ಬ್ರೇಕಿಂಗ್ ನ್ಯೂಸ್
23-01-23 06:30 pm Mangalore Correspondent ಕರಾವಳಿ
ಮಂಗಳೂರು, ಜ.23 : ನಗರದ ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಮೈದಾನದಲ್ಲಿ ನಡೆದ 6ನೇ ವರ್ಷದ ಮಂಗಳೂರು ಕಂಬಳ ಕೇವಲ ನಗರದ ಜನರನ್ನು ಮಾತ್ರ ಆಕರ್ಷಿಸಿದ್ದಲ್ಲ. ಮಂಗಳೂರಿಗೆ ಪ್ರವಾಸ ಬಂದಿದ್ದ ವಿದೇಶಿಗರನ್ನೂ ಆಕರ್ಷಿಸಿದೆ.
ಅಫ್ಘಾನಿಸ್ತಾನ, ಜರ್ಮನಿ, ಡೆನ್ಮಾರ್ಕ್ ದೇಶಗಳಿಂದ ಪ್ರವಾಸ ಬಂದಿದ್ದ ವಿದೇಶಿ ಪ್ರಜೆಗಳು ಕುತೂಹಲದಿಂದ ಕಂಬಳ ವೀಕ್ಷಿಸಿದ್ದಾರೆ. ಕಳೆದ ಬಾರಿ ಮಿಜಾರು ಶ್ರೀನಿವಾಸ ಗೌಡ ವೇಗದ ಓಟಗಾರನಾಗಿ ದಾಖಲೆ ಮಾಡಿ, ಉಸೇನ್ ಬೋಲ್ಟ್ ಗೆ ಹೋಲಿಸುವ ರೀತಿ ಸುದ್ದಿಯಾಗಿದ್ದು ವಿದೇಶಿ ಮಾಧ್ಯಮಗಳ ಸೆಳೆದಿತ್ತು. ಮಂಗಳೂರಿಗೆ ಬಂದಿದ್ದ ವಿದೇಶಿಯರಿಗೆ ಇಲ್ಲಿಯೇ ಕಂಬಳ ಆಗುತ್ತಿದೆ ಎನ್ನುವುದನ್ನು ತಿಳಿದು, ಒಮ್ಮೆ ನೋಡಿ ಬಿಡೋಣ ಎಂದು ಕುಳೂರಿಗೆ ಬಂದಿದ್ದರು. ಮಣ್ಣಿನ ಕ್ರೀಡೆ ಕಂಬಳವನ್ನು ನೋಡಿ ಖುಷಿ ಪಟ್ಟಿದ್ದಾರೆ.

ಡೆನ್ಮಾರ್ಕ್ ಪ್ರಜೆ ಹೆನ್ರಿ ಬಳಿ ಈ ಬಗ್ಗೆ ಕೇಳಿದಾಗ, ನಾವು ಬಿಸ್ನೆಸ್ ಟ್ರಿಪ್ ನಲ್ಲಿ ಮಂಗಳೂರು ಬಂದಿದ್ದೆವು. ಕಂಬಳವನ್ನು ನೇರವಾಗಿ ನೋಡಬೇಕೆಂಬ ಆಸೆಯಿತ್ತು. ಕಂಬಳ ಮತ್ತು ಶ್ರೀನಿವಾಸ್ ಗೌಡನ ಸಾಧನೆ ಬಗ್ಗೆ ತಿಳಿದಿದ್ದೆವು. ಲೈವ್ ನೋಡಿದ್ದು ಖುಷಿಯಾಗಿದೆ ಎಂದು ಹೇಳಿದ್ದಾರೆ. ಹೆನ್ರಿ ಜೊತೆಗೆ ಅವರ ಸ್ನೇಹಿತರಾದ ಥಾಮಸ್, ಕಾರ್ಸ್ಟನ್ ಪೀಟ್ ಮತ್ತು ಸುಸನ್ನಾ ಇದ್ದರು.
ಮೂಲತಃ ಅಫ್ಘಾನಿಸ್ತಾನದ ಪ್ರಜೆ, ಮಂಗಳೂರು ವಿವಿಯಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿರುವ ಸಯ್ಯದ್ ಅಹ್ಮದ್ ತನ್ನ ಕುಟುಂಬವನ್ನೂ ಕರ್ಕೊಂಡು ಕಂಬಳ ನೋಡಲು ಬಂದಿದ್ದರು. ಇದು ವಿಶಿಷ್ಟ ಕ್ರೀಡೆಯಾಗಿದ್ದು, ಇಲ್ಲಿನ ಸಂಸ್ಕೃತಿ ಸೂಪರ್ ಇದೆ ಎಂದರು ಸಯ್ಯದ್ ಅಹ್ಮದ್.
ಈ ವಿದೇಶಿ ಪ್ರವಾಸಿಗರಿಗೆ ಶ್ರೀನಿವಾಸ ಗೌಡರ ಸಾಧನೆಯ ಬಗ್ಗೆ ಗೊತ್ತು. ಉಸೇನ್ ಬೋಲ್ಟ್ ರೀತಿಯ ಸಾಧನೆಯೆಂದು ವಿದೇಶಿ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದರಿಂದ ಕುತೂಹಲ ಇತ್ತು. ಹೀಗಾಗಿ ಆತ ಎಲ್ಲಿದ್ದಾನೆಂದು ಕುತೂಹಲ ಹೊಂದಿದ್ದರು. 2020ರಲ್ಲಿ ಮೂಡುಬಿದಿರೆಯ ಮಿಜಾರ್ ಅಶ್ವತ್ಥಪುರ ಶ್ರೀನಿವಾಸ ಗೌಡ ಕಂಬಳದ ಕರೆಯನ್ನು ವೇಗವಾಗಿ ಓಡಿದ್ದು ದಾಖಲೆಯಾಗಿತ್ತು. 100 ಮೀ ದೂರವನ್ನು ಕೇವಲ 9.55 ಸೆಕೆಂಡ್ ಗಳಲ್ಲಿ ಕ್ರಮಿಸಿದ್ದು ಉಸೇನ್ ಬೋಲ್ಟ್ ದಾಖಲೆ ಮುರಿದಿದ್ದಾಗಿ ಸುದ್ದಿಯಾಗಿತ್ತು. ಆದರೆ ಸಹಜದ ಓಟದ ಸ್ಪರ್ಧೆಗೂ ಕಂಬಳದ ಓಟಕ್ಕೂ ವ್ಯತ್ಯಾಸ ಇದೆಯೆಂದು ಆನಂತರ ಸ್ಪಷ್ಟನೆ ನೀಡಲಾಗಿತ್ತು.
Mangalore Kambala amazes foreign spectators at Goldfinch city grounds. Coastal Karnataka’s traditional buffalo race ‘Kambala’ is gaining popularity across the globe as enthusiasts from Afghanistan, Germany and Denmark have travelled to Mangaluru to watch the race that is run in slushy paddy fields accompanied by buffaloes. On Sunday, they visited the famed Mangaluru Kambala, which is being held at Goldfinch City.
16-11-25 09:15 pm
HK News Desk
ಸಚಿವ ಪ್ರಿಯಾಂಕ ಖರ್ಗೆ ಕ್ಷೇತ್ರ ಚಿತ್ತಾಪುರದಲ್ಲಿ ಕೊ...
13-11-25 08:33 pm
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
15-11-25 11:12 pm
HK News Desk
ದೆಹಲಿ ಕಾರು ಸ್ಫೋಟ ಪ್ರಕರಣ ; ಪಶ್ಚಿಮ ಬಂಗಾಳದಲ್ಲಿ ಮ...
15-11-25 07:09 pm
ಶ್ರೀನಗರ ಪೊಲೀಸ್ ಠಾಣೆಯಲ್ಲಿ ಭೀಕರ ಸ್ಫೋಟ ; 6 ಮಂದಿ...
15-11-25 12:06 pm
ಬಿಹಾರ ಫಲಿತಾಂಶ ; ‘ಛೋಟೇ ಸರ್ಕಾರ್’ ಖ್ಯಾತಿಯ ಅನಂತ್...
14-11-25 09:10 pm
ಬಿಹಾರದಲ್ಲಿ ಎನ್ ಡಿಎ ಕ್ಲೀನ್ ಸ್ವೀಪ್ ಜಯಭೇರಿ ; 190...
14-11-25 11:50 am
16-11-25 08:43 pm
Mangalore Correspondent
ಅಡಿಕೆ ಬೆಳೆಗಾರರ ಕಷ್ಟಕ್ಕೆ ಸ್ಪಂದಿಸಿದ ಕೇಂದ್ರ ಸರ್ಕ...
16-11-25 04:40 pm
ಧರ್ಮಸ್ಥಳ ಪ್ರಕರಣ ; ಬಟ್ಟೆ ಬಿಚ್ಚಿಸಿ ಬೂಟು ಕಾಲಿನಿಂ...
15-11-25 10:47 pm
ಬೀದಿ ನಾಯಿಗಳಿಗೆ ವ್ಯಕ್ತಿ ಬಲಿ ; ಕಡೆಗೂ ಎಚ್ಚತ್ತುಕೊ...
15-11-25 07:42 pm
Panambur Accident, Mangalore, Three dead: ಪಣಂ...
15-11-25 02:47 pm
14-11-25 05:32 pm
HK News Desk
Ullal News, Animal Attack, Crime, Kumpala: ಕಣ...
14-11-25 11:16 am
ಮಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ವಂಚನೆ ಹೆಚ್ಚಳ ; ಮ...
13-11-25 10:09 pm
Sexual Harassment in Anekal: ಸ್ಕ್ಯಾನಿಂಗ್ ವೇಳ...
13-11-25 10:00 pm
ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾ...
12-11-25 12:32 pm