ಬಡವರ ಬ್ರಾಂಡಿನ ಮದ್ಯದ ಸುಂಕ ಹೆಚ್ಚಳ ಮಾಡದಂತೆ ಮುಖ್ಯಮಂತ್ರಿಗೆ ಕುಡುಕರ ಸಂಘದ ಮನವಿ ! 

09-06-23 11:42 am       Mangalore Correspondent   ಕರಾವಳಿ

ಮದ್ಯದ ಮೇಲಿನ ಸುಂಕ ಹೆಚ್ಚಿಸುವ ಕುರಿತ ರಾಜ್ಯ ಸರ್ಕಾರದ ಪ್ರಸ್ತಾಪಕ್ಕೆ ರಾಜ್ಯ ಮದ್ಯ ಪ್ರೇಮಿಗಳು ಯಾನೆ ಕುಡುಕರ ಸಂಘ ಆಕ್ಷೇಪ ವ್ಯಕ್ತಪಡಿಸಿದೆ. ಬಡವರ ಬ್ರಾಂಡಿನ ಮದ್ಯಕ್ಕೆ ಸುಂಕ ಹೆಚ್ಚಿಸದಂತೆ ಮದ್ಯ ಪ್ರೇಮಿಗಳ ಸಂಘದಿಂದ ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ. 

ಮಂಗಳೂರು, ಜೂನ್ 9: ಮದ್ಯದ ಮೇಲಿನ ಸುಂಕ ಹೆಚ್ಚಿಸುವ ಕುರಿತ ರಾಜ್ಯ ಸರ್ಕಾರದ ಪ್ರಸ್ತಾಪಕ್ಕೆ ರಾಜ್ಯ ಮದ್ಯ ಪ್ರೇಮಿಗಳು ಯಾನೆ ಕುಡುಕರ ಸಂಘ ಆಕ್ಷೇಪ ವ್ಯಕ್ತಪಡಿಸಿದೆ. ಬಡವರ ಬ್ರಾಂಡಿನ ಮದ್ಯಕ್ಕೆ ಸುಂಕ ಹೆಚ್ಚಿಸದಂತೆ ಮದ್ಯ ಪ್ರೇಮಿಗಳ ಸಂಘದಿಂದ ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ. 

ಬಿಪಿಎಲ್ ಕಾರ್ಡ್ ಹೊಂದಿರುವ ಸಾಮಾನ್ಯ ಬಡವರು, ಕೂಲಿ ಕಾರ್ಮಿಕರಿಗೆ ದಿನವೂ ಮದ್ಯಕ್ಕಾಗಿ 200 - 250 ರೂ. ಬೇಕಾಗುತ್ತದೆ.‌ ತಿಂಗಳಿಗೆ 7500 ರೂ. ಖರ್ಚಾದರೆ, ವಾರ್ಷಿಕ 90 ಸಾವಿರ ರು. ಮದ್ಯಕ್ಕಾಗಿ ಸಾಮಾನ್ಯ ಬಡವ ಖರ್ಚು ಮಾಡುತ್ತಾನೆ.‌ ಹೀಗಾಗಿ ಬಡವರ ಬ್ರಾಂಡ್, ಬಿಯರ್ ಸುಂಕ ಹೆಚ್ಚಿಸಿದರೆ ಆರ್ಥಿಕ ಹೊರೆಯಾಗುತ್ತದೆ ಎಂದು ಮನವಿ ಪತ್ರದಲ್ಲಿ ಹೇಳಲಾಗಿದೆ. 

ಬಡವರ ಹಿತಕ್ಕಾಗಿ ದೇಸೀ ಮದ್ಯ ಮತ್ತು ಬಿಯರ್ ಸುಂಕ ಕಡಿಮೆ ಮಾಡಬೇಕೆಂದು ಕುಡುಕರ ಸಂಘದ ವತಿಯಿಂದ ಅಬಕಾರಿ ಸಚಿವರು, ಮುಖ್ಯಮಂತ್ರಿ ಸೇರಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಮನವಿ ಪತ್ರವನ್ನು ಇ-ಮೈಲ್ ಮೂಲಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಬಕಾರಿ ಸಚಿವರಿಗೆ ಕಳಿಸಿಕೊಡಲಾಗಿದೆ.

The State Liquor Lovers Association has objected to the state governments proposal to increase the duty on liquor. The liquor lovers' association has appealed to the chief minister not to increase the duty on the brand of liquor of the poor.