ಬ್ರೇಕಿಂಗ್ ನ್ಯೂಸ್
27-03-24 10:36 pm HK News Desk ಕರ್ನಾಟಕ
ಚಿಕ್ಕಮಗಳೂರು, ಮಾ.27: ಬಿಜೆಪಿ ಟಿಕೆಟ್ ಡೀಲ್ ಪ್ರಕರಣದಲ್ಲಿ ಸಿಕ್ಕಿಬಿದ್ದ ಚೈತ್ರಾ ಕುಂದಾಪುರ ಮತ್ತು ಗ್ಯಾಂಗ್ ಮಾಫಿ ಸಾಕ್ಷಿಯಾಗಿದ್ದ ಸೆಲೂನ್ ಮಾಲೀಕನಿಗೆ ಹಲ್ಲೆಗೈದ ಘಟನೆ ನಡೆದಿದ್ದು ಲೋಕಸಭೆ ಚುನಾವಣೆ ವೇಳೆಗೆ ಮತ್ತೆ ಹಳೆ ಕೇಸು ಚರ್ಚೆಗೆ ಗ್ರಾಸವಾಗಿದೆ.
ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಬೈಂದೂರು ಕ್ಷೇತ್ರದ ಟಿಕೆಟ್ ತೆಗೆಸಿಕೊಡುವುದಾಗಿ ಹೇಳಿ ಕೋಟ್ಯಾಂತರ ರೂಪಾಯಿ ಪಡೆದು ವಂಚಿಸಿದ್ದ ಚೈತ್ರ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದು ಬಂಧನಕ್ಕೊಳಗಾಗಿತ್ತು. ಆರೋಪಿಗಳಲ್ಲಿ ಒಬ್ಬನಾದ ಧನರಾಜ್ ಮತ್ತು ಆರೇಳು ಮಂದಿ ಸೇರಿ ಸಲೂನ್ ಮಾಲೀಕ ರಾಮು ಎಂಬಾತನಿಗೆ ಹಲ್ಲೆ ನಡೆಸಿದ್ದಾಗಿ ಆರೋಪ ಕೇಳಿಬಂದಿದೆ. ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಕ್ಕಾಗಿ ಧನರಾಜ್ ಹಲ್ಲೆ ನಡೆಸಿದ್ದಾಗಿ ಹೇಳಲಾಗುತ್ತಿದೆ.
ಕಡೂರು ಪಟ್ಟಣದಲ್ಲಿ ರಾಮು ಸಲೂನ್ ನಡೆಸುತ್ತಿದ್ದು ಬೀರೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಉದ್ಯಮಿ ಗೋವಿಂದಬಾಬುಗೆ ವಂಚಿಸಲು ಆರೆಸ್ಸೆಸ್ ನಾಯಕರ ನಕಲಿ ಪಾತ್ರಧಾರಿಗಳನ್ನ ಸೃಷ್ಟಿಸಿದ್ದರು. ಕಡೂರಿನ ಈತನದ್ದೇ ಸೆಲೂನ್ ನಲ್ಲಿ ಕಬಾಬ್ ವ್ಯಾಪಾರಿಯನ್ನ ಆರ್.ಎಸ್.ಎಸ್. ನಾಯಕನನ್ನಾಗಿ ತಯಾರಿ ಮಾಡಲಾಗಿತ್ತು. ನಕಲಿ ಪಾತ್ರಧಾರಿಯನ್ನು ಸೃಷ್ಟಿಸಿದ್ದ ಚೈತ್ರಾ ಅಂಡ್ ಗ್ಯಾಂಗ್, ಆತನ ಮೂಲಕ ಗೋವಿಂದ ಪೂಜಾರಿಯನ್ನು ವಂಚಿಸಿತ್ತು.
ರಾಮು ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿದ್ದು ಆರೋಪಿಗಳ ವಿರುದ್ಧ ಪ್ರಮುಖ ಸಾಕ್ಷಿಯಾಗಿದ್ದಾನೆ. ಇದೀಗ ರಾಮು ಮೇಲೆ ಹಲ್ಲೆ ನಡೆಸಿದ್ದು ಆತನನ್ನು ಮುಗಿಸಲು ಆರೋಪಿಗಳು ಯತ್ನಿಸಿದ್ದಾರೆಯೇ ಎಂಬ ಅನುಮಾನ ಮೂಡಿದೆ. ಬೀರೂರು ಪೊಲೀಸರಿಗೆ ದೂರಿತ್ತರೂ ಪ್ರಕರಣ ದಾಖಲಿಸದ ಹಿನ್ನೆಲೆಯಲ್ಲಿ ರಾಮು ಜಿಲ್ಲಾ ಎಸ್ಪಿಗೆ ದೂರು ನೀಡಿದ್ದಾನೆ.
ದೂರಿನಲ್ಲಿ ತನ್ನ ಸ್ನೇಹಿತರ ಜೊತೆಗೆ ಹೊಟೇಲ್ ನಲ್ಲಿದ್ದಾಗ ಧನರಾಜ್ ಮತ್ತು ಮನು ಹಾಗೂ ಇತರರು ನನ್ನ ಭವಿಷ್ಯ ಹಾಳು ಮಾಡಿದ್ದೀಯಾ ಎಂದು ಹಲ್ಲೆ ನಡೆಸಿದ್ದಾರೆ. ಬೀರೂರು ಠಾಣೆಯಲ್ಲಿ ವ್ಯಾಪ್ತಿ ಬರುವುದಿಲ್ಲ ಎಂದು ಹೇಳಿ ಕಡೂರು ಠಾಣೆಗೆ ಕಳಿಸಿದ್ದಾರೆ. ತನಗೆ ಜೀವ ಭಯ ಇದೆ, ರಕ್ಷಣೆ ಕೊಡಬೇಕೆಂದು ಎಸ್ಪಿಗೆ ಮನವಿ ಮಾಡಿದ್ದಾನೆ. ಚೈತ್ರಾ ಗ್ಯಾಂಗಿನಲ್ಲಿ ಬಿಜೆಪಿ ಮುಖಂಡನಾಗಿದ್ದ ಗಗನ್ ಕಡೂರು ಎರಡನೇ ಆರೋಪಿಯಾಗಿದ್ದ. ಧನರಾಜ್ ಆರನೇ ಆರೋಪಿಯಾಗಿದ್ದಾನೆ. ಪೊಲೀಸರು ಚಾರ್ಜ್ ಶೀಟ್ ನಲ್ಲಿ ಸೆಲೂನ್ ಅಂಗಡಿಯ ರಾಮುವನ್ನು ಪ್ರಮುಖ ಸಾಕ್ಷಿಯಾಗಿ ತೋರಿಸಿದ್ದಾರೆ.
Chaitra Kundapura gang attacks witness saloon guy, complains of life threat. The central crime branch (CCB) police personnel from Bengaluru have arrested Hindutva activist Chaitra Kundapura and six others on the charge of cheating a businessman of crores of rupees after promising a BJP ticket for him from Byndoor.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm