ಬ್ರೇಕಿಂಗ್ ನ್ಯೂಸ್
04-11-24 04:34 pm Mangalore Correspondent ಕರಾವಳಿ
ಮಂಗಳೂರು, ನ.4: ಕದ್ದ ಮಾಲನ್ನು ವಾಪಸ್ ಕೊಡುವ ಹೊಸ ಪರಿಪಾಠ ಕಾಂಗ್ರೆಸ್ ಸರಕಾರದಲ್ಲಿ ಬೆಳೆದು ಬಂದಿದೆ. ವಾಲ್ಮೀಕಿ ಹಗರಣದಲ್ಲಿ ಭ್ರಷ್ಟಾಚಾರ ಒಪ್ಪಿಕೊಂಡ ಬಳಿಕ ಮುಡಾ ಪ್ರಕರಣದಲ್ಲಿಯೂ ಪತ್ನಿ ಪಡೆದ 14 ಸೈಟ್ ಗಳನ್ನು ಸಿದ್ದರಾಮಯ್ಯ ವಾಪಸ್ ಮಾಡಿದ್ದಾರೆ. ಇದೀಗ ವಕ್ಫ್ ಕಾಯ್ದೆಯಡಿ 50 ವರ್ಷಗಳ ಹಿಂದಿನ ನೋಟಿಫಿಕೇಶನ್ ಆಧರಿಸಿ 1200 ಎಕ್ರೆ ಭೂಮಿಗೆ ನೋಟೀಸ್ ಕೊಟ್ಟು ವಾಪಸ್ ಮಾಡಿಸಿದ್ದಾರೆ. ಕದಿಯೋದು, ಸಿಕ್ಕಿಬಿದ್ದಾಗ ವಾಪಸ್ ಮಾಡೋದು ಖಯಾಲಿಯಾಗಿದೆ. ಕೇಂದ್ರ ಸರಕಾರ ವಕ್ಫ್ ಕಾಯ್ದೆಯನ್ನು ತಿದ್ದುಪಡಿ ಮಾಡುತ್ತೆ ಎಂದು ತಿಳಿದು ರಾಹುಲ್ ಗಾಂಧಿ ಅಣತಿಯಂತೆ ಸಿಎಂ ಸಿದ್ದರಾಮಯ್ಯ ಮತ್ತು ಜಮೀರ್ ಅಹ್ಮದ್ ಖಾನ್ ರಾಜ್ಯದಲ್ಲಿ ಲ್ಯಾಂಡ್ ಜಿಹಾದ್ ಮಾಡುತ್ತಿದ್ದಾರೆ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದ್ದಾರೆ.
ಮಂಗಳೂರು ನಗರದ ಹಂಪನಕಟ್ಟೆಯ ಮಿನಿ ವಿಧಾನಸೌಧ ಮುಂಭಾಗದಲ್ಲಿ ವಕ್ಫ್ ಕಾಯ್ದೆ ವಿರೋಧಿಸಿ ಮತ್ತು ಸಿದ್ದರಾಮಯ್ಯ ಸರ್ಕಾರದ ನಡೆ ವಿರೋಧಿಸಿ ಬಿಜೆಪಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ವಕ್ಫ್ ಕಾಯ್ದೆ ಬ್ರಿಟಿಷರು ಹಿಂದು - ಮುಸ್ಲಿಂ ಒಡೆದಾಳುವುದಕ್ಕಾಗಿ ಮಾಡಿದ್ದ ಕಾಯ್ದೆ. ಅದನ್ನು ಯಥಾವತ್ ಸ್ವಾತಂತ್ರ್ಯ ಭಾರತದಲ್ಲಿ ಜಾರಿಗೆ ತಂದಿದ್ದು ಕಾಂಗ್ರೆಸ್. ಆದರೆ, ಬಡ ಮುಸ್ಲಿಮರ ಉದ್ಧಾರ ಮಾಡುವ ಬದಲು ವಕ್ಫ್ ಹೆಸರಿನಲ್ಲಿ ಕಾಂಗ್ರೆಸ್ ಲ್ಯಾಂಡ್ ಜಿಹಾದ್ ಮಾಡಿದ್ದಾರೆ. ದೇಶಾದ್ಯಂತ ವಕ್ಫ್ ಆಸ್ತಿಯನ್ನು ಲೂಟಿ ಮಾಡಿದ್ದಾರೆ.

ಇದಲ್ಲದೆ, ಯಾವುದೇ ಖಾಸಗಿ ಆಸ್ತಿಯನ್ನೂ ವಕ್ಫ್ ಕಾಯ್ದೆಯಡಿ ನೋಟಿಫೈ ಮಾಡಲು ಅವಕಾಶ ಕೊಟ್ಟಿದ್ದಾರೆ. ಅದನ್ನು ಖಾಸಗಿ ವ್ಯಕ್ತಿ ಪ್ರಶ್ನೆ ಮಾಡುವುದಕ್ಕೂ ಸಾಧ್ಯವಿಲ್ಲದಂತೆ ಮಾಡಿದ್ದು ಕಾಂಗ್ರೆಸ್. ವಕ್ಫ್ ಭೂಮಿಯೆಂದು ನೋಟಿಫೈ ಆದಲ್ಲಿ ಅದನ್ನು ವಕ್ಫ್ ಟ್ರಿಬ್ಯುನಲ್ ನಲ್ಲಿ ಮಾತ್ರ ಪ್ರಶ್ನೆ ಮಾಡಬೇಕಾಗುತ್ತದೆ. ಮುಸ್ಲಿಂ ವೈಯಕ್ತಿಕ ಕಾನೂನನ್ನು ಪಾಲಿಸುವ, ಮುಸ್ಲಿಮರು ಮಾತ್ರ ಇರುವ ಟ್ರಿಬ್ಯುನಲ್ ನಲ್ಲಿ ಪ್ರಶ್ನೆ ಮಾಡಿದರೆ ಇತರೇ ಧರ್ಮೀಯನಿಗೆ ನ್ಯಾಯ ಸಿಗುವುದೇ. ಸ್ವತಂತ್ರ ಭಾರತದಲ್ಲಿ ಜನಸಾಮಾನ್ಯನಿಗೆ ಇಂಥ ಹೀನ ಸ್ಥಿತಿ ತಂದಿಟ್ಟಿದ್ದು ಕಾಂಗ್ರೆಸ್ ಎಂದು ದೂರಿದರು ಬ್ರಿಜೇಶ್ ಚೌಟ.
ಹಿಂದು ವಿರೋಧಿ, ದೇಶ ವಿರೋಧಿ, ಸಂವಿಧಾನ ವಿರೋಧಿ ವಕ್ಫ್ ಕಾಯ್ದೆಯನ್ನು ತಿದ್ದುಪಡಿ ಮಾಡಲು ಮೋದಿ ಸರಕಾರ ಜಂಟಿ ಸದನ ಸಮಿತಿಯ ಚರ್ಚೆಗೆ ಕೊಟ್ಟಿದೆ. ಕಾಯ್ದೆ ತಿದ್ದುಪಡಿ ಆಗುತ್ತಿರುವುದನ್ನು ತಿಳಿದ ಸಿದ್ದರಾಮಯ್ಯ ಮತ್ತು ಜಮೀರ್ ಅಹ್ಮದ್ ಖಾನ್, ವಿಜಯಪುರ ಜಿಲ್ಲೆಯಲ್ಲಿ ರೈತರಿಗೆ ಸೇರಿದ 1200 ಎಕ್ರೆ ಭೂಮಿಗೆ ನೋಟಿಸ್ ಕೊಟ್ಟಿದ್ದಾರೆ. ಕಾಯ್ದೆಗೆ ತಿದ್ದುಪಡಿ ತರುತ್ತಿರುವಾಗಲೇ ರೈತರ ಭೂಮಿಗೆ ನೋಟಿಸ್ ಕೊಟ್ಟಿರುವುದು ಏನನ್ನು ಸೂಚಿಸುತ್ತದೆ ಸಿದ್ದರಾಮಯ್ಯ ಅವರೇ ಎಂದು ಕೇಳಿದ ಚೌಟ, ನೀವು ಕೇವಲ ಮುಸ್ಲಿಮರಿಗೆ ಮುಖ್ಯಮಂತ್ರಿ ಆಗಿದ್ದೀರಾ ಎಂದು ಪ್ರಶ್ನಿಸಿದರು.
ಶಾಸಕ ಭರತ್ ಶೆಟ್ಟಿ ಮಾತನಾಡಿ, ಟಿವಿಯಲ್ಲಿ ಡಿಬೇಟ್ ಕುಳಿತ ವ್ಯಕ್ತಿಯೊಬ್ಬ ವಿಧಾನಸೌಧ ಕೂಡ ವಕ್ಫ್ ಆಸ್ತಿ. ಅದರ ಮೇಲೆ ನಾವೀಗ ಸಮಸ್ಯೆ ಮಾಡಿಲ್ಲ ಎಂದು ಹೇಳುತ್ತಾನೆ. ಅಂದ್ರೆ, ಮುಂದೆ ಸಮಸ್ಯೆ ತರುತ್ತೇವೆ ಎನ್ನುವುದು ಆತನ ಮಾತಿನ ಅರ್ಥ. ಬಿಟ್ಟರೆ ವಿಧಾನಸೌಧ, ಪಾರ್ಲಿಮೆಂಟನ್ನೂ ತಮ್ಮದೇ ಆಸ್ತಿಯೆಂದು ಹೇಳುತ್ತೀರಿ. ನಿಮ್ಮ ಕರಾಳ ಕಾಯ್ದೆಯನ್ನು ಮೋದಿ ಸರಕಾರ ಬದಲಾವಣೆ ಮಾಡುತ್ತದೆ. ವಕ್ಫ್ ಕಾಯ್ದೆ ಕುರಿತ ಪ್ರಶ್ನೆಗಳನ್ನು ನ್ಯಾಯಾಂಗದಲ್ಲಿ ಪ್ರಶ್ನಿಸಲು ಹಕ್ಕಿಲ್ಲ ಎಂದರೆ, ಅದು ಸಂವಿಧಾನ ವ್ಯಾಪ್ತಿಗೆ ಬರುವುದಿಲ್ಲ ಎಂದಾಯಿತು. ಸಂವಿಧಾನದಲ್ಲಿ ಇಲ್ಲದ ಕಾಯ್ದೆ ನಮ್ಮಲ್ಲಿ ಯಾಕೆ ಬೇಕು ಎಂದು ಪ್ರಶ್ನೆ ಮಾಡಿದರು.
