ಬ್ರೇಕಿಂಗ್ ನ್ಯೂಸ್
25-05-22 07:20 pm Mangalore Correspondent ಕರಾವಳಿ
ಮಂಗಳೂರು, ಮೇ 25: ಮಳಲಿ ಮಸೀದಿಯಲ್ಲಿ ಹಿಂದು ದೇವರ ಸಾನ್ನಿಧ್ಯ ಇರುವುದು ಕಂಡುಬಂದಿದೆ. ಹಾಗಾಗಿ ಮಸೀದಿ ಕಮಿಟಿಯವರು ಆ ಜಾಗವನ್ನು ಹಿಂದುಗಳಿಗೆ ಬಿಟ್ಟು ಕೊಡಬೇಕೆಂದು ನಾವು ಮನವಿ ಮಾಡುತ್ತೇವೆ. ಈ ಬಗ್ಗೆ ಕೋರ್ಟ್ ಹೋರಾಟಕ್ಕೂ ಬೇಕಾದ ದಾಖಲೆಗಳನ್ನು ಕ್ರೋಡೀಕರಿಸುತ್ತೇವೆ ಎಂದು ವಿಶ್ವ ಹಿಂದು ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್ ಹೇಳಿದ್ದಾರೆ.
ಮಸೀದಿಯಲ್ಲಿ ದೇವಸ್ಥಾನದ ಚಿತ್ರಣ ಕಂಡುಬಂದ ಬಳಿಕ ಅದರ ಹೋರಾಟದ ರೂಪುರೇಷೆ ಬಗ್ಗೆ ಹಲವಾರು ಸಭೆಗಳನ್ನು ನಡೆಸಿದ್ದೇವೆ. ಅಲ್ಲಿ ದೇವತಾ ಸಾನ್ನಿಧ್ಯ ಇದೆಯೇ, ಯಾವ ದೇವರ ಆರಾಧನೆ ಇತ್ತು ಎನ್ನುವುದನ್ನು ತಿಳಿಯಲು ತಾಂಬೂಲ ಪ್ರಶ್ನೆ ನಡೆಸಿದ್ದು, ಅದರಲ್ಲಿ ದೇವತಾ ಸಾನ್ನಿಧ್ಯ ಇರುವುದು ತಿಳಿದುಬಂದಿದೆ. ಅದರಲ್ಲೂ ಶಿವನ ಆರಾಧನೆ ಇತ್ತು ಎನ್ನುವುದು ತಿಳಿದುಬಂದಿದೆ.
ಹಾಗಾಗಿ ಅಲ್ಲಿನ ಮಸೀದಿ ಕಮಿಟಿಯವರಿಗೆ ಮನವಿ ಮಾಡುತ್ತಿದ್ದೇನೆ. ಪುರಾತನ ಕಾಲದಲ್ಲಿ ನೂರಾರು ವರ್ಷಗಳ ಹಿಂದೆ ಅಲ್ಲಿ ಹಿಂದುಗಳ ಆರಾಧನೆ ಇತ್ತು. ಆ ಜಾಗ ಹಿಂದುಗಳದ್ದು. ಹಾಗಾಗಿ ಹಿಂದುಗಳಿಗೆ ಅದನ್ನು ಬಿಟ್ಟು ಕೊಡಬೇಕೆಂದು ಮನವಿ ಮಾಡುತ್ತೇನೆ. ಈಗಾಗಲೇ ಈ ವಿಚಾರ ಕೋರ್ಟಿನಲ್ಲಿದ್ದು ಕೋರ್ಟಿಗೂ ನಾವು ದಾಖಲೆಗಳನ್ನು ಸಲ್ಲಿಸುತ್ತೇವೆ ಎಂದು ಶರಣ್ ಪಂಪ್ವೆಲ್ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.
ಅಷ್ಟಮಂಗಲ ಪ್ರಶ್ನೆ ಇಡಲು ಸೂಚನೆ
ಮಳಲಿ ಮಸೀದಿಯಲ್ಲಿ ದೇವಸ್ಥಾನ ಚಿತ್ರಣ ಕಂಡುಬಂದಿದ್ದರಿಂದ ಹಿಂದು ಸಂಘಟನೆಗಳು ಮಳಲಿಯ ಭಜನಾ ಮಂದಿರ ಒಂದರಲ್ಲಿ ತಾಂಬೂಲ ಪ್ರಶ್ನೆಯ ಜ್ಯೋತಿಷ್ಯ ಚಿಂತನೆ ಮಾಡಿದ್ದರು. ಅದರಲ್ಲಿ ಮಸೀದಿ ಇರುವ ಜಾಗದಲ್ಲಿ ದೇವತಾ ಸಾನ್ನಿಧ್ಯ ಇರುವ ಬಗ್ಗೆ ಜ್ಯೋತಿಷಿಗಳು ತಿಳಿಸಿದ್ದಾರೆ. ಶಿವನ ಆರಾಧನೆ ಇರುವುದರ ಬಗ್ಗೆ ಜ್ಯೋತಿಷಿಗಳು ಹೇಳಿದ್ದು, ಯಾವ ಕಾಲದಲ್ಲಿ ಆರಾಧನೆ ಇತ್ತು, ಯಾವೆಲ್ಲಾ ದೇವ ಸಾನ್ನಿಧ್ಯಗಳಿದ್ದವು ಅನ್ನುವುದನ್ನು ತಿಳಿಯಲು ಮುಂದೆ ಅಷ್ಟಮಂಗಲ ಪ್ರಶ್ನೆ ಇಡಲು ಜ್ಯೋತಿಷಿ ಗೋಪಾಲಕೃಷ್ಣ ಪಣಿಕ್ಕರ್ ತಿಳಿಸಿದ್ದಾರೆ.
Malali Masjid belongs to Hindu Temple, give us back says VHP Sharan Pumpwell after conducting thambula prashne. The Vishwa Hindu Parishad and other Hindu groups on Wednesday conducted a ritual at a temple in Malali near Mangaluru to ascertain the 'divinity' of a site there. Last month, during renovation work on an old mosque, the Malali Juma Masjid, in Malali, artefacts resembling architecture of a Hindu temple were, reportedly, found at the site. This had led to claims a temple existed there.
07-05-25 04:07 pm
Bangalore Correspondent
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
Mysuru, Prison, Arrest, Siddaramaiah: ಬೆಳಗಾವಿ...
06-05-25 09:38 pm
ಓಬಳಾಪುರಂ ಅಕ್ರಮ ಮೈನಿಂಗ್ ಪ್ರಕರಣ ; ಮಾಜಿ ಸಚಿವ ಗಾಲ...
06-05-25 08:18 pm
Hubballi Accident, Sagara, Five Killed: ಹುಬ್ಬ...
06-05-25 01:35 pm
07-05-25 10:45 pm
HK News Desk
Operation Sindoor: ಸೇನಾ ದಾಳಿಗೆ ‘ಆಪರೇಶನ್ ಸಿಂಧೂ...
07-05-25 10:28 pm
Gunfire at Border; ಗಡಿಯಲ್ಲಿ ಗುಂಡಿನ ಮೊರೆತ ; ಕಾ...
07-05-25 06:14 pm
Kasaragod Toll, Kumbla: ತಲಪಾಡಿ – ಚೆರ್ಕಳ ಆರು ಪ...
07-05-25 12:20 pm
India strikes terror camps in Pak; ಪಾಕಿಸ್ತಾನದ...
07-05-25 09:54 am
07-05-25 10:30 pm
Mangalore Correspondent
Operation Sindhoor, MP Brijesh Chowta, Manga...
07-05-25 03:36 pm
Hindu Maha Sabha, Mangalore, Rajesh Pavitran:...
07-05-25 02:36 pm
Mangalore, Satish Kumapla, U T Khader: ಚಿಕ್ಕಮ...
06-05-25 06:36 pm
Suhas Shetty Murder, Bommai, Dinesh Gundurao:...
06-05-25 06:17 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm