ಬ್ರೇಕಿಂಗ್ ನ್ಯೂಸ್
20-11-23 07:00 pm Bangalore Correspondent ಕರ್ನಾಟಕ
ಬೆಂಗಳೂರು, ನ.20: ಕಾಂತಾರ - 2 ಚಿತ್ರ ಶೀಘ್ರದಲ್ಲೇ ಬರಲಿದೆ ಎಂದು ನಟ, ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದ್ದರು. ಚಿತ್ರದ ಕತೆಯ ಬಗ್ಗೆಯೂ ಕಾಂತಾರ ಚಿತ್ರ ಕತೆಗಿಂತಲೂ ಹಿಂದಿನದ್ದು ಎಂದು ಹೇಳಿ ಕುತೂಹಲ ಹುಟ್ಟಿಸಿದ್ದರು. ಈಗ ಆ ಕತೆ ಯಾವುದು ಎನ್ನುವ ಸಣ್ಣ ಸುಳಿವು ಹೊರ ಬಿದ್ದಿದೆ.
ತುಳುನಾಡಿನ ದೈವದ ಕಥೆಯನ್ನಿಟ್ಟುಕೊಂಡು ನಿರ್ಮಿಸಿದ್ದ ಕಾಂತಾರ ಪ್ಯಾನ್ ಇಂಡಿಯಾದಲ್ಲಿ ಹಿಟ್ ಆಗಿತ್ತು. ದೊಡ್ಡ ಯಶಸ್ಸಿನ ಬಳಿಕ ಸಿನಿಮಾದ ಎರಡನೇ ಭಾಗ ಅಂದರೆ ಪ್ರೀಕ್ವೆಲ್ ನ್ನು ತೆರೆಗೆ ತರುವುದಾಗಿ ರಿಷಬ್ ಶೆಟ್ಟಿ ಇದೇ ವರ್ಷದ ಫೆಬ್ರವರಿಯಲ್ಲಿ ಸಿನಿಮಾದ 100ನೇ ದಿನದ ಸಂಭ್ರಮಾಚರಣೆ ಸಂದರ್ಭದಲ್ಲಿ ಹೇಳಿದ್ದರು. ನೀವು ನೋಡಿರುವುದು ಸಿನಿಮಾದ 2ನೇ ಭಾಗ, ಮುಂದೆ ಬರಲಿರುವುದು ಸಿನಿಮಾದ ಮೊದಲ ಭಾಗ ಎಂದು ಹೇಳಿದ್ದು ಕುತೂಹಲಕ್ಕೀಡಾಗುವಂತೆ ಮಾಡಿತ್ತು.
ಸಿನಿಮಾದ ಚಿತ್ರೀಕರಣ ಹಾಗೂ ಸ್ಕ್ರಿಪ್ಟ್ ಬಗ್ಗೆ ರಿಷಬ್ ಸಾಕಷ್ಟು ತಯಾರಿ ನಡೆಸಿದ್ದಾರೆ. ಆದರೆ ಎರಡನೇ ಭಾಗದ ಕಥೆ ಏನು ಎನ್ನುವುದರ ಬಗ್ಗೆ ಕುತೂಹಲ ಹೆಚ್ಚಿದೆ. ಕೆಲವು ಮಾಹಿತಿ ಪ್ರಕಾರ, ʼಕಾಂತಾರ-2ʼ ನಲ್ಲಿ ಪಂಜುರ್ಲಿ ದೈವದ ಮೂಲದ ಕಥೆ ಇರಲಿದೆ ಎನ್ನಲಾಗಿದೆ. ಕ್ರಿ.ಶ. 300-400ರ ಕಾಲದ ಕಥೆ ಇರಲಿದ್ದು ಪಂಜುರ್ಲಿ ದೈವದ ಹುಟ್ಟು ಹಾಗೂ ಬೆಳೆದುಬಂದ ಆಚರಣೆ ಕುರಿತ ಕಥೆ ಇರಲಿದೆ ಎನ್ನುವ ಸುಳಿವು ಸಿಕ್ಕಿದೆ.
ʼಕಾಂತಾರʼ ಚಿತ್ರದಲ್ಲಿ ತುಳುನಾಡಿನ ಆಚರಣೆ, ಸಂಪ್ರದಾಯಗಳು ಕಾಣಿಸಿಕೊಂಡಿದ್ದವು. ಸಂಪೂರ್ಣ ಚಿತ್ರೀಕರಣ ಕುಂದಾಪುರದ ರಿಷಬ್ ಶೆಟ್ಟಿ ಊರಿನಲ್ಲೇ ನಡೆದಿತ್ತು. ಚಿತ್ರಕ್ಕೆ ಸುಮಾರು 16 ಕೋಟಿ ರೂ. ಖರ್ಚು ಆಗಿತ್ತು. ʼಕಾಂತಾರ-2ʼ ಚಿತ್ರದ ಬಜೆಟ್ ಅದಕ್ಕೂ ಹೆಚ್ಚಿನದಾಗಿರಲಿದೆ. ಇದೇ ನವೆಂಬರ್ ಅಂತ್ಯಕ್ಕೆ ಉಡುಪಿಯಲ್ಲಿ ʼಕಾಂತಾರ-2ʼ ಸಿನಿಮಾದ ಮುಹೂರ್ತ ನೆರವೇರಲಿದೆ. ಮುಂದಿನ ವರ್ಷದ ಕೊನೆಯಲ್ಲಿ ಸಿನಿಮಾ ರಿಲೀಸ್ ಆಗುವ ಸಾಧ್ಯತೆಯಿದೆ ಎನ್ನುವ ಮಾಹಿತಿಯಿದೆ.
After the phenomenal success of 'Kantara', Rishab Shetty and team are all set for 'Kantara 2'. The film will be a prequel to the ever-successful first part. The film will go on the floors soon.
29-11-25 08:11 pm
Bangalore Correspondent
ಚೆಂಡನ್ನು ಮತ್ತೆ ದೆಹಲಿ ಅಂಗಳಕ್ಕೆ ಎಸೆದುಬಿಟ್ಟ ಸಿಎಂ...
29-11-25 03:34 pm
Accident Karnool, Kolar, Five Killed: ಫಾರ್ಚುನ...
29-11-25 02:26 pm
ಸಿಎಂ ಫೈಟ್ ಕ್ಲೈಮ್ಯಾಕ್ಸ್ ; ನೀವಾಗಿಯೇ ನಿರ್ಧಾರ ಮಾಡ...
28-11-25 10:37 pm
ಇಬ್ಬರೂ ಬಿಟ್ಕೊಡ್ತಾ ಇಲ್ಲ, 3ನೇ ಸೂತ್ರ ತಯಾರಾಗ್ತಾ ಇ...
28-11-25 10:33 pm
30-11-25 10:59 pm
HK News Desk
Puttur Honey Gains National Attention, PM Mod...
30-11-25 03:53 pm
WhatsApp, Telegram, Snapchat, ShareChat, Cybe...
30-11-25 03:37 pm
ಸ್ಲೀಪರ್ ಕೋಚ್ ಬಸ್ಸಿಗೆ ಹೆದ್ದಾರಿ ನಡುವಲ್ಲೇ ಬೆಂಕಿ...
29-11-25 08:34 pm
ಐಶ್ವರ್ಯಾ ರೈ ತನ್ನ ಗಂಡನಿಂದ ಬೇರ್ಪಟ್ಟರೆ ಮತಾಂತರ ಮಾ...
28-11-25 10:42 pm
30-11-25 06:03 pm
Udupi Correspondent
DK Trasnsport Mangalore, Joel: ಡಿಕೆ ಟ್ರಾನ್ಸ್...
29-11-25 10:01 pm
Moodushedde, Mangalore, Daughter Assaults Mot...
29-11-25 04:26 pm
ಮೊಬೈಲ್ ಜಾಮರ್ ಜೈಲಿಗಷ್ಟೇ ಇರಲಿ, ಜನರ ಸೇವೆಗಳಿಗೆ ತೊ...
29-11-25 10:53 am
ದೇಶ ಅಭಿವೃದ್ಧಿಗಾಗಿ ಪ್ರಧಾನಿ ಮೋದಿ ನವ ಸಂಕಲ್ಪ ; ಮಿ...
28-11-25 02:48 pm
29-11-25 10:57 pm
Mangalore Correspondent
Davanagere, Police Steal Gold: ದಾವಣಗೆರೆಯಲ್ಲಿ...
28-11-25 06:23 pm
ಡಿಜಿಪಿ ಓಂ ಪ್ರಕಾಶ್ ಹತ್ಯೆ ಕೇಸ್ ; ಪ್ರಮುಖ ಆರೋಪಿ ಪ...
28-11-25 02:16 pm
9 ಕ್ಯಾರೆಟ್ ಚಿನ್ನ ಮಂಗಳೂರಿನ ಮಾರುಕಟ್ಟೆಗೆ ಲಗ್ಗೆ ಇ...
27-11-25 09:14 pm
ಹೊರ ಗುತ್ತಿಗೆ ಸಿಬಂದಿ ಸಂಬಳ ಪಾವತಿಗೆ 30 ಸಾವಿರ ಲಂಚ...
27-11-25 09:07 pm