ಬ್ರೇಕಿಂಗ್ ನ್ಯೂಸ್
19-04-23 09:15 pm Udupi Correspondent ಕರಾವಳಿ
ಉಡುಪಿ, ಎ.19: ಕಾಂಗ್ರೆಸ್ ಮುಖಂಡ ಕಿಶನ್ ಹೆಗ್ಡೆ ಕೊಳ್ಕೆಬೈಲ್ ಬಗ್ಗೆ ಅವಹೇಳನಕಾರಿ ಸುದ್ದಿ ಪ್ರಸಾರ ಮಾಡಿದ್ದ ಪ್ರಕರಣದಲ್ಲಿ ಉಡುಪಿ ಜಿಲ್ಲಾ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ ನ್ಯಾಯಾಲಯ ಬಿಟಿವಿ ಸುದ್ದಿ ವಾಹಿನಿಯ ಎಂಡಿ ಕುಮಾರ್ ಅಲಿಯಾಸ್ ಮುನೀಂದ್ರ ಕುಮಾರ್, ನಿರೂಪಕ ಶೇಷಕೃಷ್ಣ ಹಾಗೂ ವರದಿಗಾರನಿಗೆ ಎರಡು ವರ್ಷಗಳ ಶಿಕ್ಷೆ ವಿಧಿಸಿದೆ.
ತನ್ನ ವಿರುದ್ಧ ಅವಹೇಳನಕಾರಿ ಸುದ್ದಿ ಪ್ರಸಾರ ಮಾಡಿದ್ದಕ್ಕಾಗಿ ಕಿಶನ್ ಹೆಗ್ಡೆ ಅವರು ಉಡುಪಿ ನ್ಯಾಯಾಲಯದಲ್ಲಿ ಬಿಟಿವಿ ವಾಹಿನಿಯ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. 2017ರಲ್ಲಿ ಹೂಡಿದ್ದ ಪ್ರಕರಣದ ಬಗ್ಗೆ ಆರು ವರ್ಷಗಳ ಕಾಲ ವಿಚಾರಣೆ ನಡೆಸಿದ ಕೋರ್ಟ್ ಇದೀಗ ಆರೋಪ ಸಾಬೀತಾಗಿರುವುದರಿಂದ ಎರಡು ವರ್ಷಗಳ ಸಾದಾ ಶಿಕ್ಷೆ ಮತ್ತು 20 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.
ಐಪಿಸಿ 500 ಮತ್ತು 501ರ ಸೆಕ್ಷನ್ 34 ಪ್ರಕಾರ, ವ್ಯಕ್ತಿಯ ತೇಜೋವಧೆ ದಂಡನೀಯ ಅಪರಾಧವಾಗಿದ್ದು, ಎರಡೂ ಪ್ರಕರಣಗಳಲ್ಲಿ ಆರೋಪಿಗಳಿಗೆ ತಲಾ ಎರಡು ವರ್ಷಗಳ ಶಿಕ್ಷೆಯನ್ನು ವಿಧಿಸಿದೆ. ಅಲ್ಲದೆ, ತಲಾ ಹತ್ತು ಸಾವಿರ ರೂಪಾಯಿ ದಂಡ ವಿಧಿಸಿದೆ. ದಂಡ ತೆರಲು ತಪ್ಪಿದಲ್ಲಿ ಹೆಚ್ಚುವರಿ ಆರು ತಿಂಗಳ ಶಿಕ್ಷೆ ಅನುಭವಿಸಬೇಕಿದೆ. ಮಂಗಳೂರಿನ ಸಹಕಾರಿ ಬ್ಯಾಂಕಿನ ಪ್ರಭಾವಿ ಅಧ್ಯಕ್ಷರೊಬ್ಬರಿಂದ ಹಣ ಪಡೆದು ಬಿಟಿವಿ ವಾಹಿನಿಯವರು ಕಿಶನ್ ಹೆಗ್ಡೆ ಬಗ್ಗೆ ಅವಹೇಳನಕಾರಿ ಸುದ್ದಿ ಪ್ರಸಾರ ಮಾಡಿದ್ದರು ಎಂಬ ಆರೋಪಗಳಿದ್ದವು. ಯಾವುದೇ ದಾಖಲೆ ಇಲ್ಲದೆ, ಮಾಧ್ಯಮದ ನೈತಿಕ ಧರ್ಮ ಉಲ್ಲಂಘಿಸಿ ಸುದ್ದಿ ಪ್ರಸಾರ ಮಾಡಿ ವ್ಯಕ್ತಿಯ ತೇಜೋವಧೆ ಮಾಡಿದ್ದನ್ನು ನ್ಯಾಯಾಲಯ ಎತ್ತಿ ಹಿಡಿದಿದ್ದು, ಆರೋಪಿಗಳಾದ ಬಿಟಿವಿ ವಾಹಿನಿಯ ಎಂಡಿ ಕುಮಾರ್ ಅಲಿಯಾಸ್ ಮುನೇಂದ್ರ ಕುಮಾರ್, ನಿರೂಪಕ ಶೇಷಕೃಷ್ಣ ಮತ್ತು ವರದಿಗಾರನನ್ನು ತಪ್ಪಿತಸ್ಥರೆಂದು ಘೋಷಿಸಿದೆ.
ಕೋರ್ಟ್ ತೀರ್ಪು ಘೋಷಣೆ ಸಂದರ್ಭದಲ್ಲಿ ಈ ಮೂವರು ಕೂಡ ಕೋರ್ಟಿಗೆ ಹಾಜರಾಗಿದ್ದರು. ಆರೋಪಿಗಳ ಪರ ವಕೀಲರಾಗಿದ್ದ ದಿನೇಶ್ ಹೆಗ್ಡೆ ಉಳೆಪಾಡಿ ಜೈಲು ಶಿಕ್ಷೆ ತಪ್ಪಿಸಲು ನ್ಯಾಯಾಲಯದಿಂದ ತಾತ್ಕಾಲಿಕ ಜಾಮೀನು ಪಡೆದಿದ್ದಾರೆ. ಒಂದು ತಿಂಗಳಲ್ಲಿ ಮೇಲಿನ ಕೋರ್ಟಿನಿಂದ ಶಿಕ್ಷೆಗೆ ತಡೆಯಾಜ್ಞೆ ತರದೇ ಇದ್ದಲ್ಲಿ ಈ ಮೂವರು ಕೂಡ ಜೈಲು ಪಾಲಾಗಲಿದ್ದಾರೆ. ಕಿಶನ್ ಹೆಗ್ಡೆ ಪರವಾಗಿ ಉಡುಪಿಯ ವಿಜಯ್ ಹೆಗ್ಡೆ ವಾದಿಸಿದ್ದರು. ಕಿಶನ್ ಹೆಗ್ಡೆ ಉಡುಪಿ ಪಿಎಲ್ ಡಿ ಬ್ಯಾಂಕಿನಲ್ಲಿ ಅವ್ಯವಹಾರ ನಡೆಸಿದ್ದಾಗಿ ಬಿಟಿವಿ ಸುದ್ದಿ ಪ್ರಸಾರ ಮಾಡಿತ್ತು.
Kishan Hedge Deformation news in BTV Kannada, MD Muneendra Kumar and two others get two years jail term. A criminal suit was carried aginst J M Kumar, Anchor Shreekrishna and reporter of BTV for alleged news against PLD Bank irregularities by Kishan Hedge Kolkebail in 2017.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm