ಬ್ರೇಕಿಂಗ್ ನ್ಯೂಸ್
08-07-23 07:29 pm Source: Vijayakarnataka ಡಾಕ್ಟರ್ಸ್ ನೋಟ್
ಬೇಸಿಗೆ ಋತುಮಾನಕ್ಕೆ ಹೋಲಿಸಿದರೆ ಚಳಿಗಾಲ ಹಾಗು ಮಳೆಗಾಲಗಳು ಕಡಿಮೆ ಬಾಯಾರಿಕೆಯನ್ನು ಉಂಟು ಮಾಡುತ್ತದೆ. ಆದಾಗ್ಯೂ, ಬಿಸಿ ಬಿಸಿಯಾದ ಚಹಾ, ಕಾಫಿ ಕುಡಿಯಲು ಮಾತ್ರ ಮನಸ್ಸು ಸದಾ ಬಯಸುತ್ತದೆ.
ಸಾಮಾನ್ಯವಾಗಿ ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿ, ಕಡಿಮೆ ಶಕ್ತಿಯನ್ನು ಹೊಂದಿರುತ್ತದೆ. ಈ ಕಾರಣದಿಂದಲೇ ಅನೇಕ ಸೌಮ್ಯ ಕಾಯಿಲೆಗಳು ತಲೆದೋರಬಹುದು. ಕೆಲವು ಮಳೆಗಾಲದ ಸೋಂಕಿನಿಂದ ಪಾರಾಗಲು ಕೆಲವು ಆರೋಗ್ಯಕರವಾದ ಪಾನೀಯಗಳನ್ನು ಈ ಸಮಯದಲ್ಲಿ ಸೇವನೆ ಮಾಡುವುದು ಬಹಳ ಉತ್ತಮ. ಅವು ಹೀಗಿವೆ…
ಲೆಮೆನ್ ಟೀ

ನಿಂಬೆ ಹಣ್ಣಿನ ಚಹಾ ಅಥವಾ ಲೆಮೆನ್ ಟೀ ಮಳೆಗಾಲದಲ್ಲಿ ಸೇವಿಸುವುದು ಬಹಳ ಪ್ರಯೋಜನಕಾರಿಯಾಗಿದೆ. ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ದೇಹಕ್ಕೆ ಬೆಚ್ಚಗಿನ ಸಂವೇದನೆಯನ್ನು ನೀಡುತ್ತದೆ.
ದೇಹವನ್ನು ನಿರ್ವಿಷಗೊಳಿಸುತ್ತದೆ, ಜೀರ್ಣಕಾರಿ ಕಾರ್ಯವನ್ನು ಹೆಚ್ಚಿಸುತ್ತದೆ, ಸಾಂಕ್ರಾಮಿಕ ಕಾಯಿಲೆಗಳ ವಿರುದ್ಧ ಹೋರಾಡುತ್ತದೆ, ಚರ್ಮದ ಸ್ವಾಸ್ಥ್ಯವನ್ನು ಹೆಚ್ಚಿಸುತ್ತದೆ, ಹೃದಯದ ಆರೋಗ್ಯವನ್ನು ಉತ್ತೇಜಿಸಲು ಉತ್ತೇಜಿಸುತ್ತದೆ.
ಗ್ರೀನ್ ಟೀ

