ಕುಂದಾಪುರ ; ಚುಡಾಯಿಸಲು ಬಂದ ಮುಸ್ಲಿಂ ಯುವಕನಿಗೆ ಚಪ್ಪಲಿ ಏಟು ಕೊಟ್ಟ ವಿದ್ಯಾರ್ಥಿನಿ ! 

09-06-23 10:37 pm       Udupi Correspondent   ಕರಾವಳಿ

ಕಾಲೇಜು ವಿದ್ಯಾರ್ಥಿನಿಯನ್ನು ಚುಡಾಯಿಸಿದವನಿಗೆ ವಿದ್ಯಾರ್ಥಿನಿಯೇ ಚಪ್ಪಲಿಯಲ್ಲಿ ಹೊಡೆದು ಮುಯ್ಯಿ ತೀರಿಸಿದ ಘಟನೆ ಕುಂದಾಪುರದ ವಕ್ವಾಡಿಯಲ್ಲಿ ನಡೆದಿದೆ. 

ಕುಂದಾಪುರ, ಜೂನ್ 9: ಕಾಲೇಜು ವಿದ್ಯಾರ್ಥಿನಿಯನ್ನು ಚುಡಾಯಿಸಿದವನಿಗೆ ವಿದ್ಯಾರ್ಥಿನಿಯೇ ಚಪ್ಪಲಿಯಲ್ಲಿ ಹೊಡೆದು ಮುಯ್ಯಿ ತೀರಿಸಿದ ಘಟನೆ ಕುಂದಾಪುರದ ವಕ್ವಾಡಿಯಲ್ಲಿ ನಡೆದಿದೆ. 

ವಕ್ವಾಡಿ - ಬೀಜಾಡಿ ರಸ್ತೆಯಲ್ಲಿ ವಿದ್ಯಾರ್ಥಿನಿ ಶುಕ್ರವಾರ ಬೆಳಗ್ಗೆ ಕಾಲೇಜಿಗೆಂದು ನಡೆದು ಹೋಗುತ್ತಿದ್ದಾಗ ನಜೀರ್ (35) ಎಂಬಾತ ಹಿಂದಿನಿಂದ ಬಂದು ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ಹೆದರಿದ ವಿದ್ಯಾರ್ಥಿನಿ ಕಿರುಚಿಕೊಂಡಿದ್ದು ಅಷ್ಟರಲ್ಲಿ ಸ್ಥಳೀಯರು ಸೇರಿದ್ದಾರೆ. 

ಯುವತಿ ನೆರವಿಗೆ ಧಾವಿಸಿದ ಸ್ಥಳೀಯರು ನಜೀರ್​​ನನ್ನು ಹಿಡಿದು ವಿಚಾರಣೆ ನಡೆಸಿದ್ದಾರೆ. ನಂತರ ಸೇರಿದ ಯುವಕರು ವಿದ್ಯಾರ್ಥಿನಿ ಕೈಯಲ್ಲೇ ನಜೀರ್​ಗೆ ಚಪ್ಪಲಿಯಿಂದ ಹೊಡೆಸಿದ್ದಾರೆ. ಬಳಿಕ ಸ್ಥಳೀಯರು ನಜೀರ್​​ನನ್ನು ಕುಂದಾಪುರ ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿ ನಜೀರ್ ಬಾರ್ಕೂರು ನಿವಾಸಿಯಾಗಿದ್ದು ಶಾಮಿಯಾನ ವೃತ್ತಿ ಮಾಡುತ್ತಿದ್ದ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

A girl student bravely retaliated against a man who had been harassing her by hitting him with her footwear on Wakwadi road. The retaliation took place with the assistance of local residents who intervened upon witnessing the man's indecent behavior.