ಬ್ರೇಕಿಂಗ್ ನ್ಯೂಸ್
13-09-21 01:22 pm Shreeraksha, Boldsky ಡಾಕ್ಟರ್ಸ್ ನೋಟ್
ಹೆಣ್ಣುಮಕ್ಕಳ ನಿದ್ದೆಗೆಡಿಸುವಲ್ಲಿ ಮೊಡವೆಗಳ ಪಾತ್ರ ಬಹಳ ದೊಡ್ಡದು, ಹೆಣ್ಣು ಮಾತ್ರವಲ್ಲ, ಪುರುಷರೂ ಸಹ ಈ ಮೊಡವೆ ಸಮಸ್ಯೆಗೆ ಈಗೀಗ ಹೆಚ್ಚೆಚ್ಚು ಬಲಿಯಾಗುತ್ತಿದ್ದಾರೆ. ಮೊಡವೆಯ ಗುಳ್ಳೆಗಳ ನೋವು ಒಂದೆಡೆಯಾದರೆ, ಕೊನೆಗೆ ಅದು ನೀಡುವ ಕಪ್ಪು ಕಲೆಯ ಕೊಡುಗೆ ಮತ್ತೊಂದೆಡೆ. ಇದರಿಂದ ಸಾಕಷ್ಟು ಜನರು ಪರದಾಡುತ್ತಿದ್ದು, ಈ ಕಲೆಗಳನ್ನು ಕಡಿಮೆಮಾಡಲು ದುಬಾರಿ ಉತ್ಪನ್ನಗಳನ್ನೂ ಬಳಸುವುದುಂಟು. ಆದರೆ ಕಲೆಗಳು ಮಾತ್ರ ಹಾಗೆಯೇ ಉಳಿದುಬಿಡುತ್ತವೆ.
ಆದ್ದರಿಂದ ನಾವಿಲ್ಲಿ ಇಂತಹ ಮೊಡವೆಯಿಂದ ಉಂಟಾದ ಕಪ್ಪುಕಲೆಗಳನ್ನು ಕಡಿಮೆಮಾಡಲು ಕೆಲವೊಂದು ಸಲಹೆಗಳನ್ನು ನೀಡಲಿದ್ದೇವೆ.

ಮೊಡವೆಯಿಂದ ಉಂಟಾದ ಕಪ್ಪುಕಲೆಗಳನ್ನು ಕಡಿಮೆಮಾಡಲು ಕೆಲವೊಂದು ಸಲಹೆಗಳನ್ನು ಈ ಕೆಳಗೆ ನೀಡಲಾಗಿದೆ:
ವಿಟಮಿನ್ ಸಿ ಸಹಕಾರಿ:
ವಿಟಮಿನ್ ಸಿ ಕಪ್ಪು ಕಲೆಗಳನ್ನು ಮಾಯ ಮಾಡುವಲ್ಲಿ ಹೆಚ್ಚು ಪರಿಣಾಮಕಾರಿ. ಇದು ಅನೇಕ ಸಿಟ್ರಸ್ ಹಣ್ಣುಗಳಲ್ಲಿ ನೈಸರ್ಗಿಕವಾಗಿದ್ದು, ಅನೇಕ ಸೌಂದರ್ಯ ಉತ್ಪನ್ನಗಳನ್ನು ಬಳಸುವ ಘಟಕಾಂಶವಾಗಿದೆ. ವಿಟಮಿನ್ ಸಿ ಹೇರಳವಾಗಿರುವ ಉತ್ಪನ್ನಗಳನ್ನು ಬಳಸಿದ ನಂತರ, ಕಪ್ಪು ಕಲೆಗಳು ಮಾಯವಾಗಿ, ಹೊಳೆಯುವ ತ್ವಚೆ ನಿಮ್ಮದಾಗುವುದು. ಸಲಹೆ: ಉತ್ತಮವಾದ ವಿಟಮಿನ್ ಸಿ ಸಿರಮ್ ಅನ್ನು ಆಯ್ಕೆ ಮಾಡಿ, ಮುಖ ತೊಳೆದ ನಂತರ ಪ್ರತಿದಿನ ಹಚ್ಚಿ.
ರೆಟಿನಾಲ್ ನ್ನು ಪ್ರಯತ್ನಿಸಿ:
ರೆಟಿನಾಲ್ ಕಪ್ಪು ಕಲೆಗಳನ್ನು ಹೋಗಲಾಡಿಸುವ ಅತ್ಯುತ್ತಮ ಪದಾರ್ಥಗಳಲ್ಲಿ ಒಂದಾಗಿದೆ. ಇದರ ನಿಯಮಿತ ಬಳಕೆಯಿಂದಾಗಿ ಚರ್ಮಕ್ಕೆ ಟೋನ್ ಹಾಗೂ ಯಾವುದೇ ಹಾನಿಯಿಂದ ತಡೆಯುವುದು. ಇದು ಕಾಣದಿರುವ ಕಪ್ಪು ಕಲೆಗಳಿಗೆ ಚಿಕಿತ್ಸೆ ನೀಡಲು ಚರ್ಮದ ಪದರಗಳ ಆಳಕ್ಕೆ ಸೇರಿಕೊಳ್ಳುತ್ತದೆ. ಆದ್ದರಿಂದ ನಿಮ್ಮ ತ್ವಚೆ ದಿನಚರಿಯಲ್ಲಿ ರೆಟಿನಾಲ್ ಕ್ರೀಮ್ ಅಥವಾ ಸೀರಮ್ ಅನ್ನು ಸೇರಿಸಿ, ಇದರಿಂದ ಮೊಡವೆಗಳು ನಿಯಂತ್ರಣಕ್ಕೆ ಬರುತ್ತವೆ .

ಮಜ್ಜಿಗೆ:
ಮಜ್ಜಿಗೆಯಲ್ಲಿ ಲ್ಯಾಕ್ಟಿಕ್ ಆಸಿಡ್ ಸಮೃದ್ಧವಾಗಿದ್ದು, ತ್ವಚೆಯ ಡೆಡ್ ಸೆಲ್ ಗಳನ್ನು ನಿಧಾನವಾಗಿ ಹೊರಹಾಕಲು ಮತ್ತು ಕಪ್ಪು ಕಲೆಗಳನ್ನು ಹೋಗಲಾಡಿಸಿ, ಚರ್ಮವನ್ನು ಹೊಳೆಯುವಂತೆ ಮಾಡಲು ಇದು ಉತ್ತಮವಾಗಿದೆ . ಇದು ನಿಮ್ಮ ಚರ್ಮದ ಪಿಎಚ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಸಲಹೆ: ನಿಮ್ಮ ಮುಖಕ್ಕೆ ಹತ್ತಿಯ ಉಂಡೆ ಬಳಸಿ ಮಜ್ಜಿಗೆಯನ್ನು ಹಚ್ಚಿ. ಇದನ್ನು 20 ನಿಮಿಷಗಳ ಕಾಲ ಬಿಡಿ ನಂತರ ತೊಳೆಯಿರಿ.

ನಿಂಬೆ ರಸ:
ಇದು ಸಿಟ್ರಸ್ ಹಣ್ಣಾಗಿರುವುದರಿಂದ, ಇದರಲ್ಲಿ ಹೆಚ್ಚಿನ ವಿಟಮಿನ್ ಸಿ ಅಂಶವಿದೆ. ನಿಂಬೆ ರಸ ಹಾಕಿದ ಫೇ್ ಪ್ಯಾಕ್ ಹಾಕಿಕೊಳ್ಳುವುದರಿಂದ ಎಣ್ಣೆಯುಕ್ತ ತ್ವಚೆ ಹೊಂದಿರುವವರಿಗೆ ಸಹಕಾರಿ ಜೊತೆಗೆ ಕಪ್ಪು ಕಲೆಗಳನ್ನು ಬೇಗನೇ ಮಾಯಮಾಡುವುದು. ಸಲಹೆ: ಒಂದು ಚಮಚ ಜೇನುತುಪ್ಪ ಮತ್ತು ಒಂದು ಚಮಚ ನಿಂಬೆ ರಸವನ್ನ ಬೆರೆಸಿ ಫೇಸ್ ಮಾಸ್ಕ್ ಮಾಡಿ. ಇದನ್ನು 15 ನಿಮಿಷಗಳ ಕಾಲ ಹಾಗೆಯೇ ಬಿಡಿ ನಂತರ ತೊಳೆಯಿರಿ.

ಪಿಂಪಲ್ ಪ್ಯಾಚ್:
ಇವುಗಳ ಅದ್ಭುತ ಪ್ರಯೋಜನಗಳ ಬಗ್ಗೆ ನಿಮ್ಮಲ್ಲಿ ಹೆಚ್ಚಿನವರು ತಿಳಿದಿರಬೇಕು. ಈ ಪ್ಯಾಚ್ ಗಳು ಹೈಡ್ರೊಕೊಲಾಯ್ಡ್ ಬ್ಯಾಂಡೇಜ್ ಆಗಿದ್ದು, ನಿಮ್ಮ ಮೊಡವೆಗೆ ಹಚ್ಚಿ, ದಿನವಿಡೀ ಬಿಡಬಹುದು. ಇವುಗಳು ಮೊಡವೆಗಳನ್ನು ಒಣಗಿಸಿ, ಯಾವುದೇ ಕಪ್ಪು ಕಲೆಗಳ ಗುರುತು ಬಿಡದೆ ಅದನ್ನು ನಿಧಾನವಾಗಿ ಹೊರಹಾಕುತ್ತವೆ. ಸಲಹೆ: ನೀವು ಸ್ನಾನಕ್ಕೆ ಹೋದರೂ ಪ್ಯಾಚ್ ಗಳು ಉಳಿಯುತ್ತವೆ. ಇದು ನಿಮ್ಮ ಮೊಡವೆಗಳು ಸೋಂಕಿಗೆ ಒಳಗಾಗುವುದನ್ನು ತಪ್ಪಿಸಿ, ಒಂದು ರಾತ್ರಿಯಲ್ಲಿ ಮರೆಮಾಡುತ್ತವೆ.

ಸ್ಯಾಲಿಸಿಲಿಕ್ ಆಮ್ಲ:
ಈ ಘಟಕಾಂಶವು ಅತ್ಯಂತ ಪ್ರಸಿದ್ಧ ಮೊಡವೆ ಹೋರಾಟಗಾರರಲ್ಲಿ ಒಂದಾಗಿದ್ದು, ಕಪ್ಪು ಕಲೆಗಳಂತಹ ಸಮಸ್ಯೆಗಳಿಗೂ ಸಹ ಕೆಲಸ ಮಾಡುತ್ತದೆ. ಸ್ಯಾಲಿಸಿಲಿಕ್ ಆಸಿಡ್ ಒಂದು ಎಕ್ಸ್ಫೋಲಿಯೇಟಿಂಗ್ ಏಜೆಂಟ್ ಆಗಿದ್ದು, ಅದು ಮೊಡವೆ ಉಂಟುಮಾಡುವ ಬ್ಯಾಕ್ಟೀರಿಯಾವನ್ನು ಮತ್ತು ಇತರ ಡೆಡ್ ಸೆಲ್ಗಳ ಜೊತೆಗೆ ಕಪ್ಪು ಕಲೆಗಳನ್ನು ಕೂಡ ತೆಗೆದುಹಾಕುತ್ತದೆ .
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am