ಬ್ರೇಕಿಂಗ್ ನ್ಯೂಸ್
04-01-23 06:51 pm Mangalore Correspondent ಕರಾವಳಿ
ಮಂಗಳೂರು, ಜ.4: ಬಿಲ್ಲವ- ಈಡಿಗರಿಗೆ ಸ್ಥಾನಮಾನ ಸಿಗಬೇಕೆಂದು ಹೋರಾಟ ಹಮ್ಮಿಕೊಂಡಿರುವ ಪ್ರಣವಾನಂದ ಸ್ವಾಮೀಜಿ ವಿರುದ್ಧ ಶ್ರೀ ನಾರಾಯಣ ಗುರುಗಳ ವಂಶಸ್ಥರೆಂದು ಹೇಳಿಕೊಂಡ ಕಾಸರಗೋಡಿನ ಶಿವಗಿರಿ ಮಠದ ಸ್ವಾಮಿ ಭದ್ರಾನಂದ ವಾಗ್ದಾಳಿ ನಡೆಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಸನ್ಯಾಸಿ ಕಾವಿ ಹಾಕಿ ಮದುವೆ ಆಗಬೇಕು, ಐದು ಮಕ್ಕಳನ್ನು ಮಾಡಬೇಕು ಅಂತಾರೆ ಈ ಪ್ರಣವಾನಂದ. ಇವರದ್ದು ಯಾವ ರೀತಿಯ ಸಿದ್ಧಾಂತ. ಇಂಥ ವ್ಯಕ್ತಿ ಜಾತಿ ವ್ಯವಸ್ಥೆಯನ್ನು ಮುಂದಿಟ್ಟು ಪೊಲಿಟಿಕ್ ಬಿಸಿನೆಸ್ ಮಾಡಲು ಹೊರಟಿದ್ದಾರೆ. ಇದು ನಾರಾಯಣ ಗುರುಗಳ ಸಿದ್ಧಾಂತಕ್ಕೆ ವಿರುದ್ಧವಾದದ್ದು ಎಂದು ಕಿಡಿಕಾರಿದ್ದಾರೆ.
ರಾಜಕೀಯ ದುರುದ್ದೇಶದೊಂದಿಗೆ ಈತ ಪಾದಯಾತ್ರೆ ಮಾಡಲು ಹೊರಟಿದ್ದಾರೆ. ಒಂದು ಜಾತಿಗೆ ಮೀಸಲಿಗಾಗಿ ಹೋರಾಟ ಎತ್ತಿಕೊಂಡಿರುವ ಇವರದ್ದು ಸಮಾಜವನ್ನು ಒಡೆಯುವ ಹುನ್ನಾರ. ಈತನಿಗೆ ಯಾರು ಕೂಡ ಸಪೋರ್ಟ್ ಮಾಡಬಾರದು. ನಾರಾಯಣ ಗುರುಗಳ ಶಿವಗಿರಿ ಮಠದಿಂದ ಯಾರು ಕೂಡ ಈತನ ಪಾದಯಾತ್ರೆಗೆ ಬರುವುದಿಲ್ಲ. ಈತನಿಗೆ ಯಾರು ಸಪೋರ್ಟ್ ಮಾಡುತ್ತಾರೋ ಅವರೆಲ್ಲ ಶ್ರೀ ನಾರಾಯಣ ಗುರುಗಳ ವಿರುದ್ಧ ಹೋದಂತೆ. ಈತನಿಗೆ ಸಹಕಾರ ನೀಡುವ ಮಂದಿ ಶ್ರೀಗಳ ತತ್ವ ಸಿದ್ಧಾಂತ ಒಪ್ಪಲ್ಲ ಎಂದರ್ಥ.
ಪ್ರಣವಾನಂದ ಸ್ವಾಮೀಜಿ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ, ಸಪೋರ್ಟ್ ಮಾಡುತ್ತಿವೆ. ಈತನ ವಿರುದ್ಧ ಹಲವಾರು ಪ್ರಕರಣಗಳಿವೆ. ಅದರ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದ ಭದ್ರಾನಂದ ಸ್ವಾಮಿ, ನನಗೆ ಗುರು ಪರಂಪರೆ ಇದೆ, ಈತನಗೆ ಏನಿದೆ ಎಂದು ಪ್ರಶ್ನಿಸಿದರು. ನಾನು ಕೇರಳದಲ್ಲಿ ಪಿ ಎಫ್ ಐ ವಿರುದ್ಧ ಹೋರಾಡಿದ್ದೇನೆ. ಡ್ರಗ್ ಮಾಫಿಯಾ ವಿರುದ್ಧ ಹೋರಾಡುತ್ತಿದ್ದೇನೆ. ದೇಶ ವಿರೋಧಿಗಳ ವಿರುದ್ಧ ಹೋರಾಡುತಿದ್ದೇನೆ. ನಾನು ಕಾಡಿನಲ್ಲಿ ಕೂತಿರುವ ಸನ್ಯಾಸಿ ಅಲ್ಲ. ಜನರ ಜೊತೆಗಿದ್ದು ಹೋರಾಟ ನಡೆಸುತ್ತಿದ್ದೇನೆ ಎಂದು ಭದ್ರಾನಂದ ಹೇಳಿದ್ದಾರೆ.
Political agenda behind Pranavananda Swamiji hunger protest slams Swami Badrananda in Mangalore
20-09-26 07:13 pm
HK News Staffer
ಗಣೇಶ ಶೋಭಾಯಾತ್ರೆಯಲ್ಲಿ ಪ್ರಚೋದನಕಾರಿ ಭಾಷಣ ; ಮಸೀದಿ...
20-09-26 03:32 pm
ವಂದೇ ಮಾತರಂ ಎರಡೇ ಚರಣ ; ತೀರ್ಥಹಳ್ಳಿಯಲ್ಲಿ ಸಿಎಂ ಡಿ...
19-09-26 05:44 pm
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
19-09-26 05:40 pm
HK News Staffer
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
20-09-26 08:59 pm
HK News Staffer
ಮೊಗವೀರಪಟ್ಣ- ಕೋಟೆಪುರ ರಸ್ತೆ ಕಾಂಕ್ರೀಟಿಗೆ ಗಡುವು ;...
19-09-26 09:54 pm
ಬೆಳ್ಳಂಬೆಳಗ್ಗೆ ಮೀನುಗಾರಿಕಾ ಬಂದರಿಗೆ ಸಿಎಂ ಡಿಕೆಶಿ...
19-09-26 10:11 am
ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ ; 32,611 ಕೋಟ...
18-09-26 07:30 pm
Puttur Medical College, Dakshina Kannada, Man...
18-09-26 06:08 pm
20-09-26 04:39 pm
HK News Staffer
Bengluru, Crime: ಬೆಂಗಳೂರು ; ಮಧ್ಯರಾತ್ರಿ ಹೋಟೆಲ್...
20-09-26 02:16 pm
ಹುಬ್ಬಳ್ಳಿಯಲ್ಲಿ ಗ್ಯಾಸ್ ಸೋರಿಕೆ ದುರಂತ: ಸಿಲಿಂಡರ್...
20-09-26 01:01 pm
ಪತಿಯೊಂದಿಗೆ ಜಗಳದ ಸಿಟ್ಟಿನಲ್ಲಿ ಇಬ್ಬರು ಮಕ್ಕಳನ್ನು...
19-09-26 09:57 pm
ಕೋಕಾ ಜಾಮೀನು ಬೆನ್ನಲ್ಲೇ ರೌಡಿಶೀಟರ್ ಭರತ್ ಕುಮ್ಡೇಲು...
19-09-26 09:48 pm