ಬ್ರೇಕಿಂಗ್ ನ್ಯೂಸ್
07-10-22 07:21 pm Source: Vijayakarnataka ಡಿಜಿಟಲ್ ಟೆಕ್
ಆನ್ಲೈನಿನಲ್ಲಿ ಸ್ಮಾರ್ಟ್ಫೋನ್ ಬುಕ್ ಮಾಡಿದ ಗ್ರಾಹಕ ಸೋಪ್ ಬಾಕ್ಸ್ ಅಥವಾ ಇಟ್ಟಿಗೆಯಂತಹ ವಸ್ತುಗಳನ್ನು ಪಡೆದ ಟ್ರಾಜಿಡಿ ಕಥೆಗಳನ್ನು ನೀವು ಕೇಳಿರುತ್ತೀರಾ. ಆದರೆ, ಇಲ್ಲೋರ್ವ ವ್ಯಕ್ತಿ ಐಫೋನ್ 13 ಬುಕ್ ಮಾಡಿ ಹೊಚ್ಚ ಹೊಸ ಐಫೋನ್ 14 ಸಾಧನವನ್ನು ಪಡೆದಿದ್ದಾರೆ. ಹೌದು, ಇತ್ತೀಚಿಗಷ್ಟೆ ಫ್ಲಿಪ್ಕಾರ್ಟ್ ಆಯೋಜಿಸಿದ್ದ 'ಬಿಗ್ ದಸರಾ ಸೇಲ್'ನಲ್ಲಿ 49 ಸಾವಿರ ರೂ.ಪಾವತಿಸಿ ಐಫೋನ್ 13 ಪೋನನ್ನು ಬುಕ್ ಮಾಡಿರುವ ಗ್ರಾಹಕನಿಗೆ ಐಫೋನ್ 14 ಬಂದು ತಲುಪಿದೆ.
ಈ ಕುರಿತು ಜನಪ್ರಿಯ ಟ್ವಿಟರ್ ಬಳಕೆದಾರ ಅಶ್ವಿನ್ ಹೆಗ್ಡೆ ಎಂಬುವವರು ಟ್ವೀಟ್ ಮಾಡಿದ್ದು, ತಮ್ಮ ಸಾಮಾಜಿಕ ಮಾಧ್ಯಮವನ್ನು ಫಾಲೊ ಮಾಡುತ್ತಿರುವ ವ್ಯಕ್ತಿಯೋರ್ವರು ಐಫೋನ್ 13 ಸಾಧನವನ್ನು ಬುಕ್ ಮಾಡಿ ಐಫೋನ್ 14 ಸಾಧನವನ್ನು ಪಡೆದಿದ್ದಾರೆ ಎಂದು ತಿಳಿಸಿದ್ದಾರೆ. ಈ ಕುರಿತಂತೆ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಅಶ್ವಿನ್ ಹೆಗ್ಡೆ, ಐಫೋನ್ 13 ಸಾಧನವನ್ನು ಬುಕ್ ಮಾಡಿದ್ದ ವ್ಯಕ್ತಿಗೆ ಐಫೋನ್ 14 ಬಂದು ತಲುಪಿರುವ ಬಗ್ಗೆ ಸ್ಕ್ರೀನ್ಶಾಟ್ ಸಹ ಅಪ್ಲೋಡ್ ಮಾಡಿದ್ದಾರೆ.
ಫ್ಲಿಪ್ಕಾರ್ಟ್ ಬಿಗ್ ದಸರಾ ಸೇಲ್ನಲ್ಲಿ Apple iPhone 13 ಸಾಧನವು 50,000 ರೂ. ಕ್ಕಿಂತ ಕಡಿಮೆ ಬೆಲೆಗೆ ಖರೀದಿಗೆ ಲಭ್ಯವಿತ್ತು. ಆದರೆ, ಇತ್ತೀಚಿಗಷ್ಟೇ ಮೊಬೈಲ್ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಐಫೋನ್ 14 ಸಾಧನದ ಮೂಲ ಬೆಲೆ 79,900 ರೂ.ಗಳಾಗಿವೆ. ಇದರಿಂದ ಐಫೋನ್ 13 ಸಾಧನವನ್ನು ಬುಕ್ ಮಾಡಿದ ವ್ಯಕ್ತಿಗೆ ಜಾಕ್ಪಾಟ್ ಹೊಡೆದಿದೆ ಎಂದು ಹಲವು ಟ್ವಿಟರ್ ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ. ಇದು ನಿಜಕ್ಕೂ ಸಂತಸದ ವಿಷಯ ಎಂದು ಹಲವು ಹೇಳಿದ್ದಾರೆ.
ಇನ್ನು ಈ ಘಟನೆಯ ಬಗ್ಗೆ ಫ್ಲಿಪ್ಕಾರ್ಟ್ ಸಂಸ್ಥೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಇದು ಮೊಬೈಲ್ ಪೂರೈಕೆದಾರರ ಕಣ್ತಪ್ಪಿನಿಂದಾಗಿರಬಹುದು ಎಂದು ಹೇಳಲಾಗುತ್ತಿದೆ. ಇತ್ತೀಚಿಗಷ್ಟೆ ಫ್ಲಿಪ್ಕಾರ್ಟ್ ನಲ್ಲಿ ಲ್ಯಾಪ್ಟಾಪ್ ಒಂದನ್ನು ಬುಕ್ ಮಾಡಿದ್ದ ವ್ಯಕ್ತಿಯು ಸೋಪ್ ಡಿಟರ್ಜೆಂಟ್ ಬಾಕ್ಸ್ ಇರುವ ಪ್ಯಾಕೇಜ್ ಒಂದನ್ನು ಪಡೆದಿದ್ದರು ಎಂಬ ಸುದ್ದಿ ವೈರಲ್ ಆಗಿತ್ತು. ಈ ಸುದ್ದಿ ಹೊರಬಿದ್ದ ಎರಡು ದಿನಗಳಲ್ಲೇ ಫ್ಲಿಪ್ಕಾರ್ಟ್ ಸಂಸ್ಥೆಯು ಆ ವ್ಯಕ್ತಿಗೆ ಸೂಕ್ತ ನ್ಯಾಯ ಒದಗಿಸಿರುವುದಾಗಿ ತಿಳಿಸಿತ್ತು.
Flipkart Delivers Iphone 14 To Customer Who Ordered Iphone 13.
29-04-25 10:45 pm
Bangalore Correspondent
CM Siddaramaiah, Belagavi, BJP Suresh Kumar:...
29-04-25 09:51 pm
Protest Kalaburagi, islamabad Locality: ಕಲಬುರ...
29-04-25 09:20 pm
Kudupu Murder, Mob attack, Parameshwar: ಕುಡುಪ...
29-04-25 04:28 pm
Praveen Nettaru, Mohsin Shukur, Karwar Police...
29-04-25 01:04 pm
29-04-25 03:45 pm
HK News Desk
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
ಪಾಕಿಸ್ತಾನದ ಶಾಂತಿ ಸಮಿತಿ ಕಚೇರಿ ಎದುರೇ ಬಾಂಬ್ ಸ್ಫೋ...
28-04-25 05:53 pm
ಪಾಕ್ ವಿರುದ್ಧ ಯುದ್ದಕ್ಕೆ ಕರೆ ನೀಡಿದ ಕಾಶ್ಮೀರ್ ಸಿಎ...
27-04-25 08:42 pm
Pak, Website Hacked, Indian Army : ಅಲ್ಲಾ ನಮ್ಮ...
27-04-25 07:38 pm
30-04-25 11:26 am
Mangalore Correspondent
Puttur Elephant Attack: ಕಾಡಾನೆ ತಿವಿತಕ್ಕೆ ಪುತ್...
29-04-25 11:00 pm
Mangalore, Ullal Nethravathi Bridge: ಉಳ್ಳಾಲ ನ...
29-04-25 05:45 pm
Mangalore, Dr Kalladka Bhat: ಹೆಣ್ಣು ಮಕ್ಕಳು ವ್...
29-04-25 12:40 pm
Vadiraj, Mangalore, B R Ambedkar: ಕಾಂಗ್ರೆಸ್ ಸ...
29-04-25 11:53 am
29-04-25 09:59 pm
Mangalore Correspondent
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am
Mangalore crime, Murder, Kudupu: ಕುಡುಪು ಬಳಿಯಲ...
27-04-25 10:59 pm