ಬ್ರೇಕಿಂಗ್ ನ್ಯೂಸ್
12-01-21 03:28 pm Source: GIZBOT ಡಿಜಿಟಲ್ ಟೆಕ್
ಪ್ರಸ್ತುತ ವಾಟ್ಸಾಪ್ನ ಹೊಸ ಸೇವಾ ನಿಯಮದ ಬಗ್ಗೆಯೆ ಹೆಚ್ಚು ಚರ್ಚೆ ಆಗ್ತಿದೆ. ಇದರ ನಡುವೆ ವಾಟ್ಸಾಪ್ಗೆ ಸರಿ ಸಮನಾದ ಇತರೆ ಮೆಸೇಜಿಂಗ್ ಅಪ್ಲಿಕೇಶನ್ಗಳ ಕಡೆಗೆ ಬಳಕೆದಾರರು ಹೆಚ್ಚಿನ ಗಮನ ನೀಡುತ್ತಿದ್ದಾರೆ. ಈಗಾಗಲೇ ವಾಟ್ಸಾಪ್ನ ಬಳಕೆದಾರರು ಸಿಗ್ನಲ್, ಟೆಲಿಗ್ರಾಮ್ ನಂತಹ ಮೆಸೇಜಿಂಗ್ ಅಪ್ಲಿಕೇಶನ್ಗೆ ಬದಲಾಗುತ್ತಿದ್ದಾರೆ. ಇದರ ನಡುವೆಯೆ ಸಿಹಿ ಸುದ್ದಿಯೊಂದು ಹೊರ ಬಿದ್ದಿದೆ. ಅದೆನಂದರೆ ಭಾರತದಲ್ಲಿ ತಯಾರಾದ ಅಪ್ಪಟ್ಟ ಸ್ವದೇಶಿ ಮೆಸೇಜಿಂಗ್ ಅಪ್ಲಿಕೇಶನ್ ಅನ್ನು ಭಾರತೀಯ ಸಾಫ್ಟ್ವೇರ್ ಕಂಪೆನಿಯೊಂದು ಸಿದ್ದತೆ ನಡೆಸಿದೆ.
Rಹೌದು, ಭಾರತದಲ್ಲಿ ಸ್ವದೇಶಿ ಮೆಸೇಜಿಂಗ್ ಅಪ್ಲಿಕೇಶನ್ ಅನ್ನು ಪರಿಚಯಿಸಲು ಭಾರತೀಯ ಸಾಫ್ಟ್ವೇರ್ ಕಂಪನಿಯಾದ ಜೊಹೊ ಸಿದ್ದತೆ ನಡೆಸಿದೆ. ಈ ಕಂಪೆನಿ ಭಾರತದಲ್ಲಿ ಅರಟ್ಟೈ ಎಂಬ ಹೆಸರಿನ ಮೆಸೇಜಿಂಗ್ ಆಪ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಇನ್ನು ಅರಟ್ಟೈ ಎಂದರೆ ತಮಿಳಿನಲ್ಲಿ ಚಿಟ್-ಚಾಟ್ ಎಂದು ಹೆಸರಿಸಲಾಗಿದೆ. ಜೊಹೊ ಕಾರ್ಪೊರೇಷನ್ ಸಾಫ್ಟ್ವೇರ್ ಅಭಿವೃದ್ಧಿಯಲ್ಲಿ ಪರಿಣತಿ ಹೊಂದಿರುವ ಬಹುರಾಷ್ಟ್ರೀಯ ತಂತ್ರಜ್ಞಾನ ಕಂಪನಿಯಾಗಿದ್ದು, ಇದರ ಪ್ರಧಾನ ಕಚೇರಿ ಚೆನ್ನೈನಲ್ಲಿದೆ.
ಕಂಪ್ಲೀಟ್ ಸ್ವದೇಶಿ ಮೆಸೇಜಿಂಗ್ ಅಪ್ಲಿಕೇಶನ್ ಪರಿಚಯಿಸುವುದಕ್ಕೆ ಜೊಹೊ ಕಾರ್ಪೊರೇಶನ್ ಮುಂದಾಗಿದೆ. ಇದರ ಬಗ್ಗೆ ಈ ಜೊಹೊ ಸಂಸ್ಥೆಯ ಸಿಇಒ ಶ್ರೀಧರ್ ವೆಂಬು ಅವರು ಟ್ವೀಟ್ ಮಾಡಿದ್ದಾರೆ. "ನಮ್ಮ ಅರಟ್ಟೈ ತಂಡವು ನಮ್ಮ ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್ನ ಬಗ್ಗೆ ಇನ್ನೂ ಮಾತನಾಡದಂತೆ ಕೇಳಿದೆ. ಆದರೆ ಇದರ ಬಗ್ಗೆ ಈಗಾಗಲೇ ಎಲ್ಲಾ ಕಡೆ ಚರ್ಚೆ ನಡೆಯುತ್ತಿರುವುದರಿಂದ ನಾನು ಕೂಡ ಇದರ ಬಗ್ಗೆ ವಿಷಯ ತಿಳಿಸಲು ಮುಂದಾಗಿದ್ದಾನೆ ಎಂದು ಟ್ವೀಟ್ ಮಾಡಿದ್ದಾರೆ. ಇದಲ್ಲದೆ ಅರಟ್ಟೈ ಅಪ್ಲಿಕೇಶನ್ ಅನ್ನು ಪ್ಲೇ ಸ್ಟೋರ್ನಲ್ಲಿ ಪರಿಚಯಿಸಲಿದ್ದೇವೆ. ಅರಟ್ಟೈ ಅಪ್ಲಿಕೇಶನ್ ಶೀಘ್ರದಲ್ಲೇ ಕೆಲವು ವಾರಗಳಲ್ಲಿ ಅಧಿಕೃತವಾಗಲಿದೆ ಎಂದು ತಿಳಿಸಿದ್ದಾರೆ.
