ರಜೆಯಲ್ಲಿ ತೆರಳಿದ ಎಸ್ಪಿ ವಿಕ್ರಮ್ ಅಮ್ಟೆ ; ದಕ್ಷಿಣ ಕನ್ನಡ ಎಸ್ಪಿಯಾಗಿ ಸಿಬಿ ರಿಷ್ಯಂತ್ ಪ್ರಭಾರ ಹೊಣೆ 

31-05-23 12:12 pm       Mangalore Correspondent   ಕರಾವಳಿ

ದಕ್ಷಿಣ ಕನ್ನಡ ಎಸ್ಪಿ ವಿಕ್ರಮ್ ಅಮಟೆ ಅವರಿಗೆ ಅನಾರೋಗ್ಯ ನಿಮಿತ್ತ ರಜೆ ಪಡೆದಿರುವುದರಿಂದ ಆ ಜಾಗಕ್ಕೆ ಐಪಿಎಸ್ ಅಧಿಕಾರಿ ಸಿ.ಬಿ ರಿಷ್ಯಂತ್ ಅವರನ್ನು ಪ್ರಭಾರ ಎಸ್ಪಿಯಾಗಿ ಜವಾಬ್ದಾರಿ ನೀಡಲಾಗಿದೆ.

ಮಂಗಳೂರು, ಮೇ 31: ದಕ್ಷಿಣ ಕನ್ನಡ ಎಸ್ಪಿ ವಿಕ್ರಮ್ ಅಮಟೆ ಅವರಿಗೆ ಅನಾರೋಗ್ಯ ನಿಮಿತ್ತ ರಜೆ ಪಡೆದಿರುವುದರಿಂದ ಆ ಜಾಗಕ್ಕೆ ಐಪಿಎಸ್ ಅಧಿಕಾರಿ ಸಿ.ಬಿ ರಿಷ್ಯಂತ್ ಅವರನ್ನು ಪ್ರಭಾರ ಎಸ್ಪಿಯಾಗಿ ಜವಾಬ್ದಾರಿ ನೀಡಲಾಗಿದೆ. 

ದಾವಣಗೆರೆ ಜಿಲ್ಲೆ ಎಸ್ಪಿ ಆಗಿದ್ದ ಸಿಬಿ ರಿಷ್ಯಂತ್ ಅವರನ್ನು ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರಿನ ಡಿ.ಜಿ ಕಚೇರಿಯಲ್ಲಿ ನೇಮಿಸಲಾಗಿತ್ತು. ಈಗ ದ.ಕ. ಎಸ್ಪಿ ರಜೆಯಲ್ಲಿ ಹೋಗಿದ್ದರಿಂದ, ರಿಷ್ಯಂತ್ ಅವರಿಗೆ ಪ್ರಭಾರ ಹೊಣೆ ವಹಿಸಲಾಗಿದೆ. ‌ 

ಸಿ.ಬಿ ರಿಷ್ಯಂತ್ 2013ರ ಬ್ಯಾಚ್ ಕರ್ನಾಟಕ ಕೇಡರ್ ಐ ಪಿ ಎಸ್ ಅಧಿಕಾರಿ. ಮೂಲತಃ ಬೆಂಗಳೂರು ನಿವಾಸಿಯಾಗಿದ್ದು ಪುತ್ತೂರಿನಲ್ಲಿ ಈ ಹಿಂದೆ ಎಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಬಾಗಲಕೋಟೆ ಜಿಲ್ಲೆಯಲ್ಲಿ ಎಸ್ಪಿಯಾಗಿ, ದಾವಣಗೆರೆ, ಮೈಸೂರಿನಲ್ಲಿ ಎಸ್ಪಿಯಾಗಿ ಕರ್ತವ್ಯ ಮಾಡಿದ್ದಾರೆ. ಇದೀಗ ದ.ಕ. ಜಿಲ್ಲಾ ಪ್ರಭಾರ ಎಸ್.ಪಿ.ಯಾಗಿ ಸರಕಾರ ಅದೇಶ ಹೊರಡಿಸಿದೆ.

C B Ryshyanth has been appointed as the in-charge superintendent of police (SP) of Dakshina Kannada replacing Dr Vikram Amate. Ryshyanth was serving as the SP was Davanagere. He was transferred to Bengaluru ahead of the state Assembly elections. Due to health issues, Dr Vikram Amate is on leave and hence an order was issued to Ryshyanth to take charge as in-charge SP of the district.