಷ್ಕರ್...
23-04-25 05:16 pm
Pahalgam terror attack Live: ಜಮ್ಮು ಕಾಶ್ಮೀರದಲ್...
22-04-25 10:33 pm
Rahul Gandhi, BJP : ಅಮೆರಿಕದಲ್ಲಿ ನಿಂತು ಭಾರತದ ಚ...
22-04-25 07:13 pm
Next Pope: ರೋಮನ್ ಕ್ಯಾಥೋಲಿಕ್ ಚರ್ಚ್ನ 266ನೇ ಪೋಪ...
21-04-25 07:46 pm
23-04-25 10:23 pm
Udupi Correspondent
ಜಾತ್ಯತೀತರು ಉಗ್ರರಿಗೆ ಧರ್ಮ ಇಲ್ಲ ಎನ್ನುತ್ತಿದ್ದರು,...
23-04-25 09:45 pm
Terror Attack, Mangalore Mp, Brijesh Chowta:...
23-04-25 09:36 pm
Bearys Group, Bearys Turning Point mall, Dera...
23-04-25 09:23 pm
ವಿನೂತನ ಒಳ ಮೀಸಲಾತಿ ನೀತಿ ಪ್ರಕಟಿಸಲು ಒತ್ತಾಯ ; ಬೀದ...
21-04-25 10:32 pm
23-04-25 01:03 pm
Mangalore Correspondent
Shivamogga man killed in Pahalgam attack: ಕಾಶ...
22-04-25 07:37 pm
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm