ಬ್ರೇಕಿಂಗ್ ನ್ಯೂಸ್
12-05-23 05:42 pm Mangalore Correspondent ಕರಾವಳಿ
ಪುತ್ತೂರು, ಮೇ 12: ಪುತ್ತೂರಿನಲ್ಲಿ ಈ ಬಾರಿ ಬಿಜೆಪಿ ಬಂಡಾಯ ಎದುರಿಸುತ್ತಿರುವುದರಿಂದ ಗೆಲ್ಲೋದು ಯಾರು ಅನ್ನುವ ಕುತೂಹಲ ಉಂಟಾಗಿದೆ. ಮತದಾನದ ಬಳಿಕ ಪಕ್ಷೇತರ ಅಭ್ಯರ್ಥಿ ಅರುಣ್ ಪುತ್ತಿಲರೇ ಗೆಲ್ಲುತ್ತಾರೆ ಎನ್ನುವುದು ಕೆಲವು ಸಮೀಕ್ಷೆಗಳಲ್ಲಿ ಬಂದಿದ್ದು, ಜನರ ಆಸಕ್ತಿ ಕೆರಳಿಸಿದೆ. ಈ ನಡುವೆ, ಪುತ್ತೂರಿನಲ್ಲಿ ಬೆಟ್ಟಿಂಗ್ ಕೂಡ ಜೋರಾಗಿದ್ದು, ಅರುಣ್ ಪುತ್ತಿಲ ಪರವೇ ಬೆಟ್ಟಿಂಗ್ ಹೆಚ್ಚು ಕಟ್ಟುತ್ತಿದ್ದಾರೆ.
ಕ್ಷೇತ್ರದಾದ್ಯಂತ ಅರುಣ್ ಪುತ್ತಿಲ ಪರ ಭಾರೀ ಜನಬೆಂಬಲ ವ್ಯಕ್ತವಾಗಿರುವುದರಿಂದ ಜನರ ಮಾತಿನಲ್ಲಿ ಪುತ್ತಿಲರೇ ಗೆಲ್ಲುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಆದರೆ ಬಿಜೆಪಿ ಕಡೆಯ ಲೆಕ್ಕಾಚಾರದ ಪ್ರಕಾರ, ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ ಎನ್ನುತ್ತಾರೆ. ಯಾಕಂದ್ರೆ, ಪುತ್ತಿಲರಿಗೆ ಮತ ಹಂಚಿಕೆಯಾಗುವುದು ಬಿಜೆಪಿಯಿಂದಲೇ. ಹಾಗಾಗಿ ಬಿಜೆಪಿ ಅಭ್ಯರ್ಥಿ ಮತ್ತು ಪಕ್ಷೇತರ ಅಭ್ಯರ್ಥಿಗೆ ಮತ ವಿಭಜನೆಯಾದಲ್ಲಿ ಅದರಿಂದ ಕಾಂಗ್ರೆಸ್ ಅಭ್ಯರ್ಥಿಗೆ ಲಾಭ ಆಗುವುದಲ್ಲವೇ ಎಂದು ಕೇಳುತ್ತಿದ್ದಾರೆ. ಆದರೆ ಕ್ಷೇತ್ರದ ಜನರ ನಾಡಿ ಮಿಡಿತ ಮತ ಎಣಿಕೆಯಂದೇ ಗೊತ್ತಾಗಲಿದೆ.

ಹಾಗೆ ನೋಡಿದರೆ, 2019ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಪುತ್ತೂರಿನಲ್ಲಿ 1 ಲಕ್ಷಕ್ಕೂ ಹೆಚ್ಚು ಮತಗಳು ಬಿಜೆಪಿ ಪರ ಬಿದ್ದಿದ್ದವು. ಮೋದಿ ಪರವಾಗಿ ಬಿದ್ದಿರುವ ಮತಗಳು 2018ರ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿಗೆ ಬಿದ್ದಿರಲಿಲ್ಲ. ಈಗ ಪುತ್ತಿಲ ಕಡೆಯವರ ಪ್ರಕಾರ, ಬೂತ್ ಮಟ್ಟದ ಲೆಕ್ಕಾಚಾರದಲ್ಲಿ 70 ಸಾವಿರಕ್ಕಿಂತ ಹೆಚ್ಚು ಮತಗಳು ಬೀಳೋದು ಖಚಿತ ಎನ್ನುತ್ತಾರೆ. ಅದಕ್ಕಿಂತ ಹೆಚ್ಚು ಮತ ಬೀಳುವ ಸಾಧ್ಯತೆಯೂ ಇದೆ. ಪುತ್ತಿಲ ಪರ ಎದ್ದಿರುವ ಹವಾ ಕಾರಣದಿಂದಾಗಿ ಮೊನ್ನೆ ಚುನಾವಣೆ ದಿನ ಹೆಚ್ಚಿನ ಕಡೆಗಳಲ್ಲಿ ಬಿಜೆಪಿ ಬೂತ್ ಗಳಲ್ಲಿ ಜನ ಇಲ್ಲದಂತಾಗಿತ್ತು. ಕೆಲವು ಕಡೆ ಬಿಜೆಪಿ ಬೂತ್ ನಲ್ಲಿ ಕುಳಿತಿದ್ದವರು ಕೂಡ ಪುತ್ತಿಲರಿಗೇ ಓಟ್ ಹಾಕಿದವರಿದ್ದಾರಂತೆ. ಇದೆಲ್ಲ ಸತ್ಯವಾದರೆ, ಪುತ್ತೂರಿನಲ್ಲಿ ಪುತ್ತಿಲರದ್ದೇ ಗೆಲುವು ಅನ್ನುವುದಕ್ಕೆ ಸಂಶಯ ಇಲ್ಲ.
2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸಿಗೆ ಕ್ಷೇತ್ರದಲ್ಲಿ ಬಿದ್ದಿರುವುದು 58 ಸಾವಿರ ಮತಗಳು. ಇವು ಕಟ್ಟರ್ ಕಾಂಗ್ರೆಸ್ ಮತಗಳಾಗಿದ್ದು ಇದನ್ನು ಹೊರತುಪಡಿಸಿ ಅಭ್ಯರ್ಥಿ ವೈಯಕ್ತಿಕ ವರ್ಚಸ್ಸಿನಿಂದ ಎಷ್ಟು ಮತ ಪಡೆಯುತ್ತಾರೋ, ಅದು ಕಾಂಗ್ರೆಸ್ ಗೆಲುವನ್ನು ನಿರ್ಧರಿಸುತ್ತದೆ. ಅಶೋಕ್ ರೈ ಬಗ್ಗೆ ಪಕ್ಷದ ಒಳಗಡೆಯೇ ಅಸಮಾಧಾನ ಇರುವುದು, ಚುನಾವಣೆ ವೇಳೆ ಅಶೋಕ್ ರೈ ಗನ್ ಹಿಡಿದ ವಿಡಿಯೋ ವೈರಲ್ ಆಗಿರುವುದು ಹಿನ್ನಡೆಯಾಗಿತ್ತು. ಇದರಿಂದಾಗಿ ಕಾಂಗ್ರೆಸ್ ಅಭ್ಯರ್ಥಿ ಮತಗಳನ್ನು ಕಳಕೊಂಡರೆ, ಅವು ಪುತ್ತಿಲ ಪರವಾಗಿ ಬೀಳುವ ಸಾಧ್ಯತೆ ಇರುತ್ತದೆ.
Mangalore Bookies say gamblers betting huge on Arun Puthila win in Puttur.
30-12-25 11:12 pm
HK News Desk
ಬಯೋಕಾನ್ ಕಂಪನಿ ಟೆಕ್ಕಿ ಆಫೀಸ್ ಕಟ್ಟಡದ ಆರನೇ ಮಹಡಿಯಿ...
30-12-25 10:14 pm
ವ್ಯವಸ್ಥಾಪನಾ ಸಮಿತಿ ಸದಸ್ಯರನ್ನು ವಜಾಗೊಳಿಸುವ ಅಧಿಕಾ...
30-12-25 06:34 pm
ಪ್ರಿಯಾಂಕ ಗಾಂಧಿ ಪುತ್ರ ರೈಹಾನ್ ಮದುವೆ ನಿಶ್ಚಿತಾರ್ಥ...
30-12-25 05:44 pm
ಕೇರಳದಲ್ಲಿ ಚುನಾವಣೆಯಾದ್ರೆ ಪಿಣರಾಯಿಗೆ ಕರ್ನಾಟಕದಲ್ಲ...
30-12-25 05:10 pm
30-12-25 06:48 pm
HK News Desk
ಹಿಂದುಗಳ ಮನೆ ಸುಡುತ್ತಿದ್ದರೆ ಮಹಮ್ಮದ್ ಯೂನಸ್ ಕೊಳಲು...
30-12-25 03:32 pm
ರಸ್ತೆ ಬದಿ ನಮಾಜ್ ಮಾಡುತ್ತಿದ್ದ ಪ್ಯಾಲೆಸ್ತೀನ್ ವ್...
27-12-25 04:29 pm
ನಮ್ಮನ್ನಿಲ್ಲಿ ಬದುಕಲು ಬಿಡುತ್ತಿಲ್ಲ, ಗಡಿಯನ್ನು ತೆರ...
27-12-25 01:46 pm
ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಮೇಯರ್...
26-12-25 09:41 pm
30-12-25 10:43 pm
Mangalore Correspondent
ಯುವತಿಗೆ ಮಗು ಕರುಣಿಸಿದ ಪ್ರಕರಣ ; ಬಿಜೆಪಿಯಿಂದ ಜಗನ್...
29-12-25 11:03 pm
Punjalkatte Crash: ಪುಂಜಾಲಕಟ್ಟೆ ; ಪೊಲೀಸ್ ಸಿಬಂದ...
29-12-25 08:47 pm
ಹಿಂದುತ್ವದ ನೆಲೆ ಅನ್ನೋರಿಗೆ ನಾಚಿಕೆಯಾಗಬೇಕು, ವಿಶ್ವ...
29-12-25 07:37 pm
ಉಡುಪಿ ; ಬುದ್ದಿ ಮಾತು ಹೇಳಿದ್ದಕ್ಕೆ 17 ವರ್ಷದ ಯುವತ...
29-12-25 01:24 pm
30-12-25 10:40 pm
Mangalore Correspondent
ಬ್ರಹ್ಮರಕೂಟ್ಲು ಟೋಲ್ ಗೇಟ್ ಸಿಬ್ಬಂದಿಗಳಿಗೆ ಹಲ್ಲೆ ;...
30-12-25 12:42 pm
ಯೆಯ್ಯಾಡಿ ಬಳಿ ನಡೆದು ಹೋಗುತ್ತಿದ್ದ ಮಹಿಳೆಯ ಕರಿಮಣಿ...
29-12-25 03:02 pm
ಬೆಂಗಳೂರಿನಲ್ಲಿ ಮೂರು ಡ್ರಗ್ಸ್ ಫ್ಯಾಕ್ಟರಿ ಮೇಲೆ ಮ...
29-12-25 02:07 pm
ಮೈಸೂರಿನಲ್ಲಿ ಹಾಡಹಗಲೇ ಜುವೆಲ್ಲರಿ ಅಂಗಡಿಗೆ ನುಗ್ಗಿ...
28-12-25 05:19 pm