ಬ್ರೇಕಿಂಗ್ ನ್ಯೂಸ್
28-10-22 08:47 pm Mangalore Correspondent ಕರಾವಳಿ
ಮಂಗಳೂರು, ಅ.28 : ಮೀನುಗಾರಿಕೆ ಧಕ್ಕೆ ಬಳಿಯ ಬೆಂಗ್ರೆ ಪ್ರದೇಶದಲ್ಲಿ ಲಂಗರು ಹಾಕಿದ್ದ ಲಕ್ಷದ್ವೀಪಕ್ಕೆ ಸರಕು ಸಾಗಿಸುವ ಮಿನಿ ಹಡಗು ಮಾದರಿಯ ಮೂರು (ಮಂಜಿ) ಬೃಹತ್ ಬೋಟುಗಳು ಬೆಂಕಿಗಾಹುತಿಯಾಗಿದೆ.
ಲಕ್ಷದ್ವೀಪಕ್ಕೆ ಸರಕು ಸಾಗಿಸುತ್ತಿದ್ದ ಬೋಟ್ ಇದಾಗಿದ್ದು ಬೆಂಗ್ರೆಯಲ್ಲಿ ಮಳೆಗಾಲದಲ್ಲಿ ಮಳೆ ಬೀಳದಂತೆ ತೆಂಗಿನ ಗರಿಗಳಿಂದ ಮಾಡಿದ್ದ ಕೊಟ್ಟಿಗೆಯನ್ನು ರಚಿಸಿ, ಅದರ ಅಡಿಭಾಗದಲ್ಲಿ ಹಡಗನ್ನು ನಿಲ್ಲಿಸಲಾಗಿತ್ತು. ಶುಕ್ರವಾರ ಸಂಜೆ ಹೊತ್ತಿಗೆ ಕೊಟ್ಟಿಗೆ ಪಕ್ಕದಲ್ಲಿ ಮಕ್ಕಳು ಪಟಾಕಿ ಬಿಡುತ್ತಿದ್ದರು. ಈ ವೇಳೆ, ಮಕ್ಕಳು ಸಿಡಿಸಿದ್ದ ಪಟಾಕಿಯೊಂದು ನೇರವಾಗಿ ತೆಂಗಿನ ಗರಿಗಳಿದ್ದ ಮಾಡಿಗೆ ಹೋಗಿದ್ದು ಬೆಂಕಿ ಸಿಡಿಯುವಂತೆ ಕಾರಣವಾಗಿದೆ ಎನ್ನಲಾಗುತ್ತಿದೆ. ಕ್ಷಣಾರ್ಧದಲ್ಲಿ ಬೆಂಕಿ ಹರಡಿದ್ದು ಒಂದರಿಂದ ಇನ್ನೊಂದು ಮಿನಿ ಹಡಗುಗಳಿಗೆ ವ್ಯಾಪಿಸಿದೆ.
ಸರಕು ಸಾಗಿಸಲು ಬಳಸುತ್ತಿದ್ದ ಮೂರೂ ಹಡಗುಗಳು ಪೂರ್ತಿ ಹೊರಮೈ ಮರದಿಂದ ನಿರ್ಮಿತವಾಗಿದ್ದು ಒಳಭಾಗದ ರಚನೆಯೂ ಫೈಬರ್ ಮತ್ತು ಮರದಿಂದ ಮಾಡಲ್ಪಟ್ಟವು. ಹೀಗಾಗಿ ಬೆಂಕಿ ಬಹುಬೇಗನೆ ಇಡೀ ಹರಡಿದ್ದು ನೋಡ ನೋಡುತ್ತಲೇ ದಟ್ಟ ಹೊಗೆ ಮತ್ತು ಬೆಂಕಿಯ ಕೆನ್ನಾಲಿಗೆ ಬಾನೆತ್ತರಕ್ಕೆ ಏರಿತ್ತು. ಒಂದು ಹಡಗು ಮಂಗಳೂರಿನ ವೈದ್ಯರಿಗೆ ಸೇರಿದ್ದಾಗಿದ್ದು ಇನ್ನೆರಡು ಲಕ್ಷದ್ವೀಪದ ಉದ್ಯಮಿಗಳಿಗೆ ಸೇರಿದ್ದೆಂದು ಮಾಹಿತಿಯನ್ನು ಸ್ಥಳೀಯರು ತಿಳಿಸಿದ್ದಾರೆ.
ವಿಷಯ ತಿಳಿದ ಕೂಡಲೇ ವಿವಿಧ ಕಡೆಯ ಅಗ್ನಿಶಾಮಕ ದಳ ಸಿಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದಾರೆ. ಪಣಂಬೂರು ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಮೂರೂ ಹಡಗುಗಳು ಪೂರ್ತಿಯಾಗಿ ಸುಟ್ಟು ಹೋಗಿವೆ. ಈ ಮಿನಿ ಹಡಗಿನ ಒಂದರ ಬೆಲೆ ಐದು ಕೋಟಿಯಷ್ಟಿದ್ದು ಬೆಂಕಿ ದುರಂತದಲ್ಲಿ ಮೂರೂ ಭಸ್ಮ ಆಗಿವೆ. ಈ ಮಿನಿ ಹಡಗಿನಲ್ಲಿ ಅಂದಾಜು 300 ಟನ್ ನಷ್ಟು ಸರಕು ಸಾಗಾಟ ಮಾಡಲಾಗುತ್ತಿತ್ತು.
Mangalore Three boats anchored in Kasaba Bengre under Panambur Police Station limits here accidentally caught fire on Friday, October 28. It is said that initially one boat caught fire. Later the flames spread to nearby anchored boats.
14-05-25 05:16 pm
Bangalore Correspondent
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
14-05-25 11:08 pm
HK News Desk
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
14-05-25 08:05 pm
Mangalore Correspondent
Lokayuta, Arrest, Bantwal, Mangalore: ಗಂಡನ ಪಿ...
14-05-25 06:33 pm
Harish Injadi, President of Kukke Subrahmanya...
14-05-25 01:42 pm
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
14-05-25 10:22 pm
HK News Desk
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm