ಬ್ರೇಕಿಂಗ್ ನ್ಯೂಸ್
01-04-24 08:02 pm Bangalore Correspondent ಕರ್ನಾಟಕ
ಬೆಂಗಳೂರು, ಏ.1: ಮಂಡ್ಯ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿರಿವಂತ ಉದ್ಯಮಿ ವೆಂಕಟರಮಣೇ ಗೌಡ ಅಲಿಯಾಸ್ ಸ್ಟಾರ್ ಚಂದ್ರು ನಾಮಪತ್ರ ಸಲ್ಲಿಸಿದ್ದಾರೆ. ಇದೇ ವೇಳೆ ತನ್ನ ಆಸ್ತಿ ಘೋಷಣೆ ಮಾಡಿದ್ದು 410 ಕೋಟಿ ಆಸ್ತಿ ಹೊಂದಿರೋದಾಗಿ ಅಫಿಡವಿಟ್ ನೀಡಿದ್ದಾರೆ.
ಸ್ಟಾರ್ ಚಂದ್ರು ಹೆಸರಲ್ಲಿ 237 ಕೋಟಿ ಆಸ್ತಿ ಇದ್ದರೆ, ಪತ್ನಿ ಕುಸುಮಾ ಹೆಸರಲ್ಲಿ 146 ಕೋಟಿ ಆಸ್ತಿ ಇರುವ ಬಗ್ಗೆ ಘೋಷಣೆ ಮಾಡಿದ್ದಾರೆ.
ಸ್ಟಾರ್ ಚಂದ್ರು ಹುಟ್ಟುವಾಗಲೇ ಕೋಟ್ಯಾಧೀಶ!
ಮೂಲತಃ ರೈತ ಕುಟಂಬದಿಂದ ಬಂದಿರುವ ಸ್ಟಾರ್ ಚಂದ್ರು ಹುಟ್ಟುವಾಗಲೇ ಆಗರ್ಭ ಸಿರಿವಂತ. ಅವರಿಗೆ ಪಿತ್ರಾರ್ಜಿತವಾಗಿ ಅವಿಭಕ್ತ ಕುಟುಂಬದಿಂದ ಬಂದಿರುವ ಆಸ್ತಿಯೇ 26 ಕೋಟಿ ಇದೆಯಂತೆ. ಪಿತ್ರಾರ್ಜಿತ ಆಸ್ತಿ ಮೌಲ್ಯ 26 ಕೋಟಿ ಎಂದು ನಮೂದಿಸಿದ್ದಾರೆ.
ಇನ್ನು ಸ್ಟಾರ್ ಚಂದ್ರು ಅವರ ಚರಾಸ್ತಿ ಮೌಲ್ಯ 99.36 ಕೋಟಿ ಇದೆ. ಪತ್ನಿ ಕುಸುಮಾ ಹೆಸರಲ್ಲಿ 4.20 ಕೋಟಿ ಚರಾಸ್ತಿ ಇದೆ. ಚಂದ್ರು ಕೈಯಲ್ಲಿ ನಗದು 1,36,14,355 ರೂ. ಹೊಂದಿದ್ದಾರೆ. ತನ್ನದೇ ಹೆಸರಲ್ಲಿ ಮೂರು ಟ್ರ್ಟಾಕ್ಟರ್ ಹೊಂದಿರುವ ಸ್ಟಾರ್ ಚಂದ್ರು ಮಾಲೀಕತ್ವದಲ್ಲಿ ಕಾರು ಇಲ್ಲ.
ಸ್ಟಾರ್ ಚಂದ್ರು ಪತ್ನಿ ಕುಸುಮ ಅವರ ಸ್ತಿರಾಸ್ತಿ ಮೌಲ್ಯ 127 ಕೋಟಿ ಇದೆ. ನಗದು 64,94,175 ರೂ. ಇದೆಯಂತೆ. ಪತ್ನಿ ಕುಸುಮಾ ಬಳಿಯೂ ಸ್ವಂತ ಹೆಸರಲ್ಲಿ ವಾಹನ ಇಲ್ಲ. ಚಿನ್ನ 4.2 ಕೆಜಿ (₹ 2.30 ಕೋಟಿ), ವಜ್ರ 71 ಸಿಟಿಎಸ್ (₹ 15 ಲಕ್ಷ), ಬೆಳ್ಳಿ 26 ಕೆಜಿ (₹21.50 ಲಕ್ಷ) ಇದೆ.
ಸ್ಟಾರ್ ಚಂದ್ರು ಮತ್ತು ಪತ್ನಿ ಕುಸುಮಾ ಯಾವುದೇ ಸಾಲ ಹೊಂದಿಲ್ಲ. ಸ್ಟಾರ್ ಚಂದ್ರು ಹೆಸರಲ್ಲಿ ಯಾವುದೇ ಕ್ರಿಮಿನಲ್ ಪ್ರಕರಣವೂ ಇಲ್ಲ. ಮಂಡ್ಯ, ಬೆಂಗಳೂರಿನಲ್ಲಿ ಉದ್ಯಮಿಯಾಗಿದ್ದು ಕಾಲ ಕಾಲಕ್ಕೆ ತೆರಿಗೆ ಪಾವತಿಸಿರುವ ಬಗ್ಗೆ ಸ್ಟಾರ್ ಚಂದ್ರು ಹೇಳಿಕೊಂಡಿದ್ದಾರೆ.
Mandya congress candidate Star Chandru richest candidate after DK Suresh, 410 crores wealth, no loan no car, 4 kilo Gold.
17-07-26 02:55 pm
HK News Staffer
ನಾಲ್ಕು ತಿಂಗಳಲ್ಲೇ ಅಂತ್ಯಗೊಂಡ ನವಜೀವನ! ಅನಾರೋಗ್ಯದ...
13-07-26 10:21 pm
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
ಹಾಸನ ಎಸ್ಡಿಎಂ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳಿಂದ...
11-07-26 01:48 pm
18-07-26 06:22 pm
HK News Staffer
ಡೊನಾಲ್ಡ್ ಟ್ರಂಪ್ ಕೊಂದವರಿಗೆ 10 ಮಿಲಿಯನ್ ಡಾಲರ್ ಬಹ...
18-07-26 12:48 pm
‘ಪ್ರಾಜೆಕ್ಟ್ ಮೇಘಾಲಯ’ ಸಂಚು ಸ್ಫೋಟ! ವಿಜಯ್ ಸರ್ಕಾರ...
18-07-26 12:22 pm
51 ಬಾರಿ ವಿಷಸರ್ಪದಿಂದ ಕಚ್ಚಿಸಿಕೊಂಡರೂ ಸಾವಿನಿಂದ ಪಾ...
17-07-26 10:32 am
ಹಾರ್ಮುಜ್ನಲ್ಲಿ ಇರಾನ್ ಅಟ್ಟಹಾಸ! ಮತ್ತೆ ಎರಡು ಟ್ಯಾ...
14-07-26 08:20 pm
17-07-26 10:25 pm
HK News Staffer
ಎಸ್ಐಆರ್ ನಡುವೆ ಶಾಶ್ವತ ನಿವಾಸಿ ಪತ್ರ ಜಾರಿ ಅಕ್ರಮ ಬ...
17-07-26 07:58 pm
ಉಳ್ಳಾಲ ತೀರಕ್ಕೆ ಅಪ್ಪಳಿಸಿದ ಬೂತಾಯಿ ಮೀನುಗಳ ರಾಶಿ !...
17-07-26 07:22 pm
ಸುರತ್ಕಲ್ ಬಳಿ ಮೀನುಗಾರಿಕಾ ದೋಣಿ ಪಲ್ಟಿ ; ಸಮುದ್ರಕ್...
17-07-26 03:55 pm
ಸೌಂದರ್ಯ ಕೆಡಿಸಿದೆ ತೊಕ್ಕೊಟ್ಟು ಫ್ಲೈ ಓವರಿನ ಅನಧಿಕೃ...
15-07-26 10:44 pm
18-07-26 07:27 pm
HK News Staffer
ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ ; 8 ಕಾರ್...
18-07-26 07:21 pm
ಸಂಪಾಜೆ ಮೀಸಲು ಅರಣ್ಯದಲ್ಲಿ ಕಾಡುಕೋಣ ಬೇಟೆ ; ತಡೆದು...
18-07-26 12:34 pm
ಬಿ.ಸಿ. ರೋಡಿನಲ್ಲಿ ಯುವತಿ ಹತ್ಯೆ ಘಟನೆ ನೆಪದಲ್ಲಿ ಜಾ...
17-07-26 09:07 pm
ಮಠದಕಣಿ ಮನೆ ಕಳ್ಳತನ ಬೆನ್ನತ್ತಿದ ಬರ್ಕೆ ಪೊಲೀಸರು; ನ...
17-07-26 08:11 pm