ಮನೆಯಿಂದಲೇ ಮತದಾನ ಮಾಡಿದ್ದ ಹಿರಿಯ ವ್ಯಕ್ತಿ ಫಲಿತಾಂಶ ಬರುವ ಮೊದಲೇ ಮೃತ್ಯು 

04-05-23 03:32 pm       Udupi Correspondent   ಕರಾವಳಿ

ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಮನೆಯಿಂದಲೇ ಮತದಾನ ಮಾಡಿದ್ದ ವ್ಯಕ್ತಿ ಫಲಿತಾಂಶ ಬರುವ ಮೊದಲೇ ಮೃತಪಟ್ಟಿರುವ ಘಟನೆ ತೆಕ್ಕಟ್ಟೆ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆದಿದೆ.

ಉಡುಪಿ, ಮೇ 4 : ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಮನೆಯಿಂದಲೇ ಮತದಾನ ಮಾಡಿದ್ದ ವ್ಯಕ್ತಿ ಫಲಿತಾಂಶ ಬರುವ ಮೊದಲೇ ಮೃತಪಟ್ಟಿರುವ ಘಟನೆ ತೆಕ್ಕಟ್ಟೆ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆದಿದೆ.

ನಿವೃತ್ತ ಶಿಕ್ಷಕ ಮಾಲಾಡಿ ಗುರುರಾಜ ಭಟ್‌ (94) ಎ.30 ರಂದು ಮನೆಯಿಂದಲೇ ತಮ್ಮ ಹಕ್ಕನ್ನು ಚಲಾಯಿಸಿದ್ದರು. ಈ ಬಾರಿ ಹಿರಿಯ ನಾಗರಿಕರಿಗೆ ಮನೆಯಿಂದಲೇ ಮತ ಚಲಾಯಿಸಲು ಅವಕಾಶ ನೀಡಲಾಗಿತ್ತು. ಮೇ 3 ರಂದು ಅಸೌಖ್ಯದಿಂದ ಗುರುರಾಜ ಭಟ್ ನಿಧನ ಹೊಂದಿದ್ದಾರೆ. 

ಇವರ ಮಕ್ಕಳು ಹೊರ ಜಿಲ್ಲೆಗಳಲ್ಲಿ ಉದ್ಯೋಗದಲ್ಲಿ ಇರುವುದರಿಂದ ಮತಗಟ್ಟೆಗೆ ಬರಲು ಕಷ್ಟವೆಂದು ಮನೆಯಿಂದಲೇ ಮತದಾನ ಮಾಡುವುದಾಗಿ ನೋಂದಣಿ ಮಾಡಿಕೊಂಡಿದ್ದರು. ಅದರಂತೆ ಮತಗಟ್ಟೆ ಅಧಿಕಾರಿಗಳು ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಿದ್ದರು. ತಮ್ಮ ಹಕ್ಕು ಚಲಾಯಿಸಿದ್ದ ಎರಡೇ ದಿನಕ್ಕೆ ಮಾಲಾಡಿ ಗುರುರಾಜ ಭಟ್ ಮೃತಪಟ್ಟಿದ್ದು ಕಾಕತಾಳೀಯ.

An elderly person, who cast his vote from home for the legislative assembly elections of the state, died on Wednesday May 3 even before the results were declared. The deceased is identified as Retired teacher Maladi Gururaja Bhat (94).