ಬ್ರೇಕಿಂಗ್ ನ್ಯೂಸ್
28-05-22 09:04 pm Mangalore Correspondent ಕರಾವಳಿ
ಮಂಗಳೂರು, ಮೇ 28: ಮದುವೆ ಮಂಟಪದಲ್ಲಿ ಇನ್ನೇನು ವರ ತಾಳಿ ಕಟ್ಟಲು ರೆಡಿಯಾಗುತ್ತಿದ್ದಾಗಲೇ ವಧು ವರನ ಬಗ್ಗೆಯೇ ಸಂಶಯ ಪಟ್ಟಿದ್ದಲ್ಲದೆ, ವಿನಾಕಾರಣ ರಂಪಾಟ ಮಾಡಿ ಮದುವೆ ಮಂಟಪದಿಂದಲೇ ಎದ್ದು ಹೋದ ಘಟನೆ ನಾರಾವಿಯಲ್ಲಿ ನಡೆದಿದೆ.
ಮೂಡುಕೊಣಾಜೆಯ ಯುವತಿ ಹಾಗೂ ನಾರಾವಿಯ ಯುವಕನ ಜೊತೆ ಮೇ 25ರಂದು ನಾರಾವಿಯಲ್ಲಿ ಮದುವೆ ಕಾರ್ಯಕ್ಕೆ ಸಿದ್ಧತೆ ನಡೆದಿತ್ತು. 500 ಮಂದಿಗೆ ಊಟಕ್ಕೂ ರೆಡಿ ಮಾಡಲಾಗಿತ್ತು. ಇನ್ನೇನು ಮದುವೆ ಕಾರ್ಯ ಮುಗಿದೇ ಹೋಯ್ತು ಎನ್ನುವಷ್ಟರಲ್ಲಿ ಯುವತಿ ರಂಪ ಶುರು ಮಾಡಿದ್ದಾಳೆ. ತಾಳಿ ಕಟ್ಟಲು ರೆಡಿಯಾಗುತ್ತಿದ್ದ ಯುವಕ, ತನಗೆ ಕೈ ತಾಗಿಸಿದ ಎಂದು ಹೇಳಿ ರಂಪ ಎತ್ತಿದ್ದ ಯುವತಿ ಬಳಿಕ ಮದುವೆ ಮಂಟಪದಿಂದಲೇ ಎದ್ದಿದ್ದಾಳೆ. ಅಲ್ಲದೆ, ನಿಶ್ಚಯ ಸಂದರ್ಭದಲ್ಲಿ ಬಂದಿದ್ದ ಹುಡುಗನೇ ಬೇರೆ. ಈಗ ಬಂದಿರುವ ಹುಡುಗನೇ ಬೇರೆ ಎಂಬುದಾಗಿ ಸಿಟ್ಟಿಗೆದ್ದು ರಂಪಾಟ ಮಾಡಿದ್ದಾಳೆ.
ಮದುವೆ ಕಾರ್ಯ ಅರ್ಧದಲ್ಲೇ ನಿಂತಿದ್ದಲ್ಲದೆ, ವಿಷಯ ವೇಣೂರು ಪೊಲೀಸರ ಬಳಿಗೆ ಹೋಗಿದೆ. ಮದುವೆಯೇನೋ ನಿಂತಿದೆ, ಮದುವೆಯ ಖರ್ಚು ಯಾರು ಕೊಡಬೇಕೆಂದು ವರನ ಕಡೆಯವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಪೊಲೀಸರು ಮಾತುಕತೆ ನಡೆಸಿ, ಎರಡೂ ಕಡೆಯವರು ಸಮಾನ ಖರ್ಚು ಭರಿಸುವಂತೆ ತಿಳಿಸಿದ್ದರು. 500 ಜನರಿಗೆ ಮಾಡಿದ್ದ ಊಟವನ್ನು ಬಳಿಕ ಪೊಲೀಸರ ಸಲಹೆಯಂತೆ ಅಲ್ಲಿಯೇ ಪಕ್ಕದ ಸರಕಾರಿ ಶಾಲೆಯ ಮಕ್ಕಳಿಗೆ ಕೊಡಿಸಿದ್ದಾರೆ. ಮದುವೆಗೆ ಬಂದಿದ್ದ ಒಂದಷ್ಟು ಜನ ಊಟ ಮಾಡಿಕೊಂಡು ಹಿಂತಿರುಗಿದ್ದಾರೆ.
ಪೊಲೀಸರ ಪ್ರಕಾರ, ವಧು ಸ್ವಲ್ಪ ಮಾನಸಿಕ ಅಸ್ವಸ್ಥಳಂತೆ ಮಾಡುತ್ತಿದ್ದಳಂತೆ. ತಾಳಿ ಕಟ್ಟುವಾಗ, ಕೈ ದೇಹಕ್ಕೆ ತಾಗುವುದು ಕಾಮನ್. ಆದರೆ, ಅದೇ ವಿಷಯ ಹಿಡಿದು ವಧು ರಂಪ ಮಾಡಿದ್ದಾಳೆ. ಯಾರು ಹೇಳಿದ್ದನ್ನೂ ಕೇಳುತ್ತಿರಲಿಲ್ಲ. ಹೀಗಾಗಿ ಸ್ವಲ್ಪ ಮಾನಸಿಕ ಸ್ಥಿಮಿತ ಕಳಕೊಂಡ ರೀತಿ ವರ್ತಿಸುತ್ತಿದ್ದಳು. ಹೀಗಾಗಿ ವರನ ಕಡೆಯವರು ಕೂಡ ಇದನ್ನು ಮದುವೆಯಾದರೆ ನಮಗೆ ಉಳಿಗಾಲ ಇಲ್ಲ ಎಂದು ಸಂಬಂಧ ಕಡಿದುಕೊಳ್ಳಲು ಒಪ್ಪಿದ್ದರಂತೆ. ವರನ ಕಡೆಯವರ ಪ್ರಕಾರ, ನಿಶ್ಚಯ ಆದಂದಿನಿಂದಲೂ ಯುವತಿ ಅದೇ ರೀತಿ ವರ್ತಿಸುತ್ತಿದ್ದಳಂತೆ. ಹೀಗಾಗಿ ಎರಡೂ ಕಡೆಯವರನ್ನು ಠಾಣೆಗೆ ಕರೆಸಿ, ಮದುವೆಯ ಖರ್ಚನ್ನು ಸಮಾನವಾಗಿ ಭರಿಸಲು ಹೇಳಿದ್ದು, ಪ್ರಕರಣ ದಾಖಲಿಸದೆ ಬಿಟ್ಟು ಕಳುಹಿಸಿದ್ದಾರೆ.
In a bizarre incident reported from Naravi in the taluk on May 25, a bride threw the garland and refused to get married to the groom just because the groom’s hand brushed her neck during the traditional garland exchange.The wedding of the girl from Moodukonaje and boy from Naravi was fixed and was to be held on May 25 at a marriage hall in Naravi.
22-06-25 07:52 pm
HK News Desk
Heart Attack, Hassan: ಊಟಕ್ಕೆ ಕುಳಿತುಕೊಳ್ಳುವಾಗ...
22-06-25 12:36 pm
Iran Attack Illegal,War, CM Siddaramaiah; ಇರಾ...
21-06-25 02:48 pm
ಗುತ್ತಿಗೆ ಮೀಸಲು ಹೆಚ್ಚಳ ಬೆನ್ನಲ್ಲೇ ಅಲ್ಪಸಂಖ್ಯಾತರಿ...
20-06-25 10:36 am
ಕಮಲ್ ನಟನೆಯ 'ಥಗ್ ಲೈಫ್' ಸಿನಿಮಾ ಪ್ರಸಾರಕ್ಕೆ ಸುಪ್ರ...
17-06-25 05:35 pm
22-06-25 07:48 pm
HK News Desk
Yoga Haram Muslims; ಯೋಗವನ್ನು ಒಪ್ಪುತ್ತೇವೆ, ಸೂರ...
22-06-25 04:57 pm
Pahalgam Attack, NIA Arrest; ಪಹಲ್ಗಾಮ್ ದಾಳಿಗೂ...
22-06-25 04:49 pm
Israel Iran Conflict, B-2 Stealth Bombers; ಇಸ...
22-06-25 10:58 am
IndiGo Flight News, Bangalore; ಇಂಡಿಗೋ ವಿಮಾನದಲ...
21-06-25 08:50 pm
21-06-25 11:04 pm
Mangaluru Correspondent
Krishnaveni Mines Geology, Mangalore;18 ದಿನ ಜ...
21-06-25 03:56 pm
Fake NEET Marksheet, Udupi Topper; ನಕಲಿ ನೀಟ್...
21-06-25 01:59 pm
Sakleshpur, Mangalore Bangalore Train; ಸಕಲೇಶಪ...
21-06-25 12:03 pm
Kudupu Murder, Sajith Shetty Post, Sudheer Ku...
20-06-25 11:04 pm
21-06-25 08:58 pm
Mangaluru Correspondent
Crime Mangalore, Bantwal Attack, Fake News; ಬ...
21-06-25 12:21 pm
Brahmavar, Udupi Murder, Crime: ಪತ್ನಿಗೆ ಮೊಬೈಲ...
20-06-25 02:04 pm
Mangalore, Bantwal Pregnant Woman Murder, Sui...
19-06-25 04:37 pm
Ccb Police, Bangalore, Drugs, crime: ಚೂಡಿದಾರ್...
17-06-25 05:06 pm