ಬ್ರೇಕಿಂಗ್ ನ್ಯೂಸ್
27-01-23 09:53 pm Mangalore Correspondent ಕರಾವಳಿ
ಬಂಟ್ವಾಳ, ಜ.27 : ಕರೆಂಟ್ ಕೇಳಿದ್ದಕ್ಕೆ ಜೈಲಿಗೆ ಹಾಕಿದವರು ಈಗ ಕರೆಂಟ್ ಫ್ರೀ ಕೊಡ್ತಾರಂತೆ ಎಂದು ಬಿಜೆಪಿ ಶಾಸಕ ಸಿಟಿ ರವಿ ವ್ಯಂಗ್ಯವಾಡಿದ್ದಾರೆ. ಶಾಸಕ ರಾಜೇಶ್ ನಾಯ್ಕ್ ಅವರ ಗ್ರಾಮವಿಕಾಸ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಸಿ.ಟಿ.ರವಿ ಮಾತನಾಡಿದರು.
ಈಗ 200 ಯುನಿಟ್ ಕರೆಂಟ್ ಫ್ರೀ ಕೊಡ್ತಾರಂತೆ. ಬೆಳ್ಳಾರೆಯ ಸಾಯಿ ಗಿರಿಧರ್ ಕರೆಂಟ್ ಇಲ್ಲ ಅಂತ ಡಿಕೆಶಿ ಗೆ ಕರೆ ಮಾಡಿದ್ದರು. ಎಂಥ ಮಾರ್ರೆ ಸಾವು, ಕರೆಂಟ್ ಇಲ್ಲ ಅಂತ ಗಿರಿಧರ್ ರೈ ಹೇಳಿದ್ದರು. ಆದರೆ ತನ್ನ ಸಾವಿನ ಬಗ್ಗೆ ಮಾತನಾಡಿದ ಅಂತ ಡಿಕೆಶಿ, ಗಿರಿಧರ್ ರೈಯನ್ನ ಪೊಲೀಸ್ ಮೂಲಕ ಅರೆಸ್ಟ್ ಮಾಡಿಸಿದ್ದರು. ಇಂಥವರು ಇನ್ನೂರು ಯುನಿಟ್ ಕರೆಂಟ್ ಫ್ರೀ ಕೊಡ್ತಾರಂತೆ ಎಂದು ರವಿ ವ್ಯಂಗ್ಯವಾಡಿದ್ದಾರೆ.

ಇತ್ತೀಚೆಗೆ ಇಲ್ಲಿಗೆ ಕಾಂಗ್ರೆಸ್ ನ ಪ್ರಜಾಧ್ವನಿ ಯಾತ್ರೆ ಬಂದಿತ್ತು. ಪ್ರಜೆಗಳ ಧ್ವನಿ ಕೇಳಿದ್ರೆ ಮಕ್ಕಳ ಅನ್ನ ಕಿತ್ತವರು ಅನ್ನೋ ಧ್ವನಿ ಕೇಳ್ತಾ ಇತ್ತು. ಕಲ್ಲಡ್ಕದ ಮಕ್ಕಳ ಅನ್ನ ಕಿತ್ತ ಪಾಪಿಗಳು ಅನ್ನುವ ಧ್ವನಿ ಕೇಳ್ತಾ ಇತ್ತು. ಇಲ್ಲಿನ ಕೊಲೆಗಳು ಮತ್ತು ಕೊಲೆ ಹಿಂದೆ ಇರೋರಿಗೆ ಬೆಂಬಲಕ್ಕೆ ನಿಂತ ಕೊಲೆಗಡುಕರು ಅನ್ನೋ ಧ್ವನಿ ಕೇಳ್ತಾ ಇತ್ತು. ಎದ್ದರೆ ಕೂರಲು ಆಗದ, ಕೂತರೆ ನಿಲ್ಲಲು ಆಗದ ಶಾಸಕ ನಮ್ಮವರಲ್ಲ. ಇವರ ಪ್ರಜಾಧ್ವನಿ ಯಾತ್ರೆ ಕೇವಲ ಬಿಜೆಪಿ ಬೈಯ್ಯುವ ಯಾತ್ರೆ.
ದೈವ ವಿರೋಧಿಗಳು, ಕುಂಕುಮ ಕಂಡ್ರೆ ಭಯ ಪಡೋರು ನೈಜ ಹಿಂದುಗಳಲ್ಲ. ಕೇಸರಿ ಕಂಡರೆ ಭಯ ಪಡೋರು ನೈಜ ಹಿಂದುಗಳಲ್ಲ. ನೈಜ ಹಿಂದುಗಳು ಪಂಜುರ್ಲಿ ದೈವ, ದೇವರ ಹತ್ರ ಹೋಗ್ತಾರೆ. ಆದರೆ ಈ ನಕಲಿ ಹಿಂದೂಗಳು ಅದರ ಬಳಿ ಯಾವತ್ತೂ ಹೋಗಲ್ಲ. ಜೈ ಶ್ರೀರಾಮ್ ಅನ್ನೋರು, ರಾಮ ಮಂದಿರದ ತುಡಿತ ಇದ್ದವರು ನೈಜ ಹಿಂದೂಗಳು. ರಾಮ ಮಂದಿರ ವಿರೋಧಿಸಿದವರು ನಕಲಿ ಹಿಂದೂಗಳು.
ಪ್ರಜಾಧ್ವನಿಯಲ್ಲಿ ನಿನ್ನೆ ವೇದಿಕೆ ಮೇಲೆ ಮಾತನಾಡಿದವರೆಲ್ಲಾ ನಕಲಿ ಹಿಂದುಗಳು. ಮಕ್ಕಳ ಮನಸ್ಸಲ್ಲೂ ಜಾತಿ ವಿಷ ಬೀಜ ಬಿತ್ತುವ ಕೆಲಸ ಕಾಂಗ್ರೆಸ್ ಮಾಡಿತ್ತು. ಮುಂಚೆ ಒಬ್ಬ ಇಲ್ಲಿ ವಿವಾದಿತ ರಾಜಕಾರಣಿ ಇದ್ದರು. ಆದ್ರೆ ನಮ್ಮ ರಾಜೇಶ್ ನಾಯ್ಕ್ ವಿವಾದ ಇಲ್ಲದ ರಾಜಕಾರಣಿ ಎಂದು ಟಾಂಗ್ ಇಟ್ಟರು.
Mangalore CT Ravi slams DK Shivakumar over giving free current to the state if congress comes to power.
04-04-26 07:33 pm
HK News Staffer
ಪಶ್ಚಿಮ ಏಷ್ಯಾ ಸಂಘರ್ಷ; ಭಾರತದ ರಾಜತಾಂತ್ರಿಕ ನಡೆಯನ್...
03-04-26 04:14 pm
ಬಾಗಲಕೋಟ, ದಾವಣಗೆರೆ ಉಪ ಚುನಾವಣೆ; ಗೆಲುವು ಕಷ್ಟ- ಗು...
03-04-26 03:48 pm
ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದ ಕುಮಾರಸ್ವಾಮಿ- ಎಡಿಜ...
02-04-26 09:31 pm
ನಾನು ಮುಖ್ಯಮಂತ್ರಿಯಾಗಿ ಮುಸ್ಲಿಂ ಅಲ್ಪಸಂಖ್ಯಾತ ಮೀಸಲ...
02-04-26 08:07 pm
03-04-26 07:52 pm
HK News Staffer
50 ವರ್ಷಗಳ ಬಳಿಕ ಮಾನವ ಸಹಿತ ಚಂದ್ರಯಾನ; ಅಮೆರಿಕ, ಕೆ...
03-04-26 07:35 am
ಚಿಂತಿಸಬೇಡಿ, ನಿಮ್ಮ ಹಡಗು ಸುರಕ್ಷಿತ; ಹಾರ್ಮುಜ್ ಜಲಸ...
02-04-26 10:24 pm
ಇರಾನ್ ಕದನವಿರಾಮ ಕೇಳುತ್ತಿದೆ, ಒಪ್ಪದಿದ್ದರೆ ಶಿಲಾಯು...
01-04-26 11:03 pm
ಇರಾನ್ ಮೇಲೆ ಅಣ್ವಸ್ತ್ರ ದಾಳಿಗೆ ಅಮೆರಿಕ ಸಿದ್ಧತೆ; ವ...
01-04-26 12:46 pm
03-04-26 11:43 am
HK News Staffer
ಧರ್ಮಸ್ಥಳ ಎಐ ವಿಡಿಯೋ ಪ್ರಕರಣ; ಯೂಟ್ಯೂಬರ್ ಎಂ.ಡಿ....
02-04-26 02:43 pm
ದೂರು ನೀಡಲು ಬಂದ ಮಹಿಳೆಯೊಂದಿಗೆ ಸಂಬಂಧ ಬೆಳೆಸುವುದು...
01-04-26 09:04 pm
ಮುಸ್ಲಿಂ ಮದುವೆಯಲ್ಲಿ ಕೊರಗಜ್ಜ ದೈವದ ಅನುಕರಣೆ ; ಮದು...
31-03-26 10:06 pm
Moodbidri Accident: ಮೂಡುಬಿದ್ರೆ ; ರಸ್ತೆ ಬದಿ ನಿ...
31-03-26 09:02 pm
04-04-26 05:42 pm
HK News Staffer
ಅತ್ತೆ, ಮಾವನ ಕಿರುಕುಳಕ್ಕೆ ಬೇಸತ್ತು ಗರ್ಭಿಣಿ ಮಹಿಳೆ...
04-04-26 05:39 pm
ಇನ್ಫೋಸಿಸ್ ಸಿಎಸ್ಆರ್ ಫಂಡ್ ತೆಗೆಸಿಕೊಡುವುದಾಗಿ ವಂಚನ...
04-04-26 04:36 pm
ಮಂಗಳೂರಿನಲ್ಲಿ ಎಪ್ರಿಲ್ 19ರಂದು ಸೀ ಬ್ರೀಜ್ ಮ್ಯಾರಥಾ...
04-04-26 11:32 am
ಮೂರನೇ ಮಗುವೂ ಹೆಣ್ಣಾಗುತ್ತದೆಂದು ಗರ್ಭಿಣಿ ಪತ್ನಿ, ಇ...
03-04-26 11:00 pm