ಬ್ರೇಕಿಂಗ್ ನ್ಯೂಸ್
09-05-22 10:30 pm Udupi Correspondent ಕ್ರೈಂ
ಉಡುಪಿ, ಮೇ 9 : ತಾಯಿ ಮತ್ತು ಆಕೆಯ ಹತ್ತು ವರ್ಷದ ಮಗು ಸಂಶಯಾಸ್ಪದ ನೆಲೆಯಲ್ಲಿ ಸಾವನ್ನಪ್ಪಿದ ಘಟನೆ ಹಿರಿಯಡ್ಕ ಬಳಿಯ ಆತ್ರಾಡಿ ಎಂಬಲ್ಲಿ ನಡೆದಿದ್ದು ಕೊಲೆ ಶಂಕೆ ವ್ಯಕ್ತವಾಗಿದೆ.
ಆತ್ರಾಡಿ ಗ್ರಾಮದ ಮದಗ ನಿವಾಸಿಗಳಾದ ಚೆಲುವಿ (28) ಮತ್ತು ಆಕೆಯ ಮಗಳು ಪ್ರಿಯಾ (10) ಮೃತರು. ಚೆಲುವಿ ಮಣಿಪಾಲದ ಖಾಸಗಿ ಕಂಪನಿ ಒಂದರಲ್ಲಿ ಸ್ವೀಪರ್ ಆಗಿ ಕೆಲಸ ಮಾಡುತ್ತಿದ್ದು ಇಬ್ಬರು ಮಕ್ಕಳೊಂದಿಗೆ ಮದಗದಲ್ಲಿ ನೆಲೆಸಿದ್ದಳು.
ಮೇ 8 ರ ಭಾನುವಾರ ಚೆಲುವಿಯ ತಾಯಿ ಮದಗದ ಮನೆಗೆ ಬಂದಿದ್ದು ಅಜ್ಜಿಯ ಜೊತೆಗೆ ಈಕೆಯ ಮಗನೂ ಅಜ್ಜಿ ಮನೆಗೆ ತೆರಳಿದ್ದ. ಹೀಗಾಗಿ ಭಾನುವಾರ ರಾತ್ರಿ ಚೆಲುವಿ ಮತ್ತು ಆಕೆಯ ಮಗಳು ಮಾತ್ರ ಮನೆಯಲ್ಲಿದ್ದರು. ಸೋಮವಾರ ಬೆಳಗ್ಗೆ ಅಜ್ಜಿ ಚೆಲುವಿಗೆ ಫೋನ್ ಮಾಡಿದಾಗ, ಸ್ವಿಚ್ ಆಫ್ ಆಗಿತ್ತು. ಹೀಗಾಗಿ ಏನೋ ಡೌಟ್ ಬಂದು ಚೆಲುವಿಯ ನೆರೆಮನೆಯ ನಿವಾಸಿಗಳಿಗೆ ಮಾಹಿತಿ ನೀಡಿದ್ದರು. ಅವರು ಚೆಲುವಿ ಮನೆಗೆ ತೆರಳಿ ನೋಡಿದಾಗ, ತಾಯಿ, ಮಗಳು ಸಂಶಯಾಸ್ಪದವಾಗಿ ಸಾವು ಕಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಚೆಲುವಿ ಶವ ಮನೆ ಬಾಗಿಲ ಬಳಿ ಇದ್ದರೆ, ಮಗಳು ಪ್ರಿಯಾ ಕೊಠಡಿ ಒಳಗೆ ಸಾವನ್ನಪ್ಪಿದ್ದಳು. ಸ್ಥಳೀಯರು ಕೊಲೆ ನಡೆದಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ವಿಧಿ ವಿಜ್ಞಾನ ತಜ್ಞರು ಬಂದು ಪರಿಶೀಲನೆ ನಡೆಸಿದ್ದಾರೆ. ಎಎಸ್ಪಿ ಸಿದ್ದಲಿಂಗಪ್ಪ, ಡಿವೈಎಸ್ಪಿ ಸುಧಾಕರ್ ನಾಯ್ಕ್, ಸಿಪಿಐ ಅನಂತ ಪದ್ಮನಾಭ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Udupi: In a Suspicious manner, a mother and her 10-year-old daughter were found dead in the house on Monday, May 9 at Madaga near Atradi under the Hiriyadka Police Station Limits. The deceased have been identified as Cheluvi (28) and her daughter Priya (10), residents of Madaga near Atradi.
09-11-25 06:53 pm
Bangalore Correspondent
ಇಪಿಎಫ್ ಸೊಸೈಟಿಯಲ್ಲಿ 70 ಕೋಟಿ ದುರ್ಬಳಕೆ ; ಅಕೌಂಟೆಂ...
09-11-25 03:47 pm
ISIS Terrorists, Umesh Reddy, Parappana Agrah...
08-11-25 10:29 pm
High Court Directs Kalaburagi: ಚಿತ್ತಾಪುರ ಆರೆಸ...
08-11-25 12:38 pm
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
09-11-25 07:49 pm
HK News Desk
ಮುಸ್ಲಿಂ ವ್ಯಕ್ತಿಯ ಎರಡನೇ ಮದುವೆ ನೋಂದಣಿಗೆ ನಿರಾಕರಣ...
07-11-25 05:21 pm
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 10:27 pm
Mangalore Correspondent
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm