ಬ್ರೇಕಿಂಗ್ ನ್ಯೂಸ್
27-01-23 09:53 pm Mangalore Correspondent ಕರಾವಳಿ
ಬಂಟ್ವಾಳ, ಜ.27 : ಕರೆಂಟ್ ಕೇಳಿದ್ದಕ್ಕೆ ಜೈಲಿಗೆ ಹಾಕಿದವರು ಈಗ ಕರೆಂಟ್ ಫ್ರೀ ಕೊಡ್ತಾರಂತೆ ಎಂದು ಬಿಜೆಪಿ ಶಾಸಕ ಸಿಟಿ ರವಿ ವ್ಯಂಗ್ಯವಾಡಿದ್ದಾರೆ. ಶಾಸಕ ರಾಜೇಶ್ ನಾಯ್ಕ್ ಅವರ ಗ್ರಾಮವಿಕಾಸ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಸಿ.ಟಿ.ರವಿ ಮಾತನಾಡಿದರು.
ಈಗ 200 ಯುನಿಟ್ ಕರೆಂಟ್ ಫ್ರೀ ಕೊಡ್ತಾರಂತೆ. ಬೆಳ್ಳಾರೆಯ ಸಾಯಿ ಗಿರಿಧರ್ ಕರೆಂಟ್ ಇಲ್ಲ ಅಂತ ಡಿಕೆಶಿ ಗೆ ಕರೆ ಮಾಡಿದ್ದರು. ಎಂಥ ಮಾರ್ರೆ ಸಾವು, ಕರೆಂಟ್ ಇಲ್ಲ ಅಂತ ಗಿರಿಧರ್ ರೈ ಹೇಳಿದ್ದರು. ಆದರೆ ತನ್ನ ಸಾವಿನ ಬಗ್ಗೆ ಮಾತನಾಡಿದ ಅಂತ ಡಿಕೆಶಿ, ಗಿರಿಧರ್ ರೈಯನ್ನ ಪೊಲೀಸ್ ಮೂಲಕ ಅರೆಸ್ಟ್ ಮಾಡಿಸಿದ್ದರು. ಇಂಥವರು ಇನ್ನೂರು ಯುನಿಟ್ ಕರೆಂಟ್ ಫ್ರೀ ಕೊಡ್ತಾರಂತೆ ಎಂದು ರವಿ ವ್ಯಂಗ್ಯವಾಡಿದ್ದಾರೆ.
ಇತ್ತೀಚೆಗೆ ಇಲ್ಲಿಗೆ ಕಾಂಗ್ರೆಸ್ ನ ಪ್ರಜಾಧ್ವನಿ ಯಾತ್ರೆ ಬಂದಿತ್ತು. ಪ್ರಜೆಗಳ ಧ್ವನಿ ಕೇಳಿದ್ರೆ ಮಕ್ಕಳ ಅನ್ನ ಕಿತ್ತವರು ಅನ್ನೋ ಧ್ವನಿ ಕೇಳ್ತಾ ಇತ್ತು. ಕಲ್ಲಡ್ಕದ ಮಕ್ಕಳ ಅನ್ನ ಕಿತ್ತ ಪಾಪಿಗಳು ಅನ್ನುವ ಧ್ವನಿ ಕೇಳ್ತಾ ಇತ್ತು. ಇಲ್ಲಿನ ಕೊಲೆಗಳು ಮತ್ತು ಕೊಲೆ ಹಿಂದೆ ಇರೋರಿಗೆ ಬೆಂಬಲಕ್ಕೆ ನಿಂತ ಕೊಲೆಗಡುಕರು ಅನ್ನೋ ಧ್ವನಿ ಕೇಳ್ತಾ ಇತ್ತು. ಎದ್ದರೆ ಕೂರಲು ಆಗದ, ಕೂತರೆ ನಿಲ್ಲಲು ಆಗದ ಶಾಸಕ ನಮ್ಮವರಲ್ಲ. ಇವರ ಪ್ರಜಾಧ್ವನಿ ಯಾತ್ರೆ ಕೇವಲ ಬಿಜೆಪಿ ಬೈಯ್ಯುವ ಯಾತ್ರೆ.
ದೈವ ವಿರೋಧಿಗಳು, ಕುಂಕುಮ ಕಂಡ್ರೆ ಭಯ ಪಡೋರು ನೈಜ ಹಿಂದುಗಳಲ್ಲ. ಕೇಸರಿ ಕಂಡರೆ ಭಯ ಪಡೋರು ನೈಜ ಹಿಂದುಗಳಲ್ಲ. ನೈಜ ಹಿಂದುಗಳು ಪಂಜುರ್ಲಿ ದೈವ, ದೇವರ ಹತ್ರ ಹೋಗ್ತಾರೆ. ಆದರೆ ಈ ನಕಲಿ ಹಿಂದೂಗಳು ಅದರ ಬಳಿ ಯಾವತ್ತೂ ಹೋಗಲ್ಲ. ಜೈ ಶ್ರೀರಾಮ್ ಅನ್ನೋರು, ರಾಮ ಮಂದಿರದ ತುಡಿತ ಇದ್ದವರು ನೈಜ ಹಿಂದೂಗಳು. ರಾಮ ಮಂದಿರ ವಿರೋಧಿಸಿದವರು ನಕಲಿ ಹಿಂದೂಗಳು.
ಪ್ರಜಾಧ್ವನಿಯಲ್ಲಿ ನಿನ್ನೆ ವೇದಿಕೆ ಮೇಲೆ ಮಾತನಾಡಿದವರೆಲ್ಲಾ ನಕಲಿ ಹಿಂದುಗಳು. ಮಕ್ಕಳ ಮನಸ್ಸಲ್ಲೂ ಜಾತಿ ವಿಷ ಬೀಜ ಬಿತ್ತುವ ಕೆಲಸ ಕಾಂಗ್ರೆಸ್ ಮಾಡಿತ್ತು. ಮುಂಚೆ ಒಬ್ಬ ಇಲ್ಲಿ ವಿವಾದಿತ ರಾಜಕಾರಣಿ ಇದ್ದರು. ಆದ್ರೆ ನಮ್ಮ ರಾಜೇಶ್ ನಾಯ್ಕ್ ವಿವಾದ ಇಲ್ಲದ ರಾಜಕಾರಣಿ ಎಂದು ಟಾಂಗ್ ಇಟ್ಟರು.
Mangalore CT Ravi slams DK Shivakumar over giving free current to the state if congress comes to power.
17-05-25 01:44 pm
Bangalore Correspondent
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
17-05-25 03:42 pm
HK News Desk
ಡೊನಾಲ್ಡ್ ಟ್ರಂಪ್ ಟೀಕಿಸಿದ್ದ ಪೋಸ್ಟ್ ಡಿಲೀಟ್ ಮಾಡಿದ...
16-05-25 04:45 pm
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
17-05-25 01:01 pm
Mangalore Correspondent
CM Siddaramaiah, New Dc Office Mangalore Inau...
16-05-25 10:27 pm
Siddaramaiah, Cm Mangalore, BJP black flag: ಸ...
16-05-25 06:05 pm
Mangalore, Dinesh Gundurao: ಇಡಿ ದೇಶದಲ್ಲಿ ಅತೀ...
16-05-25 02:47 pm
Mangalore Cargo Ship, Lakshadweep: ಲಕ್ಷದ್ವೀಪಕ...
16-05-25 10:06 am
16-05-25 11:06 pm
Mangalore Correspondent
Belagavi Protest, Quran Burnt, Police, Crime:...
16-05-25 09:20 pm
Davanagere Crime, Gold Robbery: ಆನ್ಲೈನ್ ಗೇಮಿಂ...
15-05-25 11:06 pm
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm