ಬ್ರೇಕಿಂಗ್ ನ್ಯೂಸ್
25-04-22 06:09 pm Mangalore Correspondent ಕ್ರೈಂ
ಮಂಗಳೂರು, ಎ.25: ಪಿಯುಸಿ ಹುಡುಗಿಯರನ್ನು ಖೆಡ್ಡಾಕ್ಕೆ ಬೀಳಿಸಿ, ವೇಶ್ಯಾವೃತ್ತಿಗೆ ತಳ್ಳುತ್ತಿದ್ದ ಜನಸಾಮಾನ್ಯರು ಬೆಚ್ಚಿಬೀಳುವ ರೀತಿಯ ಪ್ರಕರಣವನ್ನು ಮಂಗಳೂರು ಪೊಲೀಸರು ಭೇದಿಸಿದ್ದರು. ಎರಡು ತಿಂಗಳ ಕಾಲ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಒಂಬತ್ತು ಪ್ರತ್ಯೇಕ ಎಫ್ಐಆರ್ ದಾಖಲು ಮಾಡಿದ್ದು ಈಗ ಚಾರ್ಜ್ ಶೀಟ್ ಸಲ್ಲಿಕೆಗೆ ತಯಾರಿ ನಡೆಸಿದ್ದಾರೆ.
ಪ್ರತೀ ಎಫ್ಐಆರ್ ನಲ್ಲಿಯೂ ಪ್ರತ್ಯೇಕ ಚಾರ್ಜ್ ಶೀಟ್ ಸಲ್ಲಿಸಲು ರೆಡಿ ಮಾಡಲಾಗುತ್ತಿದೆ. ಪ್ರತೀ ಚಾರ್ಜ್ ಶೀಟ್ ನಲ್ಲಿಯೂ ಆಯಾ ಪ್ರಕರಣ ಸಂಬಂಧಿಸಿ ಸಮಗ್ರ ದಾಖಲೆಗಳನ್ನೂ ಜೊತೆಗಿರಿಸಲಾಗುತ್ತದೆ. ತಾಂತ್ರಿಕ ಸಾಕ್ಷ್ಯಗಳು, ಸಂತ್ರಸ್ತರ ಹೇಳಿಕೆಗಳು, ಪ್ರಕರಣದ ಸಾಕ್ಷಿಗಳು ಹೀಗೆ ಹಲವು ರೂಪದ ದಾಖಲೆಗಳು ಜೊತೆಗಿರಲಿದ್ದು, ಪ್ರತೀ ಎಫ್ಐಆರ್ ನಲ್ಲಿ ಇನ್ನೂರು ಪುಟಗಳ ದಾಖಲೆಯೇ ಇರಲಿದೆ. ಅಂದಾಜಿನಂತೆ ಒಂದು ಎಫ್ಐಆರ್ ಅಡಿ 1200 ಪುಟಗಳ ಆರೋಪ ಪಟ್ಟಿಯನ್ನು ಕೋರ್ಟಿಗೆ ಸಲ್ಲಿಸಲು ರೆಡಿ ಮಾಡಲಾಗುತ್ತಿದೆ.

ಒಂಬತ್ತು ಪ್ರಕರಣಗಳಲ್ಲಿ ತಲಾ 1200ಕ್ಕೂ ಹೆಚ್ಚು ಪುಟಗಳ ಎಫ್ಐಆರ್ ಸಲ್ಲಿಕೆಯಾದಲ್ಲಿ ಒಟ್ಟು ಆರೋಪಪಟ್ಟಿಯೇ ಹತ್ತು ಸಾವಿರ ಪುಟಗಳು ಮೀರಲಿದೆ ಎನ್ನಲಾಗುತ್ತಿದೆ. ಪ್ರಕರಣದಲ್ಲಿ ಒಟ್ಟು 17 ಮಂದಿಯನ್ನು ಬಂಧಿಸಲಾಗಿದ್ದು ಜೈಲಿಗೆ ತಳ್ಳಲಾಗಿದೆ. ಇದರಲ್ಲಿ ವ್ಯಾಪಾರಿಗಳು, ವಿದೇಶದಲ್ಲಿದ್ದವರು, ವಿವಿಧ ವೃತ್ತಿಗಳಲ್ಲಿದ್ದವರು ಸೇರಿದ್ದಾರೆ. ಇನ್ನೊಬ್ಬ ವಿದೇಶದಲ್ಲಿರುವ ವ್ಯಕ್ತಿಯನ್ನು ಆರೋಪ ಪಟ್ಟಿಯಲ್ಲಿ ಸೇರಿಸಲಾಗಿದೆ. ಆತ ದೇಶಕ್ಕೆ ಮರಳಿದ ಕೂಡಲೇ ಬಂಧಿಸಲು ಬೇಕಾದ ಕ್ರಮ ಜರುಗಿಸಲಾಗಿದೆ. ಅದಕ್ಕೂ ಮೊದಲೇ ಕೋರ್ಟಿಗೆ ಆರೋಪ ಪಟ್ಟಿ ಸಲ್ಲಿಕೆಯಾಗಲಿದೆ. ಒಂದು ಪ್ರಕರಣಕ್ಕೆ ಸಂಬಂಧಿಸಿ ಹತ್ತು ಸಾವಿರ ಪುಟಗಳ ಆರೋಪಪಟ್ಟಿ ಸಲ್ಲಿಕೆಯಾದರೆ, ಮಂಗಳೂರಿನ ಮಟ್ಟಿಗೆ ಹೊಸ ದಾಖಲೆಯಾಗಲಿದೆ ಎನ್ನಲಾಗುತ್ತಿದೆ.

ಫೆಬ್ರವರಿ ಮೊದಲ ವಾರದಲ್ಲಿ ಪ್ರಕರಣ ಬೆಳಕಿಗೆ ಬಂದಿದ್ದು ಮೊದಲಿಗೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆನಂತರ ಪ್ರಕರಣವನ್ನು ಸಿಸಿಬಿಗೆ ವಹಿಸಿ ಸಮಗ್ರ ತನಿಖೆಗೆ ಒಳಪಡಿಸಲಾಗಿತ್ತು. ನಾಲ್ಕು ಅಪ್ರಾಪ್ತ ಯುವತಿಯರನ್ನು ದಂಧೆಗೆ ಬಳಸಿದ್ದು ಪತ್ತೆ ಮಾಡಿ ಪೋಕ್ಸೋ ಪ್ರಕರಣ ದಾಖಲಿಸಲಾಗಿತ್ತು. ಅತ್ತಾವರದ ನಂದಿಗುಡ್ಡೆಯ ಫ್ಲಾಟ್ ಒಂದರಲ್ಲಿ ಮೊದಲ ಬಾರಿಗೆ ಹಣಕ್ಕಾಗಿ ಕಾಲೇಜು ಯುವತಿಯರನ್ನು ವೇಶ್ಯಾ ದಂಧೆಗೆ ನೂಕಿದ್ದನ್ನು ಪತ್ತೆ ಮಾಡಲಾಗಿತ್ತು. ಆನಂತರ ತನಿಖೆಯ ಸಂದರ್ಭದಲ್ಲಿ ಮಂಗಳೂರು ನಗರದ ಬೇರೆ ಬೇರೆ ಭಾಗದಲ್ಲಿ ಹಲವು ಕಾಲೇಜು ಯುವತಿಯರನ್ನು ಮುಂದಿಟ್ಟು ದಂಧೆ ನಡೆಸುತ್ತಿರುವುದು ಬೆಳಕಿಗೆ ಬಂದಿತ್ತು.
College girls used for Prostitution at Attavar in Mangalore, 10 thousand page charge sheet to be submitted including FIR on nine persons. The Pandeshwar Women’s police have arrested four more persons on March 7, in connection with the prostitution racket in an Apartment in Attavar.
09-11-25 06:53 pm
Bangalore Correspondent
ಇಪಿಎಫ್ ಸೊಸೈಟಿಯಲ್ಲಿ 70 ಕೋಟಿ ದುರ್ಬಳಕೆ ; ಅಕೌಂಟೆಂ...
09-11-25 03:47 pm
ISIS Terrorists, Umesh Reddy, Parappana Agrah...
08-11-25 10:29 pm
High Court Directs Kalaburagi: ಚಿತ್ತಾಪುರ ಆರೆಸ...
08-11-25 12:38 pm
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
09-11-25 07:49 pm
HK News Desk
ಮುಸ್ಲಿಂ ವ್ಯಕ್ತಿಯ ಎರಡನೇ ಮದುವೆ ನೋಂದಣಿಗೆ ನಿರಾಕರಣ...
07-11-25 05:21 pm
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 10:27 pm
Mangalore Correspondent
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm