ಬ್ರೇಕಿಂಗ್ ನ್ಯೂಸ್
13-03-26 10:04 pm Mangaluru Staffer ಕರಾವಳಿ
ಮಂಗಳೂರು, ಮಾರ್ಚ್ 13: ಮಧ್ಯಪ್ರಾಚ್ಯ ರಾಷ್ಟ್ರಗಳ ಪ್ರಸ್ತುತ ಭೌಗೋಳಿಕ ರಾಜಕೀಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟು ಏರ್ ಇಂಡಿಯಾ ಎಕ್ಸ್ಪ್ರೆಸ್ ಮಾರ್ಚ್ 16ರಿಂದ ತೊಡಗಿ 28ರ ವರೆಗೆ ಮಂಗಳೂರು ಏರ್ಪೋರ್ಟ್ (IXE) ನಿಂದ ಶಾರ್ಜಾ (SHJ) ಗೆ ಪ್ರತಿ ದಿನ ವಿಮಾನ ಹಾರಾಟ ನಡೆಸುವುದಾಗಿ ಹೇಳಿದೆ. ಯುದ್ಧ ಆರಂಭಗೊಂಡ ಬಳಿಕ ಏರ್ ಇಂಡಿಯಾ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿತ್ತು.
ಇದರಂತೆ, IX 6057 ಮಂಗಳೂರಿನಿಂದ ಮಧ್ಯಾಹ್ನ 13:25ಕ್ಕೆ ಹೊರಟು ಅಲ್ಲಿ ಸ್ಥಳೀಯ ಸಮಯ ಸಂಜೆ 16:05 ಕ್ಕೆ ಶಾರ್ಜಾ ತಲುಪುತ್ತದೆ. IX 6058 ವಿಮಾನದಲ್ಲಿ ಸ್ಥಳೀಯ ಸಮಯ 17:05 ಕ್ಕೆ ಶಾರ್ಜಾದಿಂದ ಹೊರಟು ರಾತ್ರಿ 22:30 IST ಕ್ಕೆ ಮಂಗಳೂರು ಏರ್ಪೋರ್ಟ್ ತಲುಪುತ್ತದೆ.
ಅಂತೆಯೇ, IX 1991 ವಿಮಾನವು ಮಂಗಳವಾರ, ಬುಧವಾರ ಮತ್ತು ಭಾನುವಾರ ಮಂಗಳೂರಿನಿಂದ ಬೆಳಗ್ಗೆ 05.15ಕ್ಕೆ ಹೊರಟು 8.30ಕ್ಕೆ ದೆಹಲಿ ತಲುಪುತ್ತದೆ. IX 1992 ಈ 3 ದಿನಗಳಲ್ಲಿ ದೆಹಲಿಯಿಂದ ಬೆಳಗ್ಗೆ 09.30ಕ್ಕೆ ಹೊರಟು ಮಧ್ಯಾಹ್ನ 12.25 ಕ್ಕೆ ಮಂಗಳೂರು ಏರ್ಪೋರ್ಟ್ ತಲುಪುತ್ತದೆ. ಈ ವಿಮಾನಗಳ ಸಮಯ ಮಾರ್ಚ್ 16ರಿಂದ 25 ರವರೆಗೆ ಮಾತ್ರ ಆಗಿರುತ್ತದೆ. ಈ ವಿಮಾನ ಸಮಯ ಮತ್ತು ಸಂಖ್ಯೆ ಈ ಮೂರು ದಿನಗಳಿಗೆ ನಿರ್ದಿಷ್ಟವಾಗಿದೆ.
ವಾರದ ಇತರ ದಿನಗಳಲ್ಲಿ, IX 1276 ಮಂಗಳೂರಿನಿಂದ ಬೆಳಗ್ಗೆ 08.30 ಕ್ಕೆ ಹೊರಟು ಪೂರ್ವಾಹ್ನ 11.45 ಕ್ಕೆ ದೆಹಲಿಗೆ ತಲುಪುತ್ತದೆ. IX 1275 ವಿಮಾನ ದೆಹಲಿಯಿಂದ ಬೆಳಗ್ಗೆ 5 ಕ್ಕೆ ಹೊರಟು 8ಕ್ಕೆ ಮಂಗಳೂರಿಗೆ ಆಗಮಿಸುತ್ತದೆ ಎಂದು ಮಂಗಳೂರು ಏರ್ಪೋರ್ಟ್ ಪ್ರಕಟಣೆ ತಿಳಿಸಿದೆ.
