ಬ್ರೇಕಿಂಗ್ ನ್ಯೂಸ್
28-11-23 07:08 pm Mangalore Correspondent ಕರಾವಳಿ
ಮಂಗಳೂರು, ನ.28: ನಗರದ ಅತ್ತಾವರದ ಐವರಿ ಟವರ್ ಎನ್ನುವ ಅಪಾರ್ಟ್ಮೆಂಟ್ ಮನೆಯೊಂದರಲ್ಲಿ ಬೆಂಕಿ ಆಕಸ್ಮಿಕ ಉಂಟಾಗಿದ್ದು, ಹೊಗೆಯಿಂದ ಉಸಿರು ಕಟ್ಟಿ ವೃದ್ಧೆಯೊಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ.
ಮನೆಯ ಬಾತ್ ರೂಮಿನಲ್ಲಿ ಅಡಗಿದ್ದ ಝರೀನಾ (67) ಎಂಬ ಮಹಿಳೆ ಸಾವನ್ನಪ್ಪಿದವರು. ಇವರ ಗಂಡ ತೀವ್ರ ಅಸ್ವಸ್ಥರಾಗಿದ್ದು, ಎಜೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮನೆಯವರು ಬೆಳಗ್ಗೆ ಏಳುವ ಮೊದಲೇ ಮನೆಯೊಳಗೆ ಹೊಗೆ ಆವರಿಸಿಕೊಂಡಿತ್ತು. ಆನಂತರ ಟೀಪಾಯ್, ಸೋಫಾ ಎಲ್ಲವೂ ಸುಟ್ಟು ಹೋಗಿದ್ದು, ಮನೆಯೊಳಗೆ ದಟ್ಟ ಹೊಗೆ ಆವರಿಸಿಕೊಂಡಿತ್ತು. ಈ ವೇಳೆ ಮನೆಯಲ್ಲಿದ್ದ ಮಕ್ಕಳು, ಮೊಮ್ಮಕ್ಕಳು ಹೊರಗೆ ಬಂದಿದ್ದರೆ, ವೃದ್ಧ ದಂಪತಿ ಕೊಠಡಿಯಲ್ಲಿದ್ದರು.


ಆನಂತರ, ವೃದ್ಧ ಮಹಿಳೆ ಝರೀನಾ ಬಾತ್ ರೂಮಿಗೆ ಹೋಗಿದ್ದರೆ, ಅವರ ಪತಿಯನ್ನು ರಕ್ಷಿಸಿ ಹೊರಗೆ ತರಲಾಗಿತ್ತು. ಅಗ್ನಿಶಾಮಕ ದಳ ಬಂದು ನೀರು ಹಾಯಿಸಿ ವೃದ್ಧೆಯನ್ನು ಹುಡುಕುವಷ್ಟರಲ್ಲಿ ಆಕೆ ಉಸಿರು ಕಟ್ಟಿ ಮೃತಪಟ್ಟಿದ್ದರು. ಶಾರ್ಟ್ ಸರ್ಕಿಟ್ ನಿಂದಾಗಿ ಹೊಗೆ, ಬೆಂಕಿ ಆವರಿಸಿದೆ ಎನ್ನಲಾಗುತ್ತಿದೆ. ಇವರ ಕುಟುಂಬ ಭಟ್ಕಳದವರಾಗಿದ್ದು, ವೃದ್ಧ ದಂಪತಿ ಮಗಳ ಮನೆಯಲ್ಲಿ ನೆಲೆಸಿದ್ದರು. ಅಳಿಯ ಭಟ್ಕಳಕ್ಕೆ ತೆರಳಿದ್ದರೆ, ಮನೆಯಲ್ಲಿ ಮಗಳು ಮತ್ತು ಮೊಮ್ಮಕ್ಕಳು ಹಾಗೂ ದಂಪತಿ ಇದ್ದರು. ಬೆಳಗ್ಗೆ ಏಳುವ ಮೊದಲೇ ಬೆಂಕಿ ಆವರಿಸಿದ್ದು, ಹೇಗೆ ಹತ್ತಿಕೊಂಡಿದೆ ಎಂಬ ಬಗ್ಗೆ ಪಾಂಡೇಶ್ವರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Sudden fire in the house at falnir in Mangalore, 67 year old woman dies on spot. The incident took place early in the morning. The pandeshwar police are investagitng the case.
12-11-25 11:10 pm
Bangalore Correspondent
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
12-11-25 02:54 pm
HK News Desk
ದೆಹಲಿ ಘಟನೆ, ಆತ್ಮಹತ್ಯಾ ಬಾಂಬರ್ ಆಗಿರಲಿಲ್ಲ, ಆಕಸ್ಮ...
11-11-25 10:56 pm
Mangaluru Kasaragod Highway: ಮಂಗಳೂರು- ಕಾಸರಗೋಡ...
11-11-25 10:20 pm
ಕೆಂಪುಕೋಟೆ ಕಾರು ಬ್ಲಾಸ್ಟ್ ಪ್ರಕರಣ ; ಜೈಶ್ ಉಗ್ರರ ಲ...
11-11-25 03:28 pm
ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್...
10-11-25 11:07 pm
12-11-25 06:56 pm
Mangalore Correspondent
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
Bomb blast in New Delhi, High Alert in Dakshi...
11-11-25 10:15 pm
Bhagvati Prem Ship, Mangalore: ಸುರತ್ಕಲ್ ; ಮರಳ...
08-11-25 08:31 pm
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
12-11-25 12:32 pm
Mangalore Correspondent
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm