ಸಮಾಜದಲ್ಲಿ ಸೌಹಾರ್ದ ಮೂಡಿಸುತ್ತೇನೆ, ಯುವಕರಿಗೆ ಉದ್ಯೋಗ ನನ್ನ ಆದ್ಯತೆ ; ಅದ್ದೂರಿ ಮೆರವಣಿಗೆಯಲ್ಲಿ ಮಿಥುನ್ ರೈ ನಾಮಪತ್ರ ಸಲ್ಲಿಕೆ 

17-04-23 09:34 pm       Mangalore Correspondent   ಕರಾವಳಿ

ಮೂಲ್ಕಿ– ಮೂಡುಬಿದಿರೆ  ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಕಾರ್ಯಕರ್ತರ ಅದ್ದೂರಿ ಮೆರವಣಿಗೆಯಲ್ಲಿ ಬಂದು ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. 

ಮೂಡುಬಿದ್ರೆ, ಎ.17: ಮೂಲ್ಕಿ– ಮೂಡುಬಿದಿರೆ  ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಕಾರ್ಯಕರ್ತರ ಅದ್ದೂರಿ ಮೆರವಣಿಗೆಯಲ್ಲಿ ಬಂದು ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. 

ಪಕ್ಷದ ಕಾರ್ಯಕರ್ತರ ಜೊತೆಗೆ ಬೃಹತ್ ಮೆರವಣಿಗೆಯಲ್ಲಿ ಆಗಮಿಸಿದ‌ ಮಿಥುನ್ ರೈ ಮೂಡುಬಿದ್ರೆ ತಾಲೂಕು ಆಡಳಿತಸೌಧಕ್ಕೆ ಬಂದು ನಾಮಪತ್ರ ಸಲ್ಲಿಸಿದರು. ಬೆಳಗ್ಗೆ ಮೂಡಬಿದ್ರೆ ಸ್ವರಾಜ್ಯ ಮೈದಾನದಲ್ಲಿರುವ ಮಹಮ್ಮಾಯಿ ದೇವರ ದರ್ಶನ ಪಡೆದ ಮಿಥುನ್ ರೈ, ತಾಸೆ, ಹುಲಿವೇಷಗಳ ಕುಣಿತ, ಚೆಂಡೆ, ವಾದ್ಯ ಘೋಷಗಳೊಂದಿಗೆ ಮೆರವಣಿಗೆಯಲ್ಲಿ ತೆರದ ಜೀಪ್ ನಲ್ಲಿ ಸಾಗಿ ಬಂದಿದ್ದು ದಾರಿಯುದ್ದಕ್ಕೂ ಹೂವಿನ ಹಾರ, ಹೂಮಳೆಗರೆದು ಮಿಥುನ್ ರೈಯನ್ನು ಸ್ವಾಗತಿಸಿದರು. 

ಈ ವೇಳೆ ಮಾತನಾಡಿದ ಮಿಥುನ್ ರೈ, ದ.ಕ‌. ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋಮು ಸಂಘರ್ಷಕ್ಕೆ ನಿರುದ್ಯೋಗ ಸಮಸ್ಯೆಯೇ ಕಾರಣ. ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರು ನನ್ನನ್ನು ಶಾಸಕನಾಗಿ ಚುನಾಯಿಸಿದಲ್ಲಿ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿ ಹಾಗೂ ಸರಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಿ ಖಾಸಗಿ ಆಸ್ಪತ್ರೆಗೆ ಸಮಾನವಾದ ಚಿಕಿತ್ಸಾ ಸೌಲಭ್ಯ ಒದಗಿಸುವ ಸಂಕಲ್ಪ ತೊಟ್ಟಿದ್ದೇನೆ. ಜೊತೆಗೆ ಸಮಾಜದಲ್ಲಿ ದ್ವೇಷ ದೂರಮಾಡಿ ಸೌಹಾರ್ದ ವಾತಾವರಣ ಮೂಡಿಸುತ್ತೇನೆ ಎಂದು‌ ಹೇಳಿದರು.

Mangalore, Moodbidri Congress candidate Mithun Rai files nomination, huge procession held