ಬ್ರೇಕಿಂಗ್ ನ್ಯೂಸ್
15-06-21 10:23 am Shreeraksha, BoldSky Kannada ಡಾಕ್ಟರ್ಸ್ ನೋಟ್
ಕೊರೊನಾ ಎರಡನೇ ಅಲೆಯೆನೋ ನಿಯಂತ್ರಣಕ್ಕೆ ಬರುತ್ತಿದೆ, ಆದರೆ ಮೂರನೇ ಅಲೆ ಹಾಗೂ ಅದು ಮಕ್ಕಳಿಗೆ ಉಂಟು ಮಾಡಬಹುದಾದ ಅಪಾಯದ ಕುರಿತು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಇದೇ ಕಾರಣಕ್ಕಾಗಿ ಕೇಂದ್ರದ ಆಯುಷ್ ಸಚಿವಾಲಯ ಮಕ್ಕಳು ಮತ್ತು ಪೋಷಕರಿಗೆ ಮನೆಯಲ್ಲಿಯೇ ಪಾಲಿಸಬೇಕಾದ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಈ ಮಾರ್ಗಸೂಚಿಯಲ್ಲಿ ಏನೇನಿದೆ ಎಂಬುದನ್ನು ಈ ಕೆಳಗೆ ನೊಡೋಣ.
ಆಯುಷ್ ಇಲಾಖೆ ತಿಳಿಸಿದ ಮಕ್ಕಳ ಆರೋಗ್ಯಕ್ಕಾಗಿ ತೆಗೆದುಕೊಳ್ಳಬೇಕಾದ ಕ್ರಮಗಳು:
1. ಮಕ್ಕಳು ಆಗಾಗ್ಗೆ ಕೈ ತೊಳೆಯುವುದು ಹಾಗೂ ಮನೆಯ ಹೊರಗೆ ಹೋಗುವಾಗ ಮಾಸ್ಕ್ ಧರಿಸುವುದು. ಹೀಗೆ ಮಾಡುವುದನ್ನು ಪ್ರೋತ್ಸಾಹಿಸಲು ಅವರಿಗೆ ಬಹುಮಾನವನ್ನು ನೀಡಬಹುದು.
2. 5-18 ವರ್ಷ ವಯಸ್ಸಿನ ಮಕ್ಕಳಿಗೆ ಮಾಸ್ಕ್ ಕಡ್ಡಾಯವಾಗಿದೆ ಆದರೆ 2-5 ವರ್ಷ ವಯಸ್ಸಿನ ಮಕ್ಕಳು ಪೋಷಕರ ಮೇಲ್ವಿಚಾರಣೆಯಲ್ಲಿ ಹಾಕಿಕೊಳ್ಳಬಹುದು.
3. ವೈದ್ಯಕೀಯೇತರ ಅಥವಾ ಬಟ್ಟೆಯ ಮೂರು-ಲೇಯರ್ ಇರುವ ಹತ್ತಿ ಮಾಸ್ಕ್ ಗಳು ಮಕ್ಕಳಿಗೆ ಯೋಗ್ಯ
4. ಮಕ್ಕಳು ಸಾಧ್ಯವಾದಷ್ಟು ಮನೆಯಲ್ಲಿಯೇ ಇರಬೇಕು, ಪ್ರಯಾಣವನ್ನು ತಪ್ಪಿಸಬೇಕು.
5. ವೀಡಿಯೊ ಮತ್ತು ಫೋನ್ ಕರೆಗಳ ಮೂಲಕ ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಸಂಪರ್ಕದಲ್ಲಿರಲು ಅವರಿಗೆ ಸಹಾಯ ಮಾಡಿ.
6. ವಯಸ್ಸಾದವರು ಗಂಭೀರವಾದ ಕಾಯಿಲೆಯ ಅಪಾಯವನ್ನು ಹೊಂದಿರುವುದರಿಂದ ಕೋವಿಡ್ ಶಂಕಿತ ಮಕ್ಕಳು ತಮ್ಮ ಅಜ್ಜ-ಅಜ್ಜಿಯರೊಂದಿಗೆ ಸಂಪರ್ಕದಲ್ಲಿರಬಾರದು.
7. ಮಕ್ಕಳಲ್ಲಿ ಐದು ದಿನಗಳಿಗಿಂತ ಹೆಚ್ಚಿನ ಅವಧಿಯ ಜ್ವರ, ಊಟ ಸೇರದೇ ಇರುವುದು, ಆಲಸ್ಯವಾಗುವುದು, ಉಸಿರಾಟದ ಪ್ರಮಾಣ ಹೆಚ್ಚಾಗುವುದು ಮತ್ತು ಆಮ್ಲಜನಕ ಮಟ್ಟ 95% ಕ್ಕಿಂತ ಕಡಿಮೆಯಾಗುವುದನ್ನು ಪೋಷಕರು ಗಮನಿಸುತ್ತಿರಬೇಕು. ಇವುಗಳಲ್ಲಿ ಯಾವುದಾದರೂ ಒಂದು ಕಂಡುಬಂದರೂ ವೈದ್ಯರ ಬಳಿ ಕರೆದೊಯ್ಯಿರಿ.
8. ಮಕ್ಕಳಿಗೆ ಕುಡಿಯಲು ಕುದಿಸಿ, ಆರಿಸಿದ ನೀರು ನೀಡಬೇಕು.
9. ಎರಡು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ಬೆಳಿಗ್ಗೆ ಮತ್ತು ರಾತ್ರಿ ಸರಿಯಾಗಿ ಹಲ್ಲುಜ್ಜುವ ಮೂಲಕ ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕು.
10. 5 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ಎಣ್ಣೆ ಮತ್ತು ಬೆಚ್ಚಗಿನ ನೀರಿನಿಂದ ಬಾಯಿ ಆಗಾಗ ಮುಕ್ಕಳಿಸಬೇಕು.
11. 5 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ತೈಲ ಮಸಾಜ್ಗಳು, ಯೋಗಾಭ್ಯಾಸಗಳಾದ ಪ್ರಾಣಾಯಾಮ ಮತ್ತು ಧ್ಯಾನ -ವ್ಯಾಯಾಮಗಳನ್ನು ಮಾಡಲು ಪ್ರೋತ್ಸಾಹಿಸಬೇಕು.
12. ಆಯುರ್ವೇದ ಅನುಸರಿಸುವ ಮಕ್ಕಳಿಗಾಗಿ ಆಯುರ್ವೇದ ರೋಗನಿರೋಧಕ ಕ್ರಮಗಳು, ಅರಿಶಿನ ಹಾಲು, ಚವಾನ್ ಪ್ರಶ್ ಮತ್ತು ಸಾಂಪ್ರದಾಯಿಕ ಗಿಡಮೂಲಿಕೆಗಳ ಕಷಾಯ ಮುಂತಾದ ಆಯುರ್ವೇದ ಔಷಧಿಗಳನ್ನು ತೆಗೆದುಕೊಳ್ಳಿ.
13. ಮಕ್ಕಳಿಗೆ ಸಾಕಷ್ಟು ನಿದ್ರೆ ಮತ್ತು ಸುಲಭವಾಗಿ ಜೀರ್ಣವಾಗುವ, ತಾಜಾ ಮತ್ತು ಬೆಚ್ಚಗಿನ ಆಹಾರವನ್ನು ನೀಡಬೇಕು.
14. ಮಕ್ಕಳ ಆಟದ ಜಾಗ, ಕೋಟ್, ಹಾಸಿಗೆಗಳು, ಬಟ್ಟೆಗಳು ಮತ್ತು ಆಟಿಕೆಗಳನ್ನು ಪ್ರತಿದಿನ ಸಂಜೆ ಸ್ಯಾನಿಟೈಜ್ ಮಾಡಬೇಕು.
15. ಮಕ್ಕಳಿಗೆ ಭಯ ಹುಟ್ಟಿಸಬೇಡಿ, ಬದಲಾಗಿ ಧೈರ್ಯ ತುಂಬಿ, ಈ ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸುವುದರಿಂದ ಸಿಗುವ ಪ್ರಯೋಜನಗಳೇನು ಎಂಬುದನ್ನು ಮನವರಿಕೆ ಮಾಡಿಸಿ.
(Kannada Copy of Boldsky Kannada)
06-08-25 10:51 pm
Bangalore Correspondent
ಅಶೋಕನ ಕಾಲದ ಮೌರ್ಯರ ರಾಜಧಾನಿ ರಾಯಚೂರಿನ ಮಸ್ಕಿ ಆಗಿತ...
05-08-25 01:45 pm
19 Peacocks Dead, Tumkuru: ಹುಲಿಗಳ ಹತ್ಯೆಯಾಯ್ತು...
05-08-25 12:44 pm
Bangalore Suicide, School Boy: ನಾನು ಈಗ ಸ್ವರ್ಗ...
04-08-25 01:00 pm
Veerappa Moily, Kharge: 1980ರಲ್ಲೇ ನಾನು ಸಿಎಂ ಆ...
03-08-25 09:30 pm
06-08-25 12:15 pm
HK News Desk
1954 ರಿಂದ ಪಾಕಿಸ್ತಾನಕ್ಕೆ 2 ಬಿಲಿಯನ್ ಡಾಲರ್ ಮೌಲ್ಯ...
05-08-25 10:58 pm
ಹಠಾತ್ ಮೇಘಸ್ಫೋಟಕ್ಕೆ ನಲುಗಿದ ಉತ್ತರಾಖಂಡ ; ಉತ್ತರಕಾ...
05-08-25 09:33 pm
ದೇಶದ ಅತಿ ದೀರ್ಘಾವಧಿಯ ಗೃಹ ಸಚಿವರಾಗಿ ಅಮಿತ್ ಷಾ ದಾ...
05-08-25 06:59 pm
ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ ಮಲಿಕ್ ನ...
05-08-25 03:23 pm
06-08-25 11:11 pm
Mangalore Correspondent
Dharmasthala News, Banglegudde: ಬಂಗ್ಲೆಗುಡ್ಡೆ...
06-08-25 07:37 pm
Sharjah NRI dream college: ಕಾನೂನು ಉಲ್ಲಂಘಿಸಿ ವ...
06-08-25 06:00 pm
ಬೆಂಗಳೂರು ಹೋಗುತ್ತೇನೆಂದು ತೆರಳಿದ್ದ ದೇರಳಕಟ್ಟೆ ಯುವ...
06-08-25 03:45 pm
Looking for a Reliable Nurse, Nanny, or House...
06-08-25 01:06 pm
06-08-25 08:02 pm
Mangalore Correspondent
Bangalore Kidnap, Nischith Murder: ಬೆಂಗಳೂರು ನ...
06-08-25 05:43 pm
Cybercrime, New Fraud, Mobile Hacking: ಅಪರಿಚಿ...
06-08-25 11:23 am
Udupi Gold, Theft: ಕದ್ದ ಚಿನ್ನವನ್ನು ಕರಗಿಸಿ ಗಟ್...
06-08-25 11:04 am
Bangalore Cyber Fraud: 1.5 ಕೋಟಿ ರೂ. ಸೈಬರ್ ವಂಚ...
05-08-25 10:39 pm