ಗ್ರೀನ್ ಚಹಾ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಊರಿಯೂತವನ್ನು ಕಡಿಮೆ ಮಾಡಲು, ಅರಿವಿನ ಶಕ್ತಿಯನ್ನು ವೃದ್ಧಿಸಲು, ಶೀತ ಹಾಗು ನೋಯುತ್ತಿರುವ ಗಂಟಲಿನ ವಿರುದ್ಧ ಹೋರಾಡಲು ಪರಿಣಾಮಕಾರಿಯಾಗಿದೆ. ಅಲ್ಲದೆ, ಇದು ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
ಮಳೆಗಾಲದಲ್ಲಿ ಸಾಮಾನ್ಯ ಸಮಸ್ಯೆಯಾದ ಮಲಬದ್ಧತೆಗೆ ಚಿಕಿತ್ಸೆ ನೀಡುತ್ತದೆ.
ದಾಲ್ಚಿನ್ನಿ ಮತ್ತು ಶುಂಠಿ ಚಹಾ
![]()
ಮೂಗು ಕಟ್ಟುವುದು, ಗಂಟಲಿನ ನೋವಿಗೆ ದಾಲ್ಚಿನ್ನಿ ಮತ್ತು ಶುಂಠಿ ಚಹಾ ಅತ್ಯಂತ ಪರಿಣಾಮಕಾರಿಯಾಗಿದೆ. ಅಷ್ಟೇ ಅಲ್ಲದೇ, ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ದಾಲ್ಚಿನ್ನಿ ಮತ್ತು ಶುಂಠಿ ಚಹಾವು ಇದಕ್ಕೆ ರಾಮಬಾಣ ಎಂದೇ ಹೇಳಬಹುದು.
ಏಕೆಂದರೆ ದಾಲ್ಚಿನ್ನಿ ಹೊಟ್ಟೆಯಲ್ಲಿ ಕಾರ್ಬನ್ ಡೈಆಕ್ಸೈಡ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ಇದು ದೇಹದ ಉಷ್ಣತೆಯನ್ನು ತಗ್ಗಿಸುತ್ತದೆ. ಇನ್ನು ಶುಂಠಿಯು ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತದೆ.
ಅರಿಶಿಣದ ಹಾಲು

ಚಿನ್ನದ ದೇವತೆ ಎಂದೇ ಕರೆಯಲಾಗುವ ಅರಿಶಿಣ ತನ್ನದೇ ಆದ ಪ್ರಯೋಜನಕಾರಿಯಿಂದ ಜನಪ್ರಿಯವಾಗಿದೆ. ಅರಿಶಿಣದ ಹಾಲು ಕುಡಿಯುವುದರಿಂದ ರೋಗನಿರೋಧಕ ಶಕ್ತಿ, ಮಧುಮೇಹವನ್ನು ವಿಳಂಬ, ಕಡಿಮೆ ಕ್ಯಾನ್ಸರ್ ಅಪಾಯ, ಹೃದ್ರೋಗಗಳ ಅಪಾಯ, ವಯಸ್ಸಾದ ವಿರೋಧಿ ಪರಿಣಾಮಗಳು, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ಆರೋಗ್ಯಕರ ಚರ್ಮ, ಮೂಳೆಯ ಆರೋಗ್ಯವನ್ನು ಕಾಪಾಡುತ್ತದೆ.
ಇಂತಹ ಆರೋಗ್ಯಕರವಾದ ಹಾಲನ್ನು ನೀವು ಮಳೆಗಾಲದಲ್ಲಿ ವಿಶೇಷವಾಗಿ ಸೇವಿಸಬೇಕು.
ಮಸಾಲೆ ಚಹಾ
![]()
ಸಾಮಾನ್ಯವಾಗಿ ಮಸಾಲೆ ಚಹಾ ಆರೋಗ್ಯಕ್ಕೆ ಬಹಳ ಒಳ್ಳೆಯದು. ದಾಲ್ಚಿನ್ನಿ, ಶುಂಠಿ, ಲವಂಗ ಬೆರಸಿದ ಮಸಾಲೆ ಚಹಾ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ತನ್ನ ಅದ್ಭುತವಾದ ಸ್ವಾದದಿಂದ ಚಹಾ ಪ್ರೇಮಿಗಳನ್ನು ಹಿಡಿದಿಟ್ಟುಕೊಳ್ಳುತ್ತದೆ. ಈ ಎಲ್ಲವೂ ಮಳೆಗಾಲದಲ್ಲಿಅತ್ಯುತ್ತಮವಾದ ಚಹಾಗಳಾಗಿವೆ.
immunity boosting healthy drinks in monsoon.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 12:50 pm
HK News Staffer
ಕರಾವಳಿ ಅಭಿವೃದ್ಧಿಗೆ ಡಿಕೆಶಿ ಸರ್ಕಾರದ ಮಹತ್ವದ ಹೆಜ್...
15-09-26 09:46 am
ತುಳುನಾಡಿನಲ್ಲಿ ವಿಭಿನ್ನ ಗಣೇಶ ಚತುರ್ಥಿ ; ಮಣ್ಣಿನ ಮ...
14-09-26 10:01 pm
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
15-09-26 12:55 pm
HK News Staffer
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm