ಬ್ರೇಕಿಂಗ್ ನ್ಯೂಸ್
27-04-23 03:48 pm Mangalore Correspondent ಕರಾವಳಿ
ಪುತ್ತೂರು, ಎ.27: ಪುತ್ತೂರಿನಲ್ಲಿ ಪಕ್ಷೇತರ ಅಭ್ಯರ್ಥಿ ಅರುಣ್ ಪುತ್ತಿಲ ಪರವಾಗಿ ಭಾರೀ ಬೆಂಬಲ ವ್ಯಕ್ತವಾಗುತ್ತಿರುವ ನಡುವಲ್ಲೇ ಆರೆಸ್ಸೆಸ್ ಹಿರಿಯ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್, ಪುತ್ತಿಲ ವಿರುದ್ಧ ಹರಿಹಾಯ್ದಿದ್ದಾರೆ. ಅರುಣ್ ಪುತ್ತಿಲ ಯಾವ ರೀತಿಯ ಹಿಂದುತ್ವ ಹೋರಾಟ ಮಾಡಿದ್ದಾರೆ ಎಂದು ಕಲ್ಲಡ್ಕ ಭಟ್ ಪ್ರಶ್ನೆ ಮಾಡಿದ್ದಾರೆ.
ಇಡೀ ಜಗತ್ತೇ ಬಿಜೆಪಿಯನ್ನು ಹಿಂದುತ್ವದ ಪಾರ್ಟಿ ಎಂದು ಒಪ್ಪಿಕೊಂಡಿರುವಾಗ ಪುತ್ತೂರಿನಲ್ಲಿ ಯಾರೋ ಒಬ್ಬ ನನ್ನದೇ ನೈಜ ಹಿಂದುತ್ವ ಎಂದು ಹೇಳುತ್ತಿದ್ದಾನೆ. ಎಲ್ಲಿ ಹಿಂದುತ್ವದ ಹೋರಾಟ ಮಾಡಿದ್ದಾನೆ. ಯಾರೋ ಗೋಸಾಗಾಟ ಮಾಡಿದಾಗ ಜೊತೆಗೆ ನಿಂತಿದ್ದರೆ ಅದು ಹಿಂದುತ್ವವಾ.. ಅವನು ಹಿಂದುಗಳ ವಿರುದ್ಧವೇ ಹೋರಾಟ ಮಾಡಿರೋದು. ನೀವು ಬೇಕಿದ್ದರೆ ಅವನ ಅಫಿಡವಿಟನ್ನು ನೋಡಿ. ಅದರಲ್ಲೇ ಬರೆದುಕೊಂಡಿದ್ದಾನೆ. ಏನೆಲ್ಲ ಕೇಸುಗಳಿವೆ ಅಂತ. ಹಿಂದುಗಳಿಗೆ ಹೊಡೆದವರು, ದೇವಸ್ಥಾನದ ಹಣ ಹೊಡೆದವರು, ಯಾವುದೋ ರವೀಂದ್ರ ಪೂಜಾರಿ ಎಂಬವರ ಜಾಗ ಕೊಡಿಸಬೇಕೆಂದು ಗಲಾಟೆ ಮಾಡಿಸಿ 307 ಸೆಕ್ಷನ್ ಹಾಕಿಸಿಕೊಂಡವರು. ಇದೆಲ್ಲ ಎಂಥ ಹಿಂದುತ್ವರೀ.. ಪಾಪ, ಅನೇಕ ಮಕ್ಕಳಿಗೆ ಅದೆಲ್ಲ ಗೊತ್ತಿಲ್ಲ. ಭಾರತೀಯ ಜನತಾ ಪಾರ್ಟಿಗಿಂತ ದೊಡ್ಡ ಹಿಂದುತ್ವ ಸಂಘಟನೆ ಇಲ್ಲ. ಇಡೀ ಜಗತ್ತಿನಲ್ಲಿ ಎರಡನೇ ದೊಡ್ಡ ವ್ಯಕ್ತಿಯಾಗಿರುವ, ಕೇಂದ್ರ ಗೃಹ ಸಚಿವ ಅಮಿತ್ ಷಾ ತಾನೇ ಅವರಲ್ಲಿ ಮಾತಾಡುತ್ತೇನೆ ಎಂದಾಗ, ಅದನ್ನು ಧಿಕ್ಕರಿಸಿ ನಡೆದವರು ಅರುಣ್ ಪುತ್ತಿಲ.
ಒಂದು ಪಕ್ಷ ಇಲ್ಲದೆ, ಒಬ್ಬನಿಂದ ಯಾವ ರೀತಿಯ ಹಿಂದುತ್ವ ಆಗಬಹುದು. ಏನಾದರೂ ಅಭಿವೃದ್ಧಿ ಮಾಡಲು ಸಾಧ್ಯವೇ.. ಸ್ವತಂತ್ರವಾಗಿ ನಿಂತವರು ಅಭಿವೃದ್ಧಿ ಮಾಡೋಕೆ ಸಾಧ್ಯನಾ.. ಅವನಿಗೆ ಹೇಳೋರಿಲ್ಲ, ಕೇಳೋರಿಲ್ಲ. ಸ್ವತಂತ್ರ ಅಂದರೆ ಹಾಗೇ ತಾನೇ.. ಬಿಜೆಪಿ ಅನ್ನೋದು ಅಖಿಲ ಭಾರತ ಸಂಘಟನೆ. ಪುತ್ತೂರಿಗೆ ಮಾತ್ರ ಸೀಮಿತ ಅಲ್ಲ. ಹಾಗಾಗಿ ಬಿಜೆಪಿಯನ್ನು ಎಲ್ಲರೂ ಬೆಂಬಲಿಸಬೇಕು, ಆಮೂಲಕ ಹಿಂದುತ್ವ, ದೇಶ ಉಳಿಸಬೇಕು. ಜನ ಹಾಗೇ ಮಾಡ್ತಾರೆ ಅಂದ್ಕೊಂಡಿದ್ದೇನೆ ಎಂದು ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು. ಸುಳ್ಯದಲ್ಲಿ ಪ್ರವೀಣ್ ನೆಟ್ಟಾರು ಗೃಹ ಪ್ರವೇಶಕ್ಕೆ ಬಂದಿದ್ದ ಪ್ರಭಾಕರ ಭಟ್, ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ್ದಾರೆ.
Mangalore Kalladka Prabhakar Bhat slams Puttur Arun Puthila, questions him about Hindutva. Is stopping transport of cows is Hindutva he questioned. Entire word has accepted that BJP is a party for Hindus then how cab Arun say what he follows is only the real Hindutva he added.
04-07-25 10:44 pm
HK News Desk
Heart attack news, Karnataka: ರಾಜ್ಯದಲ್ಲಿ ಹೃದಯ...
04-07-25 10:18 pm
ಮದುವೆಯಾಗದೇ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ ನಟಿ...
04-07-25 06:52 pm
Corruption, SP Srinath Joshi, Lokayukta: ಹಣಕ್...
04-07-25 05:29 pm
ASP Bharamani, CM Siddaramaiah, Police: ಎಎಸ್...
03-07-25 05:24 pm
02-07-25 11:05 pm
HK News Desk
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
ಹೈದ್ರಾಬಾದಿನಲ್ಲಿ ಸಿಗಾಚಿ ಇಂಡಸ್ಟ್ರೀಸ್ ಫಾರ್ಮಾ ಫ್ಯ...
01-07-25 08:57 pm
ಸುಟ್ಟರೂ ಬುದ್ಧಿ ಕಲಿಯದ ಪಾಕಿಸ್ತಾನ ; ಆಪರೇಶನ್ ಸಿಂಧ...
29-06-25 11:13 am
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
05-07-25 05:16 pm
Mangalore Correspondent
Ivan Dsouza, Mangaluru: ಮಂಗಳೂರು ಬ್ರಾಂಡ್ ನೇಮ್,...
05-07-25 04:19 pm
MLA Vedavyas Kamath: ಸೌತ್ ಕೆನರಾ ಬ್ರಿಟಿಷರ ಹೆಸರ...
05-07-25 02:32 pm
Hindu Jagarana Vedike, Moodbidri, Obscene vid...
05-07-25 12:56 pm
Mangalore FIR, Dharmasthala, Criminal Activit...
04-07-25 10:54 pm
05-07-25 11:04 pm
HK News Desk
Puttur News, Girl Pregnant, Father Arrest: ಸಹ...
05-07-25 09:06 pm
Puttur, Pregnant, Arrest, Jagannivasa Rao: ಸಹ...
05-07-25 01:20 pm
Bangalore Murder, Crime, Wife: ಲಕ್ಷ ಲಕ್ಷ ಸಂಬಳ...
04-07-25 08:56 pm
Praveen Nettaru, NIA Arrest, Abdul Rahiman; ಪ...
04-07-25 06:21 pm