ಬ್ರೇಕಿಂಗ್ ನ್ಯೂಸ್
27-06-23 01:17 pm HK News Desk ಕರ್ನಾಟಕ
ಧಾರವಾಡ, ಜೂನ್ 27: ರಾಜ್ಯದ ಎರಡನೇ ವಂದೇ ಭಾರತ್ ರೈಲಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಮೂಲಕ ಚಾಲನೆ ನೀಡಿದರು. ಒಟ್ಟು ದೇಶದ ಐದು ರೈಲುಗಳಿಗೆ ಪ್ರಧಾನಿ ಹಸಿರು ನಿಶಾನೆ ತೋರಿಸಿದರು.
ಧಾರವಾಡ ರೈಲು ನಿಲ್ದಾಣದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಧಾರವಾಡ- ಬೆಂಗಳೂರು ವಂದೇ ಭಾರತ ರೈಲು ಸಮಯದಲ್ಲಿ ಒಂದಿಷ್ಟು ಪರಿವರ್ತನೆ ಮಾಡುವಂತೆ ಜನ ಕೇಳುತ್ತಿದ್ದಾರೆ. ಅದರೆ ಸದ್ಯಕ್ಕೆ ರೈಲಿನ ನಿರ್ವಹಣೆ ಬರೀ ಬೆಂಗಳೂರಿನಲ್ಲಿ ಮಾತ್ರ ಇದೆ. ಹೀಗಾಗಿ ಆರು ತಿಂಗಳ ನಂತರ ಮಾಡುತ್ತೇವೆ. ಐದು ಗಂಟೆಯಲ್ಲಿ ಬೆಂಗಳೂರು ತಲುಪುವಂತೆ ಮಾಡಬೇಕು. ಇದು ಸ್ವದೇಶಿ ನಿರ್ಮಿತ ರೈಲು ಎಂಬುದು ಹೆಮ್ಮೆ ಎಂದರು.
ನಮ್ಮ ದೇಶಿ ತಂತ್ರಜಾನ ಬಳಸಿ ಈ ರೈಲು ಅಭಿವೃದ್ದಿ ಪಡೆಸಿದ್ದು ಈವರೆಗೆ 23 ರೈಲುಗಳಿಗೆ ಚಾಲನೆ ನೀಡಲಾಗಿದೆ. ಮುಂದಿನ ಮೂರು ವರ್ಷಗಳಲ್ಲಿ 400 ರೈಲು ಆರಂಭಗೊಳ್ಳಲಿವೆ. ಬೆಳಗಾವಿಯಿಂದ ಕೂಡ ಒಂದು ವಂದೇ ಭಾರತ ರೈಲು ಆರಂಭಿಸಲಾಗುವುದು ಎಂದರು.
ಒಟ್ಟಾರೆಯಾಗಿ ಕರ್ನಾಟಕದಲ್ಲಿ ಎರಡು ವಂದೇ ಭಾರತ್ ರೈಲು ಸೇವೆಗಳು ಆರಂಭವಾಗಿದ್ದು, ಪ್ರಯಾಣಿಕ ಸೌಲಭ್ಯಗಳನ್ನು ಹೊಂದಿರುವ ಸೆಮಿ ಹೈ ಸ್ಪೀಡ್ ರೈಲು ಸೇವೆಗೆ ಇದೀಗ ರಾಜ್ಯದ ಕೆಲವು ಜಿಲ್ಲೆಗಳಿಂದಲೂ ಬೇಡಿಕೆ ಇದೆ.
ಪ್ರಮುಖವಾಗಿ ರಾಜ್ಯದ ಕರಾವಳಿ ಎರಡು ಪ್ರಮುಖ ಜಿಲ್ಲೆಗಳಾದ ಉಡುಪಿ ಹಾಗೂ ದಕ್ಷಿಣ ಕನ್ನಡಕ್ಕೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸೇವೆ ಬೇಕಿದೆ ಎಂದು ಬೇಡಿಕೆಗಳು ಹೆಚ್ಚಾಗಿವೆ. ಮುಂಬೈ-ಗೋವಾ ವಂದೇ ಭಾರತ್ ರೈಲನ್ನು ಉಡುಪಿ ಹಾಗೂ ಮಂಗಳೂರು ವರೆಗೆ ವಿಸ್ತರಿಸಲು ಜನರು ತಮ್ಮ ಜನಪ್ರತಿನಿಧಿಗಳ ಮುಂದೆ ಬೇಡಿಕೆ ಇಟ್ಟಿದ್ದಾರೆ.
ಇದರ ಜೊತೆಗೆ ಬೆಂಗಳೂರು ನಗರದಿಂದ ಅತಿ ಹೆಚ್ಚು ಪ್ರಯಾಣಿಕ ಸಂಪರ್ಕ ಹೊಂದಿರುವ ಪ್ರಮುಖ ನಗರಗಳಲ್ಲಿ ಹೊಂದಾಗಿರುವ ಹೈದರಾಬಾದ್ಗೆ ಕರ್ನಾಟಕದಿಂದ ವಂದೇ ಭಾರತ್ ರೈಲು ಸೇವೆಯನ್ನು ವಿಸ್ತರಿಸಬೇಕೆಂಬ ಒತ್ತಾಯಗಳು ಇವೆ.
ಮೈಸೂರು-ಬೆಂಗಳೂರು-ಹೈದರಾಬಾದ್ ಮಾರ್ಗವಾಗಿ ಈಗಾಲೇ ಹಲವು ಎಕ್ಸ್ಪ್ರೆಸ್ ರೈಲು ಸಂಚಾರ ಮಾಡುತ್ತಿವೆ. ಇದೀಗ ಇದೇ ಮಾರ್ಗದಲ್ಲಿ ವಂದೇ ಭಾರತ್ ರೈಲು ಸೇವೆಯೂ ಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಯಾಣಿಕರು ಬೇಡಿಕೆ ಇಟ್ಟಿದ್ದಾರೆ.
Prime Minister Narendra Modi on Tuesday has virtually flagged off Bengaluru – Dharwad Vande Bharat Express along with four other services at different states. Karnataka governor Thawar Chand Gehlot and union minister Pralhad Joshi were present at Bengaluru’s KSR station while Vande Bharat Express left to Dharwad from the city.
06-07-25 08:48 pm
Bangalore Correspondent
ತುರ್ತು ಪರಿಸ್ಥಿತಿ ಕೆಟ್ಟ ಘಟನೆಯಾಗಿದ್ದು, ಅದನ್ನು ಯ...
06-07-25 06:25 pm
Vandalism in Shivamogga Raghigudda: ಶಿವಮೊಗ್ಗ...
06-07-25 04:50 pm
Women's Commission Chairperson Nagalakshmi; ಥ...
04-07-25 10:44 pm
Heart attack news, Karnataka: ರಾಜ್ಯದಲ್ಲಿ ಹೃದಯ...
04-07-25 10:18 pm
07-07-25 04:11 pm
HK News Desk
ಟೆಕ್ಸಾಸ್ ನಲ್ಲಿ ದಿಢೀರ್ ಪ್ರವಾಹ ; 27 ಮಂದಿ ಸಾವು,...
06-07-25 03:53 pm
ಹಿಜಾಬ್ ; ಪರೀಕ್ಷಾ ಕೊಠಡಿಗೆ ನುಗ್ಗಿ ಆವಾಜ್, ಪಿಇಎಸ್...
02-07-25 11:05 pm
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
ಹೈದ್ರಾಬಾದಿನಲ್ಲಿ ಸಿಗಾಚಿ ಇಂಡಸ್ಟ್ರೀಸ್ ಫಾರ್ಮಾ ಫ್ಯ...
01-07-25 08:57 pm
05-07-25 05:16 pm
Mangalore Correspondent
Ivan Dsouza, Mangaluru: ಮಂಗಳೂರು ಬ್ರಾಂಡ್ ನೇಮ್,...
05-07-25 04:19 pm
MLA Vedavyas Kamath: ಸೌತ್ ಕೆನರಾ ಬ್ರಿಟಿಷರ ಹೆಸರ...
05-07-25 02:32 pm
Hindu Jagarana Vedike, Moodbidri, Obscene vid...
05-07-25 12:56 pm
Mangalore FIR, Dharmasthala, Criminal Activit...
04-07-25 10:54 pm
07-07-25 03:30 pm
Mangalore Correspondent
Moral policing, Puttur, Mangalore Crime: ನೀನು...
07-07-25 12:20 pm
Tamilnadu Lock up death, Kannada News: ತಮಿಳುನ...
06-07-25 10:52 pm
Mangalore Foreign Job Scam, Hireglow Elegant,...
06-07-25 04:14 pm
Pregnant Woman Murder, Chamarajanagar: ಗರ್ಭಿಣ...
06-07-25 01:23 pm