13-03-26 12:09 pm
HK News Staffer
ಮಂತ್ರಾಲಯದಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸಿ...
13-03-26 09:44 am
ಮಗಳಿಗೆ ಮದುವೆಯಾಗದ ಚಿಂತೆಯಲ್ಲಿ ಆಟೋ ಚಾಲಕ ಆತ್ಮಹತ್ಯ...
12-03-26 02:48 pm
13 ವರ್ಷಗಳಿಂದ ಜೀವನ್ಮರಣ ಹೋರಾಟ ; ಕೋಮಾದಲ್ಲಿದ್ದ ಯು...
11-03-26 07:16 pm
ಪರಿಷತ್ ಚುನಾವಣೆಗೆ ಸಿಗದ ಟಿಕೆಟ್ ; ಬಿಜೆಪಿ ರಾಜ್ಯ ಶ...
11-03-26 06:14 pm
13-03-26 04:18 pm
HK News Staffer
ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್...
13-03-26 11:24 am
ಅಮೆರಿಕದ ಪಶ್ಚಿಮ ಕರಾವಳಿಗೆ ಇರಾನ್ ದಾಳಿ ಸಾಧ್ಯತೆ ;...
12-03-26 09:03 pm
ನಷ್ಟ ಪರಿಹಾರ ಕೇಳಿದ ಇರಾನ್ ; ಯುದ್ಧ ನಿಲ್ಲಿಸಲು ಮೂರ...
12-03-26 09:01 pm
ಗಲ್ಫ್ ಯುದ್ಧ ; ವಿಷಯುಕ್ತ ಬಿಳಿ ರಂಜಕ ಬಾಂಬ್ ಬಳಕೆ,...
10-03-26 09:46 pm
13-03-26 10:04 pm
Mangaluru Staffer
ಬಿಲ್ ಕಟ್ಟದ ನೆಪದಲ್ಲಿ ಕೊರಗ ಸಮುದಾಯಕ್ಕೆ ನೀರಿನ ಸಂಪ...
13-03-26 09:58 pm
ರಸ್ತೆ ಬದಿ ಕಸ ಎಸೆಯುವವರ ವಿರುದ್ಧ ಕಠಿಣ ಕ್ರಮ ಜರುಗಿ...
13-03-26 09:38 pm
ಭ್ರಷ್ಟ ಅಬಕಾರಿ ಡೀಸಿ ಶ್ರೀನಿವಾಸ್ ; ಲೋಕಾಯುಕ್ತ ದಾಳ...
13-03-26 08:27 pm
Shiradi Ghat Accident, Mangalore: ಶಿರಾಡಿ - ಗು...
13-03-26 05:41 pm
12-03-26 11:20 pm
mangalore
ಸುರತ್ಕಲ್ ಗ್ಯಾರೇಜ್ ನಿಂದ ವಾಹನಗಳ ಬಿಡಿಭಾಗ ಕಳವು ;...
12-03-26 10:53 pm
ಬೆಂಗಳೂರು ; ಕಾಲೇಜು ಮುಗಿಸಿ ವಾಪಸ್ಸಾಗುತ್ತಿದ್ದಾಗ ಅ...
12-03-26 12:12 pm
ನಾಪತ್ತೆಯಾಗಿದ್ದ ಕೊಣಾಜೆಯ ಯುವಕ ಸೋಮೇಶ್ವರದ ಕೆರೆಯಲ್...
11-03-26 10:58 am
ಕೇರಳ ಚುನಾವಣೆ ಹಿನ್ನೆಲೆ ; ರೈಲಿನಲ್ಲಿ ತಪಾಸಣೆ ಬಿಗಿ...
10-03-26 08:32 pm