ಬ್ರೇಕಿಂಗ್ ನ್ಯೂಸ್
19-06-23 06:12 pm Bangalore Correspondent ಕರ್ನಾಟಕ
ಬೆಂಗಳೂರು, ಜೂನ್ 19: ಜೂನ್ 30ರಂದು ನಡೆಯುವ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೆಸರನ್ನು ಘೋಷಣೆ ಮಾಡಲಾಗಿದೆ. ಮೂರು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಚಿವ ಬೋಸರಾಜ್ ಹಾಗೂ ಕಲಬುರಗಿಯ ಹಿರಿಯ ಕಾಂಗ್ರೆಸ್ ನಾಯಕ ತಿಪ್ಪನ್ನಪ್ಪ ಕಮಕನ್ನೂರು ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.
ವಿಧಾನಸಭೆಯಿಂದ ವಿಧಾನ ಪರಿಷತ್ ಸದಸ್ಯರಾಗಿದ್ದ ಬಾಬುರಾವ್ ಚಿಂಚನಸೂರು, ಆರ್.ಶಂಕರ್ ಮತ್ತು ಲಕ್ಷ್ಮಣ್ ಸವದಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಮೂರು ಸ್ಥಾನಗಳಿಗೆ ಈಗ ಉಳಿದ ಅವಧಿಗಾಗಿ ಉಪ ಚುನಾವಣೆ ನಡೆಯಲಿದೆ.

ಜೂನ್ 30ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆ ತನಕ ಮತದಾನ ನಡೆಯಲಿದೆ. ಅದೇ ದಿನ ಫಲಿತಾಂಶ ಪ್ರಕಟವಾಗಲಿದೆ. ನಾಮಪತ್ರ ಸಲ್ಲಿಕೆ ಮಾಡಲು ಜೂನ್ 20 ಕೊನೆಯ ದಿನವಾಗಿದೆ. ವಿಧಾನಸಭೆಯಲ್ಲಿ ಕಾಂಗ್ರೆಸ್ ಪೂರ್ಣ ಬಹುಮತ ಹೊಂದಿರುವುದರಿಂದ ನಿರಾಯಾಸವಾಗಿ ಕಾಂಗ್ರೆಸ್ ಅಭ್ಯರ್ಥಿಗಳೇ ಗೆಲುವು ಸಾಧಿಸಲಿದ್ದಾರೆ. ಇನ್ನೂ ಬಿಜೆಪಿ ಅಥವಾ ಜೆಡಿಎಸ್ ನಿಂದ ಅಭ್ಯರ್ಥಿಗಳ ಘೋಷಣೆ ಆಗಿಲ್ಲ. ಅಭ್ಯರ್ಥಿ ಕಣಕ್ಕಿಳಿಸದೇ ಇದ್ದಲ್ಲಿ ಅವಿರೋಧ ಆಯ್ಕೆ ನಡೆಯಲಿದೆ.
ಬಾಬುರಾವ್ ಚುಂಚನಸೂರು ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದರು. ಅವರ ಅವಧಿ 2024ರ ಜೂನ್ 17 ರ ವರೆಗೆ ಇರಲಿದೆ. ಪರಿಷತ್ ಸದಸ್ಯರಾಗಿದ್ದ ಆರ್. ಶಂಕರ್ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷೇತರ ಸ್ಪರ್ಧೆ ಮಾಡಿದ್ದರು. ಅವರ ಅವಧಿ 2026ರ ಜೂನ್ 30ರ ವರೆಗೂ ಇದೆ. ಲಕ್ಷ್ಮಣ ಸವದಿ ಅವರು ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದರು. ಅಥಣಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರ ರಾಜೀನಾಮೆಯಿಂದ ತೆರವಾದ ವಿಧಾನ ಪರಿಷತ್ ಸದಸ್ಯ ಸ್ಥಾನ 2028ರ ಜೂನ್ 14ರ ವರೆಗೆ ಇರಲಿದೆ. ಈಗ ಸವದಿ ಸ್ಥಾನಕ್ಕೆ ಶೆಟ್ಟರ್ ಸ್ಪರ್ಧಿಸಲಿದ್ದಾರೆ. ಆರ್. ಶಂಕರ್ ಜಾಗಕ್ಕೆ ತಿಪ್ಪನಪ್ಪ ಕುಮಕನ್ನೂರು ಸ್ಪರ್ಧೆ ಮಾಡಲಿದ್ದಾರೆ. ಚಿಂಚನಸೂರ್ ಜಾಗಕ್ಕೆ ಬೋಸರಾಜು ಸ್ಪರ್ಧಿಸಲಿದ್ದಾರೆ. ಶೆಟ್ಟರ್ ಅವರನ್ನು ಪರಿಷತ್ತಿನಲ್ಲಿ ಸಭಾಪತಿ ಹುದ್ದೆಗೇರಿಸುವ ಸಾಧ್ಯತೆಯಿದೆ.
