ಬ್ರೇಕಿಂಗ್ ನ್ಯೂಸ್
07-10-22 07:21 pm Source: Vijayakarnataka ಡಿಜಿಟಲ್ ಟೆಕ್
ಆನ್ಲೈನಿನಲ್ಲಿ ಸ್ಮಾರ್ಟ್ಫೋನ್ ಬುಕ್ ಮಾಡಿದ ಗ್ರಾಹಕ ಸೋಪ್ ಬಾಕ್ಸ್ ಅಥವಾ ಇಟ್ಟಿಗೆಯಂತಹ ವಸ್ತುಗಳನ್ನು ಪಡೆದ ಟ್ರಾಜಿಡಿ ಕಥೆಗಳನ್ನು ನೀವು ಕೇಳಿರುತ್ತೀರಾ. ಆದರೆ, ಇಲ್ಲೋರ್ವ ವ್ಯಕ್ತಿ ಐಫೋನ್ 13 ಬುಕ್ ಮಾಡಿ ಹೊಚ್ಚ ಹೊಸ ಐಫೋನ್ 14 ಸಾಧನವನ್ನು ಪಡೆದಿದ್ದಾರೆ. ಹೌದು, ಇತ್ತೀಚಿಗಷ್ಟೆ ಫ್ಲಿಪ್ಕಾರ್ಟ್ ಆಯೋಜಿಸಿದ್ದ 'ಬಿಗ್ ದಸರಾ ಸೇಲ್'ನಲ್ಲಿ 49 ಸಾವಿರ ರೂ.ಪಾವತಿಸಿ ಐಫೋನ್ 13 ಪೋನನ್ನು ಬುಕ್ ಮಾಡಿರುವ ಗ್ರಾಹಕನಿಗೆ ಐಫೋನ್ 14 ಬಂದು ತಲುಪಿದೆ.
ಈ ಕುರಿತು ಜನಪ್ರಿಯ ಟ್ವಿಟರ್ ಬಳಕೆದಾರ ಅಶ್ವಿನ್ ಹೆಗ್ಡೆ ಎಂಬುವವರು ಟ್ವೀಟ್ ಮಾಡಿದ್ದು, ತಮ್ಮ ಸಾಮಾಜಿಕ ಮಾಧ್ಯಮವನ್ನು ಫಾಲೊ ಮಾಡುತ್ತಿರುವ ವ್ಯಕ್ತಿಯೋರ್ವರು ಐಫೋನ್ 13 ಸಾಧನವನ್ನು ಬುಕ್ ಮಾಡಿ ಐಫೋನ್ 14 ಸಾಧನವನ್ನು ಪಡೆದಿದ್ದಾರೆ ಎಂದು ತಿಳಿಸಿದ್ದಾರೆ. ಈ ಕುರಿತಂತೆ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಅಶ್ವಿನ್ ಹೆಗ್ಡೆ, ಐಫೋನ್ 13 ಸಾಧನವನ್ನು ಬುಕ್ ಮಾಡಿದ್ದ ವ್ಯಕ್ತಿಗೆ ಐಫೋನ್ 14 ಬಂದು ತಲುಪಿರುವ ಬಗ್ಗೆ ಸ್ಕ್ರೀನ್ಶಾಟ್ ಸಹ ಅಪ್ಲೋಡ್ ಮಾಡಿದ್ದಾರೆ.

ಫ್ಲಿಪ್ಕಾರ್ಟ್ ಬಿಗ್ ದಸರಾ ಸೇಲ್ನಲ್ಲಿ Apple iPhone 13 ಸಾಧನವು 50,000 ರೂ. ಕ್ಕಿಂತ ಕಡಿಮೆ ಬೆಲೆಗೆ ಖರೀದಿಗೆ ಲಭ್ಯವಿತ್ತು. ಆದರೆ, ಇತ್ತೀಚಿಗಷ್ಟೇ ಮೊಬೈಲ್ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಐಫೋನ್ 14 ಸಾಧನದ ಮೂಲ ಬೆಲೆ 79,900 ರೂ.ಗಳಾಗಿವೆ. ಇದರಿಂದ ಐಫೋನ್ 13 ಸಾಧನವನ್ನು ಬುಕ್ ಮಾಡಿದ ವ್ಯಕ್ತಿಗೆ ಜಾಕ್ಪಾಟ್ ಹೊಡೆದಿದೆ ಎಂದು ಹಲವು ಟ್ವಿಟರ್ ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ. ಇದು ನಿಜಕ್ಕೂ ಸಂತಸದ ವಿಷಯ ಎಂದು ಹಲವು ಹೇಳಿದ್ದಾರೆ.

ಇನ್ನು ಈ ಘಟನೆಯ ಬಗ್ಗೆ ಫ್ಲಿಪ್ಕಾರ್ಟ್ ಸಂಸ್ಥೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಇದು ಮೊಬೈಲ್ ಪೂರೈಕೆದಾರರ ಕಣ್ತಪ್ಪಿನಿಂದಾಗಿರಬಹುದು ಎಂದು ಹೇಳಲಾಗುತ್ತಿದೆ. ಇತ್ತೀಚಿಗಷ್ಟೆ ಫ್ಲಿಪ್ಕಾರ್ಟ್ ನಲ್ಲಿ ಲ್ಯಾಪ್ಟಾಪ್ ಒಂದನ್ನು ಬುಕ್ ಮಾಡಿದ್ದ ವ್ಯಕ್ತಿಯು ಸೋಪ್ ಡಿಟರ್ಜೆಂಟ್ ಬಾಕ್ಸ್ ಇರುವ ಪ್ಯಾಕೇಜ್ ಒಂದನ್ನು ಪಡೆದಿದ್ದರು ಎಂಬ ಸುದ್ದಿ ವೈರಲ್ ಆಗಿತ್ತು. ಈ ಸುದ್ದಿ ಹೊರಬಿದ್ದ ಎರಡು ದಿನಗಳಲ್ಲೇ ಫ್ಲಿಪ್ಕಾರ್ಟ್ ಸಂಸ್ಥೆಯು ಆ ವ್ಯಕ್ತಿಗೆ ಸೂಕ್ತ ನ್ಯಾಯ ಒದಗಿಸಿರುವುದಾಗಿ ತಿಳಿಸಿತ್ತು.
Flipkart Delivers Iphone 14 To Customer Who Ordered Iphone 13.
15-03-26 04:27 pm
HK News Staffer
ಲಿವರ್ ಸಿರೋಸಿಸ್ ಕಾಯಿಲೆಗೆ ತುತ್ತಾಗಿದ್ದ ತಂದೆ ; ತನ...
14-03-26 10:14 pm
ಮಲೆನಾಡಿಗೆ ಇಂಡಿಗೋ ಆಘಾತ ; ವಿಮಾನ ದುರಂತ ಹಿನ್ನೆಲೆ,...
13-03-26 12:09 pm
ಮಂತ್ರಾಲಯದಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸಿ...
13-03-26 09:44 am
ಮಗಳಿಗೆ ಮದುವೆಯಾಗದ ಚಿಂತೆಯಲ್ಲಿ ಆಟೋ ಚಾಲಕ ಆತ್ಮಹತ್ಯ...
12-03-26 02:48 pm
15-03-26 05:37 pm
HK News Desk
ಎಪ್ರಿಲ್ 9 ಮತ್ತು 23 ; ಕೇರಳ, ತಮಿಳುನಾಡಿನಲ್ಲಿ ಒಂದ...
15-03-26 05:08 pm
ಅಮೆರಿಕ ವಿರುದ್ಧ ಯುದ್ಧಕ್ಕೆ ಹೌತಿಗಳು ಸಜ್ಜು ; ಹರ್ಮ...
15-03-26 04:57 pm
ಐತಿಹಾಸಿಕ ರಾಮಾಯಣ ಕ್ಷೇತ್ರಗಳ ದರ್ಶನಕ್ಕೆ ವಿಶೇಷ ರೈಲ...
15-03-26 01:08 pm
ಗಲ್ಫ್ ಯುದ್ಧ ನಡುವಲ್ಲೇ ಮಿಸೈಲ್ ಉಡಾಯಿಸಿದ ಉತ್ತರ ಕೊ...
14-03-26 10:31 pm
15-03-26 09:10 pm
Mangalurur Staffer
Udupi Accident: ತಾಯಿ-ಮಗ ತೆರಳುತ್ತಿದ್ದ ಸ್ಕೂಟರ್...
14-03-26 09:26 pm
ಕಂದಾಯ- ಅರಣ್ಯ ಭೂಮಿ ಗುರುತಿಸಲು ಜಿಲ್ಲಾ ಮಟ್ಟದಲ್ಲಿ...
14-03-26 08:31 pm
ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಬಂಟ್ವಾಳದ ಯುವ ಛಾಯಾ...
14-03-26 06:07 pm
‘ಕ್ರಿಶ್ಚಿಯನ್ ಯುವಕ’ನಿಂದ ದೈವ ನರ್ತನ ಸೇವೆ ; ಪಂಬದ...
14-03-26 05:19 pm
15-03-26 12:49 pm
HK News Desk
ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ; ಪೋಕ್ಸೋ ಕಾಯ...
12-03-26 11:20 pm
ಸುರತ್ಕಲ್ ಗ್ಯಾರೇಜ್ ನಿಂದ ವಾಹನಗಳ ಬಿಡಿಭಾಗ ಕಳವು ;...
12-03-26 10:53 pm
ಬೆಂಗಳೂರು ; ಕಾಲೇಜು ಮುಗಿಸಿ ವಾಪಸ್ಸಾಗುತ್ತಿದ್ದಾಗ ಅ...
12-03-26 12:12 pm
ನಾಪತ್ತೆಯಾಗಿದ್ದ ಕೊಣಾಜೆಯ ಯುವಕ ಸೋಮೇಶ್ವರದ ಕೆರೆಯಲ್...
11-03-26 10:58 am