ಪ್ರತಿಭಟನಾ ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಮಾತನಾಡಿದರು. ಯುವಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ ಸೇರಿದಂತೆ ಮಂಗಳೂರು ಉತ್ತರ, ದಕ್ಷಿಣ, ಉಳ್ಳಾಲ ಕ್ಷೇತ್ರದ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
Protest against Waqf scam by MP Brijesh Chowta in Mangalore. “Congress is still trapped in a colonial mindset, using Waqf as a political tool,” Chowta declared.
27-03-26 04:49 pm
HK News Staffer
ಶಾರ್ಟ್ ಕಟ್ ದಾರಿಯೆಂದು ತುಂಗಭದ್ರಾ ನದಿಗೆ ನುಗ್ಗಿಸಿ...
27-03-26 04:04 pm
ನಡುರಸ್ತೆಯಲ್ಲೇ ಪತ್ನಿಯ ಕತ್ತು ಕತ್ತರಿಸಿ ಭೀಕರ ಕೊಲೆ...
27-03-26 03:52 pm
ಚಿಕ್ಕಮಗಳೂರಿನಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬ...
26-03-26 10:27 pm
ಕ್ಲಾಸ್ ರೂಮಿನಲ್ಲೇ ವಿದ್ಯಾರ್ಥಿನಿಗೆ ಪ್ರಪೋಸ್ ಮಾಡಿದ...
26-03-26 09:21 pm
27-03-26 04:07 pm
HK News Staffer
ಗಲ್ಫ್ ಯುದ್ಧದ ಪರಿಣಾಮ ಊಹಿಸುವುದು ಕಷ್ಟ, ಕೋವಿಡ್ನಂ...
27-03-26 12:11 pm
ಅಮೆರಿಕ ಷರತ್ತಿಗೆ ಪಟ್ಟು ಬಿಡದ ಇರಾನ್ ; ಗಲ್ಫ್ ದೇಶಗ...
26-03-26 09:44 pm
ಹೊರ್ಮುಜ್ ಜಲಸಂಧಿ ನಿರ್ಬಂಧಿಸಿದ್ದ ಇರಾನ್ ನೌಕಾಪಡೆ ಮ...
26-03-26 09:00 pm
ಮಂಗಳೂರಿಗೆ ಮತ್ತೆರಡು ಬೃಹತ್ ತೈಲ ಟ್ಯಾಂಕರ್ ಹಡಗು ;...
26-03-26 09:31 am
27-03-26 03:38 pm
HK News Staffer
ಇನಾಯತ್ ಆಲಿ ನೇತೃತ್ವದಲ್ಲಿ ಏ.4ರಂದು ಗುರುಪುರ ಜೋಡುಕ...
26-03-26 10:51 pm
ಮಂಗಳೂರು ಸಿಟಿ ಪೊಲೀಸರ ಹೆಸರಲ್ಲೇ ನಕಲಿ ವೆಬ್ಸೈಟ್ !...
26-03-26 10:29 pm
ನವ ಮಂಗಳೂರು ಬಂದರು ಸ್ಥಾಪನೆಗೊಂಡ ಬಳಿಕ 40 ಸಾವಿರ ಹಡ...
26-03-26 07:19 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; ಸಾಮಾಜಿಕ ಜಾಲತಾಣದಲ್...
25-03-26 08:44 pm
27-03-26 10:02 pm
HK News Staffer
ಲ್ಯಾಂಬೋರ್ಗಿನಿ ಕಾರು ಡ್ರಿಫ್ಟಿಂಗ್ ; ಶೋಕಿ ಮಾಡಿ ತಗ...
27-03-26 09:34 pm
ಹೊಸ ಬಾವಿ ಕೊರೆಯುತ್ತಿದ್ದ ವೇಳೆ ದುರಂತ ; ಮೂವತ್ತು ಅ...
27-03-26 09:32 pm
ಪುಟ್ಟೇನಹಳ್ಳಿ ಠಾಣೆ ಇನ್ಸ್ಪೆಕ್ಟರ್ ತಿಂಗಳ ವಸೂಲಿ 2...
27-03-26 08:37 pm
Rowdy Sheeter Arif Hussain Murder, Mangalore:...
27-03-26 06:51 am