The Congress has named former Chief Minister Jagadish Shettar, who lost the recent Assembly election, as a candidate in the upcoming Karnataka legislative council bypolls. Apart from Shettar, Congress has also named Tippannappa Kamaknoor and NS Boseraju as candidates for the MLC bypolls to be held on June 30.
23-04-26 07:06 pm
Giridhar Shetty, Mangaluru
ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಭರ್ಜರಿ ದಾಖಲೆ ; ಒಟ್...
23-04-26 01:36 pm
ಪುತ್ತೂರಿನಲ್ಲಿ ಸಹಪಾಠಿ ಯುವತಿಗೆ ಮಗು ಪ್ರಕರಣ ; ಮದು...
23-04-26 01:07 pm
SSLC Results 2026: ಇಂದು ಮಧ್ಯಾಹ್ನ SSLC ಫಲಿತಾಂಶ...
23-04-26 10:54 am
ಪ್ರಧಾನಿ ಮೋದಿ ಒಬ್ಬ ಭಯೋತ್ಪಾದಕ ; ಮಲ್ಲಿಕಾರ್ಜುನ ಖರ...
21-04-26 09:02 pm
23-04-26 10:22 am
HK News Staffer
ಭಾರತಕ್ಕೆ ಬರುತ್ತಿದ್ದ ಮತ್ತೆ ಮೂರು ತೈಲ ಹಡಗು ಇರಾನ್...
22-04-26 09:10 pm
ರಾಹುಲ್ ದ್ವಿಪೌರತ್ವ ಪ್ರಕರಣ ; ವಿಚಾರಣೆಯಿಂದ ಹಿಂದೆ...
20-04-26 10:54 pm
ಇರಾನ್ ಸರಕು ಹಡಗು ವಶಕ್ಕೆ ಪಡೆದ ಅಮೆರಿಕ ಸೇನೆ ; ತಕ್...
20-04-26 09:37 pm
ದೆಹಲಿಯಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ; ನಾಲ್ವರು...
18-04-26 11:39 pm
23-04-26 04:43 pm
HK News Staffer
ನಿರುದ್ಯೋಗಿಗಳಿಗೆ ಸುವರ್ಣಾವಕಾಶ ; ಮಂಗಳೂರಿನಲ್ಲಿ ಬೃ...
22-04-26 10:58 am
ಪುತ್ತೂರು ಜಾತ್ರೆಗೆ ಅಡ್ಡಿ ನೆಪ ; ಏಕಾಏಕಿ ಖಾಸಗಿ ಕಟ...
21-04-26 06:33 pm
ಆಸ್ಟ್ರೇಲಿಯಾ ಕಾನ್ಸುಲ್ ಜನರಲ್ ಹಿಲರಿ ಮೆಕ್ಗೀಚಿ -...
21-04-26 02:36 pm
ಮಹಿಳಾ ಮೀಸಲು ; ಚುನಾವಣೆ ಸಮಯದಲ್ಲಿ ಗೊಂದಲ ಎಬ್ಬಿಸುತ...
20-04-26 09:40 pm
22-04-26 10:13 pm
HK News Staffer
ಖಾಸಗಿ ಬಸ್ಸಿನ ನಿರ್ಲಕ್ಷ್ಯದ ಚಾಲನೆ, ತಂದೆ- ಮಗಳಿದ್ದ...
22-04-26 08:41 pm
ಕ್ಷುಲ್ಲಕ ಕಾರಣಕ್ಕೆ ನೆರೆಕರೆ ಮನೆಯವರ ಬೀದಿ ಜಗಳ ; ತ...
22-04-26 04:02 pm
ಕೊಡಗಿನ ರೆಸಾರ್ಟಿನಲ್ಲಿ ಅಮೆರಿಕದ ಪ್ರವಾಸಿ ಮಹಿಳೆಯ ಅ...
22-04-26 02:15 pm
ಮಂಗಳೂರಿನಲ್ಲಿ ಗಾಳಿ, ಸಿಡಿಲಿನ ಆರ್ಭಟ ; ಒಂದೇ ಮಳೆಗೆ...
22-04-26 02:06 pm