ಬ್ರೇಕಿಂಗ್ ನ್ಯೂಸ್
20-01-24 10:38 pm Udupi Correspondent ಕರಾವಳಿ
ಉಡುಪಿ, ಜ.20: ಸ್ಯಾಂಡಲ್ ವುಡ್ ನಟ ರಕ್ಷಿತ್ ಶೆಟ್ಟಿ ತನ್ನ ಮೂಲ ಮನೆಯಲ್ಲಿ ದೈವದ ಕೋಲದಲ್ಲಿ ಭಾಗಿಯಾಗಿದ್ದು ಈ ವೇಳೆ ಸ್ವತಃ ದೈವದ ಮುಖವಾಡವನ್ನು ಹೊತ್ತು ದೈವದ ಕೆಲಸ ಮಾಡಿದ್ದಾರೆ. ಕುಟುಂಬದ ಮೂಲ ಮನೆಯಲ್ಲಿ ನಡೆದ ದೈವದ ಉತ್ಸವದಲ್ಲಿ ಸ್ವತಃ ತಾವೇ ನಿಂತು ದೈವದ ಮುಖವಾಡವನ್ನು ಹೊತ್ತು ಸೇವೆ ಮಾಡಿದ್ದಾರೆ.
ರಕ್ಷಿತ್ ಶೆಟ್ಟಿ ನಟನಾಗಿ ಹೆಸರು ಮಾಡಿದ್ದರೂ ತುಳುನಾಡಿನ ದೈವಗಳ ಕಾರಣಿಕ ಅರಿತು ಸೇವೆಯನ್ನು ತಪ್ಪಿಸಿಲ್ಲ. ಉಡುಪಿ ಜಿಲ್ಲೆಯ ಅಲೆವೂರು ದೊಡ್ಡ ಮನೆ ಇವರ ಮೂಲಮನೆಯಾಗಿದ್ದು ಸದ್ಯ ದೈವಗಳ ಆರಾಧನೆ ನಡೆಯುತ್ತಿದೆ. ಗುತ್ತಿನ ಮನೆಯ ಪ್ರತಿಯೊಬ್ಬರಿಗೂ ಈ ಆಚರಣೆಯಲ್ಲಿ ಜವಾಬ್ದಾರಿಗಳಿರುತ್ತವೆ. ತುಳುನಾಡಿನಲ್ಲಿ ಮಾತೃ ಪ್ರಧಾನ ವ್ಯವಸ್ಥೆ ಇದ್ದರೂ, ರಕ್ಷಿತ್ ಶೆಟ್ಟಿ ತನ್ನ ತಂದೆಯ ಮನೆಯ ದೈವದ ಚಾಕರಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ದೈವದ ಮನೆಯಲ್ಲಿ ಪ್ರತಿಷ್ಠಾಪನೆಯ ವೇಳೆ ಮುಖವಾಡವನ್ನು ತಾನೇ ಕೈಯಾರೆ ಹಿಡಿದು ಸೇವೆ ನಡೆಸಿದ್ದಾರೆ. ಕಳೆದ ಮೂರು ದಿನಗಳಿಂದ ವಿವಿಧ ಪೂಜೆಗಳು ನಡೆಯುತ್ತಿದ್ದು ಪ್ರತಿ ಕೆಲಸದಲ್ಲೂ ಹಾಜರಿದ್ದು ಮನೆ ಮಗನ ಕರ್ತವ್ಯ ನಿಭಾಯಿಸಿದ್ದಾರೆ.
ರಕ್ಷಿತ್ ಶೆಟ್ಟಿಯ ತಂದೆ ಶ್ರೀಧರ ಶೆಟ್ಟಿ ಅವರು ಈ ದೊಡ್ಡ ಮನೆ ಕುಟುಂಬಕ್ಕೆ ಸೇರಿದವರು. ಸುಮಾರು ಏಳು ಶತಮಾನಗಳ ಇತಿಹಾಸ ಇರುವ ಈ ಗುತ್ತಿನ ಮನೆಯಲ್ಲಿ ಪಂಜುರ್ಲಿ, ಧೂಮಾವತಿ ಸೇರಿದಂತೆ ಅನೇಕ ದೈವಗಳು ಇವೆ. ವರ್ಷಂಪ್ರತಿ ಇಲ್ಲಿ ದೈವಗಳ ಉತ್ಸವ ನಡೆಯುತ್ತದೆ. ಈಗ ದೈವದ ಗುಡಿ ಮತ್ತು ಗುತ್ತಿನ ಮನೆ ಜೀರ್ಣಾವಸ್ಥೆ ತಲುಪಿದ ಕಾರಣ ಕುಟುಂಬಿಕರೆಲ್ಲ ಸೇರಿ ನೂತನ ಕಟ್ಟಡ ನಿರ್ಮಿಸಿದ್ದಾರೆ.
ಮೂಲ ಮನೆಯಲ್ಲೀಗ ದೈವಗಳ ಕೋಲ ನಡೆಯುತ್ತಿದ್ದು ಹೆತ್ತವರ ಜೊತೆಗೆ ಮನೆ ಮಗನಾಗಿ ರಕ್ಷಿತ್ ಶೆಟ್ಟಿ ದೈವದ ಕೈಂಕರ್ಯ ನಡೆಸಿದ್ದಾರೆ.
Sandalwood actor Rakshit Shetty, who participated in the deity's kola at his original home, performed the divine work by carrying the mask of the deity himself. He stood by himself at the deity's festival held at the family's original home and served with the mask of the deity.
22-04-25 10:15 pm
Bangalore Correspondent
30 ವರ್ಷಗಳಲ್ಲಿ ಮುಸ್ಲಿಮರು, ಪರಿಶಿಷ್ಟರ ಸಂಖ್ಯೆ ದುಪ...
22-04-25 10:13 pm
Bidar SSLC Student, Blackmail: ಫುಲ್ ಮಾರ್ಕ್ ಕೊ...
22-04-25 02:37 pm
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
22-04-25 10:33 pm
HK News Desk
Rahul Gandhi, BJP : ಅಮೆರಿಕದಲ್ಲಿ ನಿಂತು ಭಾರತದ ಚ...
22-04-25 07:13 pm
Next Pope: ರೋಮನ್ ಕ್ಯಾಥೋಲಿಕ್ ಚರ್ಚ್ನ 266ನೇ ಪೋಪ...
21-04-25 07:46 pm
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
22-04-25 07:37 pm
Bangalore Correspondent
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm