ಬ್ರೇಕಿಂಗ್ ನ್ಯೂಸ್
30-01-24 01:38 pm HK News Desk ದೇಶ - ವಿದೇಶ
ನವದೆಹಲಿ, ಜ.30: ಅಮೆರಿಕದ ಸೇನಾಪಡೆ ಸದ್ಯದಲ್ಲೇ ಇರಾನ್ ಮೇಲೆ ದಾಳಿ ನಡೆಸಲಿದೆ. ಅದಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದೆ ಎಂದು ಪೆಂಟಗಾನ್ ಮೂಲಗಳನ್ನು ಉಲ್ಲೇಖಿಸಿ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಇತ್ತೀಚೆಗೆ ಇರಾನ್ ಪ್ರೇರಿತ ಬಂಡುಕೋರರು ಅಮೆರಿಕದ ನೌಕಾಪಡೆ ಮೇಲೆ ದಾಳಿ ನಡೆಸಿದ್ದು ಮೂವರು ಯೋಧರು ಸಾವನ್ನಪ್ಪಿದ್ದರು. ಕೃತ್ಯದ ಹಿನ್ನೆಲೆಯಲ್ಲಿ ಪ್ರತಿದಾಳಿ ನಡೆಸಬೇಕೆಂದು ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಅವರಿಗೆ ರಾಜಕೀಯ ಸಲಹೆಗಾರರು ಒತ್ತಡ ಹೇರಿದ್ದಾರೆ.
ಆದರೆ ಜೋ ಬಿಡೆನ್ ಇನ್ನೂ ಪ್ರತಿ ದಾಳಿಗೆ ಓಕೆ ಎಂದಿಲ್ಲ. ಇಸ್ರೇಲ್- ಹಮಾಸ್ ಸಂಘರ್ಷ ನಡೆಯುತ್ತಿರುವುದರಿಂದ ಅಮೆರಿಕವು ಇರಾನ್ ಮೇಲೆ ದಾಳಿ ನಡೆಸುವುದಕ್ಕೆ ಮೀನ ಮೇಷ ಎಣಿಸುತ್ತಿದೆ. ಆದರೆ ಸೇನಾ ಪಡೆ ಮತ್ತು ರಾಜಕೀಯ ತಜ್ಞರು ತೀವ್ರ ಪ್ರತಿದಾಳಿ ನಡೆಸಲೇಬೇಕೆಂದು ಅಧ್ಯಕ್ಷ ಜೋ ಬಿಡೆನ್ ಮೇಲೆ ಒತ್ತಡ ಹೇರಿದ್ದಾರೆ. ಇತ್ತೀಚೆಗೆ ಅಮೆರಿಕದ ಸೇನಾ ಪಡೆಯ ಮೇಲೆ ಇರಾನ್ ಸೇನಾಪಡೆಯಿಂದಲೇ ಡ್ರೋಣ್ ದಾಳಿಯಾಗಿತ್ತು ಎಂದು ಹೇಳಲಾಗುತ್ತಿದೆ. ಇದಕ್ಕಾಗಿ ಇರಾನ್ ಹೊರಗಿನ ಸೇನಾಪಡೆ ಮತ್ತು ಬಂಡುಕೋರರ ಮೇಲೆ ಪ್ರತಿದಾಳಿ ನಡೆಸಬೇಕೆಂಬ ಅಭಿಪ್ರಾಯ ಬಲಗೊಳ್ಳುತ್ತಿದೆ.
ಈ ವಿಚಾರದಲ್ಲಿ ಜೋ ಬಿಡೆನ್ ತನ್ನ ರಾಜಕೀಯ ಸಲಹೆಗಾರರ ಜೊತೆಗೆ ಚರ್ಚಿಸುತ್ತಿದ್ದಾರೆ. ಚರ್ಚೆಯ ಬಳಿಕವೇ ಈ ಬಗ್ಗೆ ಜೋ ಬಿಡೆನ್ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಲಿದ್ದಾರೆ. ಇತ್ತೀಚೆಗೆ ಇರಾನ್ ದಾಳಿಯ ಬಳಿಕ ಪೆಂಟಗಾನ್ ಮೂಲಗಳನ್ನು ಉಲ್ಲೇಖಿಸಿ ಅಲ್ಲಿನ ಮಾಧ್ಯಮಗಳು ಅಮೆರಿಕವು, ಇರಾನ್ ಜೊತೆಗೆ ಯುದ್ಧ ಬಯಸುವುದಿಲ್ಲ. ನಾವು ಅತಿಕ್ರಮಣವನ್ನೂ ಮಾಡುವುದಿಲ್ಲ. ಆದರೆ ಏನು ಆಗಬೇಕೋ ಅದನ್ನು ಮಾಡಿಯೇ ಮಾಡುತ್ತೇವೆ ಎಂದಿದ್ದವು. ವೈಟ್ ಹೌಸ್ ನಲ್ಲಿ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಜಾನ್ ಕಿರ್ಬಿ ಕೂಡ ಇದೇ ಮಾತುಗಳನ್ನು ಉಲ್ಲೇಖಿಸಿದ್ದರು. ಇರಾನಿನ ಟೆಹ್ರಾನಲ್ಲಿರುವ ಬಂಡುಕೋರ ಗುಂಪುಗಳೇ ಈ ದಾಳಿ ನಡೆಸಿವೆ. ಇಸ್ಲಾಮಿಕ್ ಉಗ್ರವಾದಿ ಗುಂಪುಗಳಲ್ಲ ಎಂದವರು ಹೇಳಿದ್ದರು.
The United States is reportedly preparing to launch retaliatory attacks against Iran-backed groups, which were allegedly behind the recent drone attack on US troops in Jordan, killing three soldiers. According to Pentagon sources, the retaliation would likely begin in the next couple of days and come in waves against a range of targets once the president gave the go-ahead, Politico reported, citing officials.
19-03-25 04:42 pm
HK News Desk
"ಹೆಂಗಸರಿಗೆ ಫ್ರೀ ಕೊಟ್ಟಂತೆ ಗಂಡಸರಿಗೂ ವಾರಕ್ಕೆರಡು...
19-03-25 12:44 pm
Sowjanya case, Protest; ಸೌಜನ್ಯಾ ಪ್ರಕರಣ ; ನ್ಯಾ...
19-03-25 11:39 am
ಮಾ.22ರಂದು ಕರ್ನಾಟಕ ಬಂದ್ ; ಯಾವುದೇ ಕಾರಣಕ್ಕೂ ಬಂದ್...
18-03-25 11:02 pm
ಬಿಡದಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ...
18-03-25 10:34 pm
19-03-25 07:39 pm
HK News Desk
ಕೊನೆಗೂ ಭುವಿಗಿಳಿದ ಸುನಿತಾ ವಿಲಿಯಮ್ಸ್ ; 9 ತಿಂಗಳ ತ...
19-03-25 02:10 pm
ಮಹಾರಾಷ್ಟ್ರದಲ್ಲಿ 'ಛಾವಾ' ಚಿತ್ರ ಹೊತ್ತಿಸಿದ ಕಿಚ್ಚು...
17-03-25 10:57 pm
Case against Orry at Vaishno Devi: ವೈಷ್ಣೋದೇವಿ...
17-03-25 09:43 pm
Kerala Christan girls missing, PC George: ಕೊಟ...
13-03-25 03:49 pm
19-03-25 10:13 pm
Udupi Correspondent
ಪವಾಡಕ್ಕೆ ಸಾಕ್ಷಿಯಾಗಿದೆ ತಲಪಾಡಿ ದುರ್ಗಾಪರಮೇಶ್ವರೀ...
18-03-25 10:09 pm
Electricity, Malekudiya Tribal, Belthangady:...
18-03-25 08:53 pm
Mangalore accident, Kinnigoli, Bike, Vidoe: ಕ...
18-03-25 03:15 pm
ಮಂಗಳೂರು- ಮುಂಬೈ ವಂದೇ ಭಾರತ್ ರೈಲು ಸನ್ನಿಹಿತ ; ಉಡು...
17-03-25 11:02 pm
19-03-25 08:27 pm
Mangalore Correspondent
Mangalore drugs, NCB: ಅತಿ ದೊಡ್ಡ ಡ್ರಗ್ಸ್ ಬೇಟೆ...
18-03-25 06:31 pm
Ccb Police Mangalore, Kali Yogesh, Underworld...
17-03-25 07:51 pm
Bangalore crime, Fraud, Bank Manager: ಮನೆ ಮಾರ...
16-03-25 10:39 pm
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm