ಬ್ರೇಕಿಂಗ್ ನ್ಯೂಸ್
11-02-23 08:37 pm Source: Vijayakarnataka ಡಾಕ್ಟರ್ಸ್ ನೋಟ್
ಹೆಚ್ಚಿನ ಮಧುಮೇಹಿಗಳಲ್ಲಿರುವ ಸಾಮಾನ್ಯ ಪ್ರಶ್ನೆಯೆಂದರೆ ತಿನ್ನೋದಾದ್ರೂ ಏನೂ ಅನ್ನೋದು. ಯಾಕೆಂದರೆ ಮಧುಮೇಹಿಗಳು ಅದನ್ನು ತಿನ್ನಬಾರದು ಇದನ್ನು ತಿನ್ನಬಾರದು ಹೇಳುವವರೇ ಹೆಚ್ಚು. ಬೆಳಗಿನ ಉಪಹಾರಕ್ಕೆ ಏನನ್ನು ತಿನ್ನಬೇಕು ಎಂದು ಯೋಚಿಸುವ ಮಧುಮೇಹಿಗಳಿಗಾಗಿ ತಿನ್ನಬಹುದಾದಂತಹ ಕೆಲವು ಉಪಹಾರವನ್ನು ಪೌಷ್ಟಿಕ ತಜ್ಞೆ ಹಂಚಿಕೊಂಡಿದ್ದಾರೆ.
ಅಗಸೆಬೀಜ ಮತ್ತು ಹಣ್ಣಿನ ಸ್ಮೂಥಿ
ಅಗಸೆಬೀಜವು ಆರೋಗ್ಯಕರ ಕೊಲೆಸ್ಟ್ರಾಲ್ ಅನ್ನು ಕಾಪಾಡಿಕೊಳ್ಳಲು ಮತ್ತು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಆರೋಗ್ಯಕರ ಪಾನೀಯವು ರಕ್ತದಲ್ಲಿನ ಸಕ್ಕರೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡುತ್ತದೆ.
ಬೇಕಾಗುವ ಪದಾರ್ಥಗಳು
1 ಕಪ್ ಹೆಪ್ಪುಗಟ್ಟಿದ ಸ್ಟ್ರಾಬೆರಿ, ½ ಕತ್ತರಿಸಿದ ಬಾಳೆಹಣ್ಣು ಬಾಳೆಹಣ್ಣಿನ ಬದಲಿಗೆ ಆವಕಾಡೊ ಅಥವಾ ಕಿವಿ ಸೇರಿಸಬಹುದು. 2 ಟೀಸ್ಪೂನ್ ಅಗಸೆ ಬೀಜ, 1 ಕಪ್ ಕಡಿಮೆ ಕೊಬ್ಬಿನ ಸೋಯಾ ಹಾಲು
ಇವೆಲ್ಲವನ್ನೂ ಮಿಕ್ಸಿಗೆ ಹಾಕಿ ಸ್ಮೂಥಿ ಮಾಡಿ.
ತರಕಾರಿ ಆಮ್ಲೆಟ್
ತರಕಾರಿ ಆಮ್ಲೆಟ್ ಕಣ್ಣಿಗೂ ಇಷ್ಟವಾಗುವುದು ಮಾತ್ರವಲ್ಲದೆ ನಿಮ್ಮ ಮಧುಮೇಹದ ಆರೋಗ್ಯಕ್ಕೆ ಹೆಚ್ಚಿನ ಪೌಷ್ಟಿಕಾಂಶದ ಮೌಲ್ಯಗಳನ್ನು ಹೊಂದಿದೆ.
ಬೇಕಾಗುವ ಪದಾರ್ಥಗಳು
1/2 ಸಣ್ಣ ಈರುಳ್ಳಿ, ಕತ್ತರಿಸಿದ 1/2 ಹಸಿರು ಬೆಲ್ ಪೆಪರ್, 2 ಮೊಟ್ಟೆ, 2 ಚಮಚ ಹಾಲು, ¾ ಟೀಸ್ಪೂನ್ ಉಪ್ಪು, ½ ಟೀಸ್ಪೂನ್ ಮೆಣಸು, 2 ಟೀಸ್ಪೂನ್ ಬೆಣ್ಣೆ
ನಾನ್-ಸ್ಟಿಕ್ ಪ್ಯಾನ್ನಲ್ಲಿ ಮಧ್ಯಮ ಉರಿಯಲ್ಲಿ 1 ಟೀಸ್ಪೂನ್ ಬೆಣ್ಣೆಯನ್ನು ಕರಗಿಸಿ. ಈರುಳ್ಳಿ ಮತ್ತು ಬೆಲ್ ಪೆಪರ್ ಅನ್ನು 4 ರಿಂದ 5 ನಿಮಿಷಗಳ ಕಾಲ ಬೇಯಿಸಿ. ಮೊಟ್ಟೆಗಳನ್ನು ಒಡೆದು ಅದಕ್ಕೆ ಹಾಲು, ಉಪ್ಪು ಮತ್ತು ಮೆಣಸು ಹಾಕಿ ಮಿಕ್ಸ್ ಮಾಡಿ .
ಬಾಣಲೆಯಿಂದ ತರಕಾರಿಗಳನ್ನು ತೆಗೆದುಹಾಕಿ ಮತ್ತು ಅವುಗಳ ಮೇಲೆ ಸ್ವಲ್ಪ ಉಪ್ಪು ಸಿಂಪಡಿಸಿ ಮತ್ತು ಅವುಗಳನ್ನು ಪಕ್ಕಕ್ಕೆ ಇರಿಸಿ.
ಪ್ಯಾನ್ ಮೇಲೆ 1 ಟೀಸ್ಪೂನ್ ಬೆಣ್ಣೆಯನ್ನು ಹಾಕಿ. ಈ ಮೊಟ್ಟೆಯ ಮಿಶ್ರಣವನ್ನು ಪ್ಯಾನ್ಗೆ ಸುರಿದು 2 ನಿಮಿಷ ಬೇಯಿಸಿ. ಮೊಟ್ಟೆಗಳ ಮಧ್ಯದಲ್ಲಿ ತರಕಾರಿ ಮಿಶ್ರಣವನ್ನು ಹಾಕಿ. ಮೊಟ್ಟೆಗಳ ಎರಡು ಅಂಚನ್ನು ಸರಿಯಾಗಿ ಬೇಯಿಸಿ.
ರಾಗಿ ಉತ್ತಪಂ
ಇದು ಫೈಬರ್ನಲ್ಲಿ ಸಮೃದ್ಧವಾಗಿರುವ ಕಾರಣ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಆದ್ದರಿಂದ ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೂ ಸಹಾಯ ಮಾಡುತ್ತದೆ. ಇದು ನಿಮ್ಮ ನಾಲಿಗೆಯ ರುಚಿ ಮೊಗ್ಗುಗಳಿಗೆ ಉತ್ತಮವಾಗಿದ್ದು, ನಿಮ್ಮ ದಿನವನ್ನು ಪ್ರಾರಂಭಿಸಲು ಉತ್ತಮ ಆರೋಗ್ಯಕರ ಉಪಹಾರವಾಗಿದೆ.
ಬೇಕಾಗುವ ಪದಾರ್ಥಗಳು
½ ಕಪ್ ರಾಗಿ ಹಿಟ್ಟು 2ಟೇಬಲ್ ಚಮಚ ರವೆ ಅಥವಾ 2 ಟೇಬಲ್ ಚಮಚ ಅಗಸೆಬೀಜದ ಪುಡಿ ಮತ್ತು ಕತ್ತರಿಸಿದ ತರಕಾರಿಗಳು½ ಕಪ್, ಕರಿಬೇವಿನ ಎಲೆಗಳು, ಮೊಸರು ಸ್ವಲ್ಪ, ½ ಟೀಸ್ಪೂನ್ ಅಡಿಗೆ ಸೋಡಾ, ರುಚಿಗೆ ತಕ್ಕಷ್ಟು ಉಪ್ಪು.
ನಯವಾದ ಬ್ಯಾಟರ್ ಮಾಡಲು ಎಲ್ಲಾ ಪದಾರ್ಥಗಳನ್ನು ಮಿಶ್ರಣ ಮಾಡಿ. ಮಿಶ್ರಣವನ್ನು 15 ರಿಂದ 20 ನಿಮಿಷಗಳ ಕಾಲ ಇಡಿ.
ಹಿಟ್ಟಿಗೆ ಅಡಿಗೆ ಸೋಡಾ ಸೇರಿಸಿ ಮತ್ತು ಅದನ್ನು ಲಘುವಾಗಿ ಮಿಶ್ರಣ ಮಾಡಿ. ಎಣ್ಣೆಯಿಂದ ನಾನ್-ಸ್ಟಿಕ್ ಪ್ಯಾನ್ ಅನ್ನು ಗ್ರೀಸ್ ಮಾಡಿ. ಸಣ್ಣ ಉರಿಯಲ್ಲಿ ಪ್ಯಾನ್ ಇಟ್ಟು ಪ್ಯಾನ್ ಮೇಲೆ ಹಿಟ್ಟನ್ನು ಹರಡಿ. ಅದರ ಮೇಲೆ ತರಕಾರಿಗಳನ್ನು ಹರಡಿ ಮತ್ತು ಅದನ್ನು ಸರಿಯಾಗಿ ಬೇಯಿಸಿ. ಎರಡೂ ಬದಿಗಳಿಂದ ಬೇಯಿಸಿ ಮತ್ತು ತೆಂಗಿನಕಾಯಿ ಚಟ್ನಿಯೊಂದಿಗೆ ಸೇವಿಸಿ.
ಬೆಸನ್ ಪ್ಯಾನ್ಕೇಕ್ಗಳು
ಕಡಲೆ ಹೆಚ್ಚಿನ ಪ್ರಮಾಣದ ಫೈಬರ್ ಮತ್ತು ವಿವಿಧ ಜೀವಸತ್ವಗಳು ಮತ್ತು ಖನಿಜಗಳೊಂದಿಗೆ ಪ್ರೋಟೀನ್ ಅನ್ನು ಹೊಂದಿರುತ್ತದೆ. ಇದು ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದೆ.
ಬೇಕಾಗುವ ಪದಾರ್ಥಗಳು
1 ಸಣ್ಣದಾಗಿ ಕೊಚ್ಚಿದ ಹಸಿರು ಈರುಳ್ಳಿ, ½ ಕಪ್ ಕಡಲೆ ಹಿಟ್ಟು, ½ ಟೀಸ್ಪೂನ್ ಬೇಕಿಂಗ್ ಪೌಡರ್, ¼ ಟೀಸ್ಪೂನ್ ಬೆಳ್ಳುಳ್ಳಿ ಪುಡಿ, ½ ಕಪ್ ನೀರು
ಇವೆಲ್ಲಕ್ಕೆ ಸ್ವಲ್ಪ ಉಪ್ಪು, ಬೇಕಿಂಗ್ ಪೌಡರ್ ಸೇರಿಸಿ ನೀರಿನೊಂದಿಗೆ ಚೆನ್ನಾಗಿ ಕಲಸಿ. ಗಂಟುಗಳಿಲ್ಲದಂತೆ ಕಲಸಿ.
ನಾನ್-ಸ್ಟಿಕ್ ಪ್ಯಾನ್ ತೆಗೆದುಕೊಂಡು ಅದನ್ನು ಮಧ್ಯಮ ಉರಿಯಲ್ಲಿ ಕಾಯಿಸಿ. ಹಿಟ್ಟನ್ನು ಪ್ಯಾನ್ಗೆ ಸುರಿದು ಗೋಲ್ಡನ್ ಬ್ರೌನ್ ಆಗುವವರೆಗೆ ಪ್ರತಿ ಬದಿಯಲ್ಲಿ 5 ರಿಂದ 6 ನಿಮಿಷ ಬೇಯಿಸಿ.
ಮೇಥಿ ಮಿಸ್ಸಿ ರೋಟಿ
ಭಾರತೀಯ ಟ್ವಿಸ್ಟ್ನೊಂದಿಗೆ ಮಧುಮೇಹಕ್ಕೆ ಬೆಸ್ಟ್ ಉಪಹಾರ ಇದಾಗಿದೆ. ಈ ರೊಟ್ಟಿಯು ಮಧುಮೇಹಿಗಳಿಗೆ ಉತ್ತಮವಾದ ಮೆಂತೆಸೊಪ್ಪಿನಿಂದ ಮಾಡಲಾಗಿದೆ.
ಬೇಕಾಗುವ ಸಾಮಾಗ್ರಿಗಳು
2 ಕಪ್ ಕಡಲೆಹಿಟ್ಟು, 1 ಕಪ್ ಮೇಥಿ ಎಲೆಗಳು, 2 ಹಸಿರು ಮೆಣಸಿನಕಾಯಿಗಳು, ಕತ್ತರಿಸಿದ 1 ಈರುಳ್ಳಿ, 1 ಇಂಚು ಶುಂಠಿ, 1 ಟೀಸ್ಪೂನ್ ಅರಿಶಿನ ಪುಡಿ , ½ ಟೀಸ್ಪೂನ್ ಮೆಣಸು, ರುಚಿಗೆ ಉಪ್ಪು, ಬೇಯಿಸಲು ಎಣ್ಣೆ.
ಒಂದು ದೊಡ್ಡ ಬಟ್ಟಲಿನಲ್ಲಿ ಎಲ್ಲಾ ಪದಾರ್ಥಗಳನ್ನುಸೇರಿಸಿ ನಯವಾದ ಹಿಟ್ಟು ತಯಾರಿಸಲು ನೀರನ್ನು ಹಾಕಿ ಬೆರೆಸಿ. ಅದರ ಮೇಲೆ ಸ್ವಲ್ಪ ಎಣ್ಣೆ ಸವರಿ. 15 ನಿಮಿಷಗಳ ಕಾಲ ಬಿಡಿ. ಹಿಟ್ಟಿನ 10 ಸಮಾನ ಭಾಗಗಳನ್ನು ಮಾಡಿ ಮತ್ತು ಸಣ್ಣ ಉಂಡೆಗಳನ್ನು ಮಾಡಿ. ಚಪಾತಿಗಳ ಆಕಾರಕ್ಕೆ ಲಟ್ಟಿ, ಚಪಾತಿಯನ್ನು ಕಾಯಿಸಿ.
Here Is The Best Breakfast For Diabetes Patients.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm