ಬ್ರೇಕಿಂಗ್ ನ್ಯೂಸ್
06-07-23 03:17 pm Mangalore Correspondent ಕರಾವಳಿ
ಉಳ್ಳಾಲ, ಜು.6: ದೇವಿ ಜಾತ್ರೆ ನಡೆಸುವ ನೆಪದಲ್ಲಿ ಅಪರಿಚಿತ ಯುವಕರ ತಂಡವೊಂದು ಕೇಸರಿ ಬಟ್ಟೆ ತೊಟ್ಟು ಮಂಗಳೂರಿನಲ್ಲಿ ರಾತ್ರಿ ವೇಳೆಯೂ ಭಿಕ್ಷಾಟನೆಯಲ್ಲಿ ತೊಡಗಿದ್ದು, ಅನುಮಾನಸ್ಪದ ಯುವಕನನ್ನ ಉಳ್ಳಾಲ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ತೊಕ್ಕೊಟ್ಟು ಕಾಪಿಕಾಡಿನ ರಾಜ್ ಕೇಟರರ್ಸ್ ಕಚೇರಿಗೆ ನಿನ್ನೆ ರಾತ್ರಿ 8 ಗಂಟೆಗೆ ಖಾವಿ ತೊಟ್ಟಿದ್ದ ಯುವಕನೋರ್ವ ಪ್ರವೇಶಿಸಿ ನಮ್ಮೂರಿನ ದೇವಿ ಜಾತ್ರೆಗೆ ಚಂದಾ ನೀಡುವಂತೆ ಕೇಟರಿಂಗ್ ಮಾಲಕ ರಾಜೇಶ್ ಕಾಪಿಕಾಡು ಅವರಲ್ಲಿ ಕೇಳಿದ್ದಾನೆ. ರಾತ್ರಿ ವೇಳೆ ಬಂದಿದ್ದ ಖಾವಿಧಾರಿ ವ್ಯಕ್ತಿ ಸೊಂಟಕ್ಕೆ ಪ್ಲಾಸ್ಟಿಕ್ ಕೊಡದ ಹುಂಡಿ, ದೇವಿಯ ಫೋಟೊ ಅಳವಡಿಸಿದ್ದನ್ನ ಕಂಡು ಅನುಮಾನದಲ್ಲಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕಕ್ಕಾಬಿಕ್ಕಿಯಾದ ಯುವಕ ತನ್ನ ಹೆಸರು ಮುತ್ತಪ್ಪ, ಹೈದರಾಬಾದ್ ಮೂಲದವನೆಂದು ಹೇಳಿದ್ದ. ಅಲ್ಲದೆ, ಮೂವತ್ತು ಜನ ಮಂಗಳೂರು ನಗರದಲ್ಲಿ ಇದೇ ರೀತಿ ಕಲೆಕ್ಷನ್ ಮಾಡುತ್ತಿರುವುದಾಗಿ ಕನ್ನಡ ಭಾಷೆಯಲ್ಲಿ ಹೇಳಿದ್ದಾನೆ. ಯುವಕನ ಬಳಿ ಮೊಬೈಲ್ ಆಗಲಿ,ಯಾವುದೇ ಗುರುತಿನ ಚೀಟಿ ಇಲ್ಲದನ್ನ ಗಮನಿಸಿದ ರಾಜೇಶ್ ಅವರು ಸ್ಥಳಕ್ಕೆ ಉಳ್ಳಾಲ ಪೊಲೀಸರನ್ನ ಕರೆಸಿದ್ದಾರೆ.
ಹೊರ ಜಿಲ್ಲೆಯ ಖಾವಿಧಾರಿ ಯುವಕನನ್ನ ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಯುವಕ ತಾನು ಜಮಖಂಡಿ ಜಿಲ್ಲೆಯವನೆಂದು ಧ್ವಂದ್ವ ಹೇಳಿಕೆ ನೀಡಿದ್ದಾನೆ. ಹೊರ ಜಿಲ್ಲೆಯ ನಿರುದ್ಯೋಗಿ ಯುವಕರು ಖಾವಿ ವೇಷ ತೊಟ್ಟು ರಾತ್ರಿ ವೇಳೆ ಚಂದಾ ಎತ್ತುವ ಸೋಗಲ್ಲಿ ದರೋಡೆ ಮಾಡಲು ಯೋಜನೆ ರೂಪಿಸಿದ್ದಾರೆಯೇ ಎಂಬ ಅನುಮಾನ ಸ್ಥಳೀಯರಲ್ಲಿ ಮೂಡಿದೆ. ಪೊಲೀಸರು ಸಮರ್ಪಕ ತನಿಖೆ ನಡೆಸಿದರೆ ಅಸಲಿಯತ್ತು ಬೆಳಕಿಗೆ ಬರಬಹುದು. ಇಂತಹ ಖಾವಿಧಾರಿಗಳು ಮನೆಗೆ ಬಂದಲ್ಲಿ ಸಾರ್ವಜನಿಕರು ಜಾಗರೂಕರಾಗಿರುವಂತೆ ಪೊಲೀಸರು ಮನವಿ ಮಾಡಿದ್ದಾರೆ.
Ullal police arrest youths dressed in kesari begging for money at night in suspicious way in Mangalore.
13-11-25 08:33 pm
HK News Desk
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
14-11-25 11:50 am
HK News Desk
ದೆಹಲಿ ಸ್ಫೋಟ ಪ್ರಕರಣ ; ಕಾನ್ಪುರ ವೈದ್ಯಕೀಯ ವಿದ್ಯಾರ...
13-11-25 10:56 pm
ಇಬ್ಬರು ಉಗ್ರರ ಡೈರಿ ಪತ್ತೆ ; ಮಹತ್ತರ ಮಾಹಿತಿ ಬಹಿರಂ...
13-11-25 08:41 pm
Tiruchi Aircraft: ತಿರುಚಿ- ಪುದುಕೋಟೈ ಹೆದ್ದಾರಿಯಲ...
13-11-25 05:13 pm
Delhi Blast: ದೆಹಲಿ ಸ್ಫೋಟಕ್ಕೆ ಟರ್ಕಿ ನಂಟಿನ ಶಂಕೆ...
13-11-25 04:52 pm
14-11-25 03:34 pm
Mangalore Correspondent
ಸದಸ್ಯತ್ವ ಕಳಕೊಂಡವರಿಂದಲೇ ದರ್ಗಾ ಕಮಿಟಿ ವಿರುದ್ಧ ಅಪ...
13-11-25 07:41 pm
Belthangady, Kadaba Suicide, Mangalore; ಕಡಬದ...
13-11-25 05:01 pm
Kumble Toll Plaza: ಕುಂಬಳೆ ಟೋಲ್ ಪ್ಲಾಜಾಕ್ಕೆ ಭಾರ...
13-11-25 01:44 pm
Mangalore NMPT, Dinesh Gundu Rao, Congress, B...
12-11-25 06:56 pm
14-11-25 05:32 pm
HK News Desk
Ullal News, Animal Attack, Crime, Kumpala: ಕಣ...
14-11-25 11:16 am
ಮಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ವಂಚನೆ ಹೆಚ್ಚಳ ; ಮ...
13-11-25 10:09 pm
Sexual Harassment in Anekal: ಸ್ಕ್ಯಾನಿಂಗ್ ವೇಳ...
13-11-25 10:00 pm
ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾ...
12-11-25 12:32 pm