ಬ್ರೇಕಿಂಗ್ ನ್ಯೂಸ್
08-11-24 08:19 pm Mangalore Correspondent ಕರಾವಳಿ
ಉಳ್ಳಾಲ, ನ.8: ಉಳ್ಳಾಲ ನಗರಸಭೆ ಆವರಣದಲ್ಲಿ ಗ್ರಂಥಾಲಯಕ್ಕಾಗಿ ನಗರೋತ್ಥಾನ ಯೋಜನೆಯಡಿ ನೂತನ ಕಟ್ಟಡ ನಿರ್ಮಾಣವಾಗಲಿದ್ದು ಆ ಪ್ರಯುಕ್ತ ಹಳೆಯ ಶಿಥಿಲ ಕಟ್ಟಡವನ್ನ ನೆಲಸಮ ನಡೆಸಲಾಗುತ್ತಿದೆ. ಕಟ್ಟಡ ನೆಲಸಮ ಕಾಮಗಾರಿಯ ನೆಪದಲ್ಲಿ ನಗರಸಭೆ ಆವರಣಕ್ಕೆ ದ್ವಿಚಕ್ರ ವಾಹನ ಪಾರ್ಕಿಂಗ್ ಗಾಗಿ ಎರಡು ವರ್ಷದ ಹಿಂದಷ್ಟೆ ಅಳವಡಿಸಲಾಗಿದ್ದ ಲಕ್ಷಾಂತರ ರೂಪಾಯಿ ಬೆಲೆಬಾಳುವ ಸಿಲಿಕಾನ್ ಸಿಲಿಂಗ್ ಶೀಟ್ ಗಳನ್ನ ಯಾವುದೇ ಟೆಂಡರ್ ಹರಾಜು ಪ್ರಕ್ರಿಯೆ ನಡೆಸದೆ ಕಳಚಿ ಕೊಂಡೊಯ್ಯಲಾಗಿದೆ.
ನಗರೋತ್ಥಾನ ಯೋಜನೆಯಡಿ ನಗರಸಭೆ ಆವರಣದಲ್ಲಿ ಗ್ರಂಥಾಲಯಕ್ಕಾಗಿ ನೂತನ ಕಟ್ಟಡ ನಿರ್ಮಾಣಗೊಳ್ಳುತ್ತಿದೆ. ಆ ಹಿನ್ನೆಲೆಯಲ್ಲಿ ನಗರಸಭೆ ಆವರಣದೊಳಗಿನ ಹಳೆಯ ಗ್ರಂಥಾಲಯದ ಶಿಥಿಲ ಕಟ್ಟಡವನ್ನ ನೆಲಸಮ ನಡೆಸಲಾಗುತ್ತಿದೆ. ಆದರೆ ಗ್ರಂಥಾಲಯಕ್ಕೆ ಸಂಬಂಧವೇ ಇಲ್ಲದ ದ್ವಿಚಕ್ರ ವಾಹನಗಳ ಪಾರ್ಕಿಂಗ್ ಉದ್ದೇಶಕ್ಕೆ ಹಾಕಲಾಗಿದ್ದ ಸೀಲಿಂಗ್ ಶೀಟ್ ಗಳ ಟೆಂಟನ್ನೇ ಕಳಚಿ ಕೊಂಡೊಯ್ಯಲಾಗಿದೆ. ಎರಡು ವರ್ಷಗಳ ಹಿಂದಷ್ಟೆ ನಗರಸಭೆ ಅನುದಾನದಲ್ಲಿ ಸುಮಾರು ಆರು ಲಕ್ಷ ವ್ಯಯಿಸಿ ಸಿಲಿಕಾನ್ ಸೀಲಿಂಗ್ ಶೀಟ್ ನ ಟೆಂಟ್ ನಿರ್ಮಿಸಲಾಗಿತ್ತು. ನಗರಸಭೆ ಆಸ್ತಿಯನ್ನ ತೆರವು ಮಾಡಬೇಕಾದರೆ ಕಾನೂನಿನ ಪ್ರಕಾರ ಟೆಂಡರ್ ಕರೆಯಬೇಕು. ತೆರವುಗೊಳಿಸಿದ ಸೊತ್ತುಗಳನ್ನ ಮಾರಬೇಕಾದರೆ ಹರಾಜು ಪ್ರಕ್ರಿಯೆ ನಡೆಸಬೇಕು. ಆದರೆ ಇದ್ಯಾವುದನ್ನೂ ಮಾಡದೆ ಮೂರನೇ ವ್ಯಕ್ತಿಯೋರ್ವ ಹಳೆ ಕಟ್ಟಡ ನೆಲಸಮ ನೆಪದಲ್ಲಿ ಶೀಟ್ ಗಳನ್ನ ತೆಗೆದು ಮಾರಿರುವ ಬಗ್ಗೆ ಆರೋಪ ಕೇಳಿಬಂದಿದೆ.
ಈ ಬಗ್ಗೆ ನಗರಸಭೆಯ ಕಿರಿಯ ಅಭಿಯಂತರ ತುಳಸಿ ಅವರಲ್ಲಿ ವಿಚಾರಿಸಿದಾಗ ನಗರೋತ್ಥಾನ ಯೋಜನೆಯಡಿ ನಿರ್ಮಾಣಗೊಳ್ಳುತ್ತಿರುವ ಕಟ್ಟಡಕ್ಕಾಗಿ ಸಿಲಿಂಗ್ ಶೀಟ್ ಗಳನ್ನ ತೆರವುಗೊಳಿಸಲಾಗಿದೆ ಎಂದು ಬೇಜವಾಬ್ದಾರಿಯಾಗಿ ಪ್ರತಿಕ್ರಿಯಿಸಿದ್ದಾರೆ. ನಗರೋತ್ಥಾನ ಯೋಜನೆಯ ಗುತ್ತಿಗೆದಾರರೇ ಹಳೆಯ ಕಟ್ಟಡ ನೆಲಸಮಗೊಳಿಸುವ ಕಾಮಗಾರಿ ನಡೆಸುತ್ತಿದ್ದು ಅವರೇ ಸೀಲಿಂಗ್ ಶೀಟ್ ಗಳನ್ನ ತೆಗೆದು ಕೊಂಡೊಯ್ದಿದ್ದಾರೆ. ಆ ರೀತಿ ಶೀಟ್ ಗಳನ್ನ ಕೊಂಡೊಯ್ಯಲು ಅವಕಾಶ ಇಲ್ಲ. ಗುತ್ತಿಗೆದಾರರಲ್ಲಿ ಶೀಟ್ ಗಳನ್ನ ವಾಪಸ್ ತರಲು ಹೇಳಿರೋದಾಗಿ ನಗರಸಭೆಯ ಪ್ರಭಾರ ಪೌರಾಯುಕ್ತ ಮತ್ತಡಿ ಹೇಳಿದ್ದಾರೆ. ಗುತ್ತಿಗೆದಾರರು ಯಾರೆಂದು ಕೇಳಿದಾಗ ಅದು ನಮಗೆ ಗೊತ್ತಿಲ್ಲವೆಂದು ಹೇಳಿದ್ದಾರೆ.
ದ್ವಿಚಕ್ರ ವಾಹನಗಳ ನಿಲುಗಡೆಗಾಗಿ ಹಾಕಲಾಗಿದ್ದ ಸಿಲಿಕಾನ್ ಶೀಟ್ ಗಳ ಟೆಂಟ್ ಗೂ ನೂತನ ಗ್ರಂಥಾಲಯ ಕಟ್ಟಡಕ್ಕೂ ಯಾವುದೇ ಸಂಬಂಧವಿಲ್ಲ. ಒಂದು ವೇಳೆ ಶೀಟ್ ಗಳನ್ನ ತೆಗೆಯೋದಾದರೂ ನಗರಸಭೆ ಟೆಂಡರ್ ಕರೆಯಬೇಕು. ನಗರಸಭೆ ಆಡಳಿತದ ಪ್ರಭಾವಿ ಮಹಿಳಾ ರಾಜಕಾರಣಿಯ ಆಪ್ತನೋರ್ವ ಸಿಲಿಕಾನ್ ಶೀಟ್ ಗಳನ್ನ ಎಗರಿಸಿ ಕೊಂಡೊಯ್ದಿದ್ದಾನೆ. ಯಾರು ಶೀಟ್ ಗಳನ್ನ ಕೊಂಡೊಯ್ದಿದ್ದಾರೆಂದು ನಗರಸಭೆ ಕಚೇರಿಯ ಸಿಸಿಟಿವಿ ಫೂಟೇಜ್ ದಾಖಲೆಯಲ್ಲಿ ಕಂಡುಹಿಡಿಯಲು ಅಧಿಕಾರಿಗಳಿಗೆ ಕಷ್ಟದ ಕೆಲಸವೇ ಎಂದು ನಗರಸಭಾ ಸದಸ್ಯ ರವಿಚಂದ್ರ ಗಟ್ಟಿ ಪ್ರಶ್ನಿಸಿದ್ದಾರೆ.
Mangalore Old building constructed at Ullal to build library. Lord of items like sheet have been stolen and still ullal Panchayat has been silent.
03-05-25 09:38 pm
HK News Desk
Shivanand Patil, U T Khader: ಯತ್ನಾಳ್ ಸವಾಲು ಸ್...
02-05-25 10:00 pm
U T Khader, Suhas Shetty Murder, Fazil, Manga...
02-05-25 08:44 pm
Suhas Shetty Murder case, Minister Parameshwa...
02-05-25 01:40 pm
Dinesh Gundu Rao, Suhas Shetty Murder: ಸುಹಾಸ್...
02-05-25 10:52 am
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
03-05-25 10:57 pm
Mangalore Correspondent
ಬಜರಂಗಿ ಸುಹಾಸ್ ಶೆಟ್ಟಿ ಹತ್ಯೆಗೆ ಕಳಸದವರು ಬಂದಿದ್ದೇ...
03-05-25 10:43 pm
U T Khader, Satish Kumapla, Mangalore, Suhas,...
03-05-25 10:13 pm
Mangalore, Stabbing, Suhas Shetty Murder, Arr...
03-05-25 08:39 pm
Mangalore, Animal Welfare: ಪ್ರಾಣಿ ಸಂರಕ್ಷಣೆ ಜಾ...
03-05-25 06:57 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm