ಬ್ರೇಕಿಂಗ್ ನ್ಯೂಸ್
05-01-23 11:07 pm Mangalore Correspondent ಕರಾವಳಿ
ಉಳ್ಳಾಲ, ಜ.5 : ಕರಾವಳಿ ಕೋಮುವಾದದ ಲ್ಯಾಬೊರೇಟರಿ ಆಗಿದ್ದು ,ಇಲ್ಲಿ ಯಕ್ಷಗಾನ ಕಲೆಯಲ್ಲೂ ಹಿಂದುತ್ವ ತೂರ್ತಾರೆ. ಬಿಜೆಪಿ, ಆರ್ ಎಸ್ ಎಸ್ ಗೆ ಅದುವೇ ಬಂಡವಾಳವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ವಿಧಾನಸಭೆ ಪ್ರತಿ ಪಕ್ಷ ನಾಯಕರಾದ ಸಿದ್ಧರಾಮಯ್ಯ ಹೇಳಿದರು.
ಮಂಗಳೂರು ಹೊರವಲಯದ ಹರೇಕಳ ಗ್ರಾಮದ ಕಡವಿನ ಬಳಿಯಲ್ಲಿ ಇಂದು ಉಳ್ಳಾಲ ಮತ್ತು ಮುಡಿಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಬೃಹತ್ ಸಾರ್ವಜನಿಕ ಜನಜಾಗೃತಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.


ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಓರ್ವ ವಿಧೂಷಕನಂತೆ. ಆತ ಕರಾವಳಿಯ ಗಂಡು ಕಲೆ ಯಕ್ಷಗಾನದಲ್ಲೂ ಹಿಂದುತ್ವ ತೂರಲು ಪಿತೂರಿ ಮಾಡಿದ್ದು ಇಂಥವರು ದೇಶದ ಆಡಳಿತ ನಡೆಸಲು ಲಾಯಕ್ಕಾ ಎಂದು ಪ್ರಶ್ನಿಸಿದರು. ಕೋಮುವಾದ ಹುಟ್ಟೋದೇ ಕರಾವಳಿಯಿಂದ. ಯಾರಿಗೆ ಭಾರತದ ಸಂವಿಧಾನದ ಮೇಲೆ ವಿಶ್ವಾಸ ಇರಲ್ಲ ಅವರು ಜನಪ್ರತಿನಿಧಿಯಾಗಲು ಲಾಯಕ್ಕಲ್ಲ. ಅನಂತ ಕುಮಾರ್ ಹೆಗಡೆ ಸಂವಿಧಾನ ಬದಲಿಸ್ತೇವೆ ಎಂದು ಹೇಳಿದಾಗ ಮೋದಿ, ಅಮಿತ್ ಶಾ ಏನೂ ಕ್ರಮ ಕೈಗೊಂಡಿಲ್ಲ. ಮೋದಿ, ಅಮಿತ್ ಷಾ ಅವರೇ ಇವರ ಬಾಯಲ್ಲಿ ಹೇಳಿಸಿರೋದು ಅನ್ನೋದನ್ನಾ ನಾವು ಅರ್ಥ ಮಾಡಿಕೊಳ್ಳಬೇಕು ಎಂದರು. ಮುಖ್ಯಮಂತ್ರಿ ಅಂದ್ರೆ ಬರೀ ಆರ್ ಎಸ್ ಎಸ್ ನ ಮುಖ್ಯಂಮತ್ರಿ ಅಲ್ಲ, ರಾಜ್ಯದ ಏಳು ಕೋಟಿ ಜನರ ಮುಖ್ಯಮಂತ್ರಿ. ಆದರೆ ನಮ್ಮ ರಾಜ್ಯದ ಮುಖ್ಯ ಮಂತ್ರಿಗಳು ದ.ಕ. ಜಿಲ್ಲೆಯಲ್ಲಿ ಹಲವು ಮರ್ಡರ್ ಗಳಾದಾಗ ಆಯ್ದ ಧರ್ಮದವರ ಮನೆಗೆ ಹೋಗಿ ಮಾತ್ರ ಪರಿಹಾರ ಕೊಡ್ತಾರೆ ಎಂದು ದೂರಿದರು.


ಸಮಾವೇಶಕ್ಕೂ ಮೊದಲು ಸಿದ್ಧರಾಮಯ್ಯ ಅವರು ಹರೇಕಳದ ಗ್ರಾಮ ಪಂಚಾಯತ್ನ ನೂತನ ಕಚೇರಿ ಕಟ್ಟಡ "ಹರೇಕಳ ಗ್ರಾಮ ಸೌಧ" ಮತ್ತು ಡಾ.ಜಿ. ಶಂಕರ್ ಗ್ರಾಮಕ್ಕೆ ಕೊಡುಗೆಯ ರೂಪದಲ್ಲಿ ನಿರ್ಮಿಸಿದ ಆಸ್ಪತ್ರೆ, ಹರೇಕಳ -ಅಡ್ಯಾರ್ ಸಂಪರ್ಕ ಸೇತುವೆ ಹಾಗೂ ಡ್ಯಾಂನ ವೀಕ್ಷಣೆ ಮಾಡಿದರು. ಶಾಸಕ ಯು.ಟಿ ಖಾದರ್, ವಿದಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ,ಮಾಜಿ ಸಚಿವ ರಮಾನಾಥ ರೈ ಮೊದಲಾದವರು ವೇದಿಕೆಯಲ್ಲಿದ್ದರು.
BJP does not believe in the Constitution, Mangalore hub for communal fights says Siddaramaiah in Mangalore. Former Chief Minister and Leader of the Opposition in the Legislative Assembly Siddaramaiah said here on Thursday that the BJP does not believe in the Constitution and in providing equal rights and equal opportunities to people.
13-11-25 08:33 pm
HK News Desk
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
15-11-25 11:12 pm
HK News Desk
ದೆಹಲಿ ಕಾರು ಸ್ಫೋಟ ಪ್ರಕರಣ ; ಪಶ್ಚಿಮ ಬಂಗಾಳದಲ್ಲಿ ಮ...
15-11-25 07:09 pm
ಶ್ರೀನಗರ ಪೊಲೀಸ್ ಠಾಣೆಯಲ್ಲಿ ಭೀಕರ ಸ್ಫೋಟ ; 6 ಮಂದಿ...
15-11-25 12:06 pm
ಬಿಹಾರ ಫಲಿತಾಂಶ ; ‘ಛೋಟೇ ಸರ್ಕಾರ್’ ಖ್ಯಾತಿಯ ಅನಂತ್...
14-11-25 09:10 pm
ಬಿಹಾರದಲ್ಲಿ ಎನ್ ಡಿಎ ಕ್ಲೀನ್ ಸ್ವೀಪ್ ಜಯಭೇರಿ ; 190...
14-11-25 11:50 am
16-11-25 04:40 pm
Mangalore Correspondent
ಧರ್ಮಸ್ಥಳ ಪ್ರಕರಣ ; ಬಟ್ಟೆ ಬಿಚ್ಚಿಸಿ ಬೂಟು ಕಾಲಿನಿಂ...
15-11-25 10:47 pm
ಬೀದಿ ನಾಯಿಗಳಿಗೆ ವ್ಯಕ್ತಿ ಬಲಿ ; ಕಡೆಗೂ ಎಚ್ಚತ್ತುಕೊ...
15-11-25 07:42 pm
Panambur Accident, Mangalore, Three dead: ಪಣಂ...
15-11-25 02:47 pm
ಬಿಹಾರದಲ್ಲಿ ಚುನಾವಣೆ ಮುನ್ನ ಹತ್ತು ಸಾವಿರ ಕೊಟ್ಟು ಮ...
15-11-25 01:51 pm
14-11-25 05:32 pm
HK News Desk
Ullal News, Animal Attack, Crime, Kumpala: ಕಣ...
14-11-25 11:16 am
ಮಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ವಂಚನೆ ಹೆಚ್ಚಳ ; ಮ...
13-11-25 10:09 pm
Sexual Harassment in Anekal: ಸ್ಕ್ಯಾನಿಂಗ್ ವೇಳ...
13-11-25 10:00 pm
ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾ...
12-11-25 12:32 pm