ಬಿಜೆಪಿ ರಾಜ್ಯಾಧ್ಯಕ್ಷರ ಕಾರನ್ನು ಕಾರ್ಯಕರ್ತರೇ ಅಲ್ಲಾಡಿಸಿದ್ದು ; ಬಜರಂಗದಳ ಪ್ರಶ್ನೆಯೆತ್ತಿದ ಡಿಕೆಶಿ ಹೆಲಿಕಾಪ್ಟರ್ ನಲುಗಿಸಿದ್ದು ಯಾರು ? 

04-05-23 10:07 pm       Mangalore Correspondent   ಕರಾವಳಿ

ಹನುಮಂತ ಯಾವ ರೀತಿ ಲಂಕೆಯನ್ನು ನಿರ್ನಾಮ ಮಾಡಿದನೋ, ಅದೇ ರೀತಿ ಕಾಂಗ್ರೆಸ್ ನಿರ್ನಾಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಜನರು ಬ್ಯಾನ್ ಮಾಡ್ತಾರೆ ಎಂದು ಮಂಗಳೂರು ಶಾಸಕ ವೇದವ್ಯಾಸ ಕಾಮತ್ ಹೇಳಿದ್ದಾರೆ. 

ಮಂಗಳೂರು, ಮೇ 4 : ಹನುಮಂತ ಯಾವ ರೀತಿ ಲಂಕೆಯನ್ನು ನಿರ್ನಾಮ ಮಾಡಿದನೋ, ಅದೇ ರೀತಿ ಕಾಂಗ್ರೆಸ್ ನಿರ್ನಾಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಜನರು ಬ್ಯಾನ್ ಮಾಡ್ತಾರೆ ಎಂದು ಮಂಗಳೂರು ಶಾಸಕ ವೇದವ್ಯಾಸ ಕಾಮತ್ ಹೇಳಿದ್ದಾರೆ. 

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಪ್ರಸ್ತಾಪವನ್ನು ಖಂಡಿಸಿ ಮಂಗಳೂರಿನ ಹಳೆಕೋಟೆ ಮುಖ್ಯಪ್ರಾಣ ದೇವಾಲಯದಲ್ಲಿ ಬಜರಂಗದಳ ಕಾರ್ಯಕರ್ತರು ವಿಶೇಷ ಪೂಜೆ ಕೈಗೊಂಡು ಹನುಮಾನ್ ಚಾಲೀಸ ಪಠಣ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಾಸಕ ಕಾಮತ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. 

ಕುಕ್ಕರ್ ಬಾಂಬ್ ಬ್ಲಾಸ್ಟ್ ಆರೋಪಿ ಶಾರೀಕ್ ಬಗ್ಗೆ ಕಾಂಗ್ರೆಸ್ ಮುಖಂಡರಿಗೆ ಅನುಕಂಪ ಬರುತ್ತದೆ. 500 ಜನರನ್ನು ಕೊಲ್ಲಲು ಬಂದ ಬಾಂಬರ್ ಕಾಂಗ್ರೆಸ್‌ ನವರಿಗೆ ಅಮಾಯಕ ಆಗ್ತಾನೆ. ಆದರೆ ಆರೆಸ್ಸೆಸ್ ಅಧೀನದಲ್ಲಿ ದೇಶಭಕ್ತ ಸಂಘಟನೆಯಾಗಿರುವ ಬಜರಂಗದಳವನ್ನು ನಿಷೇಧಿಸುವ ಪ್ರಸ್ತಾಪವನ್ನು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಮಾಡಿದೆ. ದೇಶದ ಹಲವು ರಾಜ್ಯಗಳಲ್ಲಿ ಈಗಾಗಲೇ ಜನರು ನಿಮ್ಮನ್ನು ಬ್ಯಾನ್ ಮಾಡಿದ್ದಾರೆ.‌ ಕರ್ನಾಟಕದಲ್ಲಿ ಕೂಡ ನೀವು ಬ್ಯಾನ್ ಆಗ್ತೀರಾ. ಬಜರಂಗದಳ ಪ್ರಸ್ತಾಪ ಮಾಡಿದ ಕೂಡಲೇ ಯಾವ ರೀತಿ ಹೆಲಿಕ್ಯಾಪ್ಟರ್ ಅಲ್ಲಾಡಿದೆ ಎಂಬುದು ನೋಡಿದ್ದೇವೆ. ಪ್ರವೀಣ್ ನೆಟ್ಟಾರ್ ಹತ್ಯೆಯಾದಾಗ ಬಿಜೆಪಿ ರಾಜ್ಯಾಧ್ಯಕ್ಷರ ಕಾರು ಅಲ್ಲಾಡಿತ್ತು. ರಾಜ್ಯಾಧ್ಯಕ್ಷರ ಕಾರನ್ನು ಕಾರ್ಯಕರ್ತರೇ ಅಲ್ಲಾಡಿಸಿದ್ದು. ಡಿಕೆ ಶಿವಕುಮಾರ್ ಅವರ ವಿಮಾನವನ್ನು ಅಲ್ಲಾಡಿಸಿದ್ದು ಯಾರು ಎಂಬುದನ್ನು ಡಿಕೆಶಿ ತಿಳಿದುಕೊಳ್ಳಬೇಕು ಎಂದು ವೇದವ್ಯಾಸ ಕಾಮತ್ ಟೀಕಿಸಿದ್ದಾರೆ. 

ಮಂಗಳೂರಿನ ಹತ್ತಕ್ಕೂ ಅಧಿಕ ಆಂಜನೇಯ ದೇವಸ್ಥಾನ ಸೇರಿದಂತೆ ಜಿಲ್ಲೆಯಾದ್ಯಂತ ಇರುವ ದೇವಸ್ಥಾನಗಳಲ್ಲಿ ಬಜರಂಗದಳ ಕಾರ್ಯಕರ್ತರು ಹನುಮಾನ್ ಚಾಲೀಸ ಪಠಣ ಮಾಡಿದ್ದಾರೆ.

Bagarang dal leaders recite Hanuman Chalisa in Mangalore amid row over Congress vow to ban Bajrang Dal, MLA Vedavyas says people will ban congress.