ಬ್ರೇಕಿಂಗ್ ನ್ಯೂಸ್
03-07-23 10:31 pm Mangalore Correspondent ಕರಾವಳಿ
ಮಂಗಳೂರು, ಜುಲೈ 3: ನೂರಾರು ಬೀದಿ ನಾಯಿಗಳಿಗೆ ಊಟ ಹಾಕುವ ಮಂಗಳೂರಿನ ಶ್ವಾನ ಪ್ರೇಮಿ ರಜನಿ ಶೆಟ್ಟಿ ಅವರ ಮೇಲೆ ನೆರೆಮನೆಯ ನಿವಾಸಿ ಮಹಿಳೆಯೊಬ್ಬರು ಹಲ್ಲೆ ಮಾಡಿದ್ದಾರೆ.
ಮಂಜುಳಾ ಶೆಟ್ಟಿ ಎಂಬ ಮಹಿಳೆ ರಜನಿ ಮೇಲೆ ಕಲ್ಲಿನಿಂದ ಹೊಡೆದು ಹಲ್ಲೆ ಮಾಡಿದ್ದಾರೆಂದು ದೂರಲಾಗಿದೆ. ಹಲ್ಲೆಗೀಡಾದ ರಜನಿ ವೆನ್ಲಾಕ್ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ. ಅಲ್ಲದೆ ಬರ್ಕೆ ಠಾಣೆಗೆ ದೂರು ನೀಡಿದ್ದಾರೆ. ರಜನಿ ಅವರು ತನ್ನ ಬಾಡಿಗೆ ಮನೆಯಲ್ಲಿದ್ದುಕೊಂಡೇ ದಿನವೂ ನೂರಾರು ಬೀದಿ ನಾಯಿಗಳಿಗೆ ಅನ್ನ ಬೇಯಿಸಿ ಹಾಕುತ್ತ ಬಂದಿದ್ದಾರೆ.
ಬೀದಿ ನಾಯಿಗಳು ಮನೆಯ ಸುತ್ತ ಸೇರುತ್ತಿದ್ದ ವಿಚಾರದಲ್ಲಿ ರಜನಿ ಮತ್ತು ಮಂಜುಳಾ ನಡುವೆ ಜಗಳ ಆಗುತ್ತಿತ್ತು. ಇಂದು ಬೆಳಗ್ಗೆ ಮಾತಿಗೆ ಮಾತು ಬೆಳೆದು ಜಗಳ ಆಗಿದೆ ಎನ್ನಲಾಗುತ್ತಿದೆ. ರಜನಿ ಶೆಟ್ಟಿಯವರ ಕೈಗೆ ಗಾಯವಾಗಿದೆ. ಎರಡು ವರ್ಷಗಳಿಂದ ನನ್ನ ಜೊತೆ ಜಗಳ ಮಾಡುತ್ತಿದ್ದಾಳೆ. ನೀರಿನ ಬಳಕೆ ವಿಚಾರದಲ್ಲೂ ಬೈಯುತ್ತಿದ್ದಳು. ಪ್ರತಿ ಬಾರಿ ಎಲ್ಲ ನಾಯಿಗಳಿಗೆ ಮತ್ತು ತನಗೆ ವಿಷ ಹಾಕಿ ಕೊಂದು ಹಾಕುವುದಾಗಿ ಬೆದರಿಸುತ್ತಿದ್ದಳು. ಇವತ್ತು ನನ್ನ ಮೇಲೆ ಕಲ್ಲು ತೂರಿದ್ದಾಳೆ. ನಾನು ನಾಯಿಗಳನ್ನು ಪೋಷಣೆ ಮಾಡುವುದನ್ನು ಬಿಡಬೇಕು ಮತ್ತು ಆ ಸ್ಥಳದಿಂದ ಎದ್ದು ಹೋಗಬೇಕು ಎಂಬುದು ಆಕೆಯ ಬಯಕೆ. ನಾನು 22 ವರ್ಷಗಳಿಂದ ನಾಯಿಗಳ ಜೊತೆಗಿದ್ದು ನನಗೆ ಯಾವುದೇ ಆರೋಗ್ಯ ತೊಂದರೆ ಆಗಿಲ್ಲ ಎಂದು ರಜನಿ ಶೆಟ್ಟಿ ತಿಳಿಸಿದ್ದಾರೆ.
ಹಲ್ಲೆ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದ್ದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ರಜನಿ ತನ್ನ ಮನೆಯಲ್ಲಿ ತೊಂದರೆಗೊಳಗಾದ ಬೀದಿ ನಾಯಿಗಳು, ಬೆಕ್ಕು, ಪಕ್ಷಿಗಳನ್ನು ಆರೈಕೆ ಮಾಡಿ ಸಾಕುತ್ತಿದ್ದಾರೆ.
Mangalore stray animal caretaker Rajani Shetty assaulted by neighbour over looking after dogs.Rajani was hit with a stone by her neighbour Manjula Shetty injuring her in the process. Rajani will file a complaint against Manjula
20-06-25 10:36 am
Bangalore Correspondent
ಕಮಲ್ ನಟನೆಯ 'ಥಗ್ ಲೈಫ್' ಸಿನಿಮಾ ಪ್ರಸಾರಕ್ಕೆ ಸುಪ್ರ...
17-06-25 05:35 pm
Dk Shivakumar, Plan Crash: ವಿಮಾನ ದುರಂತ ; ಬಿಜೆ...
16-06-25 10:44 pm
Judge Heart Attack, Kalaburagi Court: ನ್ಯಾಯಾಲ...
16-06-25 02:56 pm
ಎರಡೇ ವರ್ಷಗಳಲ್ಲಿ ಬೆಂಗಳೂರಿನ ಶಾಸಕರ ಆದಾಯ ವಿಪರೀತ ಹ...
15-06-25 09:29 pm
19-06-25 10:58 pm
HK News Desk
ಕೇರಳ ಸಿಎಂ ಸ್ವಂತ ಊರಿನಲ್ಲೇ ಮುಸ್ಲಿಂ ಗುಂಪಿನ ನೈತಿಕ...
19-06-25 08:26 pm
Israel-Iran’s War: ಇಸ್ರೇಲಿನ ಅತಿದೊಡ್ಡ ಆಸ್ಪತ್ರೆ...
19-06-25 07:13 pm
ಪಾಕ್ ಸೇನಾ ಮುಖ್ಯಸ್ಥನಿಗೆ ಡೊನಾಲ್ಡ್ ಟ್ರಂಪ್ ಔತಣ ಕೂ...
18-06-25 09:54 pm
ಖಾಸಗಿ ವಾಹನಗಳಿಗೆ ಫಾಸ್ಟ್ ಟ್ಯಾಗ್ ಮತ್ತಷ್ಟು ಸುಲಭ ;...
18-06-25 08:49 pm
20-06-25 03:54 pm
Udupi Correspondent
ಆರೆಸ್ಸೆಸ್ ನಾಯಕರ ಮನೆಗಳಿಗೆ ಮಿಡ್ ನೈಟ್ ಪರಿಶೀಲನೆ ;...
20-06-25 02:59 pm
ಒಂದೇ ಮರ ತೆರವಿಗೆ ಸೂಚಿಸಿದ್ದ ಸೋಮೇಶ್ವರ ಪುರಸಭೆ ; ಐ...
19-06-25 10:08 pm
ಜಪ್ಪಿನಮೊಗರು ಕಾರು ಅಪಘಾತಕ್ಕೆ ಮದ್ಯ ಸೇವನೆ, ಅತಿ ವೇ...
19-06-25 07:48 pm
Mangalore Police, Sudheer Kumar Reddy: ಕೋಮು ಸ...
19-06-25 01:05 pm
20-06-25 02:04 pm
Mangalore Correspondent
Mangalore, Bantwal Pregnant Woman Murder, Sui...
19-06-25 04:37 pm
Ccb Police, Bangalore, Drugs, crime: ಚೂಡಿದಾರ್...
17-06-25 05:06 pm
Kolar ATM Robbery: ಕರ್ನಾಟಕದಲ್ಲಿ ಹೆಚ್ಚುತ್ತಿರುವ...
17-06-25 12:10 pm
Fake Currency Racket, Shivamogga: ಖೋಟಾ ನೋಟು ಚ...
16-06-25 03:05 pm