ಭೂ ಹಗರಣದಲ್ಲಿ ಇಡಿ ಬಲೆಗೆ ಬಿದ್ದ ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ; ಸತತ 6 ಗಂಟೆಗಳ ವಿಚಾರಣೆ ಬಳಿಕ ಬಂಧನ, ಚಂಪೈ ಸೊರೇನ್ ನೂತನ ಮುಖ್ಯಮಂತ್ರಿ 

31-01-24 11:07 pm       HK News Desk   ದೇಶ - ವಿದೇಶ

ಭೂ ಹಗರಣದಲ್ಲಿ ಸಿಲುಕಿರುವ ಜಾರ್ಖಂಡ್​ ಮುಖ್ಯಮಂತ್ರಿ ಹೇಮಂತ್​ ಸೊರೇನ್​ ಅವರನ್ನು ಸತತ 6 ಗಂಟೆಗಳ ಕಾಲ ವಿಚಾರಣೆ ಬಳಿಕ ಜಾರಿ ನಿರ್ದೇಶನಾಲಯ ಬಂಧಿಸಿದೆ. 

ರಾಂಚಿ, ಜ.31: ಭೂ ಹಗರಣದಲ್ಲಿ ಸಿಲುಕಿರುವ ಜಾರ್ಖಂಡ್​ ಮುಖ್ಯಮಂತ್ರಿ ಹೇಮಂತ್​ ಸೊರೇನ್​ ಅವರನ್ನು ಸತತ 6 ಗಂಟೆಗಳ ಕಾಲ ವಿಚಾರಣೆ ಬಳಿಕ ಜಾರಿ ನಿರ್ದೇಶನಾಲಯ ಬಂಧಿಸಿದೆ. 

ವಿಚಾರಣೆ ಆಗ್ತಿದ್ದಂತೆ ರಾಂಚಿಯ ಇಡಿ ಕಚೇರಿಯಲ್ಲೇ ಅಧಿಕಾರಿಗಳು ಬಂಧಿಸಿದ್ದಾರೆ. ಸರ್ಕಾರಿ ಹೆಸರಲ್ಲಿ ಭೂಮಿ ಖರೀದಿಸಿ ಮಾಫಿಯಾದವರಿಗೆ ಮಾರಾಟ ಮಾಡಿದ ಆರೋಪ ಹೊತ್ತಿರುವ ಹೇಮಂತ್​ ಸೊರೇನ್​ ವಿಚಾರಣೆ ವೇಳೆ ಸರಿಯಾದ ಮಾಹಿತಿ ನೀಡದ ಕಾರಣಕ್ಕೆ ಬಂಧಿಸಲಾಗಿದೆ. ‌

7 ಸಲ ಜಾರ್ಖಂಡ್​ ಸಿಎಂಗೆ ಇಡಿ ನೋಟಿಸ್​

ಅಂದಾಜು 600 ಕೋಟಿ ರೂಪಾಯಿಗೂ ಹೆಚ್ಚು ಹಣ ಕಿಕ್​ಬ್ಯಾಕ್​​ ಆರೋಪದಡಿ 14 ಜನರನ್ನ ಇಡಿ ಬಂಧಿಸಿ ವಿಚಾರಣೆ ನಡೆಸಿತ್ತು. ವಿಚಾರಣೆಯಲ್ಲಿ ಜಾರ್ಖಂಡ್​ ಸಿಎಂ ಹೇಮಂತ್​ ಸೊರೇನ್​​ ಅವರೇ ಹಗರಣದ ಪ್ರಮುಖ ಪಾತ್ರಧಾರಿ ಎಂದು ಇಡಿ ನಿರ್ಧಾರಕ್ಕೆ ಬಂದಿತ್ತು. ಇದೇ ವೇಳೆ, ಜಾರ್ಖಂಡ್​ ಮುಖ್ಯಮಂತ್ರಿಗೆ ವಿಚಾರಣೆಗೆ ಹಾಜರಾಗಲು ಏಳು ಬಾರಿ ನೋಟಿಸ್ ಕೊಟ್ಟರೂ ಹೋಗಿರಲಿಲ್ಲ. ಇವತ್ತು ವಿಚಾರಣೆಗೆ ಬಂದ ಹೇಮಂತ್​ ಸುರೇನ್​ ಅವರನ್ನ ಅಧಿಕೃತವಾಗಿ ಇಡಿ ಬಂಧಿಸಿದೆ. 

ಚಂಪೈ ಸೊರೇನ್ ನೂತನ ಸಿಎಂ 

ಇದರ ಬೆನ್ನಲ್ಲೇ ಹೇಮಂತ್ ಸೊರೆನ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹೇಮಂತ್​ ಸೊರೇನ್​ ತನ್ನ ಪುತ್ರ ಅಥವಾ ಪತ್ನಿಗೆ ಸಿಎಂ ಪಟ್ಟ ನೀಡಬಹುದು ಎನ್ನಲಾಗುತ್ತಿತ್ತು. ಆದರೆ ಕೊನೆ ಕ್ಷಣದಲ್ಲಿ ಹೇಮಂತ್​ ಸೊರೇನ್​ ಸಂಪುಟದಲ್ಲಿ ಸಾರಿಗೆ ಸಚಿವರಾಗಿರುವ ಚಂಪೈ ಸೊರೆನ್ ಅವರನ್ನು ನೂತನ ಸಿಎಂ ಆಗಲಿದ್ದಾರೆ ಎಂದು ಜಾರ್ಖಂಡ್ ಸಚಿವ ಅಲಂಗೀರ್ ಮಾಹಿತಿ ನೀಡಿದ್ದಾರೆ.

Jharkhand's Hemant Soren became the third state chief minister to be arrested after the Enforcement Directorate took him into custody in a money laundering case linked to an alleged land scam on Wednesday.