ಬ್ರೇಕಿಂಗ್ ನ್ಯೂಸ್
02-09-23 03:36 pm Mangalore Correspondent ಕರಾವಳಿ
ಉಳ್ಳಾಲ, ಸೆ.2: ಉಳ್ಳಾಲ ಪೊಲೀಸ್ ಠಾಣೆಯ ಹಿಂಬದಿಯ ಕ್ವಾಟ್ರಸ್ ಪರಿಸರದಲ್ಲಿ ಬೀದಿ ನಾಯಿಗಳು ಬಿಡಾರ ಹೂಡಿದ್ದು ಅದೀಗ ಪೊಲೀಸರಿಗೇ ತಲೆನೋವು ಸೃಷ್ಟಿಸಿದೆ. ಕಳೆದ ವಾರ ಇಬ್ಬರು ಪೊಲೀಸ್ ಕಾನ್ಸ್ ಟೇಬಲ್ ಮತ್ತು ಲೇಡಿ ಪೊಲೀಸ್ ಕಾನ್ಸ್ ಟೇಬಲ್ ಓರ್ವರ ಪತಿಗೆ ಹುಚ್ಚು ನಾಯಿ ಕಚ್ಚಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಉಳ್ಳಾಲ ಪೊಲೀಸ್ ಠಾಣೆಯ ಪಿಸಿಗಳಾದ ಸತೀಶ್, ನವೀನ್ ಮತ್ತು ಲೇಡಿ ಪಿಸಿ ಭಾಗ್ಯಶ್ರೀ ಅವರ ಪತಿ ರಂಗನಾಥ್ ಎಂಬವರಿಗೆ ಹುಚ್ಚು ನಾಯಿ ಕಡಿದಿದೆ. ಆಗಸ್ಟ್ 28 ರಂದು ಪೊಲೀಸ್ ವಸತಿ ಗೃಹದ ಆವರಣದಲ್ಲಿ ಘಟನೆ ನಡೆದಿದ್ದು ನಾಯಿ ವಿಚಿತ್ರವಾಗಿ ವರ್ತಿಸುತ್ತಿದ್ದರಿಂದ ಅನುಮಾನಗೊಂಡು ಮಂಗಳೂರಿನ ಅನಿಮಲ್ ಕೇರ್ ಟ್ರಸ್ಟ್ ನವರಿಗೆ ತಿಳಿಸಿದ್ದರು.
ಹುಚ್ಚು ನಾಯಿ ರೀತಿ ಇದೆ, ಇಲ್ಲಿಂದ ಕೊಂಡೊಯ್ಯುವಂತೆ ಪೊಲೀಸರು ಹೇಳಿದ್ದಕ್ಕೆ ವೀಡಿಯೋ ತೆಗೆದು ಕಳಿಸಲು ಅನಿಮಲ್ ಕೇರ್ ನವರು ತಿಳಿಸಿದ್ದರು. ಪೊಲೀಸರು ನಾಯಿಯ ವೀಡಿಯೋವನ್ನ ಕಳಿಸಿ ಕೊಟ್ಟಿದ್ದರೂ ವೀಡಿಯೋ ವೀಕ್ಷಿಸಿದ ಆನಿಮಲ್ ಕೇರ್ ನವರು ನಾಯಿಗೆ ಹುಚ್ಚು ಹಿಡಿದಿಲ್ಲವೆಂದು ವಾದಿಸಿದ್ದರಂತೆ. ಆದರೆ ನಾಯಿಯ ಉಪಟಳ ತಡೆಯಲು ಸಾಧ್ಯವಿಲ್ಲ. ಕೊಂಡು ಹೋಗಿ ಎಂದು ಪೊಲೀಸರು ಒತ್ತಾಯಿಸಿದ್ದಕ್ಕೆ ಕೊನೆಗೆ ಆನಿಮಲ್ ಕೇರ್ ನವರು ಪೊಲೀಸರನ್ನ ಕಡಿದಿದ್ದ ನಾಯಿಯನ್ನು ಕೊಂಡೊಯ್ದಿದ್ದರು. ಆದರೆ ಅದೇ ನಾಯಿ ಆನಿಮಲ್ ಕೇರ್ ಶುಶ್ರೂಷೆ ಕೇಂದ್ರದಲ್ಲಿ ಹಠಾತ್ ಮೃತಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಆ ನಾಯಿಗೆ ರೇಬೀಸ್ ರೋಗ ತಗಲಿರುವ ಶಂಕೆ ಪೊಲೀಸರಿಗಿದೆ.
ಹೀಗಾಗಿ ನಾಯಿ ಕಡಿತಕ್ಕೊಳಗಾದ ಪೊಲೀಸ್ ಸಿಬ್ಬಂದಿ ಹುಚ್ಚು ನಿರೋಧಕ ಲಸಿಕೆ ಪಡೆದು ಚಿಕಿತ್ಸೆ ಪಡೆದಿದ್ದಾರೆ. ವಸತಿಗೃಹದಲ್ಲಿರುವ ಇತರ ನಾಯಿಗಳಿಗೂ ರೋಗ ಹರಡಿರಬಹುದು ಎಂಬ ಶಂಕೆ ಉಂಟಾಗಿದ್ದು ಪೊಲೀಸರು ಎಲ್ಲ ನಾಯಿಗಳನ್ನ ಹಿಡಿದು ಒಯ್ಯುವಂತೆ ಆನಿಮಲ್ ಕೇರ್ ಸಂಸ್ಥೆಗೆ ಮನವಿ ಮಾಡಿದ್ದಾರೆ. ರೇಬೀಸ್ ರೋಗ ತಗಲಿದರೂ ಕೊನೆ ಕ್ಷಣದ ವರೆಗೂ ತಿಳಿದು ಬರುವುದಿಲ್ಲ. ಯಾವುದೇ ಪ್ರಾಣಿಗೆ ರೋಗ ತಗಲಿದರೆ ಅದಕ್ಕೆ ಔಷಧಿಯೂ ಇರಲ್ಲ. ನಾಯಿಗೆ ಹುಚ್ಚು ಹಿಡಿದ 2ರಿಂದ 4 ದಿನದಲ್ಲಿ ಸಾಯುತ್ತದೆ. ಹೀಗಾಗಿ ಮುಂಜಾಗ್ರತೆ ಕ್ರಮವಾಗಿ ಶಂಕೆ ಇದ್ದವರು ಹುಚ್ಚು ನಿರೋಧಕ ಲಸಿಕೆ ಪಡೆಯುವುದಷ್ಟೇ ಏಕೈಕ ಔಷಧಿ. ಹುಚ್ಚು ಹಿಡಿದ ನಾಯಿಯ ಜೊಲ್ಲು, ಉಗುರು ಮನುಷ್ಯನಿಗೆ ತಾಗಿದರೂ ವೈರಸ್ ಹರಡುತ್ತದೆ. ಜೊತೆಗಿದ್ದ ನಾಯಿಗಳಿಗೆ ಕಚ್ಚಿದ್ದರೂ ಅವುಗಳಿಗೆ ಲಸಿಕೆ ಹಾಕಿಸದೇ ಇದ್ದರೆ ರೋಗ ಬರಬಹುದು.
Rabid dog bites four police staffs including SI of Ullal in Mangalore. The Police have informed Animal trust to take the dogs.
29-04-25 10:45 pm
Bangalore Correspondent
CM Siddaramaiah, Belagavi, BJP Suresh Kumar:...
29-04-25 09:51 pm
Protest Kalaburagi, islamabad Locality: ಕಲಬುರ...
29-04-25 09:20 pm
Kudupu Murder, Mob attack, Parameshwar: ಕುಡುಪ...
29-04-25 04:28 pm
Praveen Nettaru, Mohsin Shukur, Karwar Police...
29-04-25 01:04 pm
29-04-25 03:45 pm
HK News Desk
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
ಪಾಕಿಸ್ತಾನದ ಶಾಂತಿ ಸಮಿತಿ ಕಚೇರಿ ಎದುರೇ ಬಾಂಬ್ ಸ್ಫೋ...
28-04-25 05:53 pm
ಪಾಕ್ ವಿರುದ್ಧ ಯುದ್ದಕ್ಕೆ ಕರೆ ನೀಡಿದ ಕಾಶ್ಮೀರ್ ಸಿಎ...
27-04-25 08:42 pm
Pak, Website Hacked, Indian Army : ಅಲ್ಲಾ ನಮ್ಮ...
27-04-25 07:38 pm
29-04-25 05:45 pm
Mangalore Correspondent
Mangalore, Dr Kalladka Bhat: ಹೆಣ್ಣು ಮಕ್ಕಳು ವ್...
29-04-25 12:40 pm
Vadiraj, Mangalore, B R Ambedkar: ಕಾಂಗ್ರೆಸ್ ಸ...
29-04-25 11:53 am
Highland Hospital Mangalore, FIR, Anti Nation...
29-04-25 11:38 am
ರೈಲ್ವೇ ಪರೀಕ್ಷೆಯಲ್ಲಿ ಜನಿವಾರ, ಮಂಗಳಸೂತ್ರ ಸೇರಿ ಧಾ...
28-04-25 11:41 am
29-04-25 09:59 pm
Mangalore Correspondent
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am
Mangalore crime, Murder, Kudupu: ಕುಡುಪು ಬಳಿಯಲ...
27-04-25 10:59 pm