ಬ್ರೇಕಿಂಗ್ ನ್ಯೂಸ್
17-12-20 03:22 pm Mangalore Correspondent ಕರಾವಳಿ
ಮಂಗಳೂರು, ಡಿ.17: ನಗರದ ಬೆಂದೂರ್ ವೆಲ್ ನ ಇಂಗ್ಲಿಷ್ ಮೀಡಿಯಂ ಶಾಲೆಯ ಶಿಕ್ಷಕಿ ದಿಢೀರ್ ಆತ್ಮಹತ್ಯೆ ಮಾಡಿಕೊಂಡಿದ್ದು, ಶಾಲೆಯ ಸಿಬಂದಿ ಮತ್ತು ಸಹೋದ್ಯೋಗಿ ಶಿಕ್ಷಕರಲ್ಲಿ ದಿಗ್ಭ್ರಮೆ ಮೂಡಿಸಿದೆ.
ಕುಲಶೇಖರದಲ್ಲಿ ಪುತ್ರಿಯ ಜೊತೆಗೆ ವಾಸವಿದ್ದ ಗ್ರೆಟ್ಟಾ ಡಿಸೋಜ, ಕೆಲವು ಸಮಯದಿಂದ ಸರಿಯಾಗಿ ನಿದ್ದೆ ಬರುತ್ತಿಲ್ಲ. ಏನೋ ಮನಸ್ಸು ಸರಿಯಿಲ್ಲ ಎಂದು ಆಪ್ತರಲ್ಲಿ ಹೇಳಿಕೊಂಡಿದ್ದರಂತೆ. ಅಷ್ಟಕ್ಕೇ ಈ ರೀತಿ ಮಾಡುತ್ತಾರೆ ಎಂದುಕೊಂಡಿರಲಿಲ್ಲ ಎನ್ನುತ್ತಾರೆ, ಜೊತೆಗಿದ್ದ ಶಿಕ್ಷಕಿಯರು.
ಆಕೆಯ ಪತಿಗೆ ಚಿಕ್ಕಮಗಳೂರಿನ ಬಾಳೆಹೊನ್ನೂರಿನಲ್ಲಿ ಕಾಫಿ ಎಸ್ಟೇಟ್ ಇದ್ದು, ಸಂಬಂಧ ಚೆನ್ನಾಗಿಯೇ ಇತ್ತು ಎನ್ನಲಾಗುತ್ತಿದೆ. ಕಳೆದ ನವೆಂಬರ್ ಕೊನೆಗೆ ಮಂಗಳೂರಿಗೆ ಬಂದು ಹೋಗಿದ್ದರಂತೆ. ಒಬ್ಬ ಮಗ ಕಲಿತು, ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ. ಇನ್ನೊಬ್ಬ ಪುತ್ರಿ ಮಂಗಳೂರಿನ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದಳು.
ಮನೆಯಲ್ಲಿ ತಾಯಿ ಮತ್ತು ಕಾಲೇಜು ಓದುವ ಪುತ್ರಿ ಮಾತ್ರ ಇದ್ದರು. ಮೊನ್ನೆ (ಮಂಗಳವಾರ) ರಾತ್ರಿಯೂ ಮಗಳ ಜೊತೆ, ಊಟ ಮಾಡಿ ಜೊತೆಗೇ ಮಲಗಿದ್ದರಂತೆ. ಆದರೆ, ಮರುದಿನ ಮಗಳು ಬೆಡ್ಡಿನಿಂದ ಎದ್ದಾಗ ತಾಯಿ ಇರಲಿಲ್ಲ. ಗಾಬರಿಗೊಂಡು ಮನೆಯಲ್ಲಿ ಹುಡುಕಾಡಿದ್ದಾಳೆ. ಮನೆಯ ಒಳಗಾಗಲೀ, ಹೊರಗಾಗಲೀ ಇರಲಿಲ್ಲ. ಈ ಮಧ್ಯೆ ಟೇಬಲ್ ನಲ್ಲಿ ಒಂದು ಲೆಟರ್ ಕಂಡಿತ್ತು. ಅದರಲ್ಲಿ ನಾನು ನಿಮ್ಮನ್ನೆಲ್ಲ ಬಿಟ್ಟು ಹೋಗುತ್ತಿದ್ದೇನೆ. ತುಂಬ ಡಿಪ್ರೆಶನ್ ಆಗಿದ್ದು ಬದುಕುವುದು ಸಾಧ್ಯವಾಗುತ್ತಿಲ್ಲ. ನನ್ನ ಸಾವಿಗೆ ಬೇರೆ ಯಾರೂ ಕಾರಣರಲ್ಲ. ನೀವೆಲ್ಲ ನನ್ನನ್ನು ಚೆನ್ನಾಗೇ ನೋಡಿಕೊಂಡಿದ್ದೀರಿ. ಆದರೆ, ಈ ಬದುಕು ಮುಗಿಸುತ್ತಿದ್ದೇನೆ, ಬೈ ಮಗಳೇ ಎಂದು ಬರೆದಿದ್ದು ಕಂಡುಬಂದಿತ್ತು. ತಾಯಿ ತನ್ನನ್ನು ಉದ್ದೇಶಿಸಿ ಬರೆದಿದ್ದ ಪತ್ರ ನೋಡಿ, ಮಗಳಿಗೆ ಶಾಕ್ ಆಗಿತ್ತು.

ಹೊರಗೆಲ್ಲಾ ಹುಡುಕಾಡಿದ್ದು, ಮನೆ ಆವರಣದಲ್ಲಿದ್ದ ಬಾವಿಯನ್ನು ನೋಡಿದ್ದಾಳೆ. ಬಾವಿ ನೋಡಿದಾಗ, ತಾಯಿ ಶವ ತೇಲುತ್ತಿತ್ತು. ಬೆಳಗ್ಗೆಯೇ ಶವ ತೇಲುತ್ತಿರಬೇಕಾದ್ರೆ, ಆಕೆ ನಸುಕಿನ ಜಾವದಲ್ಲೇ ಮನೆಯಿಂದ ಎದ್ದು ಹೊರಗೆಬಂದು ಈ ಕೃತ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ. ಒಂದು ಕ್ಷಣದ ಮೈಮರೆವು, ಮನಸ್ಸಿನ ತೊಳಲಾಟ ಬದುಕನ್ನೇ ಮುಗಿಸಿಬಿಟ್ಟಿತ್ತು.
ಗಂಡ ಜೊತೆಗಿಲ್ಲ ಎಂಬ ಕೊರಗೋ, ದಾಂಪತ್ಯದಲ್ಲಿ ವೈಮನಸ್ಸು ಇತ್ತೋ ಏನೋ ಗೊತ್ತಿಲ್ಲ. ಹದಿಹರೆಯದ ಪುತ್ರಿಯ ಮನಸ್ಸಲ್ಲಿ ಮಾತ್ರ ತಾಯಿಯ ಸಾವು ಆಘಾತದ ಅಲೆಯನ್ನೇ ಸೃಷ್ಟಿಸಿಬಿಟ್ಟಿದೆ. ಆ ಕರಾಳ ರಾತ್ರಿಯಲ್ಲಿ ಒಮ್ಮಿಂದೊಮ್ಮೆಲೇ ಆ ತಾಯಿ ತೆಗೆದುಕೊಂಡ ಕೆಟ್ಟ ನಿರ್ಧಾರ ಸಂಬಂಧಿಕರು, ಶಾಲೆಯ ಮಕ್ಕಳು ಮತ್ತು ಇಡೀ ಶಿಕ್ಷಕ ವೃಂದಕ್ಕೆ ಶಾಕ್ ನೀಡಿದೆ.
Private school teacher Gretta D'souza of Mangalore committed Suicide by Jumping into the well. Here is a detailed report by Headline Karnataka.
05-11-25 06:15 pm
Bangalore Correspondent
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
06-11-25 12:51 pm
Mangalore Correspondent
ಭಾರತೀಯ ಪೂರ್ವಜರ ಬಗ್ಗೆ ಹೊಸ ಶೋಧನೆ ; ಕೊರಗ ಜನಾಂಗ ಫ...
05-11-25 10:48 pm
ಮಕ್ಕಳಿಲ್ಲದ ದಂಪತಿಗೆ ವೃದ್ಧಾಪ್ಯದಲ್ಲಿ ಗೃಹ ಭಾಗ್ಯ !...
05-11-25 10:19 pm
ಇಂದಿರಾ ಹೆಗ್ಗಡೆಯವರ ‘ಬಾರಗೆರೆ ಬರಂಬು ತುಳುವೆರೆ ಪುಂ...
05-11-25 07:49 pm
ಅಕ್ರಮ ಗೋಹತ್ಯೆ, ಮಾಂಸಕ್ಕೆ ಬಳಕೆ ; ಆರೋಪಿಯ ಉಳ್ಳಾಲದ...
05-11-25 03:35 pm
06-11-25 02:08 pm
Mangalore Correspondent
ಮದುವೆಯಾಗಿಲ್ಲ, ಹುಡುಗ ಸೆಟ್ ಆಗುತ್ತಿಲ್ಲ ಎಂದು ಜ್ಯೋ...
05-11-25 09:39 pm
ಇಪಿಎಫ್ಒ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಭಾರೀ...
05-11-25 05:27 pm
ನಕಲಿ ಷೇರು ಮಾರುಕಟ್ಟೆ ಮೇಲೆ ಹೂಡಿಕೆ ; ಫೇಸ್ಬುಕ್ ಗೆ...
04-11-25 02:11 pm
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm