ಬ್ರೇಕಿಂಗ್ ನ್ಯೂಸ್
20-06-23 10:32 am Mangalore Correspondent ಕರಾವಳಿ
ಉಳ್ಳಾಲ, ಜೂ.20: ಪಂಚಾಯತ್ ಆಡಳಿತದ ಗಮನಕ್ಕೆ ತರದೆ ಚರಂಡಿ ಅಗೆಯೋ ನೆಪದಲ್ಲಿ ಕೋಟೆಕಾರು ಪಟ್ಟಣ ಪಂಚಾಯತ್ ಸದಸ್ಯರೋರ್ವರು ಮೋರಿಗಳನ್ನೇ ಒಡೆದು ಬಿಸಾಕಿದ್ದು ಮಕ್ಕಳು, ವೃದ್ಧರು ಚರಂಡಿ ದಾಟಲು ಬವಣೆ ಪಡುತ್ತಿದ್ದು ಜನರು ಸದಸ್ಯನಲ್ಲಿ ಈ ಬಗ್ಗೆ ಕೇಳಿದರೆ ಧಮ್ಕಿ ಹಾಕಿದ ಘಟನೆ ಸಾಯಿನಗರ ಎಂಬಲ್ಲಿ ನಡೆದಿದೆ.
ಕೋಟೆಕಾರು ಪಟ್ಟಣ ಪಂಚಾಯತ್ 11ನೇ ವಾರ್ಡ್ ಸದಸ್ಯ ಹರೀಶ್ ರಾವ್ ಅವರು ತಮ್ಮ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯ ಎಂತದ್ದು ನೋಡಿ. ಕಳೆದ ಹತ್ತು ದಿವಸಗಳ ಹಿಂದೆ ಸಾಯಿನಗರಕ್ಕೆ ಬಂದ ಹರೀಶ್ ಚರಂಡಿ ಕಾಮಗಾರಿ ನಡೆಸಲಿಕ್ಕಿದೆ ಎಂದು ಹೇಳಿ ಇಲ್ಲಿನ ಸುಮಾರು ಇಪ್ಪತ್ತಕ್ಕೂ ಹೆಚ್ಚು ಮನೆಯವರು ಸ್ವಂತ ಖರ್ಚಲ್ಲಿ ನಿರ್ಮಿಸಿದ್ದ ಮೋರಿಗಳನ್ನ ಜೆಸಿಬಿಯಲ್ಲಿ ಒಡೆದು ಬಿಸಾಕಿದ್ದಾರಂತೆ. ಏನೋ ಸದಸ್ಯರು ಅಭಿವೃದ್ಧಿ ಕಾರ್ಯ ಮಾಡುತ್ತಿದ್ದಾರೆಂದು ಸುಮ್ಮನಿದ್ದ ಸ್ಥಳೀಯರು ಹತ್ತು ದಿವಸಗಳಾದರೂ ಕಾಮಗಾರಿಯೇ ನಡೆಯದ್ದನ್ನು ಕಂಡು ಕೆರಳಿದ್ದಾರೆ.
ಮೋರಿಗಳನ್ನ ಬಿಸಾಕಿದ ಕೌನ್ಸಿಲರ್ ಹರೀಶ್ ಅವರು ಚರಂಡಿ ದಾಟಲು ತಾತ್ಕಾಲಿಕ ವ್ಯವಸ್ಥೆಯನ್ನೂ ಮಾಡಿಲ್ಲವಂತೆ. ಸ್ಥಳೀಯರೇ ಸೆಂಟ್ರಿಗ್ ಹಲಗೆಗಳನ್ನ ತಂದು ಚರಂಡಿ ದಾಟಲು ವ್ಯವಸ್ಥೆ ಮಾಡಿದ್ದಾರೆ. ಮೋರಿಗಳಿಲ್ಲದೆ ಮನೆ ಮಂದಿ ತಮ್ಮ ವಾಹನಗಳನ್ನ ಮನೆಯೊಳಗೆ ಕೊಂಡೊಯ್ಯಲು ಸಾಧ್ಯವಾಗದೆ, ಚರಂಡಿ ದಾಟಲು ಬವಣೆ ಪಡುತ್ತಿದ್ದಾರೆ. ಕಳೆದ ವಾರ ಸುರಿದ ಮಳೆಗೆ ವೃದ್ಧರು ಹಲಗೆಯಲ್ಲಿ ಚರಂಡಿ ದಾಟುತ್ತಿದ್ದ ವೇಳೆ ಬಿದ್ದು ಗಾಯಗೊಂಡಿದ್ದಾರೆ. ಪಟ್ಟಣ ಸದಸ್ಯರು ಕೈಗೊಂಡಿರುವ ಕಾಮಗಾರಿ ಬಗ್ಗೆ ಪಂಚಾಯತ್ ಅಧಿಕಾರಿಗಳಲ್ಲಿ ಸ್ಥಳೀಯರು ಕೇಳಿದ್ದು ಚರಂಡಿ ಅಗೆಯಲು ಯಾವುದೇ ಅನುದಾನ, ಟೆಂಡರ್ ಆಗಿಲ್ಲವೆಂದು ಅಧಿಕಾರಿಗಳು ಹೇಳಿದ್ದಾರಂತೆ.
ಕೌನ್ಸಿಲರ್ ಹರೀಶ್ ಸ್ವಯಂ ಹಿತಾಸಕ್ತಿಯಿಂದ ಮನೆಗಳ ಸಂಪರ್ಕದ ಮೋರಿಗಳನ್ನ ಒಡೆದು ಹಾಕಿದ್ದು ಕೇಳಲು ಹೋದವರಲ್ಲಿ ನಿಮ್ಮನ್ನ ನೋಡಿ ಕೊಳ್ಳುತ್ತೇನೆಂದು ಧಮ್ಕಿ ಹಾಕುತ್ತಿದ್ದು , ನಮ್ಮ ಸಮಸ್ಯೆ ಬಗೆ ಹರಿಸದಿದ್ದರೆ ನಾವೆಲ್ಲರೂ ಪಟ್ಟಣ ಪಂಚಾಯತ್ಗೆ ಮುತ್ತಿಗೆ ಹಾಕಿ ಧರಣಿ ನಡೆಸುತ್ತೇವೆಂದು ಸ್ಥಳೀಯ ನಿವಾಸಿ ಬಿಜು ಜಾರ್ಜ್ ಎಚ್ಚರಿಕೆ ನೀಡಿದ್ದಾರೆ. ನಿನ್ನೆ ರಾತ್ರಿಯೂ ಕೌನ್ಸಿಲರ್ ಹರೀಶ್ ಸ್ಥಳಕ್ಕೆ ಬಂದು ಚರಂಡಿ ದಾಟಲು ಹಾಕಿದ್ದ ಸೆಂಟ್ರಿಗ್ ಹಲಗೆಗಳನ್ನು ಕೊಂಡೊಯ್ದಿದ್ದು ಮನೆ ಮಂದಿ ಕುರ್ಚಿ, ಸ್ಟೂಲ್, ಏಣಿಗಳನ್ನು ಇಟ್ಟು ಚರಂಡಿ ದಾಟುವ ಸ್ಥಿತಿಯಾಗಿದೆ.
Mangalore Kotekaru residents in trouble after Panchyath digs canal attached to homes at Sainagar. Old aged are feeling much difficult as there is no passage or way to get out of the house. Many have used ladder as passage.
22-06-25 07:52 pm
HK News Desk
Heart Attack, Hassan: ಊಟಕ್ಕೆ ಕುಳಿತುಕೊಳ್ಳುವಾಗ...
22-06-25 12:36 pm
Iran Attack Illegal,War, CM Siddaramaiah; ಇರಾ...
21-06-25 02:48 pm
ಗುತ್ತಿಗೆ ಮೀಸಲು ಹೆಚ್ಚಳ ಬೆನ್ನಲ್ಲೇ ಅಲ್ಪಸಂಖ್ಯಾತರಿ...
20-06-25 10:36 am
ಕಮಲ್ ನಟನೆಯ 'ಥಗ್ ಲೈಫ್' ಸಿನಿಮಾ ಪ್ರಸಾರಕ್ಕೆ ಸುಪ್ರ...
17-06-25 05:35 pm
24-06-25 01:02 am
HK News Desk
NEET ಪರೀಕ್ಷೆಯಲ್ಲಿ ಮಗಳಿಗೆ ಕಡಿಮೆ ಅಂಕ ; ಕೂಲಿನಿಂದ...
23-06-25 08:54 pm
Rapper Tommy Genesis, Controversy: ಹಿಂದು ದೇವತ...
23-06-25 04:37 pm
VP Jagdeep Dhankhar; ಜೂನ್ 25 ಸಂವಿಧಾನ ಹತ್ಯೆಗೈದ...
22-06-25 07:48 pm
Yoga Haram Muslims; ಯೋಗವನ್ನು ಒಪ್ಪುತ್ತೇವೆ, ಸೂರ...
22-06-25 04:57 pm
23-06-25 11:01 pm
Mangalore Correspondent
Udupi BJP, Kishore Kumar: ಉಡುಪಿ ಬಿಜೆಪಿಯಲ್ಲಿ ಬ...
23-06-25 10:28 pm
Journalist Vijay Kotian, Brand Mangalore Awar...
23-06-25 09:48 pm
Mangalore, Lokayukta Raid, MCC: ಮಂಗಳೂರು ಪಾಲಿಕ...
23-06-25 06:56 pm
Sudheer Kumar Reddy, Mangalore; ಸಾಕ್ಷ್ಯಗಳಿದ್ದ...
23-06-25 06:07 pm
23-06-25 08:51 pm
HK News Desk
Manipal, Udupi Murder: ಮಣಿಪಾಲ ; ಹೆತ್ತ ತಾಯಿಯನ್...
23-06-25 11:47 am
Sandhya Pavithra Nagaraj Fraud; ಸೌಜನ್ಯಾ ಹೆಸರಿ...
21-06-25 08:58 pm
Crime Mangalore, Bantwal Attack, Fake News; ಬ...
21-06-25 12:21 pm
Brahmavar, Udupi Murder, Crime: ಪತ್ನಿಗೆ ಮೊಬೈಲ...
20-06-25 02:04 pm