ಬ್ರೇಕಿಂಗ್ ನ್ಯೂಸ್
23-09-22 08:07 pm Bangalore Correspondent ಕರ್ನಾಟಕ
ಬೆಂಗಳೂರು, ಸೆ.23: ಸಮುದಾಯಗಳ ನಡುವೆ ದ್ವೇಷ ಬಿತ್ತುವುದು, ಸಮಾಜದಲ್ಲಿ ಅಶಾಂತಿ ಸೃಷ್ಟಿಸುವುದು, ಧರ್ಮಗಳ ಆಧಾರದಲ್ಲಿ ಗುಂಪುಗಳನ್ನು ಎತ್ತಿ ಕಟ್ಟಿ ಗಲಭೆ ಎಬ್ಬಿಸುವುದು ಇತ್ಯಾದಿ ವಿಚಾರಗಳ ಬಗ್ಗೆ ಪಿಎಫ್ಐ ನಾಯಕರ ವಿರುದ್ಧ ಬೆಂಗಳೂರಿನ ಕೆಜೆ ಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಸೆ.21ರಂದು ಏಂಟಿ ಟೆರರಿಸ್ಟ್ ಸ್ಕ್ವಾಡ್ ತಂಡದ ಅಧಿಕಾರಿಯೊಬ್ಬರು ಕೆಜೆ ಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದು, ಅದರಂತೆ 19 ಮಂದಿ ಪಿಎಫ್ಐ ನಾಯಕರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಆ ಪೈಕಿ 15 ಮಂದಿಯನ್ನು ಗುರುವಾರ ಎನ್ಐಎ ಅಧಿಕಾರಿಗಳ ಜೊತೆಗೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಈ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯ ನಾಲ್ವರು ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಂಡಿದ್ದಾರೆ.
ಎಫ್ಐಆರ್ ನಲ್ಲಿ ಬೆಂಗಳೂರಿನ ನಾಸಿರ್ ಪಾಷಾ, ಮನ್ಸೂರ್ ಅಹ್ಮದ್, ಕಲಬುರ್ಗಿಯ ಶೇಖ್ ಇಜಾಜ್ ಆಲಿ, ಮೈಸೂರಿನ ಮಹಮ್ಮದ್ ಕಲೀಮುಲ್ಲಾ, ಮಂಗಳೂರಿನ ಮಹಮ್ಮದ್ ಅಶ್ರಫ್ ಅಂಕಜಾಲು, ಮೊಹಮ್ಮದ್ ಶರೀಫ್ ಬಜ್ಪೆ, ಅಬ್ದುಲ್ ಖಾದರ್ ಪುತ್ತೂರು, ಬಂಟ್ವಾಳ ಕರಿಂಗಾನದ ಮಹಮ್ಮದ್ ತಪ್ಸೀರ್, ಮೊಹಿಯುದ್ದೀನ್ ಹಳೆಯಂಗಡಿ, ನವಾಜ್ ಕಾವೂರು, ಮೊಹಮ್ಮದ್ ಅಶ್ರಫ್ ಜೋಕಟ್ಟೆ, ಅಬ್ದುಲ್ ರಜಾಕ್ ಕೆಮ್ಮಾರ, ಅಯೂಬ್ ಕೆ. ಅಗ್ನಾಡಿ, ಶಿವಮೊಗ್ಗ ಜಿಲ್ಲೆಯ ಶಾಹೀದ್ ಖಾನ್, ದಾವಣಗೆರೆ ಜಿಲ್ಲೆ ಅಬು ತಾಹಿರ್, ಇಮಾಮುದ್ದೀನ್, ಉತ್ತರ ಕನ್ನಡ ಶಿರಸಿಯ ಅಬ್ದುಲ್ ಅಜೀಜ್ ಅಬ್ದುಲ್, ಮೌಸೀನ್ ಅಬ್ದುಲ್ ಶುಕೂರ್, ಕೊಪ್ಪಳ ಜಿಲ್ಲೆಯ ಮೊಹಮ್ಮದ್ ಫಯಾಜ್ ಎಂಬ 19 ಮಂದಿಯನ್ನು ಆರೋಪಿಗಳೆಂದು ತೋರಿಸಲಾಗಿದೆ.
15 ಮಂದಿಯನ್ನು ಬಂಧಿಸಿದ್ದು ಮೊಹಮ್ಮದ್ ಶರೀಫ್, ಮೊಹಮ್ಮದ್ ಅಶ್ರಫ್, ಅಯೂಬ್ ಅಗ್ನಾಡಿ, ಅಬ್ದುಲ್ ರಜಾಕ್ ಎಂಬವರು ತಲೆಮರೆಸಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಬೆಂಗಳೂರಿನ ಕೆಜಿ ಹಳ್ಳಿ ಉಪವಿಭಾಗದ ಕಾಡುಗೊಂಡನ ಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, 153 ಎ, 121 ಎ, 120 ಬಿ, 121 ಸೆಕ್ಷನ್ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಧರ್ಮದ ಹೆಸರಲ್ಲಿ ಸಮುದಾಯಗಳ ನಡುವೆ ವಿಷ ಬೀಜ ಬಿತ್ತುವುದು, ಜನಸಾಮಾನ್ಯರನ್ನು ಎತ್ತಿ ಕಟ್ಟುವುದು, ಕೋಮು ಗಲಭೆಗೆ ಕಾರಣವಾಗುವುದು, ಸರಕಾರದ ಬಗ್ಗೆ ತಪ್ಪು ಮಾಹಿತಿಗಳನ್ನು ನೀಡಿ ಯುವಕರನ್ನು ಪ್ರಚೋದಿಸುವುದು, ಪಿಎಫ್ಐ ಕಾರ್ಯಕರ್ತರಿಗೆ ಶಸ್ತ್ರ ಸಹಿತ ತರಬೇತಿ ನೀಡುವುದು, ಯುವಕರಲ್ಲಿ ತೀವ್ರವಾದದ ಬಗ್ಗೆ ಆಸಕ್ತಿ ಮೂಡಿಸುವುದು, ನಿರ್ದಿಷ್ಟ ಸಮುದಾಯದ ವ್ಯಕ್ತಿಗಳ ಮೇಲೆ ಆಕ್ರಮಣ ನಡೆಸುವುದಕ್ಕೆ ಪ್ರೇರಣೆ ನೀಡುವುದು, ಸಮಾಜದಲ್ಲಿ ಭೀತಿಯ ವಾತಾವರಣ ಮೂಡಿಸುವುದು, ದೇಶದಲ್ಲಿ ಅಭದ್ರತೆ ಮೂಡಿಸಿ, ಸರಕಾರಕ್ಕೆ ಸವಾಲಾಗುವ ಸ್ಥಿತಿ ತಂದೊಡ್ಡುವುದು, ಸರಕಾರದ ವಿರುದ್ಧ ಜನರನ್ನು ಎತ್ತಿ ಕಟ್ಟುವುದು ಇತ್ಯಾದಿ ಗುರುತರ ಆರೋಪಗಳನ್ನು ಪಿಎಫ್ಐ ನಾಯಕರ ಮೇಲೆ ಹೊರಿಸಲಾಗಿದ್ದು, ದೇಶ ವಿರೋಧಿ ಚಟುವಟಿಕೆ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿಯಡಿ ಎಫ್ಐಆರ್ ದಾಖಲಿಸುತ್ತಿರುವುದಾಗಿ ಉಲ್ಲೇಖ ಮಾಡಲಾಗಿದೆ.
In the wake of nationwide raids by the National Investigation Agency (NIA) against the Popular Front of India (PFI) and its office bearers, the Bengaluru police Thursday registered separate cases of allegedly attempting to wage war and provocation at religious places, and arrested 14 men, including two from Bengaluru, officials said. And the other four from Mangalore are said to be missing.
30-06-25 10:30 pm
HK News Desk
CM Siddaramaiah, Dk Shivakumar, CM Post: ಹೇಯ್...
30-06-25 02:55 pm
ಅಕ್ರಮ ಗೋಸಾಗಣೆ ತಡೆದ ಶ್ರೀರಾಮ ಸೇನೆ ಕಾರ್ಯಕರ್ತರನ್ನ...
30-06-25 01:44 pm
Spike in Heart Attack, Hassan: Dr. Manjunath...
30-06-25 12:05 pm
Tumakuru accident, four killed: ಕ್ಯಾಂಟರ್ -...
30-06-25 11:04 am
29-06-25 11:13 am
HK News Desk
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
400 ಕಿಮೀ ಎತ್ತರದ ಬಾಹ್ಯಾಕಾಶ ನಿಲ್ದಾಣ ತಲುಪಿದ ಮೊದಲ...
27-06-25 01:44 pm
ಆಪರೇಶನ್ ಸಿಂಧೂರ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ ಹಂಚ...
26-06-25 10:22 pm
ರೈಲು ಹಳಿ ಮೇಲೆ ಕಾರು ಓಡಿಸಿ ಹುಚ್ಚಾಟ ; ಆಂಟಿಯ ರಂಪಾ...
26-06-25 07:40 pm
30-06-25 10:59 pm
Mangalore Correspondent
Mangalore KDP Meeting: ಕೆಡಿಪಿ ಸಭೆಯಲ್ಲಿ ಮರಳು,...
30-06-25 08:19 pm
Mangalore, Rain, School News: ತರಗತಿ ನಡೆಯುತ್ತಿ...
30-06-25 03:20 pm
Mangalore Bomb Threat, Airport: ಮಂಗಳೂರು ಸೇರಿ...
30-06-25 01:07 pm
Red Stone Quarry, Dakshina Kannada, Protest:...
27-06-25 10:17 pm
30-06-25 06:12 pm
Giridhar Shetty, Mangaluru
Olx Fraud, Mangalore: ಓಎಲ್ ಎಕ್ಸ್ ನಲ್ಲಿ ಕಾರು ಮ...
29-06-25 11:23 pm
Udupi Crime, Kapu, Railway: ರೈಲಿನಲ್ಲಿ ಉಡುಪಿಗೆ...
29-06-25 11:15 pm
Davanagere ATM Robbery : ಪೆಟ್ರೋಲ್ ಸುರಿದು ಎಟಿಎ...
29-06-25 04:26 pm
Tumakuru Husband Murder, Wife arrest, Crime:...
29-06-25 02:26 pm