ಸದ್ಯ ಜೊಹೊ ಸಂಸ್ಥೆಯ ಅರಟ್ಟೈ ಅಪ್ಲಿಕೇಶನ್ ಅನ್ನು ಕೆಲವು ವಾರಗಳ ಹಿಂದೆ ಬೀಟಾ ಅಡಿಯಲ್ಲಿ ತನ್ನ ಸ್ವಂತ ಉದ್ಯೋಗಿಗಳಿಗೆ ಲಭ್ಯವಾಗುವಂತೆ ಮಾಡಿದೆ. ನಂತರ ಇದನ್ನು ಸಾರ್ವಜನಿಕ ಡೌನ್ಲೋಡ್ಗಳಿಗಾಗಿ ಕಳೆದ ವಾರ ಗೂಗಲ್ ಮತ್ತು ಆಪಲ್ ಪ್ಲೇ ಸ್ಟೋರ್ಗಳಲ್ಲಿ ಬಿಡುಗಡೆ ಮಾಡಿದೆ. ಇದೀಗ ಕಂಪನಿಯು ಶೀಘ್ರದಲ್ಲೇ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲು ಸಿದ್ಧತೆ ನಡೆಸಿದೆ. ಫೇಸ್ಬುಕ್ ಒಡೆತನದ ವಾಟ್ಸಾಪ್ ಸೇವಾ ನಿಯಮ ಭಾರಿ ಅಸಮಾಧಾನ ಉಂಟು ಮಾಡಿರುವುದರಿಂದ ಭಾರತೀಯರಿಗೆ ಹೊಸ ಮೆಸೇಜಿಂಗ್ ಅಪ್ಲಿಕೇಶನ್ ಆಗಿ ಅರಟ್ಟೈ ಒಂದು ಆಯ್ಕೆಯಾಗಲಿದೆ.
ಇನ್ನು ಈ ಅಪ್ಲಿಕೇಶನ್ ಯಾವೆಲ್ಲಾ ಫೀಚರ್ಸ್ಗಳನ್ನ ಹೊಂದಿರಲಿದೆ ಹಾಗೂ ಹೇಗಿರಲಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಆದರೆ ಇದು ವಾಟ್ಸಾಪ್ಗೆ ಸೆಡ್ಡು ಹೊಡೆಯಲಿದೆ ಎಂದು ಹೇಳಲಾಗಿದೆ. ಇನ್ನು ವಾಟ್ಸಾಪ್ ಭಾರತದಲ್ಲಿ ಅತಿ ಹೆಚ್ಚಿನ ಬಳಕೆದಾರರನ್ನು ಹೊಂದಿದೆ. ಈ ಸ್ವದೇಶಿ ಅಪ್ಲಿಕೇಶನ್ ಭಾರತದಲ್ಲಿ ಯುಶಸ್ವಿಯಾದರೆ ವಾಟ್ಸಾಪ್ಗೆ ಸಂಕಷ್ಟು ಎದುರಾಗುವುದು ಖಚಿತ ಎನ್ನಲಾಗಿದೆ. ಏಕೆಂದರೆ ಜೊಹೊ ಅವರ ಹೊಸ ಅಪ್ಲಿಕೇಶನ್ ವಾಟ್ಸಾಪ್ ನಂತಹ ಮೆಸೇಜಿಂಗ್ ಅಪ್ಲಿಕೇಶನ್ಗಳಿಗೆ ಭಾರತದ ಪರ್ಯಾಯಗಳಲ್ಲಿ ಒಂದಾಗಬಹುದು ಎಂದು ಅಂದಾಜಿಸಲಾಗಿದೆ.
11-09-25 10:11 pm
Bangalore Correspondent
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
11-09-25 10:42 pm
Mangaluru Correspondent
Mangalore, Harish Kumar: ಎರಡು ನಿಮಿಷದ ಆಜಾನ್ ನಿ...
11-09-25 09:38 pm
Mangalore Airport, Road, Accident: ಮಂಗಳೂರು ಏರ...
11-09-25 06:14 pm
Dharmasthala, YouTube, SIT: ಧರ್ಮಸ್ಥಳ ವಿರುದ್ಧ...
11-09-25 02:45 pm
ಬಿಜೆಪಿ ಬಗ್ಗೆ ಪುತ್ತಿಲ ಪರಿವಾರದ ಅಸಮಾಧಾನ ; ಭರವಸೆ...
11-09-25 01:40 pm
11-09-25 09:13 pm
Mangalore Correspondent
Mangalore Fake Documents, Crime, Arrest: ಸರ್ಕ...
11-09-25 08:52 pm
ಅಮೆರಿಕ ಅಧ್ಯಕ್ಷರ ಆಪ್ತ, ಬಲಪಂಥೀಯ ಕಾರ್ಯಕರ್ತ ಚಾರ್ಲ...
11-09-25 02:25 pm
Mangalore Police, Communial Case, Arrest, Cri...
08-09-25 10:34 pm
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm