ಬ್ರೇಕಿಂಗ್ ನ್ಯೂಸ್
23-05-22 03:58 pm Bengalore Correspondent ಕ್ರೈಂ
ಬೆಂಗಳೂರು, ಮೇ 23: ಬೆಂಗಳೂರಿನ ಹತ್ತಕ್ಕೂ ಹೆಚ್ಚು ಶಾಲೆಗಳಿಗೆ ಒಂದೇ ದಿನ ಬಾಂಬ್ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಪೊಲೀಸರು ಮಹತ್ವದ ಮಾಹಿತಿ ಕಲೆಹಾಕಿದ್ದಾರೆ. ಹುಸಿ ಬಾಂಬ್ ಕರೆಗೆ ಬಳಸಿದ್ದ ಇಮೇಲ್ ಸಾಫ್ಟ್ ವೇರನ್ನು ಚೆನ್ನೈ ಮೂಲದ ಅಪ್ರಾಪ್ತ ಬಾಲಕನೊಬ್ಬ ರೆಡಿ ಮಾಡಿಕೊಟ್ಟಿದ್ದ ಎನ್ನುವ ಮಾಹಿತಿ ಲಭಿಸಿದೆ.
ಚೆನ್ನೈ ಮೂಲದ ಬಾಲಕನೇ ನಕಲಿ ಇ-ಮೇಲ್ ಸೃಷ್ಟಿಯ ಹಿಂದಿನ ಮಾಸ್ಟರ್ ಮೈಂಡ್ ಅನ್ನುವ ವಿಚಾರ ತಿಳಿದುಬಂದಿದೆ. ಸಾಫ್ಟ್ ವೇರ್ ಡೆವಲಪ್ ತಂತ್ರಜ್ಞಾನದಲ್ಲಿ ಚಾಣಾಕ್ಷನಾಗಿರುವ ಬಾಲಕ ನಕಲಿ ಇಮೇಲ್ ಕಳಿಸುವ ಜಾಲವೊಂದನ್ನು ಸೃಷ್ಟಿಸಿ ಅದನ್ನು ವಿದೇಶಿಯರಿಗೆ ಮಾರಾಟ ಮಾಡಿದ್ದ. ಸಾಫ್ವ್ ವೇರ್ ಕಂಪನಿ ಒಂದನ್ನು ಹುಟ್ಟುಹಾಕುವ ಉದ್ದೇಶದಲ್ಲಿ ಕಂಪ್ಯೂಟರ್ ಪ್ರೋಗ್ರಾಮ್ ರೆಡಿ ಮಾಡಿದ್ದ. ಪ್ರೋಗ್ರಾಂ ಅನ್ನು ಆನಂತರ ಹಣಕ್ಕಾಗಿ ವಿದೇಶಿಯರಿಗೆ ಮಾರಾಟ ಮಾಡಿದ್ದ. ಅದೇ ಸಾಫ್ವ್ ವೇರನ್ನು ಬಳಸ್ಕೊಂಡು ದುಷ್ಕರ್ಮಿಗಳು ಬೆಂಗಳೂರಿನ ಶಾಲೆಗಳಿಗೆ ಇಮೇಲ್ ಬೆದರಿಕೆ ಹಾಕಿದ್ದಾರೆ ಅನ್ನುವ ವಿಚಾರ ತಿಳಿದುಬಂದಿದೆ.
ಬಾಲಕ ತಯಾರಿಸಿ ಕೊಟ್ಟಿದ್ದ ಕಂಪ್ಯೂಟರ್ ಪ್ರೋಗ್ರಾಮ್ ಲಾಭ ಪಡೆದಿದ್ದವರೇ ವಿದೇಶದಲ್ಲಿ ಕುಳಿತುಕೊಂಡು ಈ ಜಾಲವನ್ನು ಆಪರೇಟ್ ಮಾಡಿದ್ದು ಬೆಂಗಳೂರು ಮತ್ತು ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನಲ್ಲಿರುವ ಪ್ರಮುಖ ಶಾಲೆಗಳಿಗೆ ಇಮೇಲ್ ಬೆದರಿಕೆ ಕಳಿಸಲಾಗಿತ್ತು. ಇತ್ತೀಚೆಗೆ ಶಾಲೆಯ ಆವರಣದಲ್ಲಿ ಬಾಂಬ್ ಇಡಲಾಗಿದೆ, ಕೂಡಲೇ ಹುಡುಕಿ ಪತ್ತೆ ಮಾಡಿ ಎಂದು ಹುಸಿ ಬಾಂಬ್ ಬೆದರಿಕೆ ಹಾಕಿದ್ದರಿಂದ ಶಾಲೆಯ ಸಿಬಂದಿ ಹೌಹಾರಿದ್ದರು. ಆನಂತರ ಇಮೇಲ್ ಸಂದೇಶದ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡಿದ್ದರು.
ಇದೀಗ ಬೆಂಗಳೂರು ಮತ್ತು ಭೋಪಾಲದ ತಂತ್ರಜ್ಞರು ಇಮೇಲ್ ಸಂದೇಶದ ಹಿಂದಿನ ಅಸಲಿಯತ್ತನ್ನು ಭೇದಿಸಿದ್ದು ಆ ಪ್ರೋಗ್ರಾಮ್ ಅನ್ನು ತಮಿಳುನಾಡಿನ ಬಾಲಕನೊಬ್ಬ ತಯಾರಿಸಿದ್ದ ಅನ್ನುವ ವಿಚಾರವನ್ನು ಪತ್ತೆ ಮಾಡಿದ್ದಾರೆ. ಬೋಟ್ ಸಾಫ್ಟ್ ವೇರ್ ಹೆಸರಲ್ಲಿ ಪ್ರೋಗ್ರಾಮ್ ರೆಡಿ ಮಾಡಿದ್ದ ಬಾಲಕ, ಅದರಿಂದ ಮಲ್ಟಿಪಲ್ ರೂಪದಲ್ಲಿ ಏಕಕಾಲದಲ್ಲಿ ವಿವಿಧೆಡೆಗೆ ಮೇಲ್ ಕಳುಹಿಸುವಂತೆ ತಂತ್ರಜ್ಞಾನ ರೂಪಿಸಿದ್ದ. ಕೊನೆಗೆ, ಅದನ್ನು ಹಣ ಗಳಿಸುವ ಉದ್ದೇಶದಿಂದ ಟೆಲಿಗ್ರಾಮ್ ಏಪ್ ಮೂಲಕ ವಿದೇಶಿಯರಿಗೆ ಮಾರಾಟ ಮಾಡಿದ್ದ. ಇದಕ್ಕಾಗಿ ಬಾಲಕ ಬಿಟ್ ಕಾಯಿನ್ ರೂಪದಲ್ಲಿ ದೊಡ್ಡ ಮೊತ್ತದ ಹಣವನ್ನು ಪಡೆದಿದ್ದಾನೆಂಬ ಮಾಹಿತಿ ಇದೆ.
ಬಾಲಕನ ತಂದೆ ಕಾಲೇಜು ಒಂದರಲ್ಲಿ ಲೈಬ್ರೇರಿಯನ್ ಆಗಿ ಕೆಲಸ ಮಾಡ್ತಿದ್ದಾರೆ ಎನ್ನಲಾಗುತ್ತಿದೆ. ಇದೀಗ ಆ ಹುಡುಗನ ಸಹಾಯ ಪಡೆದು ದುಷ್ಕರ್ಮಿಗಳು ಎಲ್ಲಿ ಅಡಗಿದ್ದಾರೆ ಎಂದು ಪತ್ತೆ ಮಾಡಲು ಪೊಲೀಸರು ಮುಂದಾಗಿದ್ದಾರೆ. ದುಷ್ಕರ್ಮಿಗಳು ಭಾರತದಲ್ಲಿಯೇ ಇದ್ದಾರೆಯೇ, ವಿದೇಶದಲ್ಲಿ ಕುಳಿತು ಆಪರೇಟ್ ಮಾಡುತ್ತಿದ್ದಾರೆಯೇ ಎಂಬ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ. ಆರಂಭಿಕ ತನಿಖೆಯಲ್ಲಿ ಪಾಕಿಸ್ಥಾನ ಅಥವಾ ಗಲ್ಫ್ ದೇಶಗಳಿಂದ ಇ-ಮೇಲ್ ರವಾನೆಯಾಗಿತ್ತು ಅನ್ನೋ ಮಾಹಿತಿಗಳಿದ್ದವು.
On May 13, eleven schools in Madhya Pradesh received threatening emails that they would be blown up with explosives. Thorough checking had been made by police teams, after which the information was found to be fake. On Saturday, May 21, it has come to light that the hoax emails have been tracked down to a teen in Tamil Nadu
21-04-25 07:27 pm
Bangalore Correspondent
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm